Kavya Maran: ಟ್ರೋಫಿ ಕನಸಿನೊಂದಿಗೆ ಬಂದು ಕಣ್ಣೀರಲ್ಲೇ ಕಳೆದ ಕಾವ್ಯ ಮಾರನ್

Kavya Maran: ಐಪಿಎಲ್ 2023 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡ ಪಾಯಿಂಟ್ಸ್​ ಟೇಬಲ್​ನಲ್ಲಿ 10ನೇ ಸ್ಥಾನ ಅಲಂಕರಿಸಿತ್ತು. ಆದರೆ ಈ ಬಾರಿ ಕಾವ್ಯ ಮಾರನ್ ನೇತೃತ್ವದ ಎಸ್​ಆರ್​ಹೆಚ್ ಫ್ರಾಂಚೈಸಿ ಬಲಿಷ್ಠ ಆಟಗಾರರನ್ನು ಖರೀದಿಸಿ ಅತ್ಯುತ್ತಮ ತಂಡವನ್ನು ರೂಪಿಸಿಕೊಂಡಿತ್ತು. ಅದರಂತೆ ಬಲಿಷ್ಠ ಪಡೆಯಾಗಿ ಕಾಣಿಸಿಕೊಂಡ ಎಸ್​ಆರ್​ಹೆಚ್ ತಂಡವು ಫೈನಲ್​ ಪಂದ್ಯದಲ್ಲಿ ಎಡವಿ ಚಾಂಪಿಯನ್ ಪಟ್ಟವನ್ನು ಕೈಚೆಲ್ಲಿಕೊಂಡಿದೆ.

| Updated By: ಝಾಹಿರ್ ಯೂಸುಫ್

Updated on: May 27, 2024 | 12:07 PM

IPL 2024: ಐಪಿಎಲ್ ಸೀಸನ್ 16 ರಲ್ಲಿ ಕೊನೆಯ ಸ್ಥಾನ ಪಡೆದಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಭರ್ಜರಿ ಪ್ರದರ್ಶನ ನೀಡಿದೆ. ಟೂರ್ನಿಯ ಆರಂಭದಿಂದಲೇ ತನ್ನ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ್ದ ಎಸ್​ಆರ್​ಹೆಚ್ ನಿರೀಕ್ಷೆಯಂತೆ ಪ್ಯಾಟ್ ಕಮಿನ್ಸ್ ಮುಂದಾಳತ್ವದಲ್ಲಿ ಫೈನಲ್​ಗೆ ಪ್ರವೇಶಿಸಿತ್ತು.

IPL 2024: ಐಪಿಎಲ್ ಸೀಸನ್ 16 ರಲ್ಲಿ ಕೊನೆಯ ಸ್ಥಾನ ಪಡೆದಿದ್ದ ಸನ್​ರೈಸರ್ಸ್ ಹೈದರಾಬಾದ್ ತಂಡವು ಈ ಬಾರಿ ಭರ್ಜರಿ ಪ್ರದರ್ಶನ ನೀಡಿದೆ. ಟೂರ್ನಿಯ ಆರಂಭದಿಂದಲೇ ತನ್ನ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದ್ದ ಎಸ್​ಆರ್​ಹೆಚ್ ನಿರೀಕ್ಷೆಯಂತೆ ಪ್ಯಾಟ್ ಕಮಿನ್ಸ್ ಮುಂದಾಳತ್ವದಲ್ಲಿ ಫೈನಲ್​ಗೆ ಪ್ರವೇಶಿಸಿತ್ತು.

1 / 6
ಅಲ್ಲದೆ ಫೈನಲ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದರಿಂದ ಬಹುತೇಕರು ಕಪ್ ಸನ್​ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಲಿದೆ ಎಂದು ಭಾವಿಸಿದ್ದರು. ಇದೇ ವಿಶ್ವಾಸದಲ್ಲಿ ಎಸ್​ಆರ್​ಹೆಚ್ ತಂಡ ಮಾಲಕಿ ಕಾವ್ಯ ಮಾರನ್ ಕೂಡ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.

ಅಲ್ಲದೆ ಫೈನಲ್ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿದ್ದರಿಂದ ಬಹುತೇಕರು ಕಪ್ ಸನ್​ರೈಸರ್ಸ್ ಹೈದರಾಬಾದ್ ತಂಡದ ಪಾಲಾಗಲಿದೆ ಎಂದು ಭಾವಿಸಿದ್ದರು. ಇದೇ ವಿಶ್ವಾಸದಲ್ಲಿ ಎಸ್​ಆರ್​ಹೆಚ್ ತಂಡ ಮಾಲಕಿ ಕಾವ್ಯ ಮಾರನ್ ಕೂಡ ಸ್ಟೇಡಿಯಂನಲ್ಲಿ ಕಾಣಿಸಿಕೊಂಡಿದ್ದರು.

