ಗದಗದಲ್ಲಿ ಧೂಳೆಬ್ಬಿಸಿದ ಎತ್ತುಗಳ ಮಿಂಚಿನ ಓಟ ಹೇಗಿತ್ತು ನೋಡಿ!

Edited By:

Updated on: Apr 17, 2026 | 2:35 PM

ಗದಗ ಜಿಲ್ಲೆಯ ಡಂಬಳದಲ್ಲಿ ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಖಾಲಿ ಗಾಡಾ ಓಟ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. ರೈತರು ಆಯೋಜಿಸಿದ ಈ ಕ್ರೀಡೆ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸಿತು. ವಿವಿಧ ಜಿಲ್ಲೆಗಳಿಂದ ಬಂದ ಎತ್ತುಗಳು ಶರವೇಗದಲ್ಲಿ ಓಡಿ ಗಮನ ಸೆಳೆದವು. ಸಾವಿರಾರು ಜನ ಸೇರಿ ಕ್ರೀಡೆಗೆ ಹುಮ್ಮಸ್ಸು ತುಂಬಿದರು. ಎತ್ತುಗಳ ಮಿಂಚಿನ ಓಟದ ಝಲಕ್ ಇಲ್ಲಿದೆ ನೋಡಿ.

1 / 6
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಖಾಲಿ ಗಾಡಾ ಓಟ ಸ್ಪರ್ಧೆ ಭರ್ಜರಿಯಾಗಿ ನಡೆಯಿತು. ಗ್ರಾಮದ ರೈತ ಬಾಂಧವರು ಸ್ವಯಂಪ್ರೇರಿತವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು, ಇದು ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾಗಿತ್ತು. ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ಎತ್ತುಗಳ ಜೋಡಿಗಳು ಸ್ಪರ್ಧೆಗೆ ಮತ್ತಷ್ಟು ಮೆರುಗು ನೀಡಿದವು.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಖಾಲಿ ಗಾಡಾ ಓಟ ಸ್ಪರ್ಧೆ ಭರ್ಜರಿಯಾಗಿ ನಡೆಯಿತು. ಗ್ರಾಮದ ರೈತ ಬಾಂಧವರು ಸ್ವಯಂಪ್ರೇರಿತವಾಗಿ ಈ ಕಾರ್ಯಕ್ರಮ ಆಯೋಜಿಸಿದ್ದು, ಇದು ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾಗಿತ್ತು. ವಿವಿಧ ಜಿಲ್ಲೆಗಳಿಂದ ಭಾಗವಹಿಸಿದ ಎತ್ತುಗಳ ಜೋಡಿಗಳು ಸ್ಪರ್ಧೆಗೆ ಮತ್ತಷ್ಟು ಮೆರುಗು ನೀಡಿದವು.

2 / 6
ಅಖಾಡಕ್ಕೆ ಎಂಟ್ರಿ ಕೊಟ್ಟ ಎತ್ತುಗಳ ಗಂಭೀರ ನಡೆ ಮತ್ತು ಓಟ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಕಟ್ ಮಸ್ತಾಗಿ ಬೆಳೆಸಿದ ಎತ್ತುಗಳು ಶರವೇಗದಲ್ಲಿ ಓಡಿ ಧೂಳೆಬ್ಬಿಸಿದ ದೃಶ್ಯಗಳು ವಿಶೇಷವಾಗಿದ್ದವು. ಎತ್ತುಗಳ ದೈಹಿಕ ಸಾಮರ್ಥ್ಯ ಹಾಗೂ ತರಬೇತಿ ಸ್ಪಷ್ಟವಾಗಿ ಕಾಣಿಸಿತು.

ಅಖಾಡಕ್ಕೆ ಎಂಟ್ರಿ ಕೊಟ್ಟ ಎತ್ತುಗಳ ಗಂಭೀರ ನಡೆ ಮತ್ತು ಓಟ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು. ಕಟ್ ಮಸ್ತಾಗಿ ಬೆಳೆಸಿದ ಎತ್ತುಗಳು ಶರವೇಗದಲ್ಲಿ ಓಡಿ ಧೂಳೆಬ್ಬಿಸಿದ ದೃಶ್ಯಗಳು ವಿಶೇಷವಾಗಿದ್ದವು. ಎತ್ತುಗಳ ದೈಹಿಕ ಸಾಮರ್ಥ್ಯ ಹಾಗೂ ತರಬೇತಿ ಸ್ಪಷ್ಟವಾಗಿ ಕಾಣಿಸಿತು.

3 / 6
ಒಂದು ನಿಮಿಷದಲ್ಲಿ ಹೆಚ್ಚು ದೂರ ಓಡುವ ಜೋಡಿಯನ್ನು ವಿಜೇತರೆಂದು ಘೋಷಿಸಲಾಯಿತು. ಪ್ರಥಮ ಬಹುಮಾನ 51 ಸಾವಿರ, ದ್ವಿತೀಯ 41 ಸಾವಿರ ಮತ್ತು ತೃತೀಯ 31 ಸಾವಿರ ರೂಪಾಯಿ ಇತ್ತು. ಒಟ್ಟು 9 ಬಹುಮಾನಗಳನ್ನು ನೀಡಲಾಗಿದ್ದು, ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು.

