IPL 2025: ಮುಂಬೈ ಇಂಡಿಯನ್ಸ್ ಚಿಂತೆ ಹೆಚ್ಚಿಸಿದ ಸ್ಟಾರ್ ಆಟಗಾರರು

IPL 2025: ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೆ ನಾಲ್ವರು ಆಟಗಾರರನ್ನು ರಿಟೈನ್ ಮಾಡಿಕೊಳ್ಳುವ ಆಯ್ಕೆ ನೀಡಬಹುದು. ಆದರೆ ಈ ಆಯ್ಕೆಗೆ ನಿರ್ದಿಷ್ಟ ಮೊತ್ತವನ್ನು ನಿಗದಿ ಮಾಡಲಾಗುತ್ತದೆ. ಈ ಮೊತ್ತದೊಳಗೆ ನಾಲ್ವರನ್ನು ಆಯ್ಕೆ ಮಾಡಬೇಕಾಗುತ್ತದೆ. ಆದರೆ ಅತ್ತ ಸ್ಟಾರ್ ಆಟಗಾರರ ದಂಡೇ ಹೊಂದಿರುವ ಮುಂಬೈ ಇಂಡಿಯನ್ಸ್ ಯಾರನ್ನು ರಿಟೈನ್ ಮಾಡಿಕೊಳ್ಳಲಿದ್ದಾರೆ ಎಂಬುದೇ ಈಗ ಕುತೂಹಲ.

ಝಾಹಿರ್ ಯೂಸುಫ್
|

Updated on: Jul 24, 2024 | 10:09 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಹೊಸ ಚಿಂತೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ತಂಡದಲ್ಲಿರುವ ಸ್ಟಾರ್ ಆಟಗಾರರು. ಅಂದರೆ ಈ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವುದೇ ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂದಿರುವ ದೊಡ್ಡ ಸವಾಲು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮೆಗಾ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗೆ ಹೊಸ ಚಿಂತೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ತಂಡದಲ್ಲಿರುವ ಸ್ಟಾರ್ ಆಟಗಾರರು. ಅಂದರೆ ಈ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವುದೇ ಈಗ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂದಿರುವ ದೊಡ್ಡ ಸವಾಲು.

1 / 8
ಏಕೆಂದರೆ ಕಳೆದ ಐಪಿಎಲ್ ಹರಾಜಿನ ಮೂಲಕ ಕೆಲ ಆಟಗಾರರು 20 ಕೋಟಿ ರೂ.ಗಿಂತ ಅಧಿಕ ಮೊತ್ತ ಪಡೆದಿದ್ದಾರೆ. ಇನ್ನು ಕೆಲ ಯುವ ಆಟಗಾರರು 15 ಕೋಟಿ ರೂ. ಜೇಬಿಗಿಳಿಸಿಕೊಂಡಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ತಂಡದಲ್ಲೇ ಕಳೆದ ಕೆಲ ವರ್ಷಗಳಿಂದ ಕಾಣಿಸಿಕೊಳ್ಳುತ್ತಿರುವ ಸ್ಟಾರ್ ಆಟಗಾರರ ಸಂಭಾವನೆ ಮೊತ್ತ ಇನ್ನೂ ಸಹ 12 ಕೋಟಿ ರೂ. ದಾಟಿಲ್ಲ. ಹೀಗಾಗಿಯೇ ಈ ಆಟಗಾರರು ಈ ಬಾರಿಯ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆ ಆಟಗಾರರೆಂದರೆ...

ಏಕೆಂದರೆ ಕಳೆದ ಐಪಿಎಲ್ ಹರಾಜಿನ ಮೂಲಕ ಕೆಲ ಆಟಗಾರರು 20 ಕೋಟಿ ರೂ.ಗಿಂತ ಅಧಿಕ ಮೊತ್ತ ಪಡೆದಿದ್ದಾರೆ. ಇನ್ನು ಕೆಲ ಯುವ ಆಟಗಾರರು 15 ಕೋಟಿ ರೂ. ಜೇಬಿಗಿಳಿಸಿಕೊಂಡಿದ್ದಾರೆ. ಆದರೆ ಮುಂಬೈ ಇಂಡಿಯನ್ಸ್ ತಂಡದಲ್ಲೇ ಕಳೆದ ಕೆಲ ವರ್ಷಗಳಿಂದ ಕಾಣಿಸಿಕೊಳ್ಳುತ್ತಿರುವ ಸ್ಟಾರ್ ಆಟಗಾರರ ಸಂಭಾವನೆ ಮೊತ್ತ ಇನ್ನೂ ಸಹ 12 ಕೋಟಿ ರೂ. ದಾಟಿಲ್ಲ. ಹೀಗಾಗಿಯೇ ಈ ಆಟಗಾರರು ಈ ಬಾರಿಯ ಮೆಗಾ ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಆ ಆಟಗಾರರೆಂದರೆ...

