AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೋಳ ಬೆಳೆಯುವ ನೆಲದಲ್ಲಿ ಸೇಬು ಬೆಳೆದ ರೈತ: ನಕ್ಕವರ ಮುಂದೆ ಲಕ್ಷ ಲಕ್ಷ ಹಣ ಎಣಿಸಿದ

ಬಾಗಲಕೋಟೆ ಜಿಲ್ಲೆಯ ರೈತ ಶ್ರೀಶೈಲ್ ತೇಲಿ ಅವರು ಕಬ್ಬು ಬೆಳೆಯುವ ಪ್ರದೇಶದಲ್ಲಿ ಸೇಬು ಬೆಳೆಯುವ ಮೂಲಕ ಅಪಾರ ಯಶಸ್ಸು ಕಂಡಿದ್ದಾರೆ. ಏಳು ಎಕರೆ ಜಮೀನಿನಲ್ಲಿ ಸಾವಯವ ವಿಧಾನದಿಂದ ಸೇಬು ಬೆಳೆದು ಅವರು ಲಕ್ಷಾಂತರ ರೂಪಾಯಿ ಗಳಿಸಿದ್ದಾರೆ. ಈ ಯಶಸ್ಸಿನಿಂದ ಇತರ ರೈತರಿಗೆ ಸ್ಪೂರ್ತಿಯಾಗಿದ್ದಾರೆ ಮತ್ತು ಸೇಬು ಕೃಷಿಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ರವಿ ಹೆಚ್ ಮೂಕಿ, ಕಲಘಟಗಿ
| Edited By: ವಿವೇಕ ಬಿರಾದಾರ|

Updated on:Mar 29, 2025 | 1:54 PM

Share
ಬಾಗಲಕೋಟೆ ನೂರಕ್ಕೆ 80 ರಷ್ಟು ಕಬ್ಬು ಬೆಳೆಯುವ ಪ್ರದೇಶ. ಕಬ್ಬು ಇಲ್ಲಿನ ರೈತರ ಪ್ರಮುಖ ಬೆಳೆಯಾಗಿದೆ. ಕಬ್ಬು ಜೋಳ, ಗೋಧಿ ಗೋವಿನ ಜೋಳ, ದಾಳಿಂಬೆ ಮತ್ತು ಚಿಕ್ಕು ಬಿಟ್ಟು  ಬೇರೆ ಏನು ಬೆಳೆಯುವುದಿಲ್ಲ ಎಂಬುವುದು ರೈತರ ನಂಬಿಕೆ. ಆದರೆ ಇಂತಹ ನೆಲದಲ್ಲಿ ಓರ್ವ ರೈತ ಸೇಬು ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಬಾಗಲಕೋಟೆ ನೂರಕ್ಕೆ 80 ರಷ್ಟು ಕಬ್ಬು ಬೆಳೆಯುವ ಪ್ರದೇಶ. ಕಬ್ಬು ಇಲ್ಲಿನ ರೈತರ ಪ್ರಮುಖ ಬೆಳೆಯಾಗಿದೆ. ಕಬ್ಬು ಜೋಳ, ಗೋಧಿ ಗೋವಿನ ಜೋಳ, ದಾಳಿಂಬೆ ಮತ್ತು ಚಿಕ್ಕು ಬಿಟ್ಟು ಬೇರೆ ಏನು ಬೆಳೆಯುವುದಿಲ್ಲ ಎಂಬುವುದು ರೈತರ ನಂಬಿಕೆ. ಆದರೆ ಇಂತಹ ನೆಲದಲ್ಲಿ ಓರ್ವ ರೈತ ಸೇಬು ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

1 / 6
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಶ್ರೀಶೈಲ್ ತೇಲಿ ಅವರು ಸೇಬು ಬೆಳೆಯುವ ಮೂಲಕ ಉಳಿದ ರೈತರ ಹುಬ್ಬೇರುವಂತೆ ಮಾಡಿದ್ದಾರೆ. ಶ್ರೀಶೈಲ್ ತಮ್ಮ ಏಳು ಎಕರೆ ಜಮೀನಿನಲ್ಲಿ ಸೇಬು ಬೆಳೆದು ಲಾಭ ಪಡೆಯುತ್ತಿದ್ದಾರೆ. ಕಬ್ಬು ಹೆಚ್ಚಾಗಿ ಬೆಳೆಯುವ ಈ ನಾಡಲ್ಲಿ ಸಮೃದ್ಧವಾಗಿ ಸೇಬು ಬೆಳೆದು ಜನರಿಗೆ ಸೇಬಿನ ಸಿಹಿ‌ ಹಂಚುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಕುಳಲಿ ಗ್ರಾಮದ ಶ್ರೀಶೈಲ್ ತೇಲಿ ಅವರು ಸೇಬು ಬೆಳೆಯುವ ಮೂಲಕ ಉಳಿದ ರೈತರ ಹುಬ್ಬೇರುವಂತೆ ಮಾಡಿದ್ದಾರೆ. ಶ್ರೀಶೈಲ್ ತಮ್ಮ ಏಳು ಎಕರೆ ಜಮೀನಿನಲ್ಲಿ ಸೇಬು ಬೆಳೆದು ಲಾಭ ಪಡೆಯುತ್ತಿದ್ದಾರೆ. ಕಬ್ಬು ಹೆಚ್ಚಾಗಿ ಬೆಳೆಯುವ ಈ ನಾಡಲ್ಲಿ ಸಮೃದ್ಧವಾಗಿ ಸೇಬು ಬೆಳೆದು ಜನರಿಗೆ ಸೇಬಿನ ಸಿಹಿ‌ ಹಂಚುತ್ತಿದ್ದಾರೆ.

