Sign In

By signing in or creating an account, you agree with Associated Broadcasting Company's Terms & Conditions and Privacy Policy.

ದುಬಾರಿ ಕಾರುಗಳ ಒಡೆಯ ರಿಷಬ್​ ಪಂತ್​ಗೆ ಕಡಿಮೆ ಬೆಲೆಯ ಈ ಕಾರೆಂದರೆ ಬಲು ಅಚ್ಚುಮೆಚ್ಚು!

Rishabh Pant accident: ಪಂತ್ ಬಳಿ ಪ್ರಸ್ತುತ ರೂ 60 ಲಕ್ಷ ಮೌಲ್ಯದ ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್, ರೂ 74 ಲಕ್ಷ ಮೌಲ್ಯದ ಫೋರ್ಡ್ ಮುಶ್ಟಾಂಗ್ ಮತ್ತು ರೂ 1 ಕೋಟಿ ಮೌಲ್ಯದ ಮರ್ಸಿಡಿಸ್-ಬೆನ್ಜ್ ಜಿಎಲ್‌ಇ ಕಾರುಗಳಿವೆ.

TV9 Web
| Updated By: ಪೃಥ್ವಿಶಂಕರ

Updated on:Dec 30, 2022 | 6:18 PM

ಬಹುತೇಕ ಸ್ಟಾರ್ ಕ್ರಿಕೆಟಿಗರು ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಾರೆ. ಇದಕ್ಕೆ ಪಂತ್ ಕೂಡ ಭಿನ್ನವಾಗಿಲ್ಲ. ಅವರ ಕಾರು ಸಂಗ್ರಹದಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಶುಕ್ರವಾರ ಬೆಳಗ್ಗೆ ಅಪಘಾತಕ್ಕೀಡಾಗಿದ್ದ ಪಂತ್, ಆ ಸಮಯದಲ್ಲಿ ತಮ್ಮ ಐಷಾರಾಮಿ ಕಾರುಗಳಲ್ಲಿ ಒಂದಾದ ಮರ್ಸಿಡಿಸ್ ಬೆಂಜ್ ಜಿಎಲ್​ಇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ತಿಳಿದುಬಂದಿದೆ.

ಬಹುತೇಕ ಸ್ಟಾರ್ ಕ್ರಿಕೆಟಿಗರು ಐಷಾರಾಮಿ ಕಾರುಗಳನ್ನು ಇಷ್ಟಪಡುತ್ತಾರೆ. ಇದಕ್ಕೆ ಪಂತ್ ಕೂಡ ಭಿನ್ನವಾಗಿಲ್ಲ. ಅವರ ಕಾರು ಸಂಗ್ರಹದಲ್ಲಿ ಹಲವು ಐಷಾರಾಮಿ ಕಾರುಗಳಿವೆ. ಶುಕ್ರವಾರ ಬೆಳಗ್ಗೆ ಅಪಘಾತಕ್ಕೀಡಾಗಿದ್ದ ಪಂತ್, ಆ ಸಮಯದಲ್ಲಿ ತಮ್ಮ ಐಷಾರಾಮಿ ಕಾರುಗಳಲ್ಲಿ ಒಂದಾದ ಮರ್ಸಿಡಿಸ್ ಬೆಂಜ್ ಜಿಎಲ್​ಇ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬುದು ತಿಳಿದುಬಂದಿದೆ.

1 / 5
2016ರ ಐಪಿಎಲ್ ಹರಾಜಿನಲ್ಲಿ 1.9 ಕೋಟಿ ರೂ.ಗೆ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು. ಆ ಸಮಯದಲ್ಲಿ ಪಂತ್​ಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಇಷ್ಟು ದೊಡ್ಡ ಮೊತ್ತವನ್ನು ಏನು ಮಾಡುತ್ತೀರಿ ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ, ಇದಕ್ಕೆ ಉತ್ತರಿಸಿದ್ದ ಪಂತ್ ಐಷಾರಾಮಿ ಕಾರು ಖರೀದಿಸುವುದಾಗಿ ಹೇಳಿದ್ದರು.

2016ರ ಐಪಿಎಲ್ ಹರಾಜಿನಲ್ಲಿ 1.9 ಕೋಟಿ ರೂ.ಗೆ ಪಂತ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಖರೀದಿಸಿತ್ತು. ಆ ಸಮಯದಲ್ಲಿ ಪಂತ್​ಗೆ ಕೇವಲ 19 ವರ್ಷ ವಯಸ್ಸಾಗಿತ್ತು. ಇಷ್ಟು ದೊಡ್ಡ ಮೊತ್ತವನ್ನು ಏನು ಮಾಡುತ್ತೀರಿ ಎಂದು ಸಂದರ್ಶನವೊಂದರಲ್ಲಿ ಕೇಳಿದಾಗ, ಇದಕ್ಕೆ ಉತ್ತರಿಸಿದ್ದ ಪಂತ್ ಐಷಾರಾಮಿ ಕಾರು ಖರೀದಿಸುವುದಾಗಿ ಹೇಳಿದ್ದರು.