2 / 8
ಸೂರ್ಯಕುಮಾರ್ ಯಾದವ್: ಟಿ20 ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್ 2018 ರಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಅದರಲ್ಲೂ ಕಳೆದ ಐದು ಸೀಸನ್​ಗಳಲ್ಲೂ ಅವರು ರಿಟೈನ್ ಆಗಿದ್ದಾರೆ. ಇದಾಗ್ಯೂ ಅವರು ಕಳೆದ ಸೀಸನ್​ನಲ್ಲಿ ಪಡೆದ ಮೊತ್ತ ಕೇವಲ 8 ಕೋಟಿ ರೂ. ಮಾತ್ರ.

ಸೂರ್ಯಕುಮಾರ್ ಯಾದವ್: ಟಿ20 ಸ್ಪೆಷಲಿಸ್ಟ್ ಎಂದೇ ಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್ 2018 ರಿಂದ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದಾರೆ. ಅದರಲ್ಲೂ ಕಳೆದ ಐದು ಸೀಸನ್​ಗಳಲ್ಲೂ ಅವರು ರಿಟೈನ್ ಆಗಿದ್ದಾರೆ. ಇದಾಗ್ಯೂ ಅವರು ಕಳೆದ ಸೀಸನ್​ನಲ್ಲಿ ಪಡೆದ ಮೊತ್ತ ಕೇವಲ 8 ಕೋಟಿ ರೂ. ಮಾತ್ರ.

3 / 8
ಜಸ್​ಪ್ರೀತ್ ಬುಮ್ರಾ: 2013 ರಿಂದ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿರುವ ಜಸ್​ಪ್ರೀತ್ ಬುಮ್ರಾ ಅವರ ಸಂಭಾವನೆ ಕೂಡ 15 ಕೋಟಿ ರೂ. ದಾಟಿಲ್ಲ ಎಂಬುದು ವಿಶೇಷ. ಅದರಲ್ಲೂ ಕಳೆದ ಎರಡು ಸೀಸನ್​ಗಳಲ್ಲಿ ಬುಮ್ರಾಗೆ ನೀಡಲಾಗಿರುವುದು ಕೇವಲ 12 ಕೋಟಿ ರೂ. ಮಾತ್ರ.

ಜಸ್​ಪ್ರೀತ್ ಬುಮ್ರಾ: 2013 ರಿಂದ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುತ್ತಿರುವ ಜಸ್​ಪ್ರೀತ್ ಬುಮ್ರಾ ಅವರ ಸಂಭಾವನೆ ಕೂಡ 15 ಕೋಟಿ ರೂ. ದಾಟಿಲ್ಲ ಎಂಬುದು ವಿಶೇಷ. ಅದರಲ್ಲೂ ಕಳೆದ ಎರಡು ಸೀಸನ್​ಗಳಲ್ಲಿ ಬುಮ್ರಾಗೆ ನೀಡಲಾಗಿರುವುದು ಕೇವಲ 12 ಕೋಟಿ ರೂ. ಮಾತ್ರ.

4 / 8
ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾ 2018 ರಲ್ಲಿ 15 ಕೋಟಿ ರೂ. ಪಡೆದಿದ್ದರು. ಆದರೆ ಕಳೆದ 5 ಸೀಸನ್​ಗಳಲ್ಲಿ ಅವರ ಸಂಭಾವನೆಯಲ್ಲಿ ಕೇವಲ 1 ಕೋಟಿ ರೂ. ಮಾತ್ರ ಏರಿಕೆಯಾಗಿದೆ. ಅಂದರೆ ಪ್ರಸ್ತುತ ಅವರ ಮೊತ್ತ 16 ಕೋಟಿ ರೂ.

