AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Smriti Mandhana: ಹೀನಾಯ ಸೋಲಿನ ಬಳಿಕ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ ಆಡಿದ ಮಾತುಗಳೇನು ಗೊತ್ತೇ?

RCB vs DC, WPL 2023: ಮಹಿಳಾ ಪ್ರೀಮಿಯರ್ ಲೀಗ್​ನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ಸೋಲಿನ ಬಗ್ಗೆ ಮಾತನಾಡಿದ ಆರ್​ಸಿಬಿ ನಾಯಕಿ ಸ್ಮೃತಿ ಮಂಧಾನ, ನಾವು ಎದುರಾಳಿಗೆ ಹೆಚ್ಚು ರನ್​ಗಳನ್ನು ಬಿಟ್ಟುಕೊಟ್ಟೆವು. ಸುಮಾರು 20 ರಿಂದ 30 ರನ್​ಗಳನ್ನು ಹೆಚ್ಚು ನೀಡಿದೆವು ಎಂದು ಹೇಳಿದ್ದಾರೆ.

Vinay Bhat
|

Updated on:Mar 06, 2023 | 8:49 AM

Share
ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಭಾನುವಾರ ಮಧ್ಯಾಹ್ನ ನಡೆದ ಡಬ್ಲ್ಯೂಪಿಎಲ್​ 2023 ರ ದ್ವಿತೀಯ ಪಂದ್ಯದಲ್ಲಿ ಆರ್​ಸಿಬಿ ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿತು.

ಮಹಿಳಾ ಪ್ರೀಮಿಯರ್ ಲೀಗ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಭಾನುವಾರ ಮಧ್ಯಾಹ್ನ ನಡೆದ ಡಬ್ಲ್ಯೂಪಿಎಲ್​ 2023 ರ ದ್ವಿತೀಯ ಪಂದ್ಯದಲ್ಲಿ ಆರ್​ಸಿಬಿ ಮಹಿಳಾ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಕಂಡಿತು.

1 / 9
ಆರ್​ಸಿಬಿ ಪರ ಬೌಲರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರೆ, ಬ್ಯಾಟರ್​ಗಳು ಕೂಡ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರಲಿಲ್ಲ. 200 ಕ್ಕೂ ಅಧಿಕ ರನ್ ಬಿಟ್ಟುಕೊಟ್ಟ ಬೌಲರ್​ಗಳು ದುಬಾರಿಯಾದರೆ ಆರ್​ಸಿಬಿ ಮಧ್ಯಮ ಕ್ರಮಾಂಕ ದಿಢೀರ್ ಕುಸಿಯಿತು. ಮಧ್ಯಮ ಓವರ್​ನಲ್ಲಿ 7 ರನ್​ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು.

ಆರ್​ಸಿಬಿ ಪರ ಬೌಲರ್​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದರೆ, ಬ್ಯಾಟರ್​ಗಳು ಕೂಡ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ತೋರಲಿಲ್ಲ. 200 ಕ್ಕೂ ಅಧಿಕ ರನ್ ಬಿಟ್ಟುಕೊಟ್ಟ ಬೌಲರ್​ಗಳು ದುಬಾರಿಯಾದರೆ ಆರ್​ಸಿಬಿ ಮಧ್ಯಮ ಕ್ರಮಾಂಕ ದಿಢೀರ್ ಕುಸಿಯಿತು. ಮಧ್ಯಮ ಓವರ್​ನಲ್ಲಿ 7 ರನ್​ಗಳ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡಿತು.

2 / 9
ಪಂದ್ಯ ಮುಗಿದ ಬಳಿಕ ಸೋಲಿನ ಬಗ್ಗೆ ಮಾತನಾಡಿದ ನಾಯಕಿ ಸ್ಮೃತಿ ಮಂಧಾನ, ನಾವು ಎದುರಾಳಿಗೆ ಹೆಚ್ಚು ರನ್​ಗಳನ್ನು ಬಿಟ್ಟುಕೊಟ್ಟೆವು. ಸುಮಾರು 20 ರಿಂದ 30 ರನ್​ಗಳನ್ನು ಹೆಚ್ಚು ನೀಡಿದೆವು. ನಾವು ಈರೀತಿಯ ಆರಂಭವನ್ನು ಎದುರು ನೋಡಿರಲಿಲ್ಲ. ಡೆಲ್ಲಿ ಬೌಲರ್​ಗಳು ಮಧ್ಯಮ ಓವರ್​ನಲ್ಲಿ ನಿಧಾನಗತಿಯಲ್ಲಿ ಬೌಲ್ ಎಸೆದರು. ನಾವು ಆ ರೀತಿಯ ಟ್ರಿಕ್ ಉಪಯೋಗಿಸಲು ವಿಫಲರಾದೆವು ಎಂದು ಹೇಳಿದ್ದಾರೆ.

