Sign In

By signing in or creating an account, you agree with Associated Broadcasting Company's Terms & Conditions and Privacy Policy.

Kavya Maran: ಟ್ರೋಫಿ ಕನಸಿನೊಂದಿಗೆ ಬಂದು ಕಣ್ಣೀರಲ್ಲೇ ಕಳೆದ ಕಾವ್ಯ ಮಾರನ್

Kavya Maran: ಐಪಿಎಲ್ 2023 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ಸ್​ ಟೇಬಲ್​ನಲ್ಲಿ 10ನೇ ಸ್ಥಾನ ಅಲಂಕರಿಸಿತ್ತು. ಆದರೆ ಈ ಬಾರಿ ಕಾವ್ಯ ಮಾರನ್ ನೇತೃತ್ವದ ಎಸ್​ಆರ್​ಹೆಚ್ ಫ್ರಾಂಚೈಸಿ ಬಲಿಷ್ಠ ಆಟಗಾರರನ್ನು ಖರೀದಿಸಿ ಅತ್ಯುತ್ತಮ ತಂಡವನ್ನು ರೂಪಿಸಿಕೊಂಡಿತ್ತು. ಅದರಂತೆ ಬಲಿಷ್ಠ ಪಡೆಯಾಗಿ ಕಾಣಿಸಿಕೊಂಡ ಎಸ್​ಆರ್​ಹೆಚ್ ತಂಡವು ಫೈನಲ್​ ಪಂದ್ಯದಲ್ಲಿ ಎಡವಿ ಚಾಂಪಿಯನ್ ಪಟ್ಟವನ್ನು ಕೈಚೆಲ್ಲಿಕೊಂಡಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: May 27, 2024 | 12:07 PM

IPL 2024: ಐಪಿಎಲ್ ಸೀಸನ್ 16 ರಲ್ಲಿ ಕೊನೆಯ ಸ್ಥಾನ ಪಡೆದಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಭರ್ಜರಿ ಪ್ರದರ್ಶನ ನೀಡಿದೆ. ಟೂರ್ನಿಯ ಆರಂಭದಿಂದಲೇ ತನ್ನ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ್ದ ಎಸ್​ಆರ್​ಹೆಚ್ ನಿರೀಕ್ಷೆಯಂತೆ ಪ್ಯಾಟ್ ಕಮಿನ್ಸ್ ಮುಂದಾಳತ್ವದಲ್ಲಿ ಫೈನಲ್​ಗೆ ಪ್ರವೇಶಿಸಿತ್ತು.

IPL 2024: ಐಪಿಎಲ್ ಸೀಸನ್ 16 ರಲ್ಲಿ ಕೊನೆಯ ಸ್ಥಾನ ಪಡೆದಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಭರ್ಜರಿ ಪ್ರದರ್ಶನ ನೀಡಿದೆ. ಟೂರ್ನಿಯ ಆರಂಭದಿಂದಲೇ ತನ್ನ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ್ದ ಎಸ್​ಆರ್​ಹೆಚ್ ನಿರೀಕ್ಷೆಯಂತೆ ಪ್ಯಾಟ್ ಕಮಿನ್ಸ್ ಮುಂದಾಳತ್ವದಲ್ಲಿ ಫೈನಲ್​ಗೆ ಪ್ರವೇಶಿಸಿತ್ತು.

1 / 6
ಅಲ್ಲದೆ ಫೈನಲ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದರಿಂದ ಬಹುತೇಕರು ಕಪ್ ಸನ್​ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಲಿದೆ ಎಂದು ಭಾವಿಸಿದ್ದರು. ಇದೇ ವಿಶ್ವಾಸದಲ್ಲಿ ಎಸ್​ಆರ್​ಹೆಚ್ ತಂಡ ಮಾಲಕಿ ಕಾವ್ಯ ಮಾರನ್ ಕೂಡ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.