ರೋಹಿತ್ ಶರ್ಮಾ: ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ ಎನಿಸಿಕೊಂಡಿರುವ ರೋಹಿತ್ ಶರ್ಮಾ 2018 ರಲ್ಲಿ 15 ಕೋಟಿ ರೂ. ಪಡೆದಿದ್ದರು. ಆದರೆ ಕಳೆದ 5 ಸೀಸನ್​ಗಳಲ್ಲಿ ಅವರ ಸಂಭಾವನೆಯಲ್ಲಿ ಕೇವಲ 1 ಕೋಟಿ ರೂ. ಮಾತ್ರ ಏರಿಕೆಯಾಗಿದೆ. ಅಂದರೆ ಪ್ರಸ್ತುತ ಅವರ ಮೊತ್ತ 16 ಕೋಟಿ ರೂ.

5 / 8
ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ದಿಷ್ಟ ಮೊತ್ತವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ನಾಲ್ವರನ್ನು ರಿಟೈನ್ ಮಾಡಿಕೊಳ್ಳುವುದಾದರೆ, ಮೊದಲ ಆಟಗಾರನಿಗೆ 16 ಕೋಟಿ ರೂ, 2ನೇ ಆಟಗಾರನಿಗೆ 12 ಕೋಟಿ ರೂ, ಮೂರನೇ ಆಟಗಾರನಿಗೆ 8 ಕೋಟಿ ರೂ, ನಾಲ್ಕನೇ ಆಟಗಾರನಿಗೆ 4 ಕೋಟಿ ರೂ. ನಿಗದಿ ಮಾಡಬಹುದು. ಆದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಹೀಗಾಗಿ ಕಡಿಮೆ ಮೊತ್ತ ಪಡೆಯಲು ಯಾವುದೇ ಆಟಗಾರ ಬಯಸುವುದಿಲ್ಲ ಎಂದೇ ಹೇಳಬಹುದು.

ಐಪಿಎಲ್​ ಮೆಗಾ ಹರಾಜಿಗೂ ಮುನ್ನ ಆಟಗಾರರನ್ನು ರಿಟೈನ್ ಮಾಡಿಕೊಳ್ಳಲು ನಿರ್ದಿಷ್ಟ ಮೊತ್ತವನ್ನು ನಿಗದಿ ಮಾಡಲಾಗುತ್ತದೆ. ಉದಾಹರಣೆಗೆ ನಾಲ್ವರನ್ನು ರಿಟೈನ್ ಮಾಡಿಕೊಳ್ಳುವುದಾದರೆ, ಮೊದಲ ಆಟಗಾರನಿಗೆ 16 ಕೋಟಿ ರೂ, 2ನೇ ಆಟಗಾರನಿಗೆ 12 ಕೋಟಿ ರೂ, ಮೂರನೇ ಆಟಗಾರನಿಗೆ 8 ಕೋಟಿ ರೂ, ನಾಲ್ಕನೇ ಆಟಗಾರನಿಗೆ 4 ಕೋಟಿ ರೂ. ನಿಗದಿ ಮಾಡಬಹುದು. ಆದರೆ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಹೀಗಾಗಿ ಕಡಿಮೆ ಮೊತ್ತ ಪಡೆಯಲು ಯಾವುದೇ ಆಟಗಾರ ಬಯಸುವುದಿಲ್ಲ ಎಂದೇ ಹೇಳಬಹುದು.

6 / 8
ಒಂದು ವೇಳೆ ಸೂರ್ಯಕುಮಾರ್ ಯಾದವ್ ಹರಾಜಿನಲ್ಲಿ ಕಾಣಿಸಿಕೊಂಡರೆ ಕನಿಷ್ಠ 12 ರಿಂದ 15 ಕೋಟಿ ರೂ.ಗೆ ಬಿಡ್ ಆಗುವುದು ಖಚಿತ. ಹಾಗೆಯೇ ಜಸ್​ಪ್ರೀತ್ ಬುಮ್ರಾ ಅವರ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸುವುದು ಕನ್ಫರ್ಮ್​. ಹೀಗಾಗಿ ಬುಮ್ರಾ ಅವರ ಮೊತ್ತ 20 ಕೋಟಿ ರೂ. ದಾಟಿದರೂ ಅಚ್ಚರಿಪಡಬೇಕಿಲ್ಲ. ಇನ್ನು ರೋಹಿತ್ ಶರ್ಮಾ ಅವರನ್ನು 16 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಖರೀದಿಸಲು ಇತರೆ ಫ್ರಾಂಚೈಸಿ ಆಸಕ್ತಿವಹಿಸುವುದು ಸಹ ಖಚಿತ.

