AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಬ್ಯಾಟ್ ಗಿಫ್ಟ್ ನೀಡಿದ ಬಾಂಗ್ಲಾ ಆಟಗಾರ..!

Mehidy Hasan Miraz: ಮೆಹದಿ ಹಸನ್ ಮಿರಾಝ್ ಬಾಂಗ್ಲಾದೇಶ್ ಪರ ಈವರೆಗೆ 47 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1 ಶತಕ ಹಾಗೂ 8 ಅರ್ಧಶತಕಗಳೊಂದಿಗೆ ಒಟ್ಟು 1689 ರನ್ ಕಲೆಹಾಕಿದ್ದಾರೆ. ಹಾಗೆಯೇ 183 ವಿಕೆಟ್​ಗಳನ್ನು ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇನ್ನು 97 ಏಕದಿನ ಪಂದ್ಯಗಳಿಂದ 106 ವಿಕೆಟ್ ಪಡೆದಿರುವ ಮೆಹಿದಿ, ಒನ್​ಡೇ ನಲ್ಲಿ 1331 ರನ್​ ಕಲೆಹಾಕಿದ್ದಾರೆ.

ಝಾಹಿರ್ ಯೂಸುಫ್
|

Updated on: Oct 03, 2024 | 4:03 PM

Share
ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟೆಸ್ಟ್ ಪಂದ್ಯದ ಬಳಿಕ ಶಕೀಬ್ ಅಲ್ ಹಸನ್​ಗೆ ವಿರಾಟ್ ಕೊಹ್ಲಿ ಬ್ಯಾಟ್ ಗಿಫ್ಟ್ ನೀಡಿದ್ದರು. ಟೆಸ್ಟ್​ ಕ್ರಿಕೆಟ್​ ಕೆರಿಯರ್​ಗೆ ನಿವೃತ್ತಿ ಘೋಷಿಸಿರುವ ಶಕೀಬ್​ಗೆ ತಮ್ಮ ಸಹಿ ಹೊಂದಿರುವ ಬ್ಯಾಟ್​ನ್ನು ಉಡುಗೊರೆಯಾಗಿ ನೀಡಿ ಕೊಹ್ಲಿ ಬೀಳ್ಕೊಟ್ಟಿದ್ದರು. ಇದರ ಬೆನ್ನಲ್ಲೇ ಮೆಹಿದಿ ಹಸನ್ ಮಿರಾಝ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬ್ಯಾಟ್​ಗಳನ್ನು ನೀಡಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶ್ ನಡುವಣ 2ನೇ ಟೆಸ್ಟ್ ಪಂದ್ಯದ ಬಳಿಕ ಶಕೀಬ್ ಅಲ್ ಹಸನ್​ಗೆ ವಿರಾಟ್ ಕೊಹ್ಲಿ ಬ್ಯಾಟ್ ಗಿಫ್ಟ್ ನೀಡಿದ್ದರು. ಟೆಸ್ಟ್​ ಕ್ರಿಕೆಟ್​ ಕೆರಿಯರ್​ಗೆ ನಿವೃತ್ತಿ ಘೋಷಿಸಿರುವ ಶಕೀಬ್​ಗೆ ತಮ್ಮ ಸಹಿ ಹೊಂದಿರುವ ಬ್ಯಾಟ್​ನ್ನು ಉಡುಗೊರೆಯಾಗಿ ನೀಡಿ ಕೊಹ್ಲಿ ಬೀಳ್ಕೊಟ್ಟಿದ್ದರು. ಇದರ ಬೆನ್ನಲ್ಲೇ ಮೆಹಿದಿ ಹಸನ್ ಮಿರಾಝ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬ್ಯಾಟ್​ಗಳನ್ನು ನೀಡಿದ್ದಾರೆ.