ಅಲ್ಲದೆ ಫೈನಲ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದರಿಂದ ಬಹುತೇಕರು ಕಪ್ ಸನ್​ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಲಿದೆ ಎಂದು ಭಾವಿಸಿದ್ದರು. ಇದೇ ವಿಶ್ವಾಸದಲ್ಲಿ ಎಸ್​ಆರ್​ಹೆಚ್ ತಂಡ ಮಾಲಕಿ ಕಾವ್ಯ ಮಾರನ್ ಕೂಡ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.

2 / 6
ಆದರೆ ಪಂದ್ಯದ ಆರಂಭದಲ್ಲೇ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಮೊದಲ ಓವರ್​ನಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡು ಸನ್​ರೈಸರ್ಸ್ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ಸಂಕಷ್ಟದಿಂದ ಪಾರಾಗುವ ಮುನ್ನವೇ ಕೆಕೆಆರ್ ಬೌಲರ್​ಗಳು ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅತ್ತ ಫೈನಲ್​ನಲ್ಲಿ ತಮ್ಮ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಿದ್ದ ಕಾವ್ಯ ಮಾರನ್ ಕೂಡ ಹತಾಶಾಭಾವದೊಂದಿಗೆ ಕಾಣಿಸಿಕೊಂಡರು.

ಆದರೆ ಪಂದ್ಯದ ಆರಂಭದಲ್ಲೇ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಮೊದಲ ಓವರ್​ನಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡು ಸನ್​ರೈಸರ್ಸ್ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ಸಂಕಷ್ಟದಿಂದ ಪಾರಾಗುವ ಮುನ್ನವೇ ಕೆಕೆಆರ್ ಬೌಲರ್​ಗಳು ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅತ್ತ ಫೈನಲ್​ನಲ್ಲಿ ತಮ್ಮ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಿದ್ದ ಕಾವ್ಯ ಮಾರನ್ ಕೂಡ ಹತಾಶಾಭಾವದೊಂದಿಗೆ ಕಾಣಿಸಿಕೊಂಡರು.

3 / 6
ಪಂದ್ಯದ ಆರಂಭದಲ್ಲಿ ಹತಾಶರಾದ ಕಾವ್ಯ ಮಾರನ್​ ಅವರ ನಿರೀಕ್ಷೆಗಳು ಒಂದೊಂದೇ ಓವರ್​ಗಳ ಮುಕ್ತಾಯದೊಂದಿಗೆ ಹುಸಿಯಾಗುತ್ತಿತ್ತು. ಇದಾಗ್ಯೂ ತಮ್ಮ ನೋವನ್ನೆಲ್ಲಾ ಎಸ್​ಆರ್​ಹೆಚ್​ ಮಾಲಕಿ ಅದುಮಿಟ್ಟುಕೊಂಡಿದ್ದರು. ಯಾವಾಗ ಎಸ್​ಆರ್​ಹೆಚ್ ತಂಡ 113 ರನ್​ಗಳಿಗೆ ಆಲೌಟ್ ಆಯಿತೋ, ಆಗಲೇ ಕಾವ್ಯ ಮಾರನ್ ಕೂಡ ಗ್ಯಾಲರಿಯಲ್ಲಿ ಕೂಡ ಮ್ಯಾಚ್ ಮುಗಿದೇ ಹೋಯ್ತು ಎಂಬಂತೆ ಮುಖಭಾವ ಪ್ರದರ್ಶಿಸಿದ್ದರು.