ಒಂದು ವೇಳೆ ಸೂರ್ಯಕುಮಾರ್ ಯಾದವ್ ಹರಾಜಿನಲ್ಲಿ ಕಾಣಿಸಿಕೊಂಡರೆ ಕನಿಷ್ಠ 12 ರಿಂದ 15 ಕೋಟಿ ರೂ.ಗೆ ಬಿಡ್ ಆಗುವುದು ಖಚಿತ. ಹಾಗೆಯೇ ಜಸ್​ಪ್ರೀತ್ ಬುಮ್ರಾ ಅವರ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸುವುದು ಕನ್ಫರ್ಮ್​. ಹೀಗಾಗಿ ಬುಮ್ರಾ ಅವರ ಮೊತ್ತ 20 ಕೋಟಿ ರೂ. ದಾಟಿದರೂ ಅಚ್ಚರಿಪಡಬೇಕಿಲ್ಲ. ಇನ್ನು ರೋಹಿತ್ ಶರ್ಮಾ ಅವರನ್ನು 16 ಕೋಟಿಗಿಂತ ಹೆಚ್ಚಿನ ಮೊತ್ತಕ್ಕೆ ಖರೀದಿಸಲು ಇತರೆ ಫ್ರಾಂಚೈಸಿ ಆಸಕ್ತಿವಹಿಸುವುದು ಸಹ ಖಚಿತ.

7 / 8
ಇದೀಗ ಈ ಮೂವರನ್ನು ಮುಂಬೈ ಇಂಡಿಯನ್ಸ್ ರಿಟೈನ್ ಮಾಡಿಕೊಳ್ಳಬೇಕಿದ್ದರೆ, ಎಲ್ಲರಿಗೂ ಬೃಹತ್ ಮೊತ್ತ ನೀಡಲೇಬೇಕು. ಅದರಲ್ಲೂ 8 ಕೋಟಿ ರೂ. ಪಡೆಯುತ್ತಿರುವ ಸೂರ್ಯಕುಮಾರ್ ಯಾದವ್ ಹಾಗೂ 12 ಕೋಟಿ ರೂ. ಮಾತ್ರ ಪಡೆಯುತ್ತಿರುವ ಜಸ್​ಪ್ರೀತ್ ಬುಮ್ರಾ ಬೃಹತ್ ಸಂಭಾವನೆಯನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಈ ಇಬ್ಬರನ್ನು ಹೇಗೆ ರಿಟೈನ್ ಮಾಡಿಕೊಳ್ಳುತ್ತಾರೆ ಎಂಬುದೇ ಈಗ ಕುತೂಹಲ.

ಇದೀಗ ಈ ಮೂವರನ್ನು ಮುಂಬೈ ಇಂಡಿಯನ್ಸ್ ರಿಟೈನ್ ಮಾಡಿಕೊಳ್ಳಬೇಕಿದ್ದರೆ, ಎಲ್ಲರಿಗೂ ಬೃಹತ್ ಮೊತ್ತ ನೀಡಲೇಬೇಕು. ಅದರಲ್ಲೂ 8 ಕೋಟಿ ರೂ. ಪಡೆಯುತ್ತಿರುವ ಸೂರ್ಯಕುಮಾರ್ ಯಾದವ್ ಹಾಗೂ 12 ಕೋಟಿ ರೂ. ಮಾತ್ರ ಪಡೆಯುತ್ತಿರುವ ಜಸ್​ಪ್ರೀತ್ ಬುಮ್ರಾ ಬೃಹತ್ ಸಂಭಾವನೆಯನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಈ ಇಬ್ಬರನ್ನು ಹೇಗೆ ರಿಟೈನ್ ಮಾಡಿಕೊಳ್ಳುತ್ತಾರೆ ಎಂಬುದೇ ಈಗ ಕುತೂಹಲ.

