AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli vs Naveen-ul-Haq: ನಾನಲ್ಲ, ಜಗಳ ಶುರು ಮಾಡಿದ್ದೇ ಕೊಹ್ಲಿ ಎಂದ ನವೀನ್ ಉಲ್ ಹಕ್

Virat Kohli vs Naveen-ul-Haq: ನವೀನ್ ಉಲ್ ಹಕ್ ಬ್ಯಾಟಿಂಗ್ ಮಾಡುವ ವೇಳೆ ಶುರುವಾಗಿದ್ದ ಈ ಮಾತಿನ ಚಕಮಕಿ ಆ ಬಳಿಕ ಪಂದ್ಯ ಮುಗಿದ ಬಳಿಕ ಮುಂದುವರೆಯಿತು.

TV9 Web
| Edited By: |

Updated on: Jun 17, 2023 | 9:23 PM

Share
ಐಪಿಎಲ್ ಸೀಸನ್​ 16 ರಲ್ಲಿ ಅತೀ ಹೆಚ್ಚು ಸುದ್ದಿಯಾದ ವಿವಾದ ಎಂದರೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವಣ ಮಾತಿನ ಚಕಮಕಿ. ಲಕ್ನೋದಲ್ಲಿ ನಡೆದ ಪಂದ್ಯದ ವೇಳೆ ಕಿಂಗ್ ಕೊಹ್ಲಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್ ಉಲ್ ಹಕ್ ನಡುವೆ ವಾಗ್ವಾದ ಏರ್ಪಟ್ಟಿತ್ತು.

ಐಪಿಎಲ್ ಸೀಸನ್​ 16 ರಲ್ಲಿ ಅತೀ ಹೆಚ್ಚು ಸುದ್ದಿಯಾದ ವಿವಾದ ಎಂದರೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ನಡುವಣ ಮಾತಿನ ಚಕಮಕಿ. ಲಕ್ನೋದಲ್ಲಿ ನಡೆದ ಪಂದ್ಯದ ವೇಳೆ ಕಿಂಗ್ ಕೊಹ್ಲಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಆಟಗಾರ ನವೀನ್ ಉಲ್ ಹಕ್ ನಡುವೆ ವಾಗ್ವಾದ ಏರ್ಪಟ್ಟಿತ್ತು.

1 / 8
ನವೀನ್ ಉಲ್ ಹಕ್ ಬ್ಯಾಟಿಂಗ್ ಮಾಡುವ ವೇಳೆ ಶುರುವಾಗಿದ್ದ ಈ ಮಾತಿನ ಚಕಮಕಿ ಆ ಬಳಿಕ ಪಂದ್ಯ ಮುಗಿದ ಬಳಿಕ ಮುಂದುವರೆಯಿತು. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಈ ವಾಗ್ವಾದದಲ್ಲಿ ಸೇರ್ಪಡೆಯಾಗುವುದರೊಂದಿಗೆ ಪರಿಸ್ಥಿತಿ ಬಿಗಡಾಯಿಸಿತು.

ನವೀನ್ ಉಲ್ ಹಕ್ ಬ್ಯಾಟಿಂಗ್ ಮಾಡುವ ವೇಳೆ ಶುರುವಾಗಿದ್ದ ಈ ಮಾತಿನ ಚಕಮಕಿ ಆ ಬಳಿಕ ಪಂದ್ಯ ಮುಗಿದ ಬಳಿಕ ಮುಂದುವರೆಯಿತು. ಅದರಲ್ಲೂ ಲಕ್ನೋ ಸೂಪರ್ ಜೈಂಟ್ಸ್​ ತಂಡದ ಮೆಂಟರ್ ಗೌತಮ್ ಗಂಭೀರ್ ಕೂಡ ಈ ವಾಗ್ವಾದದಲ್ಲಿ ಸೇರ್ಪಡೆಯಾಗುವುದರೊಂದಿಗೆ ಪರಿಸ್ಥಿತಿ ಬಿಗಡಾಯಿಸಿತು.

2 / 8
ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್​ಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದರೆ, ನವೀನ್ ಉಲ್ ಹಕ್​ಗೆ ಪಂದ್ಯ ಶುಲ್ಕದ ಶೇ.50 ರಷ್ಟು ಫೈನ್ ಹಾಕಲಾಗಿತ್ತು. ಇದೀಗ ಈ ಘಟನೆಯ ಬಗ್ಗೆ ನವೀನ್ ಉಲ್ ಹಕ್ ಮನಬಿಚ್ಚಿ ಮಾತನಾಡಿದ್ದಾರೆ.

ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್​ಗೆ ಪಂದ್ಯ ಶುಲ್ಕದ ಶೇ.100 ರಷ್ಟು ದಂಡ ವಿಧಿಸಿದರೆ, ನವೀನ್ ಉಲ್ ಹಕ್​ಗೆ ಪಂದ್ಯ ಶುಲ್ಕದ ಶೇ.50 ರಷ್ಟು ಫೈನ್ ಹಾಕಲಾಗಿತ್ತು. ಇದೀಗ ಈ ಘಟನೆಯ ಬಗ್ಗೆ ನವೀನ್ ಉಲ್ ಹಕ್ ಮನಬಿಚ್ಚಿ ಮಾತನಾಡಿದ್ದಾರೆ.

3 / 8
ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನವೀನ್, ಐಪಿಎಲ್​ನಲ್ಲಿನ ಜಗಳಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ. ಅವರೇ ಜಗಳವನ್ನು ಶುರು ಮಾಡಿದ್ದರು. ಅಲ್ಲಿ ನನ್ನದೇನು ತಪ್ಪಿರಲಿಲ್ಲ ಎಂದು ಅಫ್ಘಾನ್ ಆಟಗಾರ ಹೇಳಿದ್ದಾರೆ.

ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನವೀನ್, ಐಪಿಎಲ್​ನಲ್ಲಿನ ಜಗಳಕ್ಕೆ ಮುಖ್ಯ ಕಾರಣ ವಿರಾಟ್ ಕೊಹ್ಲಿ. ಅವರೇ ಜಗಳವನ್ನು ಶುರು ಮಾಡಿದ್ದರು. ಅಲ್ಲಿ ನನ್ನದೇನು ತಪ್ಪಿರಲಿಲ್ಲ ಎಂದು ಅಫ್ಘಾನ್ ಆಟಗಾರ ಹೇಳಿದ್ದಾರೆ.

4 / 8
ಅಂದು ಮ್ಯಾಚ್ ಮುಗಿದ ಬಳಿಕ ಶೇಕ್ ಹ್ಯಾಂಡ್ ನೀಡುವಾದ ವಿರಾಟ್ ಕೊಹ್ಲಿಯೇ ಜಗಳ ಶುರು ಮಾಡಿದ್ದರು. ನೀವು ಬೇಕಿದ್ರೆ ಫೈನ್ ಹಾಕಿರುವುದನ್ನು ಗಮನಿಸಿ, ಆಗ ಜಗಳ ಪ್ರಾರಂಭ ಮಾಡಿರುವುದು ಯಾರು ಅಂತ ಗೊತ್ತಾಗುತ್ತೆ ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.

ಅಂದು ಮ್ಯಾಚ್ ಮುಗಿದ ಬಳಿಕ ಶೇಕ್ ಹ್ಯಾಂಡ್ ನೀಡುವಾದ ವಿರಾಟ್ ಕೊಹ್ಲಿಯೇ ಜಗಳ ಶುರು ಮಾಡಿದ್ದರು. ನೀವು ಬೇಕಿದ್ರೆ ಫೈನ್ ಹಾಕಿರುವುದನ್ನು ಗಮನಿಸಿ, ಆಗ ಜಗಳ ಪ್ರಾರಂಭ ಮಾಡಿರುವುದು ಯಾರು ಅಂತ ಗೊತ್ತಾಗುತ್ತೆ ಎಂದು ನವೀನ್ ಉಲ್ ಹಕ್ ಹೇಳಿದ್ದಾರೆ.

5 / 8
ಇನ್ನು ನಾನು ಸ್ಲೆಡ್ಜ್​ ಮಾಡಲ್ಲ. ಒಂದು ವೇಳೆ ಬ್ಯಾಟರ್​ಗಳನ್ನು ಕೆಣಕುವ ಪ್ರಯತ್ನ ಮಾಡಿದರೆ ಅದು ಬೌಲಿಂಗ್ ಮಾಡುವ ವೇಳೆ ಮಾತ್ರ. ಮ್ಯಾಚ್ ಮುಗಿದ ಬಳಿಕ ಯಾರೊಂದಿಗೂ ಜಗಳಕ್ಕಿಯಲ್ಲ. ಆದರೆ ಆರ್​ಸಿಬಿ ವಿರುದ್ಧದ ಆ ಪಂದ್ಯದ ವೇಳೆ ನಾನು ಸ್ಲೆಡ್ಜ್​ ಕೂಡ ಮಾಡಿರಲಿಲ್ಲ ಎಂದು ನವೀನ್ ಹೇಳಿದ್ದಾರೆ.

