AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗರೆ: ಅಣಜಿ ಕೆರೆ ಹೊನ್ನಮ್ಮ ಜಾತ್ರೆ ಸಂಭ್ರಮದ ಕ್ಷಣಗಳು

ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಕೆರೆ ಹೊನ್ನಮ್ಮ ಜಾತ್ರೆ ಸಂಭ್ರಮದಿಂದ ನಡೆಯಿತು. ಕೆರೆ ಸುತ್ತಮುತ್ತಲಿನ 13 ಹಳ್ಳಿಗಳು ಈ ಸಂಭ್ರಮದಲ್ಲಿ ಮಿಂದೆದ್ದರು.

TV9 Web
| Updated By: Rakesh Nayak Manchi|

Updated on:Nov 13, 2022 | 10:10 AM

Share
ದಾವಣಗೆರೆ ತಾಲೂಕಿನ ಅಣಜಿ ಗ್ರಾಮದ ಕೆರೆ 43 ವರ್ಷಗಳ ನಂತರ ಭರ್ತಿಯಾಗಿ ಕೋಡಿಬಿದ್ದಿದೆ. ಹೀಗಾಗಿ ಕೆರೆ ಸುತ್ತಮುತ್ತಲಿನ 13 ಹಳ್ಳಿ ಜನರು ಶನಿವಾರ ಕೆರೆ ಹೊನ್ನಮ್ಮ ಜಾತ್ರೆ ಆಚರಿಸಿದ್ದಾರೆ‌. ಕೆರೆ ಹೊನ್ನಮ್ಮ ಜಾತ್ರೆ ಕಾರ್ಯಕ್ರಮಕ್ಕೆ ಹತ್ತಾರು ಗ್ರಾಮದ ಸಹಸ್ರಾರು ಜನ ಸಾಕ್ಷಿಯಾಗಿದ್ದಾರೆ.

Davanagere Anaji Kere Honnamma Fair Celebrations Davanagere news in kannada

1 / 7
ಕೆರೆ ಭರ್ತಿಗೊಂಡ ಹಿನ್ನೆಲೆ ಕೆರೆಯಾಗಳಹಳ್ಳಿ ಸೇರಿದಂತೆ 13 ಗ್ರಾಮಗಳ ಜನತೆ ಅಣಜಿ ಕೆರೆ ಬಾಗಿನ ಅರ್ಪಿಸಿದ್ದಾರೆ‌. ಪ್ರತಿವರ್ಷದಂತೆ ಕೆರೆ ದಂಡೆಯಲ್ಲಿ ಕೆರೆ ಹೊನ್ನಮ್ಮ ಜಾತ್ರೆ ಆಚರಿಸುವುದು ಸಂಪ್ರದಾಯ. ಬೆಳಿಗ್ಗೆಯಿಂದಲೇ ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ಈ ಭಾಗದ ಜನಪ್ರತಿನಿಧಿಗಳು ಗ್ರಾಮ ದೇವತೆಗಳ ಸಮ್ಮುಖದಲ್ಲಿ‌ ಕೆರೆಗೆ ಹಾಲು ತುಪ್ಪ ಬಿಟ್ಟು ಬಾಗಿನ ಅರ್ಪಿಸಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

Davanagere Anaji Kere Honnamma Fair Celebrations Davanagere news in kannada

2 / 7
Davanagere Anaji Kere Honnamma Fair Celebrations Davanagere news in kannada

ಕೆರೆಯಾಗಳ ಹಳ್ಳಿಯಿಂದ ಕೊಡದಲ್ಲಿ ಹಾಲು ತುಪ್ಪ ತಂದು ಅಣಜಿ ಗ್ರಾಮದ ಕೆರೆಗೆ ಅರ್ಪಿಸುವುದಕ್ಕೆ ಪುರಾಣ ಕಲ್ಪನೆ ಇದೆ. ಕೆರೆಯಾಗಳ ಹಳ್ಳಿ ಹಾಗೂ ಅಣಜಿ ಗ್ರಾಮಕ್ಕೆ ಗಂಡು ಹೆಣ್ಣಿನ ನಂಟು. ಮದುವೆ ಸಂದರ್ಭದ ಎಲ್ಲಾ ಸಂಪ್ರದಾಯಗಳನ್ನು ಅಣಜಿ ಗ್ರಾಮಸ್ಥರು ಆಚರಣೆ ಮಾಡುತ್ತಾರೆ.