ಪಂದ್ಯದ ಆರಂಭದಲ್ಲಿ ಹತಾಶರಾದ ಕಾವ್ಯ ಮಾರನ್​ ಅವರ ನಿರೀಕ್ಷೆಗಳು ಒಂದೊಂದೇ ಓವರ್​ಗಳ ಮುಕ್ತಾಯದೊಂದಿಗೆ ಹುಸಿಯಾಗುತ್ತಿತ್ತು. ಇದಾಗ್ಯೂ ತಮ್ಮ ನೋವನ್ನೆಲ್ಲಾ ಎಸ್​ಆರ್​ಹೆಚ್​ ಮಾಲಕಿ ಅದುಮಿಟ್ಟುಕೊಂಡಿದ್ದರು. ಯಾವಾಗ ಎಸ್​ಆರ್​ಹೆಚ್ ತಂಡ 113 ರನ್​ಗಳಿಗೆ ಆಲೌಟ್ ಆಯಿತೋ, ಆಗಲೇ ಕಾವ್ಯ ಮಾರನ್ ಕೂಡ ಗ್ಯಾಲರಿಯಲ್ಲಿ ಕೂಡ ಮ್ಯಾಚ್ ಮುಗಿದೇ ಹೋಯ್ತು ಎಂಬಂತೆ ಮುಖಭಾವ ಪ್ರದರ್ಶಿಸಿದ್ದರು.

4 / 6
ಇನ್ನು ಎಸ್​ಆರ್​ಹೆಚ್ ನೀಡಿದ 114 ರನ್​ಗಳ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೇವಲ 10.3 ಓವರ್​ಗಳಲ್ಲಿ ಚೇಸ್ ಮಾಡಿತು. ಅಲ್ಲದೆ 8 ವಿಕೆಟ್​ಗಳ ಜಯದೊಂದಿಗೆ ಮೈದಾನದಲ್ಲಿ ಸಂಭ್ರಮಿಸುತ್ತಿದ್ದರೆ, ಅತ್ತ ಕಾವ್ಯ ಮಾರನ್ ಕಣ್ಣೀರು ಹಾಕಲಾರಂಭಿಸಿದರು.

ಇನ್ನು ಎಸ್​ಆರ್​ಹೆಚ್ ನೀಡಿದ 114 ರನ್​ಗಳ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೇವಲ 10.3 ಓವರ್​ಗಳಲ್ಲಿ ಚೇಸ್ ಮಾಡಿತು. ಅಲ್ಲದೆ 8 ವಿಕೆಟ್​ಗಳ ಜಯದೊಂದಿಗೆ ಮೈದಾನದಲ್ಲಿ ಸಂಭ್ರಮಿಸುತ್ತಿದ್ದರೆ, ಅತ್ತ ಕಾವ್ಯ ಮಾರನ್ ಕಣ್ಣೀರು ಹಾಕಲಾರಂಭಿಸಿದರು.

5 / 6
ಆದರೆ ಇತ್ತ ಕ್ಯಾಮೆರಾಮ್ಯಾನ್ ತನ್ನತ್ತ ಕ್ಯಾಮೆರಾ ತಿರುಗಿಸಿದ್ದಾರೆ ಎಂಬುದು ಗೊತ್ತಾಗುತ್ತಿದಂತೆ ಹಿಂತಿರುಗಿ ನಿಂತು ಅಳಲಾರಂಭಿಸಿದರು. ಇದೀಗ ಕಾವ್ಯ ಮಾರನ್ ಅವರ ಭಾವನಾತ್ಮಕ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನೋವಿನ ನಡುವೆಯು ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಲಕಿಗೆ ಎಸ್​ಆರ್​ಹೆಚ್ ಅಭಿಮಾನಿಗಳು ಸಮಾಧಾನ ಮಾಡಿದ್ದು, ಮುಂದಿನ ಸಲ ಇನ್ನೂ ಉತ್ತಮ ತಂಡ ಕಟ್ಟಬೇಕೆಂದು ದೈರ್ಯ ತುಂಬಿದ್ದಾರೆ. ಅಲ್ಲದೆ ಐಪಿಎಲ್ 2025 ರಲ್ಲಿ ಆರೆಂಜ್ ಆರ್ಮಿ ಟ್ರೋಫಿಯೊಂದಿಗೆ ಸಂಭ್ರಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ ಇತ್ತ ಕ್ಯಾಮೆರಾಮ್ಯಾನ್ ತನ್ನತ್ತ ಕ್ಯಾಮೆರಾ ತಿರುಗಿಸಿದ್ದಾರೆ ಎಂಬುದು ಗೊತ್ತಾಗುತ್ತಿದಂತೆ ಹಿಂತಿರುಗಿ ನಿಂತು ಅಳಲಾರಂಭಿಸಿದರು. ಇದೀಗ ಕಾವ್ಯ ಮಾರನ್ ಅವರ ಭಾವನಾತ್ಮಕ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನೋವಿನ ನಡುವೆಯು ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಲಕಿಗೆ ಎಸ್​ಆರ್​ಹೆಚ್ ಅಭಿಮಾನಿಗಳು ಸಮಾಧಾನ ಮಾಡಿದ್ದು, ಮುಂದಿನ ಸಲ ಇನ್ನೂ ಉತ್ತಮ ತಂಡ ಕಟ್ಟಬೇಕೆಂದು ದೈರ್ಯ ತುಂಬಿದ್ದಾರೆ. ಅಲ್ಲದೆ ಐಪಿಎಲ್ 2025 ರಲ್ಲಿ ಆರೆಂಜ್ ಆರ್ಮಿ ಟ್ರೋಫಿಯೊಂದಿಗೆ ಸಂಭ್ರಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

