Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs WI: ಐಪಿಎಲ್ ವೇಳೆ ನಿಯಮ ಉಲ್ಲಂಘನೆ; ವಿಂಡೀಸ್ ಪ್ರವಾಸದಿಂದ 4 ಆಟಗಾರರಿಗೆ ಗೇಟ್​ಪಾಸ್..!

IND vs WI: ಐಪಿಎಲ್ ಫ್ರಾಂಚೈಸಿಗಳು ನೀಡಿದ ದೂರಿನ ಮೇರೆಗೆ ಬಿಸಿಸಿಐ, ಈ ಯುವ ಆಟಗಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಂದಾಗಿದೆ ಎಂದು ವರದಿಯಾಗಿದೆ.

ಪೃಥ್ವಿಶಂಕರ
|

Updated on:Jun 30, 2023 | 8:47 AM

ಸದ್ಯ ವೆಸ್ಟ್ ಪ್ರವಾಸಕ್ಕೆ ಭಾರತ ಏಕದಿನ ಹಾಗೂ ಟೆಸ್ಟ್ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಈ ಎರಡೂ ಸರಣಿಗಳು ಮುಗಿದ ಬಳಿಕ ಆರಂಭವಾಗಬೇಕಿರುವ 5 ಪಂದ್ಯಗಳಿಗೆ ಬಲಿಷ್ಠ ಯುವ ಪಡೆಯನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ. ಭವಿಷ್ಯದ ಟಿ20 ತಂಡವನ್ನು ಕಟ್ಟುವ ಸಲುವಾಗಿ ಬಿಸಿಸಿಐ ಈ ಬಾರಿ ಐಪಿಎಲ್ ಸ್ಟಾರ್ ಆಟಗಾರರಿಗೆ ಮಣೆಹಾಕುವ ಸಾಧ್ಯತೆ ಇದೆ.

ಸದ್ಯ ವೆಸ್ಟ್ ಪ್ರವಾಸಕ್ಕೆ ಭಾರತ ಏಕದಿನ ಹಾಗೂ ಟೆಸ್ಟ್ ತಂಡವನ್ನು ಪ್ರಕಟಿಸಿರುವ ಬಿಸಿಸಿಐ, ಈ ಎರಡೂ ಸರಣಿಗಳು ಮುಗಿದ ಬಳಿಕ ಆರಂಭವಾಗಬೇಕಿರುವ 5 ಪಂದ್ಯಗಳಿಗೆ ಬಲಿಷ್ಠ ಯುವ ಪಡೆಯನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ. ಭವಿಷ್ಯದ ಟಿ20 ತಂಡವನ್ನು ಕಟ್ಟುವ ಸಲುವಾಗಿ ಬಿಸಿಸಿಐ ಈ ಬಾರಿ ಐಪಿಎಲ್ ಸ್ಟಾರ್ ಆಟಗಾರರಿಗೆ ಮಣೆಹಾಕುವ ಸಾಧ್ಯತೆ ಇದೆ.

1 / 7
ಆದರೆ ಬಿಸಿಸಿಐ ಟಿ20 ತಂಡವನ್ನು ಆಯ್ಕೆ ಮಾಡುವ ಮುನ್ನವೇ ಐಪಿಎಲ್​ನಲ್ಲಿ ಆಡಿದ ಸ್ಟಾರ್ ಯುವ ಆಟಗಾರರಿಗೆ ನಡುಕ ಶುರುವಾಗಿದೆ. ಇದಕ್ಕೆ ಕಾರಣವೂ ಇದ್ದು, ಐಪಿಎಲ್ ಫ್ರಾಂಚೈಸಿಗಳು ನೀಡಿದ ದೂರಿನ ಮೇರೆಗೆ ಬಿಸಿಸಿಐ, ಈ ಯುವ ಆಟಗಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಂದಾಗಿದೆ.

ಆದರೆ ಬಿಸಿಸಿಐ ಟಿ20 ತಂಡವನ್ನು ಆಯ್ಕೆ ಮಾಡುವ ಮುನ್ನವೇ ಐಪಿಎಲ್​ನಲ್ಲಿ ಆಡಿದ ಸ್ಟಾರ್ ಯುವ ಆಟಗಾರರಿಗೆ ನಡುಕ ಶುರುವಾಗಿದೆ. ಇದಕ್ಕೆ ಕಾರಣವೂ ಇದ್ದು, ಐಪಿಎಲ್ ಫ್ರಾಂಚೈಸಿಗಳು ನೀಡಿದ ದೂರಿನ ಮೇರೆಗೆ ಬಿಸಿಸಿಐ, ಈ ಯುವ ಆಟಗಾರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಂದಾಗಿದೆ.

2 / 7
ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಐಪಿಎಲ್ ಮಂಡಳಿ ಕೆಲವು ನಿಯಮಗಳನ್ನು ರೂಪಿಸಿತ್ತು. ಅದರಲ್ಲಿ ತಂಡದ ಆಟಗಾರರು ಫ್ರಾಂಚೈಸಿಯ ಗಮನಕ್ಕೆ ತರದೆ ಹೋಟೆಲ್ ರೂಮಿನಿಂದ ಎಲ್ಲಿಗೂ ತೆರಳುವಂತಿಲ್ಲ ಎಂಬ ನಿಯಮ ಕೂಡ ಸೇರಿತ್ತು. ಆಟಗಾರರನ್ನು ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ಮಂಡಳಿ ಈ ನಿಯಮ ಜಾರಿ ಮಾಡಿತ್ತು.

ವಾಸ್ತವವಾಗಿ ಐಪಿಎಲ್ ಆರಂಭಕ್ಕೂ ಮುನ್ನ ಐಪಿಎಲ್ ಮಂಡಳಿ ಕೆಲವು ನಿಯಮಗಳನ್ನು ರೂಪಿಸಿತ್ತು. ಅದರಲ್ಲಿ ತಂಡದ ಆಟಗಾರರು ಫ್ರಾಂಚೈಸಿಯ ಗಮನಕ್ಕೆ ತರದೆ ಹೋಟೆಲ್ ರೂಮಿನಿಂದ ಎಲ್ಲಿಗೂ ತೆರಳುವಂತಿಲ್ಲ ಎಂಬ ನಿಯಮ ಕೂಡ ಸೇರಿತ್ತು. ಆಟಗಾರರನ್ನು ಕೊರೊನಾದಂತಹ ಸಾಂಕ್ರಾಮಿಕ ರೋಗದಿಂದ ರಕ್ಷಿಸಲು ಮಂಡಳಿ ಈ ನಿಯಮ ಜಾರಿ ಮಾಡಿತ್ತು.

3 / 7
ಆದರೆ ಇದೀಗ ಐಪಿಎಲ್​ನ 4 ಪ್ರಾಂಚೈಸಿಗಳು ಐಪಿಎಲ್ ಮಂಡಳಿಗೆ ದೂರು ನೀಡಿದ್ದು, ಈ ದೂರಿನಲ್ಲಿ ತಂಡದ ಆಟಗಾರರು ಫ್ರಾಂಚೈಸಿಗೆ ಮಾಹಿತಿ ನೀಡದೆ ತಂಡ ತಂಗಿದ್ದ ರೂಮಿನಿಂದ ಹೊರಹೋಗಿದ್ದರು ಎಂದು ಆರೋಪಿಸಿವೆ. ಇದೀಗ ಐಪಿಎಲ್ ನಿಯಮ ಮುರಿದ ಆ ಆಟಗಾರರ ವಿರುದ್ಧ ಬಿಸಿಸಿಐ ಕ್ರಮ ಜರುಗಿಸಲಿದೆ ಎಂದು ವರದಿಯಾಗಿದೆ.

ಆದರೆ ಇದೀಗ ಐಪಿಎಲ್​ನ 4 ಪ್ರಾಂಚೈಸಿಗಳು ಐಪಿಎಲ್ ಮಂಡಳಿಗೆ ದೂರು ನೀಡಿದ್ದು, ಈ ದೂರಿನಲ್ಲಿ ತಂಡದ ಆಟಗಾರರು ಫ್ರಾಂಚೈಸಿಗೆ ಮಾಹಿತಿ ನೀಡದೆ ತಂಡ ತಂಗಿದ್ದ ರೂಮಿನಿಂದ ಹೊರಹೋಗಿದ್ದರು ಎಂದು ಆರೋಪಿಸಿವೆ. ಇದೀಗ ಐಪಿಎಲ್ ನಿಯಮ ಮುರಿದ ಆ ಆಟಗಾರರ ವಿರುದ್ಧ ಬಿಸಿಸಿಐ ಕ್ರಮ ಜರುಗಿಸಲಿದೆ ಎಂದು ವರದಿಯಾಗಿದೆ.