2 / 6
ಆದರೆ ಪಂದ್ಯದ ಆರಂಭದಲ್ಲೇ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಮೊದಲ ಓವರ್​ನಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡು ಸನ್​ರೈಸರ್ಸ್ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ಸಂಕಷ್ಟದಿಂದ ಪಾರಾಗುವ ಮುನ್ನವೇ ಕೆಕೆಆರ್ ಬೌಲರ್​ಗಳು ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅತ್ತ ಫೈನಲ್​ನಲ್ಲಿ ತಮ್ಮ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಿದ್ದ ಕಾವ್ಯ ಮಾರನ್ ಕೂಡ ಹತಾಶಾಭಾವದೊಂದಿಗೆ ಕಾಣಿಸಿಕೊಂಡರು.

ಆದರೆ ಪಂದ್ಯದ ಆರಂಭದಲ್ಲೇ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾದವು. ಮೊದಲ ಓವರ್​ನಲ್ಲೇ ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡು ಸನ್​ರೈಸರ್ಸ್ ಹೈದರಾಬಾದ್ ತಂಡ ಸಂಕಷ್ಟಕ್ಕೆ ಸಿಲುಕಿತು. ಈ ಸಂಕಷ್ಟದಿಂದ ಪಾರಾಗುವ ಮುನ್ನವೇ ಕೆಕೆಆರ್ ಬೌಲರ್​ಗಳು ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಅತ್ತ ಫೈನಲ್​ನಲ್ಲಿ ತಮ್ಮ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಿದ್ದ ಕಾವ್ಯ ಮಾರನ್ ಕೂಡ ಹತಾಶಾಭಾವದೊಂದಿಗೆ ಕಾಣಿಸಿಕೊಂಡರು.

3 / 6
ಪಂದ್ಯದ ಆರಂಭದಲ್ಲಿ ಹತಾಶರಾದ ಕಾವ್ಯ ಮಾರನ್​ ಅವರ ನಿರೀಕ್ಷೆಗಳು ಒಂದೊಂದೇ ಓವರ್​ಗಳ ಮುಕ್ತಾಯದೊಂದಿಗೆ ಹುಸಿಯಾಗುತ್ತಿತ್ತು. ಇದಾಗ್ಯೂ ತಮ್ಮ ನೋವನ್ನೆಲ್ಲಾ ಎಸ್​ಆರ್​ಹೆಚ್​ ಮಾಲಕಿ ಅದುಮಿಟ್ಟುಕೊಂಡಿದ್ದರು. ಯಾವಾಗ ಎಸ್​ಆರ್​ಹೆಚ್ ತಂಡ 113 ರನ್​ಗಳಿಗೆ ಆಲೌಟ್ ಆಯಿತೋ, ಆಗಲೇ ಕಾವ್ಯ ಮಾರನ್ ಕೂಡ ಗ್ಯಾಲರಿಯಲ್ಲಿ ಕೂಡ ಮ್ಯಾಚ್ ಮುಗಿದೇ ಹೋಯ್ತು ಎಂಬಂತೆ ಮುಖಭಾವ ಪ್ರದರ್ಶಿಸಿದ್ದರು.

ಪಂದ್ಯದ ಆರಂಭದಲ್ಲಿ ಹತಾಶರಾದ ಕಾವ್ಯ ಮಾರನ್​ ಅವರ ನಿರೀಕ್ಷೆಗಳು ಒಂದೊಂದೇ ಓವರ್​ಗಳ ಮುಕ್ತಾಯದೊಂದಿಗೆ ಹುಸಿಯಾಗುತ್ತಿತ್ತು. ಇದಾಗ್ಯೂ ತಮ್ಮ ನೋವನ್ನೆಲ್ಲಾ ಎಸ್​ಆರ್​ಹೆಚ್​ ಮಾಲಕಿ ಅದುಮಿಟ್ಟುಕೊಂಡಿದ್ದರು. ಯಾವಾಗ ಎಸ್​ಆರ್​ಹೆಚ್ ತಂಡ 113 ರನ್​ಗಳಿಗೆ ಆಲೌಟ್ ಆಯಿತೋ, ಆಗಲೇ ಕಾವ್ಯ ಮಾರನ್ ಕೂಡ ಗ್ಯಾಲರಿಯಲ್ಲಿ ಕೂಡ ಮ್ಯಾಚ್ ಮುಗಿದೇ ಹೋಯ್ತು ಎಂಬಂತೆ ಮುಖಭಾವ ಪ್ರದರ್ಶಿಸಿದ್ದರು.

4 / 6
ಇನ್ನು ಎಸ್​ಆರ್​ಹೆಚ್ ನೀಡಿದ 114 ರನ್​ಗಳ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೇವಲ 10.3 ಓವರ್​ಗಳಲ್ಲಿ ಚೇಸ್ ಮಾಡಿತು. ಅಲ್ಲದೆ 8 ವಿಕೆಟ್​ಗಳ ಜಯದೊಂದಿಗೆ ಮೈದಾನದಲ್ಲಿ ಸಂಭ್ರಮಿಸುತ್ತಿದ್ದರೆ, ಅತ್ತ ಕಾವ್ಯ ಮಾರನ್ ಕಣ್ಣೀರು ಹಾಕಲಾರಂಭಿಸಿದರು.

