AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್​​ ರೈತನ ಕೈಹಿಡಿದ ಹಳದಿ ಸುಂದರಿ: ವರ್ಷಕ್ಕೆ ಲಕ್ಷಾಂತರ ರೂ ಆದಾಯ, ಆಧುನಿಕ ಯುಗದಲ್ಲಿ ಕೃಷಿ ಕ್ರಾಂತಿ

ಬೀದರ್ ಜಿಲ್ಲೆಯ ಕಾಶೆಂಪುರ ರೈತ ರಾಮ್ ರೆಡ್ಡಿ ಸಾಂಪ್ರದಾಯಿಕ ಬೆಳೆಗಳ ಬದಲಾಗಿ ನಿಂಬೆ ಕೃಷಿಯಲ್ಲಿ ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಕಾಗಜಿ 12 ತಳಿಯ ನಿಂಬೆ ಬೆಳೆದು ವಾರ್ಷಿಕ ಐದಾರು ಲಕ್ಷ ಲಾಭ ಗಳಿಸುತ್ತಿದ್ದಾರೆ. ಉತ್ತಮ ಬೆಲೆ ಪಡೆಯಲು ಶೇಖರಣಾ ಘಟಕ ನಿರ್ಮಿಸಿ, ಮಾರುಕಟ್ಟೆ ತಂತ್ರಗಳನ್ನು ಬಳಸುತ್ತಿದ್ದಾರೆ. ಇದು ಇತರ ರೈತರಿಗೆ ಮಾದರಿಯಾಗಿದೆ.

ಸುರೇಶ್ ನಾಯಕ್
| Edited By: |

Updated on: Jan 02, 2026 | 8:27 PM

Share
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ರೈತ ಹತ್ತಾರು ವರ್ಷದಿಂದ ಸೋಯಾಬೀನ್, ತೊಗರಿ, ಉದ್ದು ಹೀಗೆ ಬೆಳೆ ಬೆಳೆದು ಹೈರಾಣಾಗಿದ್ದರು. ಆದರೆ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿ ತನ್ನ ಹೊಲದಲ್ಲಿ ನಿಂಬೆ ಬೆಳೆದು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ಆ ಮೂಲಕ ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತನ್ನು ಅಕ್ಷರಶಃ ಸತ್ಯ ಮಾಡಿದ್ದಾರೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ರೈತ ಹತ್ತಾರು ವರ್ಷದಿಂದ ಸೋಯಾಬೀನ್, ತೊಗರಿ, ಉದ್ದು ಹೀಗೆ ಬೆಳೆ ಬೆಳೆದು ಹೈರಾಣಾಗಿದ್ದರು. ಆದರೆ ಈ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಏನಾದರೂ ಹೊಸದನ್ನ ಮಾಡಬೇಕೆಂದು ಯೋಚಿಸಿ ತನ್ನ ಹೊಲದಲ್ಲಿ ನಿಂಬೆ ಬೆಳೆದು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ಆ ಮೂಲಕ ಕೈ ಕೆಸರಾದರೆ ಬಾಯಿ ಮೊಸರು ಅನ್ನೋ ಮಾತನ್ನು ಅಕ್ಷರಶಃ ಸತ್ಯ ಮಾಡಿದ್ದಾರೆ.

1 / 6
ಇಂತಹ ರೈತರ ಸಂಕಷ್ಟದ ನಡುವೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ಪ್ರಗತಿಪರ ರೈತರ ರಾಮ್ ರೆಡ್ಡಿ, ಕೃಷಿಯಿಂದಲೇ ವಾರ್ಷಿವಾಗಿ ಲಕ್ಷ ಲಕ್ಷ ಆದಾಯವನ್ನು ಸಂಪಾದಿಸುತ್ತಿದ್ದಾರೆ. ಇವರದ್ದು ಒಟ್ಟು 12 ಎಕರೆಯಷ್ಟು ಜಮೀನಿದ್ದು, ಒಂದೂವರೆ ಎಕರೆಯಲ್ಲಿ ಕಾಗಜಿ 12-ಅನ್ನೋ ತಳಿಯ ನಿಂಬೆ ಬೆಳೆಯುತ್ತಿದ್ದಾರೆ. 

ಇಂತಹ ರೈತರ ಸಂಕಷ್ಟದ ನಡುವೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಕಾಶೆಂಪುರ ಗ್ರಾಮದ ಪ್ರಗತಿಪರ ರೈತರ ರಾಮ್ ರೆಡ್ಡಿ, ಕೃಷಿಯಿಂದಲೇ ವಾರ್ಷಿವಾಗಿ ಲಕ್ಷ ಲಕ್ಷ ಆದಾಯವನ್ನು ಸಂಪಾದಿಸುತ್ತಿದ್ದಾರೆ. ಇವರದ್ದು ಒಟ್ಟು 12 ಎಕರೆಯಷ್ಟು ಜಮೀನಿದ್ದು, ಒಂದೂವರೆ ಎಕರೆಯಲ್ಲಿ ಕಾಗಜಿ 12-ಅನ್ನೋ ತಳಿಯ ನಿಂಬೆ ಬೆಳೆಯುತ್ತಿದ್ದಾರೆ. 