8 / 8
Follow us
ಹಿರೇಮಠ ಅವರಿಗೆ ಡಾ ಮಂಜುನಾಥ್ ಒಬ್ಬ ಸಂಸದರೆಂದು ಗೊತ್ತಿಲ್ಲವೇ?
ಹಿರೇಮಠ ಅವರಿಗೆ ಡಾ ಮಂಜುನಾಥ್ ಒಬ್ಬ ಸಂಸದರೆಂದು ಗೊತ್ತಿಲ್ಲವೇ?
ಸರಣಿ ಅಪಘಾತ: ಬೆಂಗಳೂರಿನಲ್ಲಿ ನಾಲ್ಕೈದು ಕಿ.ಮೀ ಟ್ರಾಫಿಕ್ ಜಾಮ್..!
ಸರಣಿ ಅಪಘಾತ: ಬೆಂಗಳೂರಿನಲ್ಲಿ ನಾಲ್ಕೈದು ಕಿ.ಮೀ ಟ್ರಾಫಿಕ್ ಜಾಮ್..!
ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ದುಡ್ಡು ಎಗರಿಸಿದ ಕಳ್ಳ
ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ದುಡ್ಡು ಎಗರಿಸಿದ ಕಳ್ಳ
‘ನಾನು ಮಾಡಿಕೊಂಡ ತಪ್ಪುಗಳಿಗೇ ನಾನೇ ಹೊಣೆ’: ನಟ ಯೋಗಿ ನೇರ ಮಾತು
‘ನಾನು ಮಾಡಿಕೊಂಡ ತಪ್ಪುಗಳಿಗೇ ನಾನೇ ಹೊಣೆ’: ನಟ ಯೋಗಿ ನೇರ ಮಾತು
ಶಿವಪುರಿ ಬಳಿ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಪತನ; ಪೈಲಟ್‌ಗಳು ಸೇಫ್
ಶಿವಪುರಿ ಬಳಿ ಐಎಎಫ್ ಮಿರಾಜ್ 2000 ಯುದ್ಧ ವಿಮಾನ ಪತನ; ಪೈಲಟ್‌ಗಳು ಸೇಫ್
ಬೈಕ್ ಮಾಲೀಕ ಕಿರಣ್ ಕುಮಾರ್ ರೆಡ್ಡಿ ಮುಷ್ಟೂರಿನ ನಿವಾಸಿ
ಬೈಕ್ ಮಾಲೀಕ ಕಿರಣ್ ಕುಮಾರ್ ರೆಡ್ಡಿ ಮುಷ್ಟೂರಿನ ನಿವಾಸಿ
ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ
ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿದ ಆನೆ
ಪರೀಕ್ಷಾ ಪೇ ಚರ್ಚಾಗೆ 3.5 ಕೋಟಿ ಜನರ ನೋಂದಣಿ; ಸಚಿವ ಧರ್ಮೇಂದ್ರ ಪ್ರಧಾನ್
ಪರೀಕ್ಷಾ ಪೇ ಚರ್ಚಾಗೆ 3.5 ಕೋಟಿ ಜನರ ನೋಂದಣಿ; ಸಚಿವ ಧರ್ಮೇಂದ್ರ ಪ್ರಧಾನ್
ಫೈನಾನ್ಸ್ ಸಂಸ್ಥೆಯಿಂದ ಕಿರುಕುಳಕ್ಕೊಳಗಾದ ಕುಟುಂಬಕ್ಕೆ ಅಶೋಕ ಸಾಂತ್ವನ
ಫೈನಾನ್ಸ್ ಸಂಸ್ಥೆಯಿಂದ ಕಿರುಕುಳಕ್ಕೊಳಗಾದ ಕುಟುಂಬಕ್ಕೆ ಅಶೋಕ ಸಾಂತ್ವನ
ನೆಹರೂ ಸರ್ಕಾರ ದೇವ್ ಆನಂದ್, ಕಿಶೋರ್​ ಕುಮಾರ್​ಗೆ ನಿಷೇಧ ಹೇರಿತ್ತು; ಮೋದಿ
ನೆಹರೂ ಸರ್ಕಾರ ದೇವ್ ಆನಂದ್, ಕಿಶೋರ್​ ಕುಮಾರ್​ಗೆ ನಿಷೇಧ ಹೇರಿತ್ತು; ಮೋದಿ