6 / 6
Follow us
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ತಕ್ಕ ಪಾಠ ಕಲಿಸುತ್ತೇವೆ; ಉಗ್ರರ ದಾಳಿಗೆ ಸಚಿವ ಪ್ರಲ್ಹಾದ್ ಜೋಶಿ ಖಂಡನೆ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಮಂಜುನಾಥ್, ಸಾವಿಗೂ ಮುನ್ನ ಪತ್ನಿಯೊಂದಿಗೆ ಕಾಶ್ಮೀರದಲ್ಲಿ ಕಳೆದ ಕೊನೆ ಕ್ಷಣ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಉಗ್ರರ ದಾಳಿ ಬಳಿಕ ಭದ್ರತಾ ಪರಿಶೀಲನೆಗೆ ಶ್ರೀನಗರಕ್ಕೆ ತೆರಳಿದ ಅಮಿತ್ ಶಾ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪಹಲ್ಗಾಮ್‌: ಪತ್ನಿ ಎದುರೇ ಪತಿಯನ್ನ ಕೊಂದು ಮೋದಿಗೆ ಹೋಗಿ ಹೇಳು ಎಂದ ಉಗ್ರ
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಪತ್ನಿ ಪಲ್ಲವಿ ಹಾಗೂ ಮಗನೊಂದಿಗೆ ಪ್ರವಾಸ ತೆರಳಿದ್ದ ಮಂಜುನಾಥ್
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ಕೇವಲ ಕಳ್ಳತನಕ್ಕಾಗಿ ನಡೆದ ಕೊಲೆ ಅಲ್ಲ ಇದು, ಬೇರೆ ಕಾರಣವೂ ಇದೆ: ಡಿಸಿಪಿ
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್ ಜಾಮೀನು ರದ್ದು ಅರ್ಜಿ: ಸುಪ್ರೀಂಕೋರ್ಟ್​ನಲ್ಲಿ ಇಂದು ನಡೆದ ವಾದವೇನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ದರ್ಶನ್, ಪವಿತ್ರಾ ಗೌಡ ಸಂಬಂಧದ ಬಗ್ಗೆ ಸುಪ್ರೀಂಕೋರ್ಟ್ ಕೇಳಿದ ಪ್ರಶ್ನೆ ಏನು?
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ನಾವು ಇದುವರೆಗೆ ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ: ರಿಕ್ಕಿ ರೈ ವಕೀಲ
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್
ವಿಜಯಪುರದಲ್ಲಿ ವಿಜಯೇಂದ್ರ ಭಾಷಣ ಮಾಡುವಾಗ ಸ್ವಲ್ಪ ಜನರಿದ್ದರು: ಯತ್ನಾಳ್