
ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಜಿಂಬಾಬ್ವೆಗೆ ತೆರಳಿರುವ ಭಾರತ ಕ್ರಿಕೆಟ್ ತಂಡ ಇಂದು ಅಗ್ನಿಪರೀಕ್ಷೆಗೆ ಇಳಿಯಲಿದೆ. ಹರಾರೆಯ ಹರಾರೆ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಮೊದಲ ಏಕದಿನ ಪಂದ್ಯ ಆಯೋಜಿಸಲಾಗಿದೆ.

ಇಂಜುರಿಯಿಂದ ಗುಣಮುಖರಾಗಿ ಫಿಟ್ ಆಗಿರುವ ಕೆಎಲ್ ರಾಹುಲ್ (KL Rahul) ತಂಡದವನ್ನು ಮುನ್ನಡೆಸಲಿದ್ದಾರೆ. ಇವರಿಗೆ ಶಿಖರ್ ಧವನ್ ಸಾಥ್ ನೀಡಲಿದ್ದಾರೆ.

ಇತ್ತ ಜಿಂಬಾಬ್ವೆ ತಂಡವು ತಮ್ಮ ನಿಯಮಿತ ನಾಯಕ ಕ್ರೇಗ್ ಇರ್ವಿನ್ ಇಲ್ಲದೆ ಭಾರತ ವಿರುದ್ಧ ಅಖಾಡಕ್ಕಿಳಿಯಲಿದೆ. ಹೀಗಾಗಿ ತಂಡದ ನಾಯಕತ್ವವನ್ನು ರೆಗಿಸ್ ಚಕಬ್ವಾ ಅವರಿಗೆ ನೀಡಲಾಗಿದೆ.

ಭಾರತ ಪರ ಓಪನರ್ ಗಳಾಗಿ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅವಕಾಶಕ್ಕಾಗಿ ಕಾಯುತ್ತಿರುವ ರಾಹುಲ್ ತ್ರಿಪಾಠಿ ಮೂರನೇ ಸ್ಥಾನದಲ್ಲಿ ಆಡಿದರೆ, ನಾಯಕ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಮಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.

ವಿಕೆಟ್ ಕೀಪರ್ ಜವಾಬ್ದಾರಿಯನ್ನು ಸಂಜು ಸ್ಯಾಮ್ಸನ್ ನಿರ್ವಹಿಸಲಿದ್ದಾರೆ. ಆಲ್ರೌಂಡರ್ ಗಳಾದ ದೀಪಕ್ ಹೂಡ ಹಾಗೂ ಅಕ್ಷರ್ ಪಟೇಲ್ ಆರು ಮತ್ತು ಏಳನೇ ಕ್ರಮಾಂಕದಲ್ಲಿ ಕ್ರೀಸ್ಗೆ ಇಳಿಯಬಹುದು. ಮುಖ್ಯ ವೇಗಿಗಳಾಗಿ ದೀಪಕ್ ಚಹರ್, ಶಾರ್ದೂಲ್ ಠಾಕೂರ್ ಹಾಗೂ ಆವೇಶ್ ಖಾನ್ ಕಾಣಿಸಿಕೊಂಡರೆ, ಸ್ಪಿನ್ನರ್ ಆಗಿರುವ ಕುಲ್ದೀಪ್ ಯಾದವ್ ಅಥವಾ ಶಹ್ಹಾಜ್ ಅಹ್ಮದ್ ಗೆ ಸ್ಥಾನ ಸಗುವ ಸಂಭವವಿದೆ.

ರೆಗಿಸ್ ಚಕಬ್ವಾ ನಾಯಕತ್ವದ ಜಿಂಬಾಬ್ವೆ ತಂಡ ಏಕದಿನ ಮತ್ತು ಟಿ20 ಸರಣಿಯಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ನಂತರ ಆತ್ಮವಿಶ್ವಾಸದಿಂದ ತುಂಬಿದೆ. ಸಿಕಂದರ್ ರಾಝಾ ಅವರು ಎರಡೂ ಸರಣಿಯಲ್ಲಿ ಅಪ್ರತಿಮ ಬ್ಯಾಟರ್ ಆಗಿ ಮೂಡಿಬಂದಿದ್ದು, ಇನ್ನೋಸೆಂಟ್ ಕೈಯಾ ಮತ್ತು ರಿಯಾನ್ ಬರ್ಲ್ ಅವರಂತಹವರು ಕೂಡ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಲು ಸಫಲರಾದರು.

ಭಾರತ ಪರ ಓಪನರ್ ಗಳಾಗಿ ಶಿಖರ್ ಧವನ್ ಹಾಗೂ ಶುಭ್ಮನ್ ಗಿಲ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಅವಕಾಶಕ್ಕಾಗಿ ಕಾಯುತ್ತಿರುವ ರಾಹುಲ್ ತ್ರಿಪಾಠಿ ಮೂರನೇ ಸ್ಥಾನದಲ್ಲಿ ಆಡಿದರೆ, ನಾಯಕ ಕೆಎಲ್ ರಾಹುಲ್ ನಾಲ್ಕನೇ ಕ್ರಮಾಮಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ.

ಭಾರತದ ಸಂಭಾವ್ಯ XI- ಶುಭ್ಮನ್ ಗಿಲ್, ಶಿಖರ್ ಧವನ್, ರಾಹುಲ್ ತ್ರಿಪಾಠಿ, ಕೆಎಲ್ ರಾಹುಲ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಅವೇಶ್ ಖಾನ್.