AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​​ ರೈತನ ಕೈಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕೃಷಿ ಕ್ರಾಂತಿ

ಬೀದರ್ ಜಿಲ್ಲೆಯ ಕಾಶೆಂಪುರ ರೈತ ರಾಮ್ ರೆಡ್ಡಿ ಸಾಂಪ್ರದಾಯಿಕ ಬೆಳೆಗಳ ಬದಲಾಗಿ ನಿಂಬೆ ಕೃಷಿಯಲ್ಲಿ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಕಾಗಜಿ 12 ತಳಿಯ ನಿಂಬೆ ಬೆಳೆದು ವಾರ್ಷಿಕ ಐದಾರು ಲಕ್ಷ ಲಾಭ ಗಳಿಸುತ್ತಿದ್ದಾರೆ. ಉತ್ತಮ ಬೆಲೆ ಪಡೆಯಲು ಶೇಖರಣಾ ಘಟಕ ನಿರ್ಮಿಸಿ, ಮಾರುಕಟ್ಟೆ ತಂತ್ರಗಳನ್ನು ಬಳಸುತ್ತಿದ್ದಾರೆ. ಇದು ಇತರ ರೈತರಿಗೆ ಮಾದರಿಯಾಗಿದೆ.

ಸುರೇಶ ನಾಯಕ
| Edited By: |

Updated on: Jan 02, 2026 | 8:27 PM

Share
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ರೈತ ಹತ್ತಾರು ವರ್ಷದಿಂದ ಸೋಯಾಬೀನ್, ತೊಗರಿ, ಉದ್ದು ಹೀಗೆ ಬೆಳೆ ಬೆಳೆದು ಹೈರಾಣಾಗಿದ್ದರು. ಆದರೆ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿ ತನ್ನ ಹೊಲದಲ್ಲಿ ನಿಂಬೆ ಬೆಳೆದು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ಆ ಮೂಲಕ ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತನ್ನು ಅಕ್ಷರಶಃ ಸತ್ಯ ಮಾಡಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ರೈತ ಹತ್ತಾರು ವರ್ಷದಿಂದ ಸೋಯಾಬೀನ್, ತೊಗರಿ, ಉದ್ದು ಹೀಗೆ ಬೆಳೆ ಬೆಳೆದು ಹೈರಾಣಾಗಿದ್ದರು. ಆದರೆ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿ ತನ್ನ ಹೊಲದಲ್ಲಿ ನಿಂಬೆ ಬೆಳೆದು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ಆ ಮೂಲಕ ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತನ್ನು ಅಕ್ಷರಶಃ ಸತ್ಯ ಮಾಡಿದ್ದಾರೆ.

1 / 6
ಇಂತಹ ರೈತರ ಸಂಕಷ್ಟದ ನಡುವೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ಪ್ರಗತಿಪರ ರೈತರ ರಾಮ್ ರೆಡ್ಡಿ, ಕೃಷಿಯಿಂದಲೇ ವಾರ್ಷಿವಾಗಿ ಲಕ್ಷ ಲಕ್ಷ ಆದಾಯವನ್ನು ಸಂಪಾದಿಸುತ್ತಿದ್ದಾರೆ. ಇವರದ್ದು ಒಟ್ಟು 12 ಎಕರೆಯಷ್ಟು ಜಮೀನಿದ್ದು, ಒಂದೂವರೆ ಎಕರೆಯಲ್ಲಿ ಕಾಗಜಿ 12-ಅನ್ನೋ ತಳಿಯ ನಿಂಬೆ ಬೆಳೆಯುತ್ತಿದ್ದಾರೆ. 

ಇಂತಹ ರೈತರ ಸಂಕಷ್ಟದ ನಡುವೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ಪ್ರಗತಿಪರ ರೈತರ ರಾಮ್ ರೆಡ್ಡಿ, ಕೃಷಿಯಿಂದಲೇ ವಾರ್ಷಿವಾಗಿ ಲಕ್ಷ ಲಕ್ಷ ಆದಾಯವನ್ನು ಸಂಪಾದಿಸುತ್ತಿದ್ದಾರೆ. ಇವರದ್ದು ಒಟ್ಟು 12 ಎಕರೆಯಷ್ಟು ಜಮೀನಿದ್ದು, ಒಂದೂವರೆ ಎಕರೆಯಲ್ಲಿ ಕಾಗಜಿ 12-ಅನ್ನೋ ತಳಿಯ ನಿಂಬೆ ಬೆಳೆಯುತ್ತಿದ್ದಾರೆ. 