ಪಂದ್ಯ ಮುಗಿದ ಬಳಿಕ ಸೋಲಿನ ಬಗ್ಗೆ ಮಾತನಾಡಿದ ನಾಯಕಿ ಸ್ಮೃತಿ ಮಂಧಾನ, ನಾವು ಎದುರಾಳಿಗೆ ಹೆಚ್ಚು ರನ್​ಗಳನ್ನು ಬಿಟ್ಟುಕೊಟ್ಟೆವು. ಸುಮಾರು 20 ರಿಂದ 30 ರನ್​ಗಳನ್ನು ಹೆಚ್ಚು ನೀಡಿದೆವು. ನಾವು ಈರೀತಿಯ ಆರಂಭವನ್ನು ಎದುರು ನೋಡಿರಲಿಲ್ಲ. ಡೆಲ್ಲಿ ಬೌಲರ್​ಗಳು ಮಧ್ಯಮ ಓವರ್​ನಲ್ಲಿ ನಿಧಾನಗತಿಯಲ್ಲಿ ಬೌಲ್ ಎಸೆದರು. ನಾವು ಆ ರೀತಿಯ ಟ್ರಿಕ್ ಉಪಯೋಗಿಸಲು ವಿಫಲರಾದೆವು ಎಂದು ಹೇಳಿದ್ದಾರೆ.

3 / 9
ಮಾತು ಮುಂದುವರೆಸಿದ ಮಂಧಾನ, ನಮ್ಮ ಬೌಲಿಂಗ್ ವಿಭಾಗದಲ್ಲಿ ಇನ್ನಷ್ಟು ಕೆಲಸ ಆಗಬೇಕಿದೆ. ಸೋಮವಾರ ನಮಗೆ ಮತ್ತೊಂದು ಪಂದ್ಯವಿದೆ. ಯೋಚಿಸಿ ಕಮ್​ಬ್ಯಾಕ್ ಮಾಡಲು ಸಮಯವಿದೆ. ಈ ಪಂದ್ಯದಲ್ಲಿ ಟಾರ್ಗೆಟ್ ಬೆನ್ನಟ್ಟುವಾಗ ಉತ್ತಮ ಆರಂಭ ಪಡೆದುಕೊಂಡಿದ್ದೆವು. ಆದರೆ, ಅದೇ ಗತಿಯನ್ನು ಮುಂದುವರೆಸಲು ವಿಫಲರಾದೆವು. ಮುಂದಿನ ಪಂದ್ಯಕ್ಕೆ ಇನ್ನಷ್ಟು ಬಲಿಷ್ಠವಾಗಿ ಬರುತ್ತೇವೆ ಎಂಬುದು ಸ್ಮೃತಿ ಮಾತು.

ಮಾತು ಮುಂದುವರೆಸಿದ ಮಂಧಾನ, ನಮ್ಮ ಬೌಲಿಂಗ್ ವಿಭಾಗದಲ್ಲಿ ಇನ್ನಷ್ಟು ಕೆಲಸ ಆಗಬೇಕಿದೆ. ಸೋಮವಾರ ನಮಗೆ ಮತ್ತೊಂದು ಪಂದ್ಯವಿದೆ. ಯೋಚಿಸಿ ಕಮ್​ಬ್ಯಾಕ್ ಮಾಡಲು ಸಮಯವಿದೆ. ಈ ಪಂದ್ಯದಲ್ಲಿ ಟಾರ್ಗೆಟ್ ಬೆನ್ನಟ್ಟುವಾಗ ಉತ್ತಮ ಆರಂಭ ಪಡೆದುಕೊಂಡಿದ್ದೆವು. ಆದರೆ, ಅದೇ ಗತಿಯನ್ನು ಮುಂದುವರೆಸಲು ವಿಫಲರಾದೆವು. ಮುಂದಿನ ಪಂದ್ಯಕ್ಕೆ ಇನ್ನಷ್ಟು ಬಲಿಷ್ಠವಾಗಿ ಬರುತ್ತೇವೆ ಎಂಬುದು ಸ್ಮೃತಿ ಮಾತು.

