Asia Cup 2022: ಏಷ್ಯಾಕಪ್​ಗೆ ಟೀಂ ಇಂಡಿಯಾ ಹಂಗಾಮಿ ಕೋಚ್ ಆಗಿ ವಿವಿಎಸ್ ಲಕ್ಷ್ಮಣ್ ಆಯ್ಕೆ..!

| Updated By: ಪೃಥ್ವಿಶಂಕರ

Updated on: Aug 24, 2022 | 8:28 PM

Asia Cup 2022: ದ್ರಾವಿಡ್ ಏಷ್ಯಾಕಪ್​ನಿಂದ ಸಂಪೂರ್ಣವಾಗಿ ಹೊರಬಿದ್ದಿಲ್ಲ. ಅವರ ಕೊರೊನಾ ವರದಿಯು ನೆಗೆಟಿವ್ ಬಂದರೆ ಅವರು ಯುಎಇಯಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ.

1 / 5
ಆಗಸ್ಟ್ 27 ರಿಂದ ಆರಂಭವಾಗುತ್ತಿರುವ ಏಷ್ಯಾಕಪ್​ಗಾಗಿ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್​ ಅವರನ್ನು ಟೀಂ ಇಂಡಿಯಾದ ಕೋಚ್ ಆಗಿ ನೇಮಿಸಲಾಗಿದೆ.

ಆಗಸ್ಟ್ 27 ರಿಂದ ಆರಂಭವಾಗುತ್ತಿರುವ ಏಷ್ಯಾಕಪ್​ಗಾಗಿ ಟೀಂ ಇಂಡಿಯಾದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ರಾಹುಲ್ ದ್ರಾವಿಡ್ ಬದಲಿಗೆ ವಿವಿಎಸ್ ಲಕ್ಷ್ಮಣ್​ ಅವರನ್ನು ಟೀಂ ಇಂಡಿಯಾದ ಕೋಚ್ ಆಗಿ ನೇಮಿಸಲಾಗಿದೆ.

2 / 5
ಲಕ್ಷ್ಮಣ್ ಅವರನ್ನು ಭಾರತ ತಂಡದ ಹಂಗಾಮಿ ತರಬೇತುದಾರರನ್ನಾಗಿ ಆಯ್ಕೆ ಮಾಡಲಾಗಿದೆ. ವಾಸ್ತವವಾಗಿ, ಯುಎಇಗೆ ಹೊರಡುವ ಮೊದಲು, ಟೀಂ ಇಂಡಿಯಾ ಹಾಲಿ ಕೋಚ್ ದ್ರಾವಿಡ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಬಿಸಿಸಿಐ ಕೂಡ ದ್ರಾವಿಡ್ ತಂಡದೊಂದಿಗೆ ಯುಎಇಗೆ ಹೋಗುತ್ತಿಲ್ಲ ಎಂದು ಹೇಳಿತ್ತು.

ಲಕ್ಷ್ಮಣ್ ಅವರನ್ನು ಭಾರತ ತಂಡದ ಹಂಗಾಮಿ ತರಬೇತುದಾರರನ್ನಾಗಿ ಆಯ್ಕೆ ಮಾಡಲಾಗಿದೆ. ವಾಸ್ತವವಾಗಿ, ಯುಎಇಗೆ ಹೊರಡುವ ಮೊದಲು, ಟೀಂ ಇಂಡಿಯಾ ಹಾಲಿ ಕೋಚ್ ದ್ರಾವಿಡ್ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಬಿಸಿಸಿಐ ಕೂಡ ದ್ರಾವಿಡ್ ತಂಡದೊಂದಿಗೆ ಯುಎಇಗೆ ಹೋಗುತ್ತಿಲ್ಲ ಎಂದು ಹೇಳಿತ್ತು.

3 / 5
ದ್ರಾವಿಡ್ ಅನುಪಸ್ಥಿತಿಯಲ್ಲಿ, ಲಕ್ಷ್ಮಣ್ ಸಹ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿ ಭಾರತ ODI ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿತು.

ದ್ರಾವಿಡ್ ಅನುಪಸ್ಥಿತಿಯಲ್ಲಿ, ಲಕ್ಷ್ಮಣ್ ಸಹ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲಿ ಭಾರತ ODI ಸರಣಿಯಲ್ಲಿ ಕ್ಲೀನ್ ಸ್ವೀಪ್ ಮಾಡಿತು.

4 / 5
ಆದರೆ, ದ್ರಾವಿಡ್ ಏಷ್ಯಾಕಪ್​ನಿಂದ ಸಂಪೂರ್ಣವಾಗಿ ಹೊರಬಿದ್ದಿಲ್ಲ. ಅವರ ಕೊರೊನಾ ವರದಿಯು ನೆಗೆಟಿವ್ ಬಂದರೆ ಅವರು ಯುಎಇಯಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ.

ಆದರೆ, ದ್ರಾವಿಡ್ ಏಷ್ಯಾಕಪ್​ನಿಂದ ಸಂಪೂರ್ಣವಾಗಿ ಹೊರಬಿದ್ದಿಲ್ಲ. ಅವರ ಕೊರೊನಾ ವರದಿಯು ನೆಗೆಟಿವ್ ಬಂದರೆ ಅವರು ಯುಎಇಯಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ.

5 / 5
ಹೀಗಾಗಿ ಉಪನಾಯಕ ಕೆಎಲ್ ರಾಹುಲ್, ದೀಪಕ್ ಹೂಡಾ, ಅವೇಶ್ ಖಾನ್ ಅವರೊಂದಿಗೆ ಲಕ್ಷ್ಮಣ್ ಹರಾರೆಯಿಂದ ದುಬೈಗೆ ಹಾರಿದ್ದಾರೆ.

ಹೀಗಾಗಿ ಉಪನಾಯಕ ಕೆಎಲ್ ರಾಹುಲ್, ದೀಪಕ್ ಹೂಡಾ, ಅವೇಶ್ ಖಾನ್ ಅವರೊಂದಿಗೆ ಲಕ್ಷ್ಮಣ್ ಹರಾರೆಯಿಂದ ದುಬೈಗೆ ಹಾರಿದ್ದಾರೆ.

Published On - 7:44 pm, Wed, 24 August 22