2 / 6
ಕೋವಿಡ್​​ನ ಲಾಕ್​ಡೌನ್ ಸಮಯದಲ್ಲಿ ನಿಂಬೆ ಗಿಡಗಳನ್ನ ನಾಟಿ ಮಾಡಿ ಎರಡು ವರ್ಷದ ಬಳಿಕ ನಿಂಬೆ ಹಣ್ಣು ಕೊಡುತ್ತಿದೆ. ಎಲ್ಲಾ ಖರ್ಚು ತೆಗೆದು ವರ್ಷಕ್ಕೆ ನಮಗೆ ಐದಾರು ಲಕ್ಷ ರೂ ಲಾಭವಾಗುತ್ತದೆ ಎಂದು  ರಾಮ್ ರೆಡ್ಡಿ ಹೇಳುತ್ತಾರೆ. 

ಕೋವಿಡ್​​ನ ಲಾಕ್​ಡೌನ್ ಸಮಯದಲ್ಲಿ ನಿಂಬೆ ಗಿಡಗಳನ್ನ ನಾಟಿ ಮಾಡಿ ಎರಡು ವರ್ಷದ ಬಳಿಕ ನಿಂಬೆ ಹಣ್ಣು ಕೊಡುತ್ತಿದೆ. ಎಲ್ಲಾ ಖರ್ಚು ತೆಗೆದು ವರ್ಷಕ್ಕೆ ನಮಗೆ ಐದಾರು ಲಕ್ಷ ರೂ ಲಾಭವಾಗುತ್ತದೆ ಎಂದು  ರಾಮ್ ರೆಡ್ಡಿ ಹೇಳುತ್ತಾರೆ. 

3 / 6
ನಿಂಬೆ ಹೆಚ್ಚು ಲಾಭದಾಯಕ ಕೃಷಿ ಎಂದು ಅರಿತುಕೊಂಡ ರಾಮ್​ ರೆಡ್ಡಿ, ತನ್ನ ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ ನಿಂಬೆ ನಾಟಿ ಮಾಡಿದ್ದಾರೆ. ಒಂದೂವರೆ ಎಕರೆಯಲ್ಲಿ ಸುಮಾರು 360 ನಿಂಬೆ ಗಿಡಗಳನ್ನು ಹಚ್ಚಿದ್ದಾರೆ. ಕಳೆದ ಮೂರು ವರ್ಷದಿಂದ ಒಂದು ನಿಂಬೆ ಗಿಡ ಸರಾಸರಿ 40 ರಿಂದ 60 ಕೆ.ಜಿ ವರೆಗೆ ನಿಂಬೆ  ಕೊಡುತ್ತಿದೆ.

ನಿಂಬೆ ಹೆಚ್ಚು ಲಾಭದಾಯಕ ಕೃಷಿ ಎಂದು ಅರಿತುಕೊಂಡ ರಾಮ್​ ರೆಡ್ಡಿ, ತನ್ನ ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ ನಿಂಬೆ ನಾಟಿ ಮಾಡಿದ್ದಾರೆ. ಒಂದೂವರೆ ಎಕರೆಯಲ್ಲಿ ಸುಮಾರು 360 ನಿಂಬೆ ಗಿಡಗಳನ್ನು ಹಚ್ಚಿದ್ದಾರೆ. ಕಳೆದ ಮೂರು ವರ್ಷದಿಂದ ಒಂದು ನಿಂಬೆ ಗಿಡ ಸರಾಸರಿ 40 ರಿಂದ 60 ಕೆ.ಜಿ ವರೆಗೆ ನಿಂಬೆ  ಕೊಡುತ್ತಿದೆ.

4 / 6
ನಿಂಬೆ ಗಿಡಗಳು ನಾಟಿ ಮಾಡಿದ 12 ವರ್ಷದವರೆಗೆ ಹಣ್ಣು ಕೊಡುತ್ತದೆ. ಆಮೇಲೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ, ಹೀಗಾಗಿ 12 ವರ್ಷ ಆದ ಮೇಲೆ ನಿಂಬೆ ಗಿಡಗಳನ್ನ ತೆಗೆದು ಮತ್ತೆ ಬೇರೆ ನಿಂಬೆ ಸಸಿ ನಾಟಿ ಮಾಡಲಾಗುತ್ತದೆ. ಈಗ ಒಂದೂವರೆ ಎಕರೆಯಷ್ಟು ನಿಂಬೆ ನಾಟಿ ಮಾಡಿ ಐದು ವರ್ಷ ಕಳೆದಿದ್ದು, ಹೀಗಾಗಿ ಮತ್ತೆ ಎರಡು ಎಕರೆ ಈ ವರ್ಷ ನಿಂಬೆ ನಾಟಿ ಮಾಡಿದ್ದಾರೆ.