2 / 5
ಆದರೆ, ಪಂತ್ ಅವರ ಮೊದಲ ಆಯ್ಕೆ ಐಷಾರಾಮಿ ವಾಹನವಾಗಿರಲಿಲ್ಲ. ಪಂತ್ ಯಾವಾಗಲೂ ಐ20 ಕಾರನ್ನು ಖರೀದಿಸಲು ಬಯಸುತ್ತಿದ್ದರು. ಆದರೆ ಈ ಕಾರನ್ನು ಯಾಕೆ ಇಷ್ಟ ಪಡುತ್ತೇನೋ ಗೊತ್ತಿಲ್ಲ ಎಂದು ಪಂತ್​ ಹೇಳಿಕೊಂಡಿದ್ದರು. ಅಲ್ಲದೆ ನನ್ನ ಬಳಿ 100 ಕೋಟಿ ಹಣವಿದ್ದರೂ ನಾನು ಐ20 ಕಾರನ್ನೇ ಖರೀದಿಸುವುದಾಗಿ ಆಗ ಹೇಳಿದ್ದರು.

ಆದರೆ, ಪಂತ್ ಅವರ ಮೊದಲ ಆಯ್ಕೆ ಐಷಾರಾಮಿ ವಾಹನವಾಗಿರಲಿಲ್ಲ. ಪಂತ್ ಯಾವಾಗಲೂ ಐ20 ಕಾರನ್ನು ಖರೀದಿಸಲು ಬಯಸುತ್ತಿದ್ದರು. ಆದರೆ ಈ ಕಾರನ್ನು ಯಾಕೆ ಇಷ್ಟ ಪಡುತ್ತೇನೋ ಗೊತ್ತಿಲ್ಲ ಎಂದು ಪಂತ್​ ಹೇಳಿಕೊಂಡಿದ್ದರು. ಅಲ್ಲದೆ ನನ್ನ ಬಳಿ 100 ಕೋಟಿ ಹಣವಿದ್ದರೂ ನಾನು ಐ20 ಕಾರನ್ನೇ ಖರೀದಿಸುವುದಾಗಿ ಆಗ ಹೇಳಿದ್ದರು.

3 / 5
ಐ20 ಕಾರನ್ನು ಖರೀದಿಸುವ ಕನಸು ಹೊತ್ತಿದ್ದ ಪಂತ್ ಬಳಿ ಇಂದು ಕೋಟಿಗಟ್ಟಲೆ ಬೆಲೆ ಬಾಳುವ ವಾಹನಗಳ ಒಡೆಯರಾಗಿದ್ದಾರೆ. 2017 ರಲ್ಲಿ ರೂ. 1.9 ಕೋಟಿ ನೀಡಿ ತಮ್ಮ ಮೊದಲ ಕಾರಾದ ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್ ಅನ್ನು ಖರೀದಿಸಿದ್ದರು. ಇದರ ನಂತರ, ಕ್ರಿಕೆಟ್ ಜಗತ್ತಿನಲ್ಲಿ ಹೇಗೆ ಪಂತ್ ಬೇಡಿಕೆ ಹೆಚ್ಚಾಗುತ್ತಾ ಸಾಗಿತೋ, ಹಾಗೆಯೇ ಅವರ ಐಷಾರಾಮಿ ಕಾರುಗಳ ಸಂಖ್ಯೆಯೂ ಹೆಚ್ಚಾಯಿತು.

ಐ20 ಕಾರನ್ನು ಖರೀದಿಸುವ ಕನಸು ಹೊತ್ತಿದ್ದ ಪಂತ್ ಬಳಿ ಇಂದು ಕೋಟಿಗಟ್ಟಲೆ ಬೆಲೆ ಬಾಳುವ ವಾಹನಗಳ ಒಡೆಯರಾಗಿದ್ದಾರೆ. 2017 ರಲ್ಲಿ ರೂ. 1.9 ಕೋಟಿ ನೀಡಿ ತಮ್ಮ ಮೊದಲ ಕಾರಾದ ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್ ಅನ್ನು ಖರೀದಿಸಿದ್ದರು. ಇದರ ನಂತರ, ಕ್ರಿಕೆಟ್ ಜಗತ್ತಿನಲ್ಲಿ ಹೇಗೆ ಪಂತ್ ಬೇಡಿಕೆ ಹೆಚ್ಚಾಗುತ್ತಾ ಸಾಗಿತೋ, ಹಾಗೆಯೇ ಅವರ ಐಷಾರಾಮಿ ಕಾರುಗಳ ಸಂಖ್ಯೆಯೂ ಹೆಚ್ಚಾಯಿತು.

