ಪುರಿ ಜಗನ್ನಾಥ ಜಾತ್ರೆ ಮಾದರಿಯಲ್ಲಿ ನಡೆಯುತ್ತೆ ಬೀದರ್​ನ ಮರಿಗೆಮ್ಮ ದೇವಿ ಜಾತ್ರೆ: ಇಲ್ಲಿವೆ ಫೋಟೋಸ್​

Edited By:

Updated on: Jul 17, 2025 | 1:25 PM

ಬೀದರ್ ತಾಲೂಕಿನ ಕಾಶೆಂಪುರದ ಮರಿಗೆಮ್ಮ ದೇವಿ ಜಾತ್ರೆ ಅದ್ಭುತವಾದ ಏಕದಿನ ಆಚರಣೆಯಾಗಿದೆ. ಪುರಿಯ ಜಗನ್ನಾಥ ಜಾತ್ರೆಯಂತೆ, ಇಲ್ಲಿ ಹೊಸ ಮೂರ್ತಿಗಳನ್ನು ಒಂದೇ ದಿನ ತಯಾರಿಸಿ ಪ್ರತಿಷ್ಠಾಪಿಸಲಾಗುತ್ತದೆ. ಮದುವೆಯಾದ ಮಹಿಳೆಯರು ಈ ಜಾತ್ರೆಯಲ್ಲಿ ಭಾಗವಹಿಸುವುದು ಕಡ್ಡಾಯ. ದೇವಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಗುತ್ತದೆ ಮತ್ತು ಗ್ರಾಮಸ್ಥರು ನೈವೇದ್ಯ ಅರ್ಪಿಸುತ್ತಾರೆ.

1 / 6
ಈ ಗ್ರಾಮದಲ್ಲಿ ನಡೆಯುವ ಮರಿಗೆಮ್ಮ ದೇವಿಯ ಜಾತ್ರೆ ಬಹಳ ವಿಶೇಷವಾಗಿದೆ. ಪುರಿ ಜಗನ್ನಾಥ ಮಂದಿರದ ಜಾತ್ರೆಯಂತೆಯೇ ಇಲ್ಲಿನ ಮರಿಗೆಮ್ಮ ದೇವಿಯ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷ ನಡೆಯುವ ಈ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿವಿಜೃಂಭಣೆಯಿಂದ ಆಚರಿಸುತ್ತಾರೆ.

ಈ ಗ್ರಾಮದಲ್ಲಿ ನಡೆಯುವ ಮರಿಗೆಮ್ಮ ದೇವಿಯ ಜಾತ್ರೆ ಬಹಳ ವಿಶೇಷವಾಗಿದೆ. ಪುರಿ ಜಗನ್ನಾಥ ಮಂದಿರದ ಜಾತ್ರೆಯಂತೆಯೇ ಇಲ್ಲಿನ ಮರಿಗೆಮ್ಮ ದೇವಿಯ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷ ನಡೆಯುವ ಈ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿವಿಜೃಂಭಣೆಯಿಂದ ಆಚರಿಸುತ್ತಾರೆ.

2 / 6

ಬೀದರ್ ತಾಲೂಕಿನ ಕಾಶೆಂಪುರ ಗ್ರಾಮದಲ್ಲಿ ನಡೆಯುವ ಮರಿಗೆಮ್ಮ ದೇವಿ ಜಾತ್ರೆ ಪ್ರತಿ ವರ್ಷ ಕೂಡ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಬೇರೆಡೆ ನಡೆಯುವ ಜಾತ್ರೆಗೆ ತಿಂಗಳುಗಳ ಕಾಲ ಸಿದ್ಧತೆ ಮಾಡಲಾಗುತ್ತದೆ. ಆದರೆ ಇಲ್ಲಿ ನಡೆಯುವ ಈ ಜಾತ್ರೆ ಒಂದೇ ದಿನದಲ್ಲಿ ಎಲ್ಲಾ ಸಿದ್ಧತೆಯನ್ನ ಮಾಡಿಕೊಂಡು, ಒಂದೇ ದಿನದಲ್ಲಿ ಮುಗಿಸುತ್ತಾರೆ. ಹೀಗಾಗಿ ಈ ಜಾತ್ರೆ ತುಂಬಾ ವಿಶೇಷವಾಗಿದೆ. 

