ಅಂಜನಾದ್ರಿಯ ಆಂಜನೇಯನ ಹುಂಡಿ ಎಣಿಕೆ: ಕಾಣಿಕೆಯಾಗಿ ಬಂದ ವಿದೇಶಿ ಹಣ

Edited By: ಕಿರಣ್ ಹನುಮಂತ್​ ಮಾದಾರ್

Updated on: Feb 21, 2024 | 8:06 PM

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಇಂದು ನಡೆಯಿತು. ಗಂಗಾವತಿ ತಹಶಿಲ್ದಾರ್ ನೇತೃತ್ವದಲ್ಲಿ, ಪೊಲೀಸ್ ಭದ್ರತೆ ಮತ್ತು ಸಿಸಿಟಿವಿ ಕಣ್ಗಾವಲಿನಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ ಎರಡು ವಿದೇಶಿ ನೋಟು ಮತ್ತು 9 ವಿದೇಶಿ ನಾಣ್ಯಗಳು ಕೂಡ ಹುಂಡಿಯಲ್ಲಿ ಸಂಗ್ರಹವಾಗಿವೆ.

1 / 6
ಹನುಮ ಜನಿಸಿದ ಸ್ಥಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಹರಿದು ಬರುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ.

ಹನುಮ ಜನಿಸಿದ ಸ್ಥಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಹರಿದು ಬರುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಭಕ್ತರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ.

2 / 6

ಇದರಿಂದ ಆಂಜನೇಯ ದೇವಸ್ಥಾನಕ್ಕೆ ಕಾಣಿಕೆ ಕೂಡ ಹೇರಳವಾಗಿ ಬರುತ್ತಿದೆ. ಈ ಹಿನ್ನಲೆ ಇಂದು(ಫೆ.21) ಹುಂಡಿ ಏಣಿಕೆ ಕಾರ್ಯವನ್ನು ಮಾಡಲಾಗಿದೆ.

3 / 6

ಹೌದು, ಭಕ್ತರ ಆಗಮನದಿಂದ ಪ್ರಖ್ಯಾತಿ ಪಡೆಯುತ್ತಿರುವ ದೇವಸ್ಥಾನದ ಹುಂಡಿ ಎಣಿಕೆಯನ್ನು ಗಂಗಾವತಿ ತಹಶೀಲ್ದಾರ್ ಯು.ನಾಗರಾಜ್ ನೇತೃತ್ವದಲ್ಲಿ ಪೊಲೀಸ್ ಭದ್ರತೆಯಲ್ಲಿ ಹುಂಡಿ ಎಣಿಕೆ ಮಾಡಲಾಗಿದೆ.

4 / 6

ಇದರಲ್ಲಿ ವಿಶೇಷವೆಂದರೆ ವಿದೇಶಿ ನಾಣ್ಯಗಳು, ನೋಟುಗಳು ಈ ಬಾರಿ ಕಾಣಿಕೆ ಡಬ್ಬಿಯಲ್ಲಿ ಹರಿದು ಬಂದಿದೆ. ಅಂದರೆ ವಿದೇಶಿಗರು ಕೂಡ ಬಂದು ದೇವರ ಕೃಫೆಗೆ ಪಾತ್ರರಾಗುತ್ತಿದ್ದಾರೆ.

5 / 6

ಇನ್ನು ಹೆಚ್ಚಿದ ಭಕ್ತರ ಸಂಖ್ಯೆಗೆ ಅನುಗುಣವಾಗಿಯೇ ಕಳೆದ 46 ದಿನಗಳಲ್ಲಿ ಬರೊಬ್ಬರಿ 34,86,965 ಲಕ್ಷ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.

6 / 6

ಈ ಬಾರಿ ಯೂರೋಪ್​, ಯುನೈಟೆಡ್​ ಕಿಂಗ್ಡಮ್, ಆಸ್ಟ್ರೇಲಿಯಾ ಸೇರಿದಂತೆ​ 2 ವಿದೇಶಿ ನೋಟುಗಳ ಜೊತೆಗೆ 9 ವಿದೇಶಿ ನಾಣ್ಯಗಳು ಕೂಡ ಹುಂಡಿಯಲ್ಲಿ ಸಂಗ್ರಹವಾಗಿದೆ.  

Published On - 7:57 pm, Wed, 21 February 24

Loading...
Unable to load recommendations.
Follow Us