2 / 6
ಕೋವಿಡ್​​ನ ಲಾಕ್​ಡೌನ್ ಸಮಯದಲ್ಲಿ ನಿಂಬೆ ಗಿಡಗಳನ್ನ ನಾಟಿ ಮಾಡಿ ಎರಡು ವರ್ಷದ ಬಳಿಕ ನಿಂಬೆ ಹಣ್ಣು ಕೊಡುತ್ತಿದೆ. ಎಲ್ಲಾ ಖರ್ಚು ತೆಗೆದು ವರ್ಷಕ್ಕೆ ನಮಗೆ ಐದಾರು ಲಕ್ಷ ರೂ ಲಾಭವಾಗುತ್ತದೆ ಎಂದು  ರಾಮ್ ರೆಡ್ಡಿ ಹೇಳುತ್ತಾರೆ. 

ಕೋವಿಡ್​​ನ ಲಾಕ್​ಡೌನ್ ಸಮಯದಲ್ಲಿ ನಿಂಬೆ ಗಿಡಗಳನ್ನ ನಾಟಿ ಮಾಡಿ ಎರಡು ವರ್ಷದ ಬಳಿಕ ನಿಂಬೆ ಹಣ್ಣು ಕೊಡುತ್ತಿದೆ. ಎಲ್ಲಾ ಖರ್ಚು ತೆಗೆದು ವರ್ಷಕ್ಕೆ ನಮಗೆ ಐದಾರು ಲಕ್ಷ ರೂ ಲಾಭವಾಗುತ್ತದೆ ಎಂದು  ರಾಮ್ ರೆಡ್ಡಿ ಹೇಳುತ್ತಾರೆ. 

3 / 6
ನಿಂಬೆ ಹೆಚ್ಚು ಲಾಭದಾಯಕ ಕೃಷಿ ಎಂದು ಅರಿತುಕೊಂಡ ರಾಮ್​ ರೆಡ್ಡಿ, ತನ್ನ ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ ನಿಂಬೆ ನಾಟಿ ಮಾಡಿದ್ದಾರೆ. ಒಂದೂವರೆ ಎಕರೆಯಲ್ಲಿ ಸುಮಾರು 360 ನಿಂಬೆ ಗಿಡಗಳನ್ನು ಹಚ್ಚಿದ್ದಾರೆ. ಕಳೆದ ಮೂರು ವರ್ಷದಿಂದ ಒಂದು ನಿಂಬೆ ಗಿಡ ಸರಾಸರಿ 40 ರಿಂದ 60 ಕೆ.ಜಿ ವರೆಗೆ ನಿಂಬೆ  ಕೊಡುತ್ತಿದೆ.

ನಿಂಬೆ ಹೆಚ್ಚು ಲಾಭದಾಯಕ ಕೃಷಿ ಎಂದು ಅರಿತುಕೊಂಡ ರಾಮ್​ ರೆಡ್ಡಿ, ತನ್ನ ಒಂದೂವರೆ ಎಕರೆಯಷ್ಟು ಜಮೀನಿನಲ್ಲಿ ನಿಂಬೆ ನಾಟಿ ಮಾಡಿದ್ದಾರೆ. ಒಂದೂವರೆ ಎಕರೆಯಲ್ಲಿ ಸುಮಾರು 360 ನಿಂಬೆ ಗಿಡಗಳನ್ನು ಹಚ್ಚಿದ್ದಾರೆ. ಕಳೆದ ಮೂರು ವರ್ಷದಿಂದ ಒಂದು ನಿಂಬೆ ಗಿಡ ಸರಾಸರಿ 40 ರಿಂದ 60 ಕೆ.ಜಿ ವರೆಗೆ ನಿಂಬೆ  ಕೊಡುತ್ತಿದೆ.

4 / 6
ನಿಂಬೆ ಗಿಡಗಳು ನಾಟಿ ಮಾಡಿದ 12 ವರ್ಷದವರೆಗೆ ಹಣ್ಣು ಕೊಡುತ್ತದೆ. ಆಮೇಲೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ, ಹೀಗಾಗಿ 12 ವರ್ಷ ಆದ ಮೇಲೆ ನಿಂಬೆ ಗಿಡಗಳನ್ನ ತೆಗೆದು ಮತ್ತೆ ಬೇರೆ ನಿಂಬೆ ಸಸಿ ನಾಟಿ ಮಾಡಲಾಗುತ್ತದೆ. ಈಗ ಒಂದೂವರೆ ಎಕರೆಯಷ್ಟು ನಿಂಬೆ ನಾಟಿ ಮಾಡಿ ಐದು ವರ್ಷ ಕಳೆದಿದ್ದು, ಹೀಗಾಗಿ ಮತ್ತೆ ಎರಡು ಎಕರೆ ಈ ವರ್ಷ ನಿಂಬೆ ನಾಟಿ ಮಾಡಿದ್ದಾರೆ.