3 / 6

ಇನ್ನು ಈ ಜಾತ್ರೆಗೆ ಗ್ರಾಮದಿಂದ ಮದುವೆಯಾಗಿ ಹೋದ ಮಹಿಳೆಯವರು ಭಾಗವಹಿಸಲೇಬೇಕು ಎಂಬ ನಿಯಮ ಹಿನ್ನಲೆ ಆಗಮಿಸುತ್ತಾರೆ. ಬೆಳಗ್ಗೆಯಿಂದಲೇ ಸಿದ್ಧತೆ ಆರಂಭಿಸಿ, ಸಂಜೆ ವೇಳೆಗೆ ಗ್ರಾಮ ದೇವತೆಯ ನೂತನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ವಿಶೇಷ ಪೂಜೆ ಮಾಡಲಾಗುತ್ತದೆ. 

4 / 6

ಈ ಮರಿಗೆಮ್ಮ ದೇವಿಯ ಮೂರ್ತಿಯನ್ನ ಪ್ರತಿ ವರ್ಷ ಬದಲಾವಣೆ ಮಾಡಲಾಗುತ್ತದೆ. ದೇವತೆ ಮರಿಗೆಮ್ಮ ದೇವಿಯ ಮೂರ್ತಿಗಳನ್ನು ಜಾತ್ರಾ ಮಹೋತ್ಸವ ದಿನದಂದೇ ಒಂದೇ ದಿನದಲ್ಲೇ ತಯಾರಿಸುವ ಸಂಪ್ರದಾಯ ಮೊದಲಿನಿಂದಲೂ ಜಾರಿಯಲಿದ್ದು, ಈ ವರ್ಷ ಕೂಡ ಅದನ್ನ ಪಾಲಿಕೊಂಡು ಬರಲಾಗಿದೆ.

5 / 6

ಜಾತ್ರೆ ನಡೆಯುವ ದಿನದಂದು ಅಂದರೆ ಬೆಳಿಗ್ಗೆ ಗ್ರಾಮಸ್ಥರು ಮರದ ತುಕಡಿಗಳನ್ನು ಮೂರ್ತಿ ತಯಾರಿಸುವವರಿಗೆ ನೀಡುತ್ತಾರೆ. ಆ ಮರದ ತುಂಡುಗಳಿಂದ ಅವರು ಹೊಸ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ. ಸಂಜೆಯ ವೇಳೆಯಲ್ಲಿ ಗ್ರಾಮಸ್ಥರು ಬಡಿಗೇರ ಮನೆಯಿಂದ ಬಾಜಾ ಭಜಂತ್ರಿಗಳೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಮೆರವಣಿಗೆ ಮೂಲಕ ಮೂರ್ತಿಯನ್ನ ತಂದು ಮರಿಗೆಮ್ಮ ದೇವಿಯ ಮಂದಿರದಲ್ಲಿ ಪ್ರತಿಷ್ಠಾಪಿಸುತ್ತಾರೆ.

6 / 6

ತಾವು ಮಾಡಿದ ನೈವೈದ್ಯವನ್ನ ಗ್ರಾಮದ ಪ್ರತಿಯೊಬ್ಬರು ತಂದು ದೇವಿಗೆ ಅರ್ಪಿಸಿ ಆ ನಂತರ ಜನರು ಊಟ ಮಾಡುವ ಸಂಪ್ರದಾಯವಿದೆ. ಮರಿಗೆಮ್ಮ ದೇವಿಯ ಜಾತ್ರೆಯ ಸಮಯದಲ್ಲಿ ಒಂದು ಸ್ವಲ್ಪವಾದರೂ ಮಳೆ ಬಂದೆ ಬರುತ್ತದೆ ಇದು ದೇವಿಯ ಶಕ್ತಿ ಎಂದು ಗ್ರಾಮಸ್ಥರ ನಂಬಿಕೆ ಆಗಿದೆ.

Published On - 1:23 pm, Thu, 17 July 25

Loading...
Unable to load recommendations.
Follow Us