ಧಾರಾಕಾರ ಮಳೆಗೆ ಬೆಂಗಳೂರು ತತ್ತರ: ಬಿರುಗಾಳಿಗೆ 50ಕ್ಕೂ ಹೆಚ್ಚು ಮರಗಳು ಧರೆಗೆ; ವಾಹನಗಳು ಜಖಂ

Updated on: Apr 29, 2026 | 9:52 PM

ಬೆಂಗಳೂರಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸಂಭವಿಸಿವೆ. ಸಾವು ನೋವು ಸಂಭವಿಸಿದ್ದು, ಸುಮಾರು 50ಕ್ಕೂ ಹೆಚ್ಚು ಮರಗಳು ಧರೆಗುರುಳಿ ವಾಹನಗಳಿಗೆ ಹಾನಿಯಾಗಿದೆ. ನಗರದ ಕೆಲವೆಡೆ ವಿದ್ಯುತ್ ಕಡಿತದಿಂದ ಜನ ಪರದಾಡುವಂತಾಗಿದೆ. ರಸ್ತೆಗಳು ಜಲಾವೃತಗೊಂಡು ಸಂಚಾರ ಅಸ್ತವ್ಯಸ್ತಗೊಂಡಿದೆ. ಇಲ್ಲಿವೆ ನೋಡಿ ಫೋಟೋಸ್​​​.

1 / 8
ಬಿಸಿಲಿಗೆ ಬೆಂದಿದ್ದ ಬೆಂದಕಾಳೂರಲ್ಲಿಂದು ಕಂಡು ಕೇಳರಿಯದ ಮಳೆ ಅಬ್ಬರಿಸಿದೆ. ಸಂಜೆ ಅಬ್ಬರಿಸಿದ ಮಳೆಗೆ  ಬೆಂಗಳೂರಿನಲ್ಲಿ ನಾನಾ ಅವಾಂತರಗಳು ಸಂಭವಿಸಿವೆ. ಕಾಂಪೌಂಡ್ ಕುಸಿದು 7 ಜನರು ಸಾವನ್ನಪ್ಪಿರುವುದು ಒಂದು ಕಡೆಯಾದರೆ, ನಗರದಲ್ಲಿ 50ಕ್ಕೂ ಹೆಚ್ಚು ಬೃಹತ್ ಮರಗಳೇ ಧರೆಗುರುಳಿವೆ.

ಬಿಸಿಲಿಗೆ ಬೆಂದಿದ್ದ ಬೆಂದಕಾಳೂರಲ್ಲಿಂದು ಕಂಡು ಕೇಳರಿಯದ ಮಳೆ ಅಬ್ಬರಿಸಿದೆ. ಸಂಜೆ ಅಬ್ಬರಿಸಿದ ಮಳೆಗೆ ಬೆಂಗಳೂರಿನಲ್ಲಿ ನಾನಾ ಅವಾಂತರಗಳು ಸಂಭವಿಸಿವೆ. ಕಾಂಪೌಂಡ್ ಕುಸಿದು 7 ಜನರು ಸಾವನ್ನಪ್ಪಿರುವುದು ಒಂದು ಕಡೆಯಾದರೆ, ನಗರದಲ್ಲಿ 50ಕ್ಕೂ ಹೆಚ್ಚು ಬೃಹತ್ ಮರಗಳೇ ಧರೆಗುರುಳಿವೆ.

2 / 8

ವಿಜಯನಗರ, R​.T.ನಗರ, ಶೇಷಾದ್ರಿಪುರಂ, ಜಯನಗರ, ಚಾಮರಾಜಪೇಟೆ, ಜೆಪಿ ನಗರ, ಕಬ್ಬನ್​ಪಾರ್ಕ್​, ಹೈಗ್ರೌಂಡ್ಸ್​​, ಉಪ್ಪಾರಪೇಟೆ, ಹಲಸೂರುಗೇಟ್​, ವಿಲ್ಸನ್​ಗಾರ್ಡನ್​, ಮೈಕೋಲೇಔಟ್, ಸದಾಶಿವನಗರದಲ್ಲಿ​ ಬೃಹತ್ ಮರಗಳು ಧರೆಗುರುಳಿವೆ.

3 / 8

ಗುಡುಗು, ಸಿಡಿಲು ಆಲಿಕಲ್ಲು ಮಳೆಗೆ ಬಸವನಗುಡಿಯಲ್ಲಿ ಮರಗಳೇ ಧರೆಗುರುಳಿವೆ. ಇದ್ರಿಂದ ಕಾರು, ಬಸ್, ಲಾರಿ ಹಾಗೂ ಬೈಕ್​ಗಳು ಜಖಂಗೊಂಡಿವೆ. ಲಾರಿ ಹೋಗ್ತಿದ್ದಾಗ ಮರ ಬಿದಿದ್ದು, ಬಸ್ ಹಾಗೂ ಬೈಕ್​ಗಳಿಗೂ ಹಾನಿಯಾಗಿವೆ.

4 / 8

ಮಳೆ ಅಬ್ಬರಿಂದಾಗಿ ಮರಗಳು ಬಿದ್ದಿದ್ದು, ಹಲವು ಏರಿಯಾಗಳಲ್ಲಿ ವಿದ್ಯುತ್ ಕೇಬಲ್ ಕಟ್ ಆಗಿವೆ. ಹೀಗಾಗಿ ನಿವಾಸಿಗಳು ಕತ್ತಲಲ್ಲೇ ಕುಳಿತಿದ್ದಾರೆ. ಹಲವೆಡೆ ಕರೆಂಟ್ ಇಲ್ಲದೆ ಜನ ಪರದಾಡಿದ್ದಾರೆ.

5 / 8

ಮಳೆಯಿಂದಾಗಿ ಸಿಟಿ ಸಿವಿಲ್ ಕೋರ್ಟ್ ಕ್ಯಾಂಟೀನ್ ಜಲಾವೃತಗೊಂಡಿತ್ತು. ಕ್ಯಾಂಟೀನ್​ನಲ್ಲೇ ಲಾಕ್ ಆಗಿ ವಕೀಲರು ಪರದಾಡಿದರು.

6 / 8

ತಗ್ಗು ಪ್ರದೇಶಗಳಿಗೆ ನುಗ್ಗಿದ ಮಳೆ ನೀರು ನುಗ್ಗಿದ್ದು, ದ್ವಿಚಕ್ರ ವಾಹನ, ಆಟೋಗಳು ಜಲಾವೃತಗೊಂಡಿವೆ. ಸವಾರರು ಪರದಾಡಿದರು.

7 / 8

ಇತ್ತ ಎಂ.ಜಿ.ರಸ್ತೆಯಲ್ಲಿ ಗ್ರಂಥಾಲಯಕ್ಕೂ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಗ್ರಂಥಾಲಯದಲ್ಲಿ 5 ಸಾವಿರ ಪುಸ್ತಕಗಳು ನೀರುಪಾಲಾಗಿವೆ.

8 / 8

ಇನ್ನು ಭಾರೀ ಮಳೆಯಿಂದಾಗಿ ರೆಸಿಡೆನ್ಸಿ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಗಂಟೆಗೂ ಹೆಚ್ಚು ಕಾಲ ಸವಾರರು ಪರದಾಡಿದರು.

Loading...
Unable to load recommendations.
Follow Us