ಒಂದು ನಿಮಿಷದಲ್ಲಿ ಹೆಚ್ಚು ದೂರ ಓಡುವ ಜೋಡಿಯನ್ನು ವಿಜೇತರೆಂದು ಘೋಷಿಸಲಾಯಿತು. ಪ್ರಥಮ ಬಹುಮಾನ 51 ಸಾವಿರ, ದ್ವಿತೀಯ 41 ಸಾವಿರ ಮತ್ತು ತೃತೀಯ 31 ಸಾವಿರ ರೂಪಾಯಿ ಇತ್ತು. ಒಟ್ಟು 9 ಬಹುಮಾನಗಳನ್ನು ನೀಡಲಾಗಿದ್ದು, ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು.

4 / 6
ಎತ್ತುಗಳ ಮಾಲೀಕರು ವಿಶೇಷ ಆಹಾರಗಳಾದ ಹುರುಳಿ, ಜೋಳದ ನುಚ್ಚು, ಹಿಂಡಿ ನೀಡಿ ಎತ್ತುಗಳನ್ನು ಸ್ಪರ್ಧೆಗೆ ತಯಾರಿಸುತ್ತಾರೆ. ಕೃಷಿ ಕೆಲಸದ ಜೊತೆಗೆ ಈ ಕ್ರೀಡೆಗೆ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಇದರಿಂದ ರೈತರ ಅಭಿರುಚಿ ಮತ್ತು ಕಾಳಜಿ ಸ್ಪಷ್ಟವಾಗುತ್ತದೆ.

ಎತ್ತುಗಳ ಮಾಲೀಕರು ವಿಶೇಷ ಆಹಾರಗಳಾದ ಹುರುಳಿ, ಜೋಳದ ನುಚ್ಚು, ಹಿಂಡಿ ನೀಡಿ ಎತ್ತುಗಳನ್ನು ಸ್ಪರ್ಧೆಗೆ ತಯಾರಿಸುತ್ತಾರೆ. ಕೃಷಿ ಕೆಲಸದ ಜೊತೆಗೆ ಈ ಕ್ರೀಡೆಗೆ ಹೆಚ್ಚಿನ ಸಮಯ ಮೀಸಲಿಡುತ್ತಾರೆ. ಇದರಿಂದ ರೈತರ ಅಭಿರುಚಿ ಮತ್ತು ಕಾಳಜಿ ಸ್ಪಷ್ಟವಾಗುತ್ತದೆ.

5 / 6
ಸಾವಿರಾರು ಜನರು ಬಂಡಿ ಓಟ ನೋಡಲು ಆಗಮಿಸಿ ಕೇಕೆ, ಸಿಳ್ಳೆ, ಚಪ್ಪಾಳೆಗಳಿಂದ ಎತ್ತುಗಳಿಗೆ ಹುಮ್ಮಸ್ಸು ತುಂಬಿದರು. ಅಭಿಮಾನಿಗಳು ಎತ್ತುಗಳ ಜೊತೆಗೆ ಓಡಿ ಉತ್ಸಾಹ ಹೆಚ್ಚಿಸಿದರು. ಈ ಸಂಭ್ರಮ ಗ್ರಾಮೀಣ ಕ್ರೀಡೆಗಳ ಜೀವಂತಿಕೆಯನ್ನು ತೋರಿಸಿತು.

ಸಾವಿರಾರು ಜನರು ಬಂಡಿ ಓಟ ನೋಡಲು ಆಗಮಿಸಿ ಕೇಕೆ, ಸಿಳ್ಳೆ, ಚಪ್ಪಾಳೆಗಳಿಂದ ಎತ್ತುಗಳಿಗೆ ಹುಮ್ಮಸ್ಸು ತುಂಬಿದರು. ಅಭಿಮಾನಿಗಳು ಎತ್ತುಗಳ ಜೊತೆಗೆ ಓಡಿ ಉತ್ಸಾಹ ಹೆಚ್ಚಿಸಿದರು. ಈ ಸಂಭ್ರಮ ಗ್ರಾಮೀಣ ಕ್ರೀಡೆಗಳ ಜೀವಂತಿಕೆಯನ್ನು ತೋರಿಸಿತು.

6 / 6
ಇಂತಹ ಸ್ಪರ್ಧೆಗಳು ನಶಿಸಿಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಯುವಜನತೆಗೆ ಈ ಕ್ರೀಡೆಗಳನ್ನು ಪರಿಚಯಿಸುವ ಮೂಲಕ ಪರಂಪರೆ ಮುಂದುವರಿಯುತ್ತಿದೆ. ಡಂಬಳದ ಈ ಕಾರ್ಯಕ್ರಮ ಗ್ರಾಮೀಣ ಸಂಸ್ಕೃತಿಯ ಉಳಿವಿಗೆ ಉತ್ತಮ ಉದಾಹರಣೆಯಾಗಿದೆ.

ಇಂತಹ ಸ್ಪರ್ಧೆಗಳು ನಶಿಸಿಹೋಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಯುವಜನತೆಗೆ ಈ ಕ್ರೀಡೆಗಳನ್ನು ಪರಿಚಯಿಸುವ ಮೂಲಕ ಪರಂಪರೆ ಮುಂದುವರಿಯುತ್ತಿದೆ. ಡಂಬಳದ ಈ ಕಾರ್ಯಕ್ರಮ ಗ್ರಾಮೀಣ ಸಂಸ್ಕೃತಿಯ ಉಳಿವಿಗೆ ಉತ್ತಮ ಉದಾಹರಣೆಯಾಗಿದೆ.

Follow Us