ಇನ್ನು ಎಸ್​ಆರ್​ಹೆಚ್ ನೀಡಿದ 114 ರನ್​ಗಳ ಗುರಿಯನ್ನು ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಕೇವಲ 10.3 ಓವರ್​ಗಳಲ್ಲಿ ಚೇಸ್ ಮಾಡಿತು. ಅಲ್ಲದೆ 8 ವಿಕೆಟ್​ಗಳ ಜಯದೊಂದಿಗೆ ಮೈದಾನದಲ್ಲಿ ಸಂಭ್ರಮಿಸುತ್ತಿದ್ದರೆ, ಅತ್ತ ಕಾವ್ಯ ಮಾರನ್ ಕಣ್ಣೀರು ಹಾಕಲಾರಂಭಿಸಿದರು.

5 / 6
ಆದರೆ ಇತ್ತ ಕ್ಯಾಮೆರಾಮ್ಯಾನ್ ತನ್ನತ್ತ ಕ್ಯಾಮೆರಾ ತಿರುಗಿಸಿದ್ದಾರೆ ಎಂಬುದು ಗೊತ್ತಾಗುತ್ತಿದಂತೆ ಹಿಂತಿರುಗಿ ನಿಂತು ಅಳಲಾರಂಭಿಸಿದರು. ಇದೀಗ ಕಾವ್ಯ ಮಾರನ್ ಅವರ ಭಾವನಾತ್ಮಕ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನೋವಿನ ನಡುವೆಯು ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಲಕಿಗೆ ಎಸ್​ಆರ್​ಹೆಚ್ ಅಭಿಮಾನಿಗಳು ಸಮಾಧಾನ ಮಾಡಿದ್ದು, ಮುಂದಿನ ಸಲ ಇನ್ನೂ ಉತ್ತಮ ತಂಡ ಕಟ್ಟಬೇಕೆಂದು ದೈರ್ಯ ತುಂಬಿದ್ದಾರೆ. ಅಲ್ಲದೆ ಐಪಿಎಲ್ 2025 ರಲ್ಲಿ ಆರೆಂಜ್ ಆರ್ಮಿ ಟ್ರೋಫಿಯೊಂದಿಗೆ ಸಂಭ್ರಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆದರೆ ಇತ್ತ ಕ್ಯಾಮೆರಾಮ್ಯಾನ್ ತನ್ನತ್ತ ಕ್ಯಾಮೆರಾ ತಿರುಗಿಸಿದ್ದಾರೆ ಎಂಬುದು ಗೊತ್ತಾಗುತ್ತಿದಂತೆ ಹಿಂತಿರುಗಿ ನಿಂತು ಅಳಲಾರಂಭಿಸಿದರು. ಇದೀಗ ಕಾವ್ಯ ಮಾರನ್ ಅವರ ಭಾವನಾತ್ಮಕ ವಿಡಿಯೋ ಮತ್ತು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ನೋವಿನ ನಡುವೆಯು ಸನ್​ರೈಸರ್ಸ್ ಹೈದರಾಬಾದ್ ತಂಡದ ಮಾಲಕಿಗೆ ಎಸ್​ಆರ್​ಹೆಚ್ ಅಭಿಮಾನಿಗಳು ಸಮಾಧಾನ ಮಾಡಿದ್ದು, ಮುಂದಿನ ಸಲ ಇನ್ನೂ ಉತ್ತಮ ತಂಡ ಕಟ್ಟಬೇಕೆಂದು ದೈರ್ಯ ತುಂಬಿದ್ದಾರೆ. ಅಲ್ಲದೆ ಐಪಿಎಲ್ 2025 ರಲ್ಲಿ ಆರೆಂಜ್ ಆರ್ಮಿ ಟ್ರೋಫಿಯೊಂದಿಗೆ ಸಂಭ್ರಮಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

6 / 6
Follow us
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ಉಡುಪಿಯಲ್ಲಿ ವಿಶಿಷ್ಟ ಗಣಪ; ಕೋಲಾರದಲ್ಲಿ 15 ಅಡಿ ಎತ್ತರದ ಕರಿಗಡಬು ಗಣೇಶ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ದಸರಾ ಗಜಪಡೆಗೆ ಅರಮನೆ ಆವರಣದಲ್ಲಿ ಗಣೇಶ ಹಬ್ಬದ ವಿಶೇಷ ಪೂಜೆ
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್
ವಿವೋ ಸ್ಮಾರ್ಟ್​​ಫೋನ್​ 6,500mAh ಬ್ಯಾಟರಿ 80W ಫಾಸ್ಟ್ ಚಾರ್ಜಿಂಗ್