4 / 5
ಪಂತ್ ಬಳಿ ಪ್ರಸ್ತುತ ರೂ 60 ಲಕ್ಷ ಮೌಲ್ಯದ ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್, ರೂ 74 ಲಕ್ಷ ಮೌಲ್ಯದ ಫೋರ್ಡ್ ಮುಶ್ಟಾಂಗ್ ಮತ್ತು ರೂ 1 ಕೋಟಿ ಮೌಲ್ಯದ ಮರ್ಸಿಡಿಸ್-ಬೆನ್ಜ್ ಜಿಎಲ್‌ಇ ಕಾರುಗಳಿವೆ. ಕೆಲವು ವರದಿಗಳ ಪ್ರಕಾರ, ಪಂತ್ 1.9 ಕೋಟಿ ಮೌಲ್ಯದ ಆಡಿ A8 ಅನ್ನು ಸಹ ಹೊಂದಿದ್ದಾರೆ. ಪಂತ್ ಅವರ ವಾಹನಗಳ ಒಟ್ಟು ಬೆಲೆ ಐದು ಕೋಟಿ ರೂಪಾಯಿಗೂ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

ಪಂತ್ ಬಳಿ ಪ್ರಸ್ತುತ ರೂ 60 ಲಕ್ಷ ಮೌಲ್ಯದ ಮರ್ಸಿಡಿಸ್-ಬೆನ್ಜ್ ಸಿ-ಕ್ಲಾಸ್, ರೂ 74 ಲಕ್ಷ ಮೌಲ್ಯದ ಫೋರ್ಡ್ ಮುಶ್ಟಾಂಗ್ ಮತ್ತು ರೂ 1 ಕೋಟಿ ಮೌಲ್ಯದ ಮರ್ಸಿಡಿಸ್-ಬೆನ್ಜ್ ಜಿಎಲ್‌ಇ ಕಾರುಗಳಿವೆ. ಕೆಲವು ವರದಿಗಳ ಪ್ರಕಾರ, ಪಂತ್ 1.9 ಕೋಟಿ ಮೌಲ್ಯದ ಆಡಿ A8 ಅನ್ನು ಸಹ ಹೊಂದಿದ್ದಾರೆ. ಪಂತ್ ಅವರ ವಾಹನಗಳ ಒಟ್ಟು ಬೆಲೆ ಐದು ಕೋಟಿ ರೂಪಾಯಿಗೂ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ.

5 / 5

Published On - 6:12 pm, Fri, 30 December 22

Follow us
Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily Devotional: ದೇವಸ್ಥಾನದಲ್ಲಿ ಮಹಿಳೆಯರು ಹೂವು ಧರಿಸುವುದು ಶುಭವೇ?
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
Daily horoscope: ಹುಣ್ಣಿಮೆಯ ದಿನದ ರಾಶಿ ಫಲಗಳನ್ನು ತಿಳಿಯಿರಿ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಂಗಳೂರಿನಲ್ಲೊಂದು ಎದೆ ಝಲ್ ಎನಿಸುವ ಭೀಕರ ಅಪಘಾತ
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಮಾತಿಗೆ ಮಾತು ಬೆಳೆದು ಕಂಡಕ್ಟರ್​-ಪ್ರಯಾಣಿಕರ ನಡುವೆ ಹೊಡೆದಾಟ!
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಕುಡಿದ ಯುವಕರಿಂದ ಆಂಧ್ರದ ಮಹಿಳಾ ಪೊಲೀಸ್ ಅಧಿಕಾರಿಯ ಕೂದಲೆಳೆದು ಹಲ್ಲೆ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
ಪುನೀತ್ ಕೆನ್ನೆಗೆ ಹೊಡೆಯುವ ದೃಶ್ಯ ಹೇಗಿತ್ತು? ಆ ದಿನದ ಅನುಭವ ತಿಳಿಸಿದ ನಟ
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
‘ಅಪ್ಪು’ ಸಿನಿಮಾದ ಅವಕಾಶ ನನಗೆ ಸಿಕ್ಕಾಗ ನಂಬೋಕೆ ಆಗಲಿಲ್ಲ: ಗುರುಕಿರಣ್
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಕರಾವಳಿ ಜಿಲ್ಲೆಗಳ ಸಮಸ್ಯೆಯನ್ನು ಸದನದ ಗಮನಕ್ಕೆ ತಂದ ಸುನೀಲ ಕುಮಾರ
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಪಾರ್ಕಿಂಗ್ ವಿಚಾರಕ್ಕೆ ಜಗಳ; ಡಯಾಲಿಸಿಸ್‌ನಲ್ಲಿದ್ದ ವಿಜ್ಞಾನಿ ಸಾವು
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ
ಎಸ್ಸಿಎಸ್ಪಿ-ಟಿಎಸ್ಪಿ ಕಾಯ್ದೆ ಜಾರಿ ಮಾಡಿದ್ದು ಅವರಿಗೆ ಅನೂಕೂಲವಾಗಲು: ಸಚಿವ