ಸಿಸಿಎಲ್​ನಲ್ಲಿ ರನ್ ಹೊಳೆ ಹರಿಸಿದ ಡಾರ್ಲಿಂಗ್ ಕೃಷ್ಣಗೆ ವಿಶೇಷ ಗೌರವ

Updated on: Mar 03, 2025 | 2:35 PM

ಕನ್ನಡದ ನಟ ಡಾರ್ಲಿಂಗ್ ಕೃಷ್ಣ ಅವರು ಈ ಬಾರಿಯ ಸಿಸಿಎಲ್ನಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಅವರ ಬ್ಯಾಟ್ನಿಂದ ಈ ಮೊದಲು ಶತಕ ಕೂಡ ಬಂದಿತ್ತು. ಈ ಕಾರಣಕ್ಕೆ ಅವರಿಗೆ ಸಿಸಿಎಲ್ನಲ್ಲಿ ವಿಶೇಷ ಗೌರವ ಸೂಚಿಸಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ .

1 / 5
ನಟ ಡಾರ್ಲಿಂಗ್ ಕೃಷ್ಣ ಅವರು ಪ್ರತಿ ಬಾರಿ ಸಿಸಿಎಲ್​ನಲ್ಲಿ ಮಿಂಚುತ್ತಾರೆ. ಈ ಬಾರಿಯೂ ಅವರು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಆಸರೆ ಆಗಿ ನಿಂತಿದ್ದಾರೆ. ಈಗ ಸಿಸಿಎಲ್ ಪೂರ್ಣಗೊಂಡಿದ್ದು ಅವರಿಗೆ ವಿಶೇಷ ಗೌರವ ಸಿಕ್ಕಿದೆ.

ನಟ ಡಾರ್ಲಿಂಗ್ ಕೃಷ್ಣ ಅವರು ಪ್ರತಿ ಬಾರಿ ಸಿಸಿಎಲ್​ನಲ್ಲಿ ಮಿಂಚುತ್ತಾರೆ. ಈ ಬಾರಿಯೂ ಅವರು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಆಸರೆ ಆಗಿ ನಿಂತಿದ್ದಾರೆ. ಈಗ ಸಿಸಿಎಲ್ ಪೂರ್ಣಗೊಂಡಿದ್ದು ಅವರಿಗೆ ವಿಶೇಷ ಗೌರವ ಸಿಕ್ಕಿದೆ.

2 / 5

ಸಿಸಿಎಲ್ ಭಾನುವಾರ ಪೂರ್ಣಗೊಂಡಿದೆ. ಕಿಚ್ಚನ ತಂಡ ಸೆಮಿಫೈನಲ್​ನಲ್ಲೇ ಸೋತ್ತಿದ್ದರಿಂದ ಕಪ್ ಗೆಲ್ಲುವ ಆಸೆ ಕೊನೆ ಆಯಿತು. ಸಿಸಿಎಲ್​ನವರು ಡಾರ್ಲಿಂಗ್ ಕೃಷ್ಣ ಅವರ ಬ್ಯಾಟಿಂಗ್​ನ ಗಮನಿಸಿ ಗೌರವ ನೀಡಿದ್ದಾರೆ.

3 / 5

ಡಾರ್ಲಿಂಗ್ ಕೃಷ್ಣ ಅವರು ಈ ಬಾರಿ ಸಿಸಿಲ್​ನಲ್ಲಿ ಕರ್ನಾಟಕ ಬುಲ್ಡೋಜರ್ಸ್​ ಪರ ಬ್ಯಾಟ್ ಬೀಸಿದರು. ಅವರಿಗೆ ‘ಬ್ಯಾಟರ್ ಆಫ್ ದಿ ಟೂರ್ನಮೆಂಟ್’ ಪ್ರಶಸ್ತಿ ಸಿಕ್ಕಿದೆ. ಈ ಅವಾರ್ಡ್ ಪಡೆದು ಅವರು ಖುಷಿಪಟ್ಟಿದ್ದಾರೆ.

4 / 5

ಡಾರ್ಲಿಂಗ್ ಕೃಷ್ಣ ಅವರು ಈ ಬಾರಿ ಶತಕ ಕೂಡ ಬಾರಿಸಿದ್ದರು. ಹಲವು ಪ್ರಮುಖ ಪಂದ್ಯಗಳಲ್ಲಿ ಅವರಿಂದ ರನ್ ಹೊಳೆಯೇ ಹರಿದಿದೆ. ಈ ಮೂಲಕ ಅವರು ತಂಡದ ಪ್ರಮುಖ ಬ್ಯಾಟರ್ ಎನಿಸಿಕೊಂಡಿದ್ದಾರೆ.

5 / 5

ಡಾರ್ಲಿಂಗ್ ಕೃಷ್ಣ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಮಿಲನಾ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಅವರಿಗೆ ಮಗು ಕೂಡ ಜನಿಸಿದೆ.

Loading...
Unable to load recommendations.
Follow Us