3 / 7
Davanagere Anaji Kere Honnamma Fair Celebrations Davanagere news in kannada

ಅಣಜಿ ಗ್ರಾಮ ಸೇರಿದಂತೆ ಹತ್ತಾರು ಹಳ್ಳಿಗಳಲ್ಲಿ ಅಣಜಿ ಕೆರೆ ಜೀವನಾಡಿ. ಅಣಜಿ ಕೆರೆಯಲ್ಲಿ ನೀರು ಇತ್ತಂದರೆ ಈ ಭಾಗದಲ್ಲಿ ಸಮೃದ್ಧಿ ಇರುತ್ತದೆ. ಹಾಗಾಗಿ ಕೆರೆ ತುಂಬಿದ ಸಂದರ್ಭದಲ್ಲಿ ಬಾಗಿನ ಅರ್ಪಿಸಿ ಬಂದಂತಹ ಸಾವಿರಾರು ಜನರಿಗೆ ಊಟ ಹಾಕಿಸುವುದು ಸಂಪ್ರದಾಯ.

4 / 7
Davanagere Anaji Kere Honnamma Fair Celebrations Davanagere news in kannada

ಜಾತ್ರಾ ಮಹೋತ್ಸವದಲ್ಲಿ ಹತ್ತಾರು ಗ್ರಾಮ ದೇವತೆಗಳನ್ನು ಕರೆಸಿ ಗಂಗಾ ಪೂಜೆ ಮಾಡಿ ಉತ್ಸವ ಮಾಡಿ ಪೂಜೆ ಪುನಸ್ಕಾರಗಳನ್ನು ಸಲ್ಲಿಸುವುದು ವಾಡಿಕೆಯಾಗಿದೆ.

5 / 7
Davanagere Anaji Kere Honnamma Fair Celebrations Davanagere news in kannada

ಸದ್ಯ ಚುನಾವಣೆ ಸಂದರ್ಭವಾಗಿರುವುದರಿಂದ ಇದೇ ಬಾಗಿನ ಕಾರ್ಯಕ್ರಮದ ಲಾಭ ಪಡೆಯಲು ರಾಜಕಾರಣಿಗಳ ದಂಡೆ ಅಣಜಿ ಗ್ರಾಮಕ್ಕೆ ಆಗಮಿಸಿದೆ. ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳು ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಲು ಹವಣಿಸಿದ್ದಾರೆ. ಕಾಂಗ್ರೆಸ್ ಮುಖಂಡ ಬಸವಂತಪ್ಪ, ಬಿಜೆಪಿ ಮುಖಂಡರುಗಳಾದ ಮಾಜಿ ಶಾಸಕ ಬಸವರಾಜ್ ನಾಯ್ಕ್, ಇನ್ನೊಬ್ಬ ಬಿಜೆಪಿ ಟಿಕೇಟ್ ಆಕಾಂಕ್ಷಿ ಶ್ಯಾಮ್, ವಾಗೇಶ್ ಸ್ವಾಮಿ ಸೇರಿದಂತೆ ಹಲವರು ಬಾಗಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

6 / 7
Davanagere Anaji Kere Honnamma Fair Celebrations Davanagere news in kannada

ಕೆರೆ ದಂಡೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾಪ್ರಕಾರಗಳು ಬಾಗಿನ ಕಾರ್ಯಕ್ರಮಕ್ಕೆ ಹಬ್ಬದ ರಂಗು ನೀಡಿವೆ. ಮಹಿಳೆಯರು ಮಕ್ಕಳು ಹೊಸ ಬಟ್ಟೆ ತೊಟ್ಟು ಕೆರೆ ದಂಡೆಯ ಉತ್ಸವದಲ್ಲಿ ಪಾಲ್ಗೊಂಡು ಇಡೀ ದಿನ ಸಂಭ್ರಮ ಪಟ್ಟಿದ್ದಾರೆ. 43 ವರ್ಷಗಳ ನಂತರ ಅತಿವಿಸ್ತಾರದ ಕೆರೆ ತುಂಬಿದ್ದಕ್ಕೆ ಸುತ್ತಮುತ್ತಲಿನ ಗ್ರಾಮಗಳ ಮುಖದಲ್ಲಿ ನೆಮ್ಮದಿ ಸಂತೋಷ ಮೂಡಿ ಕೆರೆ ಹೊನ್ನಮ್ಮ ನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. (ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ)

7 / 7

Published On - 10:10 am, Sun, 13 November 22

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!