ನಿಂಬೆ ಗಿಡಗಳು ನಾಟಿ ಮಾಡಿದ 12 ವರ್ಷದವರೆಗೆ ಹಣ್ಣು ಕೊಡುತ್ತದೆ. ಆಮೇಲೆ ಇಳುವರಿ ಕಡಿಮೆಯಾಗುತ್ತಾ ಹೋಗುತ್ತದೆ, ಹೀಗಾಗಿ 12 ವರ್ಷ ಆದ ಮೇಲೆ ನಿಂಬೆ ಗಿಡಗಳನ್ನ ತೆಗೆದು ಮತ್ತೆ ಬೇರೆ ನಿಂಬೆ ಸಸಿ ನಾಟಿ ಮಾಡಲಾಗುತ್ತದೆ. ಈಗ ಒಂದೂವರೆ ಎಕರೆಯಷ್ಟು ನಿಂಬೆ ನಾಟಿ ಮಾಡಿ ಐದು ವರ್ಷ ಕಳೆದಿದ್ದು, ಹೀಗಾಗಿ ಮತ್ತೆ ಎರಡು ಎಕರೆ ಈ ವರ್ಷ ನಿಂಬೆ ನಾಟಿ ಮಾಡಿದ್ದಾರೆ.

5 / 6
ವಾತಾವರಣಕ್ಕೆ ಅನುಗುಣವಾಗಿ ನಿಂಬೆ ದರ ನಿಗದಿಯಾಗುತ್ತದೆ. ಚಳಗಾಲಕ್ಕೆ ಹೋಲಿಸಿದರೆ ಬೆಸಿಗೆಯಲ್ಲಿ ಇದರ ಬೆಲೆ ಹೆಚ್ಚು. ಜೊತೆಗೆ ವಾರದಿಂದ ವಾರಕ್ಕೆ ದರ ಏರಿಳಿತವಾಗುವ ಕಾರಣಕ್ಕೆ ತೋಟಗಾರಿಕೆ ಇಲಾಖೆಯ ಸಹಾಯ ಪಡೆದುಕೊಂಡು 60 ಟನ್ ನಷ್ಟು ನಿಂಬೆ ಸ್ಟೋರೇಜ್ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಯಾವಾಗ ದರ ಹೆಚ್ಚಿಗೆ ಇರುತ್ತದೆಯೋ ಅಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಒಟ್ಟಿನಲ್ಲಿ ರೈತ ರಾಮ್ ರೆಡ್ಡಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ವಾತಾವರಣಕ್ಕೆ ಅನುಗುಣವಾಗಿ ನಿಂಬೆ ದರ ನಿಗದಿಯಾಗುತ್ತದೆ. ಚಳಗಾಲಕ್ಕೆ ಹೋಲಿಸಿದರೆ ಬೆಸಿಗೆಯಲ್ಲಿ ಇದರ ಬೆಲೆ ಹೆಚ್ಚು. ಜೊತೆಗೆ ವಾರದಿಂದ ವಾರಕ್ಕೆ ದರ ಏರಿಳಿತವಾಗುವ ಕಾರಣಕ್ಕೆ ತೋಟಗಾರಿಕೆ ಇಲಾಖೆಯ ಸಹಾಯ ಪಡೆದುಕೊಂಡು 60 ಟನ್ ನಷ್ಟು ನಿಂಬೆ ಸ್ಟೋರೇಜ್ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಯಾವಾಗ ದರ ಹೆಚ್ಚಿಗೆ ಇರುತ್ತದೆಯೋ ಅಂದು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ. ಒಟ್ಟಿನಲ್ಲಿ ರೈತ ರಾಮ್ ರೆಡ್ಡಿ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

6 / 6
Follow Us
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಮಾಫಿ ಸಾಕ್ಷಿಗೆ ದರ್ಶನ್ ಆಕ್ಷೇಪ; ತುರ್ತು ವಿಚಾರಣೆಗೆ ಹೈಕೋರ್ಟ್ ಸಮ್ಮತಿ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಬಗೆದಷ್ಟು ಬಯಲಾಗ್ತಿದೆ KPSC ಹಗರಣ: Dysp ನೇಮಕಾತಿಯಲ್ಲೂ ಅಕ್ರಮ ಶಂಕೆ
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ಇಲ್ಲಿ ಎದೆಮಟ್ಟದ ನೀರಿನಲ್ಲಿ ನಡೆದರೆ ಮಾತ್ರ ನರಸಿಂಹನ ದರ್ಶನ ಭಾಗ್ಯ!
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ
ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