2 / 6
ಎರಡು ವರ್ಷದ ಹಿಂದೆ ಸೇಬು ನಾಟಿ ಮಾಡಿದ್ದು, ಈ ವರ್ಷ ಎಕರೆಗೆ ಖರ್ಚುವೆಚ್ಚ ಎಲ್ಲ ತೆಗೆದು ಮೂರುವರೆ ಲಕ್ಷ ಆದಾಯ ಪಡೆದಿದ್ದಾರೆ. ಬಾಗಲಕೋಟೆ , ಬೆಳಗಾವಿ, ವಿಜಯಪುರದ ಸ್ಥಳೀಯ ‌ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೈ ತುಂಬ ಆದಾಯ ಪಡೆಯುತ್ತಿದ್ದಾರೆ.

ಎರಡು ವರ್ಷದ ಹಿಂದೆ ಸೇಬು ನಾಟಿ ಮಾಡಿದ್ದು, ಈ ವರ್ಷ ಎಕರೆಗೆ ಖರ್ಚುವೆಚ್ಚ ಎಲ್ಲ ತೆಗೆದು ಮೂರುವರೆ ಲಕ್ಷ ಆದಾಯ ಪಡೆದಿದ್ದಾರೆ. ಬಾಗಲಕೋಟೆ , ಬೆಳಗಾವಿ, ವಿಜಯಪುರದ ಸ್ಥಳೀಯ ‌ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಕೈ ತುಂಬ ಆದಾಯ ಪಡೆಯುತ್ತಿದ್ದಾರೆ.

3 / 6
ಶ್ರೀಶೈಲ್ ತೇಲಿ ಮೊದಲು ದ್ರಾಕ್ಷಿ ಬೆಳೆಯುತ್ತಿದ್ದರು. ಅದು ಇತ್ತೀಚೆಗೆ ಲಾಸ್ ಆಗಿ ಮುಂದೆ ಏನು ಬೆಳೆಯಬೇಕು  ಎಂಬ ವಿಚಾರದಲ್ಲಿ ಇದ್ದಾಗ ಹೊಳೆದದ್ದು ಸೇಬು. ಯಾಕೆ ನಮ್ಮ ಜಮೀನಿನಲ್ಲಿ ಸೇಬು ಬೆಳೆಯಬಾರದು ಎಂದು ಕೆಲ ಗೆಳೆಯರನ್ನು ಪ್ರಶ್ನೆ ಮಾಡಿದಾಗ ಆಪ್ತ ಗೆಳೆಯರು ಪ್ರೋತ್ಸಾಹ ನೀಡಿದರು. ನಂತರ ಮಹಾರಾಷ್ಟ್ರದ ಶಿರಡಿಯಿಂದ 150 ರೂ.ಗೆ ಒಂದರಂತೆ ಒಟ್ಟು 2600 ಸೇಬಿನ ಗಿಡ ತಂದು ನೆಟ್ಟಿದ್ದಾರೆ.

ಶ್ರೀಶೈಲ್ ತೇಲಿ ಮೊದಲು ದ್ರಾಕ್ಷಿ ಬೆಳೆಯುತ್ತಿದ್ದರು. ಅದು ಇತ್ತೀಚೆಗೆ ಲಾಸ್ ಆಗಿ ಮುಂದೆ ಏನು ಬೆಳೆಯಬೇಕು ಎಂಬ ವಿಚಾರದಲ್ಲಿ ಇದ್ದಾಗ ಹೊಳೆದದ್ದು ಸೇಬು. ಯಾಕೆ ನಮ್ಮ ಜಮೀನಿನಲ್ಲಿ ಸೇಬು ಬೆಳೆಯಬಾರದು ಎಂದು ಕೆಲ ಗೆಳೆಯರನ್ನು ಪ್ರಶ್ನೆ ಮಾಡಿದಾಗ ಆಪ್ತ ಗೆಳೆಯರು ಪ್ರೋತ್ಸಾಹ ನೀಡಿದರು. ನಂತರ ಮಹಾರಾಷ್ಟ್ರದ ಶಿರಡಿಯಿಂದ 150 ರೂ.ಗೆ ಒಂದರಂತೆ ಒಟ್ಟು 2600 ಸೇಬಿನ ಗಿಡ ತಂದು ನೆಟ್ಟಿದ್ದಾರೆ.

