- Kannada News Photo gallery Cricket photos Mohammed Siraj and Nikhat Zareen awarded Group-1 jobs by Telangana Government
ಮೊಹಮ್ಮದ್ ಸಿರಾಜ್, ನಿಖತ್ ಜರೀನ್ಗೆ ಡಿಎಸ್ಪಿ ಹುದ್ದೆ..! ತೆಲಂಗಾಣ ಸರ್ಕಾರದ ಮಹತ್ವದ ನಿರ್ಧಾರ
Mohammed Siraj and Nikhat Zareen: ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಸರ್ಕಾರಿ ಭೂಮಿ ಹಾಗೂ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದ್ದಾರೆ.
Updated on: Aug 02, 2024 | 4:36 PM

ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಹಾಗೂ ಎರಡು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ನಿಖತ್ ಜರೀನ್ ಅವರಿಗೆ ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಸರ್ಕಾರಿ ಭೂಮಿ ಹಾಗೂ ಸರ್ಕಾರಿ ಉದ್ಯೋಗವನ್ನು ನೀಡುವುದಾಗಿ ಘೋಷಿಸಿದ್ದಾರೆ.

ಮೊಹಮ್ಮದ್ ಸಿರಾಜ್ ಹಾಗೂ ಬಾಕ್ಸರ್ ನಿಖತ್ ಜರೀನ್ ಅವರಿಗೆ ತೆಲಂಗಾಣ ಸರ್ಕಾರದಿಂದ ಗ್ರೂಪ್-1 ಉದ್ಯೋಗ ಸಿಗಲಿದೆ. ಇದಲ್ಲದೇ ಬಂಜಾರಾ ಹಿಲ್ಸ್ ಅಥವಾ ಜುಬಿಲಿ ಹಿಲ್ಸ್ನಂತಹ ಪಾಶ್ ಏರಿಯಾದಲ್ಲಿ ಮನೆ ಕಟ್ಟಲು 600 ಗಜ ಜಾಗ ಕೂಡ ನೀಡಲಾಗುವುದು.

ಮೊಹಮ್ಮದ್ ಸಿರಾಜ್ ಮತ್ತು ಭಾರತದ ಮಹಿಳಾ ಸ್ಟಾರ್ ಬಾಕ್ಸಿಂಗ್ ಆಟಗಾರ್ತಿ ನಿಖತ್ ಜರೀನ್ಗೆ ಉದ್ಯೋಗ ಕಲ್ಪಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಇಂದು ವಿಧಾನಸಭೆಯಲ್ಲಿ ಅಂಗೀಕರಿಸಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತಿಳಿಸಿದ್ದಾರೆ.

ಸಿರಾಜ್ಗೆ ಗ್ರೂಪ್-1 ಉದ್ಯೋಗ ನೀಡುವ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ, ಸಿರಾಜ್ ಓದಿದ್ದು ಇಂಟರ್ ಮೀಡಿಯೇಟ್ವರೆಗೆ ಮಾತ್ರ. ಆದರೆ ಅವರ ಸಾಧನೆ ಎಲ್ಲಕ್ಕೂ ಮಿಗಿಲಾಗಿದೆ ಎಂದರು. ಇನ್ನು ನಿಖಿತ್ ಜರೀನ್ ಬಗ್ಗೆ ಮಾತನಾಡಿದ ಸಿಎಂ, ನಿಖತ್ಗೆ ಹಿಂದಿನ ಬಿಆರ್ಎಸ್ ಸರ್ಕಾರ ಏಕೆ ಕೆಲಸ ನೀಡಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಗ್ರೂಪ್-1 ಉದ್ಯೋಗ ಎಂದರೆ ಮೊಹಮ್ಮದ್ ಸಿರಾಜ್ ಪೊಲೀಸ್ ಪಡೆಗೆ ಸೇರಲು ನಿರ್ಧರಿಸಿದರೆ, ಅವರು ಡಿಎಸ್ಪಿ ಹುದ್ದೆಗೆ ನೇರ ನೇಮಕಾತಿ ಪಡೆಯುತ್ತಾರೆ. 2024 ರ ಟಿ20 ವಿಶ್ವಕಪ್ನಲ್ಲಿ ಭಾರತದ ಮೂರು ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಸಿರಾಜ್ ಪಡೆದಿದ್ದರು. ಆದರೆ ವಿಂಡೀಸ್ನಲ್ಲಿ ಪಿಚ್ನಿಂದಾಗಿ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಆಡುವ ಅವಕಾಶ ಸಿಗಲಿಲ್ಲ.

ಸದ್ಯ ಮೊಹಮ್ಮದ್ ಸಿರಾಜ್ ಟೀಂ ಇಂಡಿಯಾ ಜೊತೆ ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ಅವರು ಇತ್ತೀಚೆಗೆ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿದ್ದರು. ಇದೀಗ ಏಕದಿನ ಸರಣಿಯಲ್ಲೂ ಅವರು ಆಡುವುದನ್ನು ಕಾಣಬಹುದಾಗಿದೆ. ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಇದುವರೆಗೆ 6 ಏಕದಿನ ಪಂದ್ಯಗಳನ್ನು ಆಡಿದ್ದು 19 ವಿಕೆಟ್ ಪಡೆದಿದ್ದಾರೆ.



