4 / 7
ವರದಿಯ ಪ್ರಕಾರ ಐಪಿಎಲ್ ನಿಯಮ ಮುರಿದ ಆಟಗಾರರು ಉತ್ತರದ ಫ್ರಾಂಚೈಸಿಗಳಿಗೆ ಸೇರಿದವರು ಎಂಬುದು ತಿಳಿದು ಬಂದಿದೆ. ಅಂದರೆ, ಆರೋಪ ಹೊತ್ತಿರುವ ಆಟಗಾರರು ಲಕ್ನೋ ಸೂಪರ್‌ಜೈಂಟ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದವರಾಗಿದ್ದಾರೆ ಎಂದು ತಿಳಿದು ಬಂದಿದೆ.

ವರದಿಯ ಪ್ರಕಾರ ಐಪಿಎಲ್ ನಿಯಮ ಮುರಿದ ಆಟಗಾರರು ಉತ್ತರದ ಫ್ರಾಂಚೈಸಿಗಳಿಗೆ ಸೇರಿದವರು ಎಂಬುದು ತಿಳಿದು ಬಂದಿದೆ. ಅಂದರೆ, ಆರೋಪ ಹೊತ್ತಿರುವ ಆಟಗಾರರು ಲಕ್ನೋ ಸೂಪರ್‌ಜೈಂಟ್ಸ್, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದವರಾಗಿದ್ದಾರೆ ಎಂದು ತಿಳಿದು ಬಂದಿದೆ.

5 / 7
ಒಟ್ಟು ನಾಲ್ವರು ಆಟಗಾರರು ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಇದುವರೆಗೆ ಆ ನಾಲ್ವರು ಆಟಗಾರರು ಯಾರು ಎಂಬುದು ಇನ್ನು ತಿಳಿದು ಬಂದಿಲ್ಲ. ಇನ್ನು  ಈ ಆಟಗಾರರು ಯಾವ ಕಾರಣಕ್ಕೆ ನಿಯಮ ಉಲ್ಲಂಘಿಸಿದ್ದರು ಎಂಬುದು ಕೂಡ ತಿಳಿದುಬಂದಿಲ್ಲ. ಪೂರ್ಣ ತನಿಖೆಯ ಬಳಿಕ ಆರೋಪ ಸಾಭೀತಾದರೆ ಈ ನಾಲ್ವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲು ಬಿಸಿಸಿಐ ಹಿಂಜರಿಯುವುದಿಲ್ಲ.

ಒಟ್ಟು ನಾಲ್ವರು ಆಟಗಾರರು ಐಪಿಎಲ್ ನಿಯಮ ಉಲ್ಲಂಘಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಆದರೆ ಇದುವರೆಗೆ ಆ ನಾಲ್ವರು ಆಟಗಾರರು ಯಾರು ಎಂಬುದು ಇನ್ನು ತಿಳಿದು ಬಂದಿಲ್ಲ. ಇನ್ನು ಈ ಆಟಗಾರರು ಯಾವ ಕಾರಣಕ್ಕೆ ನಿಯಮ ಉಲ್ಲಂಘಿಸಿದ್ದರು ಎಂಬುದು ಕೂಡ ತಿಳಿದುಬಂದಿಲ್ಲ. ಪೂರ್ಣ ತನಿಖೆಯ ಬಳಿಕ ಆರೋಪ ಸಾಭೀತಾದರೆ ಈ ನಾಲ್ವರ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಲು ಬಿಸಿಸಿಐ ಹಿಂಜರಿಯುವುದಿಲ್ಲ.

6 / 7
ಆದರೆ ಈ ನಾಲ್ವರು ಆಟಗಾರರು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನಪಡೆಯುವವರಿದ್ದರು ಎಂದು ತಿಳಿದುಬಂದಿದೆ. ಆದರೀಗ ನಿಯಮ ಉಲ್ಲಂಘಿಸಿರುವ ಈ ಆಟಗಾರರಿಗೆ ವಿಂಡೀಸ್ ಪ್ರವಾಸದ ಭಾಗ್ಯ ದೊರೆಯುವುದು ಕಷ್ಟಕರವಾಗಿದೆ.

ಆದರೆ ಈ ನಾಲ್ವರು ಆಟಗಾರರು ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದಲ್ಲಿ ಸ್ಥಾನಪಡೆಯುವವರಿದ್ದರು ಎಂದು ತಿಳಿದುಬಂದಿದೆ. ಆದರೀಗ ನಿಯಮ ಉಲ್ಲಂಘಿಸಿರುವ ಈ ಆಟಗಾರರಿಗೆ ವಿಂಡೀಸ್ ಪ್ರವಾಸದ ಭಾಗ್ಯ ದೊರೆಯುವುದು ಕಷ್ಟಕರವಾಗಿದೆ.

7 / 7

Published On - 8:40 am, Fri, 30 June 23

Follow us
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