1 / 5
ಬಾಂಗ್ಲಾದೇಶ್ ತಂಡದ ಯುವ ಆಲ್​ರೌಂಡರ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬ್ಯಾಟ್​ಗಳನ್ನು ಗಿಫ್ಟ್ ನೀಡಲು ಮುಖ್ಯ ಕಾರಣ ಹೊಸ ಉದ್ಯಮ ಆರಂಭಿಸಿರುವುದು. ಅಂದರೆ ಮೆಹಿದಿ ಹಸನ್ ಮಿರಾಝ್ ಬಾಂಗ್ಲಾದೇಶದಲ್ಲಿ MKS ಹೆಸರಿನ ಬ್ಯಾಟ್ ನಿರ್ಮಾಣ ಕಂಪೆನಿಯನ್ನು ಆರಂಭಿಸಿದ್ದಾರೆ.

ಬಾಂಗ್ಲಾದೇಶ್ ತಂಡದ ಯುವ ಆಲ್​ರೌಂಡರ್ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾಗೆ ಬ್ಯಾಟ್​ಗಳನ್ನು ಗಿಫ್ಟ್ ನೀಡಲು ಮುಖ್ಯ ಕಾರಣ ಹೊಸ ಉದ್ಯಮ ಆರಂಭಿಸಿರುವುದು. ಅಂದರೆ ಮೆಹಿದಿ ಹಸನ್ ಮಿರಾಝ್ ಬಾಂಗ್ಲಾದೇಶದಲ್ಲಿ MKS ಹೆಸರಿನ ಬ್ಯಾಟ್ ನಿರ್ಮಾಣ ಕಂಪೆನಿಯನ್ನು ಆರಂಭಿಸಿದ್ದಾರೆ.

2 / 5
ಭಾರತದ ವಿರುದ್ಧದ ಟೆಸ್ಟ್ ಸರಣಿಗಾಗಿ ತನ್ನ ಕಂಪೆನಿಯ ಬ್ಯಾಟ್​ಗಳೊಂದಿಗೆ ಆಗಮಿಸಿದ್ದ ಮೆಹಿದಿ ಹಸನ್ ಅದನ್ನು ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಗಿಫ್ಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಕೊಹ್ಲಿ, ಬ್ಯಾಟ್ ತುಂಬಾ ಚೆನ್ನಾಗಿದೆ. ಇದೇ ಕ್ವಾಲಿಟಿಯಲ್ಲಿ ಉತ್ತಮ ಬ್ಯಾಟ್​ಗಳನ್ನು ನಿರ್ಮಿಸಿ ಎಂದು ವಿಶಸ್ ತಿಳಿಸಿದ್ದಾರೆ.

ಭಾರತದ ವಿರುದ್ಧದ ಟೆಸ್ಟ್ ಸರಣಿಗಾಗಿ ತನ್ನ ಕಂಪೆನಿಯ ಬ್ಯಾಟ್​ಗಳೊಂದಿಗೆ ಆಗಮಿಸಿದ್ದ ಮೆಹಿದಿ ಹಸನ್ ಅದನ್ನು ವಿರಾಟ್ ಕೊಹ್ಲಿಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಗಿಫ್ಟ್ ಸ್ವೀಕರಿಸಿದ ಬಳಿಕ ಮಾತನಾಡಿದ ಕೊಹ್ಲಿ, ಬ್ಯಾಟ್ ತುಂಬಾ ಚೆನ್ನಾಗಿದೆ. ಇದೇ ಕ್ವಾಲಿಟಿಯಲ್ಲಿ ಉತ್ತಮ ಬ್ಯಾಟ್​ಗಳನ್ನು ನಿರ್ಮಿಸಿ ಎಂದು ವಿಶಸ್ ತಿಳಿಸಿದ್ದಾರೆ.

3 / 5
ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೂ ಮೆಹಿದಿ ಹಸನ್ ಮಿರಾಝ್ MKS  ಹೆಸರಿನ ವಿಶೇಷ ಬ್ಯಾಟ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಹಿಟ್​ಮ್ಯಾನ್, ಮೆಹಿದಿ ನನಗೆ ತುಂಬಾ ದಿನಗಳಿಂದ ಪರಿಚಯ. ಈಗ ಹೊಸ ಉದ್ಯಮ ಆರಂಭಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಕಂಪೆನಿಯು ಅತ್ಯುನ್ನತ ಎತ್ತರಕ್ಕೇರಲಿ ಎಂದು ಆಶಿಸುತ್ತೇನೆ ಎಂದು ಹಾರೈಸಿದ್ದಾರೆ.

ಇನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೂ ಮೆಹಿದಿ ಹಸನ್ ಮಿರಾಝ್ MKS ಹೆಸರಿನ ವಿಶೇಷ ಬ್ಯಾಟ್ ನೀಡಿದ್ದಾರೆ. ಈ ವೇಳೆ ಮಾತನಾಡಿದ ಹಿಟ್​ಮ್ಯಾನ್, ಮೆಹಿದಿ ನನಗೆ ತುಂಬಾ ದಿನಗಳಿಂದ ಪರಿಚಯ. ಈಗ ಹೊಸ ಉದ್ಯಮ ಆರಂಭಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಈ ಕಂಪೆನಿಯು ಅತ್ಯುನ್ನತ ಎತ್ತರಕ್ಕೇರಲಿ ಎಂದು ಆಶಿಸುತ್ತೇನೆ ಎಂದು ಹಾರೈಸಿದ್ದಾರೆ.

4 / 5
26 ವರ್ಷದ ಮೆಹಿದಿ ಹಸನ್ ಮಿರಾಝ್ ಬಾಂಗ್ಲಾದೇಶ್ ಪರ ಈವರೆಗೆ 47 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1 ಶತಕ ಹಾಗೂ 8 ಅರ್ಧಶತಕಗಳೊಂದಿಗೆ ಒಟ್ಟು 1689 ರನ್ ಕಲೆಹಾಕಿದ್ದಾರೆ. ಹಾಗೆಯೇ 183 ವಿಕೆಟ್​ಗಳನ್ನು ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇನ್ನು 97 ಏಕದಿನ ಪಂದ್ಯಗಳಿಂದ 106 ವಿಕೆಟ್ ಪಡೆದಿರುವ ಮೆಹಿದಿ, ಒನ್​ಡೇ ನಲ್ಲಿ 1331 ರನ್​ ಕಲೆಹಾಕಿದ್ದಾರೆ. ಇದೀಗ ಕ್ರಿಕೆಟ್​ನೊಂದಿಗೆ ಬ್ಯಾಟ್ ಉದ್ಯಮಕ್ಕೂ ಯುವ ಆಟಗಾರ ಕಾಲಿಟ್ಟಿದ್ದು, ತನ್ನ ಕಂಪೆನಿಯ ಬ್ಯಾಟ್​ಗಳನ್ನು ಟೀಮ್ ಇಂಡಿಯಾ ದಿಗ್ಗಜರಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

26 ವರ್ಷದ ಮೆಹಿದಿ ಹಸನ್ ಮಿರಾಝ್ ಬಾಂಗ್ಲಾದೇಶ್ ಪರ ಈವರೆಗೆ 47 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 1 ಶತಕ ಹಾಗೂ 8 ಅರ್ಧಶತಕಗಳೊಂದಿಗೆ ಒಟ್ಟು 1689 ರನ್ ಕಲೆಹಾಕಿದ್ದಾರೆ. ಹಾಗೆಯೇ 183 ವಿಕೆಟ್​ಗಳನ್ನು ಕಬಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಇನ್ನು 97 ಏಕದಿನ ಪಂದ್ಯಗಳಿಂದ 106 ವಿಕೆಟ್ ಪಡೆದಿರುವ ಮೆಹಿದಿ, ಒನ್​ಡೇ ನಲ್ಲಿ 1331 ರನ್​ ಕಲೆಹಾಕಿದ್ದಾರೆ. ಇದೀಗ ಕ್ರಿಕೆಟ್​ನೊಂದಿಗೆ ಬ್ಯಾಟ್ ಉದ್ಯಮಕ್ಕೂ ಯುವ ಆಟಗಾರ ಕಾಲಿಟ್ಟಿದ್ದು, ತನ್ನ ಕಂಪೆನಿಯ ಬ್ಯಾಟ್​ಗಳನ್ನು ಟೀಮ್ ಇಂಡಿಯಾ ದಿಗ್ಗಜರಿಗೆ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

5 / 5
Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