ಇನ್ನು ನಾನು ಸ್ಲೆಡ್ಜ್​ ಮಾಡಲ್ಲ. ಒಂದು ವೇಳೆ ಬ್ಯಾಟರ್​ಗಳನ್ನು ಕೆಣಕುವ ಪ್ರಯತ್ನ ಮಾಡಿದರೆ ಅದು ಬೌಲಿಂಗ್ ಮಾಡುವ ವೇಳೆ ಮಾತ್ರ. ಮ್ಯಾಚ್ ಮುಗಿದ ಬಳಿಕ ಯಾರೊಂದಿಗೂ ಜಗಳಕ್ಕಿಯಲ್ಲ. ಆದರೆ ಆರ್​ಸಿಬಿ ವಿರುದ್ಧದ ಆ ಪಂದ್ಯದ ವೇಳೆ ನಾನು ಸ್ಲೆಡ್ಜ್​ ಕೂಡ ಮಾಡಿರಲಿಲ್ಲ ಎಂದು ನವೀನ್ ಹೇಳಿದ್ದಾರೆ.

6 / 8
ಅಂದರೆ ನಾನು ಯಾವುದೇ ಸ್ಲೆಡ್ಜ್ ಮಾಡದಿದ್ದರೂ, ವಿರಾಟ್ ಕೊಹ್ಲಿಯೇ ನನ್ನೊಂದಿಗೆ ಜಗಳ ಶುರು ಹಚ್ಚಿಕೊಂಡಿದ್ದರು. ಪಂದ್ಯದ ಮುಗಿದ ಬಳಿಕ ಕೂಡ ನನ್ನ ಕೈ ಹಿಡಿದು ಮತ್ತೆ ವಾಗ್ವಾದಕ್ಕೆ ಇಳಿದಿದ್ದರು. ಇದರಲ್ಲಿ ನನ್ನ ತಪ್ಪೇನು ಇಲ್ಲ ಎಂಬ ವಾದವನ್ನು ನವೀನ್ ಉಲ್ ಹಕ್ ಮಂಡಿಸಿದ್ದಾರೆ.

ಅಂದರೆ ನಾನು ಯಾವುದೇ ಸ್ಲೆಡ್ಜ್ ಮಾಡದಿದ್ದರೂ, ವಿರಾಟ್ ಕೊಹ್ಲಿಯೇ ನನ್ನೊಂದಿಗೆ ಜಗಳ ಶುರು ಹಚ್ಚಿಕೊಂಡಿದ್ದರು. ಪಂದ್ಯದ ಮುಗಿದ ಬಳಿಕ ಕೂಡ ನನ್ನ ಕೈ ಹಿಡಿದು ಮತ್ತೆ ವಾಗ್ವಾದಕ್ಕೆ ಇಳಿದಿದ್ದರು. ಇದರಲ್ಲಿ ನನ್ನ ತಪ್ಪೇನು ಇಲ್ಲ ಎಂಬ ವಾದವನ್ನು ನವೀನ್ ಉಲ್ ಹಕ್ ಮಂಡಿಸಿದ್ದಾರೆ.

7 / 8
ಒಟ್ಟಿನಲ್ಲಿ ಐಪಿಎಲ್ ಸೀಸನ್ 16 ಮೂಲಕ ಹಲವು ಆಟಗಾರರು ವಿಭಿನ್ನ ದಾಖಲೆಗಳ ಮೂಲಕ ಗಮನ ಸೆಳೆದರೆ, ನವೀನ್ ಉಲ್ ಹಕ್ ಕಿಂಗ್ ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡು ಸಖತ್ ಫೇಮಸ್ ಆಗಿರುವುದಂತು ನಿಜ.

ಒಟ್ಟಿನಲ್ಲಿ ಐಪಿಎಲ್ ಸೀಸನ್ 16 ಮೂಲಕ ಹಲವು ಆಟಗಾರರು ವಿಭಿನ್ನ ದಾಖಲೆಗಳ ಮೂಲಕ ಗಮನ ಸೆಳೆದರೆ, ನವೀನ್ ಉಲ್ ಹಕ್ ಕಿಂಗ್ ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡು ಸಖತ್ ಫೇಮಸ್ ಆಗಿರುವುದಂತು ನಿಜ.

8 / 8
Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