4 / 9
ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಡೆಲ್ಲಿ ಪರ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ಹಾಗೂ ಮೆಗ್ ಲ್ಯಾನಿಂಗ್ ಬಂದ ಕೂಡಲೇ ಅಬ್ಬರಿಸಲು ಆರಂಭಿಸಿದರು. ಲ್ಯಾನಿಂಗ್ ಅವರೊಂದಿಗೆ ಬಿರುಗಾಳಿಯ ಶೈಲಿಯಲ್ಲಿ ರನ್ ಗಳಿಸಿದ ಶಫಾಲಿ ಶತಕದ ಜೊತೆಯಾಟವನ್ನು ಹಂಚಿಕೊಂಡರು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಡೆಲ್ಲಿ ಪರ ಇನ್ನಿಂಗ್ಸ್ ಆರಂಭಿಸಿದ ಶಫಾಲಿ ವರ್ಮಾ ಹಾಗೂ ಮೆಗ್ ಲ್ಯಾನಿಂಗ್ ಬಂದ ಕೂಡಲೇ ಅಬ್ಬರಿಸಲು ಆರಂಭಿಸಿದರು. ಲ್ಯಾನಿಂಗ್ ಅವರೊಂದಿಗೆ ಬಿರುಗಾಳಿಯ ಶೈಲಿಯಲ್ಲಿ ರನ್ ಗಳಿಸಿದ ಶಫಾಲಿ ಶತಕದ ಜೊತೆಯಾಟವನ್ನು ಹಂಚಿಕೊಂಡರು.

5 / 9
ಇವರಿಬ್ಬರು ಈ ಲೀಗ್​ನ ಇತಿಹಾಸದಲ್ಲಿ ಮೊದಲ ಶತಕದ ಜೊತೆಯಾಟ ಆಡಿದ ದಾಖಲೆ ಕೂಡ ಬರೆದರು. ಇಬ್ಬರೂ ಮೊದಲ ವಿಕೆಟ್‌ಗೆ 162 ರನ್‌ಗಳ ಕಾಣಿಕೆ ನೀಡಿದರು. ಕೇವಲ 45 ಎಸೆತಗಳನ್ನು ಎದುರಿಸಿದ ಶಪಾಲಿ,10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 84 ರನ್ ಚಚ್ಚಿದರು.

ಇವರಿಬ್ಬರು ಈ ಲೀಗ್​ನ ಇತಿಹಾಸದಲ್ಲಿ ಮೊದಲ ಶತಕದ ಜೊತೆಯಾಟ ಆಡಿದ ದಾಖಲೆ ಕೂಡ ಬರೆದರು. ಇಬ್ಬರೂ ಮೊದಲ ವಿಕೆಟ್‌ಗೆ 162 ರನ್‌ಗಳ ಕಾಣಿಕೆ ನೀಡಿದರು. ಕೇವಲ 45 ಎಸೆತಗಳನ್ನು ಎದುರಿಸಿದ ಶಪಾಲಿ,10 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 84 ರನ್ ಚಚ್ಚಿದರು.

6 / 9
ಲ್ಯಾನಿಂಗ್ ಕೇವಲ 43 ಎಸೆತಗಳಲ್ಲಿ 14 ಫೋರ್​ನೊಂದಿಗೆ 72 ರನ್ ಸಿಡಿಸಿದರು. ಮರಿಜನ್ನೆ ಕ್ಯಾಪ್ 17 ಎಸೆತಗಳಲ್ಲಿ 3 ಫೋರ್, ಸಿಕ್ಸರ್​ನೊಂದಿಗೆ ಅಜೇಯ 39 ಹಾಗೂ ಜೆಮಿಮಾ ರೋಡ್ರಿಗಸ್ ಅಜೇಯ 22 ರನ್ ಬಾರಿಸಿದರು. ಡೆಲ್ಲಿ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಕಲೆಹಾಕಿತು.

ಲ್ಯಾನಿಂಗ್ ಕೇವಲ 43 ಎಸೆತಗಳಲ್ಲಿ 14 ಫೋರ್​ನೊಂದಿಗೆ 72 ರನ್ ಸಿಡಿಸಿದರು. ಮರಿಜನ್ನೆ ಕ್ಯಾಪ್ 17 ಎಸೆತಗಳಲ್ಲಿ 3 ಫೋರ್, ಸಿಕ್ಸರ್​ನೊಂದಿಗೆ ಅಜೇಯ 39 ಹಾಗೂ ಜೆಮಿಮಾ ರೋಡ್ರಿಗಸ್ ಅಜೇಯ 22 ರನ್ ಬಾರಿಸಿದರು. ಡೆಲ್ಲಿ 20 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 223 ರನ್ ಕಲೆಹಾಕಿತು.

7 / 9
ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ 4 ಓವರ್ ಆಗುವ ಹೊತ್ತಿಗೆ 40 ರನ್ ಬಾರಿಸಿ ಸ್ಫೋಟಕ ಆರಂಭ ಪಡೆದುಕೊಂಡಿತು. ಆದರೆ, ಸೋಫಿ 14 ಹಾಗೂ ನಾಯಕಿ ಮಂಧಾನ 35 ಸಿಡಿಸಿ ಔಟಾದರು. ಎಲ್ಲಿಸ್ ಪೆರ್ರಿ 31 ರನ್​ಗಳ ಕಾಣಿಕೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಬೆಂಗಳೂರು ದಿಢೀರ್ ಕುಸಿತ ಕಂಡಿತು.

ಟಾರ್ಗೆಟ್ ಬೆನ್ನಟ್ಟಿದ ಆರ್​ಸಿಬಿ 4 ಓವರ್ ಆಗುವ ಹೊತ್ತಿಗೆ 40 ರನ್ ಬಾರಿಸಿ ಸ್ಫೋಟಕ ಆರಂಭ ಪಡೆದುಕೊಂಡಿತು. ಆದರೆ, ಸೋಫಿ 14 ಹಾಗೂ ನಾಯಕಿ ಮಂಧಾನ 35 ಸಿಡಿಸಿ ಔಟಾದರು. ಎಲ್ಲಿಸ್ ಪೆರ್ರಿ 31 ರನ್​ಗಳ ಕಾಣಿಕೆ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಬೆಂಗಳೂರು ದಿಢೀರ್ ಕುಸಿತ ಕಂಡಿತು.

8 / 9
ಹೀದರ್ ನೈಟ್ (34) ರನ್​ ಗಳಿಸಿದ್ದರಿಂದ ತಂಡ 150 + ರನ್​ ದಾಖಲಿಸಲು ಶಕ್ತವಾಯಿತು. ಮೇಘನ್ ಸ್ಕಟ್ 30 ರನ್ ಬಾರಿಸಿ ಅಜೇಯರಾಗಿ ಉಳಿದರು. ಆರ್​ಸಿಬಿ 20 ಓವರ್​ಗೆ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತಷ್ಟೆ. ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಪ್ರಥಮ 5 ವಿಕೆಟ್​ ಪಡೆದು ತಾರಾ ನಾರ್ರಿಸ್ ವಿಶೇಷ ದಾಖಲೆ ಮಾಡಿದರು.

ಹೀದರ್ ನೈಟ್ (34) ರನ್​ ಗಳಿಸಿದ್ದರಿಂದ ತಂಡ 150 + ರನ್​ ದಾಖಲಿಸಲು ಶಕ್ತವಾಯಿತು. ಮೇಘನ್ ಸ್ಕಟ್ 30 ರನ್ ಬಾರಿಸಿ ಅಜೇಯರಾಗಿ ಉಳಿದರು. ಆರ್​ಸಿಬಿ 20 ಓವರ್​ಗೆ 8 ವಿಕೆಟ್ ನಷ್ಟಕ್ಕೆ 163 ರನ್ ಗಳಿಸಿತಷ್ಟೆ. ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ ಪ್ರಥಮ 5 ವಿಕೆಟ್​ ಪಡೆದು ತಾರಾ ನಾರ್ರಿಸ್ ವಿಶೇಷ ದಾಖಲೆ ಮಾಡಿದರು.

9 / 9

Published On - 8:49 am, Mon, 6 March 23

Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!