
1. ಆಚಾರ್ಯ ಚಾಣಕ್ಯರು ನಾವು ಯಾರನ್ನಾದರೂ ನಂಬಿದಾಗ, ನಾವು ಅದನ್ನು ಕುರುಡಾಗಿ ನಂಬಿಬಿಡುತ್ತೇವೆ ಮತ್ತು ಅವರಿಗೆ ಏನನ್ನೂ ಹೇಳದಿರಲು ಹಿಂಜರಿಯುವುದಿಲ್ಲ. ಆದರೆ ಇದೇ ನಾವು ಮಾಡುವ ದೊಡ್ಡ ತಪ್ಪು. ಜೀವನದಲ್ಲಿ ಎಲ್ಲವನ್ನೂ ಎಲ್ಲರಿಗೂ ಹೇಳಲು ಸಾಧ್ಯವಿಲ್ಲ. ಹಾಗೆಯೇ ಯಾರನ್ನೂ ಅತಿಯಾಗಿ ನಂಬಬಾರದು. ಇಲ್ಲದಿದ್ದರೆ, ನಿಮ್ಮ ಜೀವನದಲ್ಲಿ ಕಷ್ಟಗಳು ಬರಲು ಪ್ರಾರಂಭಿಸುತ್ತವೆ. ಆತ್ಮೀಯ ಸ್ನೇಹಿತರು ಅಥವಾ ಆತ್ಮೀಯರೊಂದಿಗೆ ಚರ್ಚಿಸಬಾರದಂತಹ ಕೆಲವು ವಿಷಯಗಳನ್ನು ಇಲ್ಲಿ ತಿಳಿಯಿರಿ.

2. ಆಚಾರ್ಯ ಚಾಣಕ್ಯ ಹೇಳುವಂತೆ ಸಮಯ ಕೆಟ್ಟಾಗ ಹಣವೂ ನಿಮ್ಮೊಂದಿಗೆ ಆಟವಾಡುವ ವಸ್ತುವಾಗಿಬಿಡುತ್ತದೆ. ಆದಾಗ್ಯೂ ನಿಮ್ಮೊಂದಿಗೆ ಯಾರೂ ನಿಲ್ಲದಿದ್ದಾಗ ಹಣ ನಿಮಗೆ ಬದುಕುವ ಭರವಸೆ ನೀಡುತ್ತದೆ. ನಿಮ್ಮ ಕೆಟ್ಟ ಸಮಯಕ್ಕಾಗಿ ನೀವು ಹಣವನ್ನು ಸಂಗ್ರಹಿಸಿದ್ದರೆ, ಅದನ್ನು ಯಾರೊಂದಿಗೂ ಚರ್ಚಿಸಬೇಡಿ. ಇಲ್ಲವಾದರೆ ಅದು ನಿಮಗೆ ಹಾನಿಕರವಾಗಬಹುದು.

3. ಎಲ್ಲ ಕುಟುಂಬದಲ್ಲಿಯೂ ಜಗಳಗಳಿವೆ. ಹಾಗಂತ ನಾವು ಆ ವಿಷಯಗಳನ್ನೆಲ್ಲಾ ಇತರರೊಂದಿಗೆ ಚರ್ಚಿಸಬೇಕು ಎಂದು ಇದರ ಅರ್ಥವಲ್ಲ. ನಿಮ್ಮ ಮನೆಯಲ್ಲಿನ ವಾದ-ಪ್ರತಿವಾದಗಳ ಬಗ್ಗೆ ನಿಮ್ಮ ಆಪ್ತ ಸ್ನೇಹಿತ ಅಥವಾ ಸಂಗಾತಿಗೆ ಸಹ ಹೇಳಬಾರದು. ಇಲ್ಲದಿದ್ದರೆ, ನಂತರ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು.

5. ನಿಮ್ಮೊಳಗೆ ಯಾವುದೇ ದುಃಖ ಅಡಗಿದ್ದರೆ, ಅದನ್ನು ಯಾರೊಂದಿಗೂ ಚರ್ಚಿಸಬೇಡಿ. ನಿಮ್ಮ ದುಃಖವನ್ನು ಕೇಳುವ ನೆಪದಲ್ಲಿ ಜನರು ನಿಮ್ಮೊಳಗಿನ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ನಂತರ ಈ ವಿಷಯಗಳನ್ನು ಗೇಲಿ ಮಾಡಿಬಿಡುತ್ತಾರೆ. ಇದಲ್ಲದೆ, ಯಾರೊಂದಿಗಾದರೂ ನಿಮ್ಮ ದುಃಖವನ್ನು ಹೇಳಿಕೊಮಡಾಗ ಅದರಿಂದ ನಿಮ್ಮ ದುಃಖ ಕಡಿಮೆ ಮಾಡುವುದಿಲ್ಲ. ನೀವಾಗಿಯೇ ಅದನ್ನು ಅನುಭವಿಸಬೇಕು, ಸಹಿಸಿಕೊಳ್ಳಬೇಕಾಗುತ್ತದೆ. ಹಾಗಾದರೆ ಅದನ್ನು ಚರ್ಚಿಸುವುದರಿಂದ ಏನು ಉಪಯೋಗ ಅಲ್ಲವಾ!?

4. ಯಾರಾದರೂ ನಿಮ್ಮನ್ನು ಅವಮಾನಿಸಿದ್ದರೆ, ಆ ಅವಮಾನವನ್ನು ನೀವೇ ಇಟ್ಟುಕೊಳ್ಳಿ. ಇದನ್ನು ಯಾರ ಬಳಿಯೂ ಹೇಳಬೇಡಿ. ಇಲ್ಲವಾದಲ್ಲಿ ಇಂದು ನಿಮಗೆ ಸಾಂತ್ವನ ಹೇಳುವ ವ್ಯಕ್ತಿ ಅವಕಾಶ ಸಿಕ್ಕಾಗ ಅವಮಾನ ಮಾಡುತ್ತಾರೆ. ಆದ್ದರಿಂದ ಈ ವಿಷಯವನ್ನು ಯಾವಾಗಲೂ ನಿಮ್ಮ ಹೃದಯದಲ್ಲಿ ಬಂಧಿಸಿಡಿ.