4 / 6
ಹರ್ಮನ್-99, ಗೋಲ್ಡನ್ ಡಾರ್ಸೆಟ್, ಅಣ್ಣಾ ತಳಿಯ ಸೇಬು ಬೆಳೆದಿದ್ದಾರೆ. ಅದು ಸಾವಯವ ಪದ್ದತಿಯಲ್ಲಿ ಎಂಬುದು ವಿಶೇಷವಾಗಿದೆ. ಹೂ ಬಿಡುವ ವೇಳೆ ಸ್ವಲ್ಪ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದನ್ನು, ಬಿಟ್ಟರೆ ಮತ್ತೆ ಕೆಮಿಕಲ್ ಸ್ಪರ್ಷ ನೀಡಿಲ್ಲ. ಇನ್ನು, ಯಾವುದೇ ಕಾಶ್ಮೀರಿ ಆ್ಯಪಲ್​ಗೂ ಕಡಿಮೆಯಿಲ್ಲದ ರುಚಿ ಬಣ್ಣದಿಂದ ಸೇಬು ಕಂಗೊಳಿಸುತ್ತಿವೆ.

ಹರ್ಮನ್-99, ಗೋಲ್ಡನ್ ಡಾರ್ಸೆಟ್, ಅಣ್ಣಾ ತಳಿಯ ಸೇಬು ಬೆಳೆದಿದ್ದಾರೆ. ಅದು ಸಾವಯವ ಪದ್ದತಿಯಲ್ಲಿ ಎಂಬುದು ವಿಶೇಷವಾಗಿದೆ. ಹೂ ಬಿಡುವ ವೇಳೆ ಸ್ವಲ್ಪ ಕ್ರಿಮಿನಾಶಕ ಸಿಂಪಡಣೆ ಮಾಡಿದ್ದನ್ನು, ಬಿಟ್ಟರೆ ಮತ್ತೆ ಕೆಮಿಕಲ್ ಸ್ಪರ್ಷ ನೀಡಿಲ್ಲ. ಇನ್ನು, ಯಾವುದೇ ಕಾಶ್ಮೀರಿ ಆ್ಯಪಲ್​ಗೂ ಕಡಿಮೆಯಿಲ್ಲದ ರುಚಿ ಬಣ್ಣದಿಂದ ಸೇಬು ಕಂಗೊಳಿಸುತ್ತಿವೆ.

5 / 6
ಸೇಬು ಬೆಳೆಯುವಾಗ ಇಲ್ಲಿ ಸೇಬು ಬೆಳೆಯುತ್ತಾ, ಈತನಿಗೆ ತಲೆ ಕೆಟ್ಟಿದೆ ಎಂದು ನಗಾಡಿದ್ದ ರೈತರೇ ಈಗ ಶಾಕ್ ಆಗಿದ್ದಾರೆ. ಅದೇ ರೈತರು ಶ್ರೀಶೈಲ ಅವರ ಜಮೀನಿಗೆ ಬಂದು ಸೇಬು ಬೆಳೆಯ ಬಗ್ಗೆ ಮಾಹಿತಿ ಪಡೆದು ತಮ್ಮ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಶ್ರೀಶೈಲ ಅವರ ಸೇಬು ಕೃಷಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸೇಬು ಬೆಳೆಯುವಾಗ ಇಲ್ಲಿ ಸೇಬು ಬೆಳೆಯುತ್ತಾ, ಈತನಿಗೆ ತಲೆ ಕೆಟ್ಟಿದೆ ಎಂದು ನಗಾಡಿದ್ದ ರೈತರೇ ಈಗ ಶಾಕ್ ಆಗಿದ್ದಾರೆ. ಅದೇ ರೈತರು ಶ್ರೀಶೈಲ ಅವರ ಜಮೀನಿಗೆ ಬಂದು ಸೇಬು ಬೆಳೆಯ ಬಗ್ಗೆ ಮಾಹಿತಿ ಪಡೆದು ತಮ್ಮ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ ಶ್ರೀಶೈಲ ಅವರ ಸೇಬು ಕೃಷಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

6 / 6

Published On - 11:02 pm, Fri, 28 March 25

Follow Us
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
‘ಕರಾವಳಿ’ ಸಿನಿಮಾ ಪ್ರೀಮಿಯರ್ ಶೋ ನೋಡಿದವರು ಹೇಳಿದ್ದೇನು?
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಕಬ್ಬಿಣದ ಬಾಗಿಲು ಮುರಿದು ಬಲ್ಡೋಟಾ ಕಾರ್ಖಾನೆ ನುಗ್ಗಿದ ರೈತರು
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ
ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ
ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ
ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ
ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ
5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