ನಿಂಬೆ ಗಿಡಗಳು ನಾಟಿ ಮಾಡಿದ 12 ವರ್ಷದವರೆಗೆ ಹಣ್ಣು ಕೊಡುತ್ತದೆ. ಆಮೇಲೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ, ಹೀಗಾಗಿ 12 ವರ್ಷ ಆದ ಮೇಲೆ ನಿಂಬೆ ಗಿಡಗಳನ್ನ ತೆಗೆದು ಮತ್ತೆ ಬೇರೆ ನಿಂಬೆ ಸಸಿ ನಾಟಿ ಮಾಡಲಾಗುತ್ತದೆ. ಈಗ ಒಂದೂವರೆ ಎಕರೆಯಷ್ಟು ನಿಂಬೆ ನಾಟಿ ಮಾಡಿ ಐದು ವರ್ಷ ಕಳೆದಿದ್ದು, ಹೀಗಾಗಿ ಮತ್ತೆ ಎರಡು ಎಕರೆ ಈ ವರ್ಷ ನಿಂಬೆ ನಾಟಿ ಮಾಡಿದ್ದಾರೆ.

5 / 6
ವಾತಾವರಣಕ್ಕೆ ಅನುಗುಣವಾಗಿ ನಿಂಬೆ ದರ ನಿಗದಿಯಾಗುತ್ತದೆ. ಚಳಗಾಲಕ್ಕೆ ಹೋಲಿಸಿದರೆ ಬೆಸಿಗೆಯಲ್ಲಿ ಇದರ ಬೆಲೆ ಹೆಚ್ಚು. ಜೊತೆಗೆ ವಾರದಿಂದ ವಾರಕ್ಕೆ ದರ ಏರಿಳಿತವಾಗುವ ಕಾರಣಕ್ಕೆ ತೋಟಗಾರಿಕೆ ಇಲಾಖೆಯ ಸಹಾಯ ಪಡೆದುಕೊಂಡು 60 ಟನ್ ನಷ್ಟು ನಿಂಬೆ ಸ್ಟೋರೇಜ್ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಯಾವಾಗ ದರ ಹೆಚ್ಚಿಗೆ ಇರುತ್ತದೆಯೋ ಅಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಒಟ್ಟಿನಲ್ಲಿ ರೈತ ರಾಮ್ ರೆಡ್ಡಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ವಾತಾವರಣಕ್ಕೆ ಅನುಗುಣವಾಗಿ ನಿಂಬೆ ದರ ನಿಗದಿಯಾಗುತ್ತದೆ. ಚಳಗಾಲಕ್ಕೆ ಹೋಲಿಸಿದರೆ ಬೆಸಿಗೆಯಲ್ಲಿ ಇದರ ಬೆಲೆ ಹೆಚ್ಚು. ಜೊತೆಗೆ ವಾರದಿಂದ ವಾರಕ್ಕೆ ದರ ಏರಿಳಿತವಾಗುವ ಕಾರಣಕ್ಕೆ ತೋಟಗಾರಿಕೆ ಇಲಾಖೆಯ ಸಹಾಯ ಪಡೆದುಕೊಂಡು 60 ಟನ್ ನಷ್ಟು ನಿಂಬೆ ಸ್ಟೋರೇಜ್ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಯಾವಾಗ ದರ ಹೆಚ್ಚಿಗೆ ಇರುತ್ತದೆಯೋ ಅಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಒಟ್ಟಿನಲ್ಲಿ ರೈತ ರಾಮ್ ರೆಡ್ಡಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

6 / 6
Suresh Naik
Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Follow Us
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
40ಕ್ಕೂ ಹೆಚ್ಚು ಶಾಸಕರಿಂದ ಮಂತ್ರಿಗಿರಿಗಾಗಿ ತೀವ್ರ ಲಾಬಿ: ಯಾರ್ಯಾರು?
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ಸಿದ್ದರಾಮಯ್ಯನವರನ್ನು ಗುಣಗಾನ ಮಾಡಿದ ಬಸವರಾಜ ಬೊಮ್ಮಾಯಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ
ನೂತನ ಮುಖ್ಯಮಂತ್ರಿ ಪದಗ್ರಹಣಕ್ಕೆ ವಿಧಾನಸೌಧದಲ್ಲಿ ಭರ್ಜರಿ ತಯಾರಿ