- Kannada News Photo gallery Drone attraction in agricultural mela in Vijaypur, construction of Ram mandir in flowers
ಕೃಷಿ ಮೇಳದಲ್ಲಿ ಡ್ರೋನ್ ಆಕರ್ಷಣೆ, ಪುಷ್ಪಗಳಲ್ಲಿ ರಾಮ ಮಂದಿರ ನಿರ್ಮಾಣ, ಎಲ್ಲಿ?
ವಿಜಯಪುರ ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಈ ಕೃಷಿ ಮೇಳ ನಡೆಯಲಿದೆ. ಫಲ ಪುಷ್ಟ ಪ್ರದರ್ಶನ ಎಲ್ಲರನ್ನು ಸೆಳೆಯುತ್ತಿದೆ. ಹತ್ತಾರು ಪುಷ್ಪಗಳಲ್ಲಿ ಶ್ರೀರಾಮ ಮಂದಿರ ಚಿತ್ರ ಬಿಡಿಸಿದ್ದು ಎಲ್ಲರ ಗಮನ ಸೆಳೆದಿದೆ. ಬಗೆ ಬಗೆಯ ಹೂವುಗಳಲ್ಲಿ ವಿಶ್ವವಿಖ್ಯಾತ ಗೋಲಗುಮ್ಮಟದ ಪ್ರತಿಕೃತಿ ಹಾಗೂ ಲಿಂಬೆ ಹಣ್ಣಿನಲ್ಲಿ ಅರಳಿದ ಶಿವಲಿಂಗ ಪ್ರಮುಖ ಆಕರ್ಷಕವಾಗಿದೆ.
Updated on: Jan 22, 2024 | 12:24 PM

ಕಳೆದೊಂದು ವಾರ ಹತ್ತು ದಿನದಿಂದ ನಗರದಲ್ಲಿ ವಿಜಯಪುರ ಶ್ರೀ ಸಿದ್ದೇಶ್ವರ ದೇವಸ್ಥಾನ ಜಾತ್ರೆಯ ಸಡಗರ ಸಂಭ್ರಮ ಮನೆ ಮಾಡಿದೆ. ಜಾತ್ರೆಯಲ್ಲಿ ಮಿಂದೆದ್ದ ಜಿಲ್ಲೆಯ ಜನರಿಗೆ ಈಗಾ ಕೃಷಿ ಮೇಳದ ಆಯೋಜನೆ ಡಬಲ್ ಧಮಾಕಾ ಎಂಬಂತಾಗಿದೆ. ಕಾರಣ ಈ ವರ್ಷ ಭೀಕರ ಬರ ಜಿಲ್ಲೆಯಲ್ಲಿ ಮನೆ ಮಾಡಿದೆ. ಬರದ ಮಧ್ಯೆಯೇ ಕೃಷಿ ಮೇಳ ಆಯೋಜನೆ ಮಾಡಿದ್ದು ಜಿಲ್ಲೆಯ ರೈತರಿಗೆ ಸಂತಸ ತಂದಿದೆ. ಬರವನ್ನು ಮರೆ ಮಾಚುವಂತೆ ಕೃಷಿ ಮೇಳ ಆಯೋಜನೆ ಮಾಡಲಾಗಿದೆ. ನಗರದ ಹೊರ ಭಾಗದಲ್ಲಿರೋ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜನೆಗೊಂಡ ಮೇಳಕ್ಕೆ ಜನಸಾಗರವೇ ಹರಿದು ಬಂದಿದೆ.

ಮೂರು ದಿನಗಳ ಕಾಲ ಈ ಕೃಷಿ ಮೇಳ ನಡೆಯಲಿದೆ. ಕೃಷಿ ಮೇಳದಲ್ಲಿ ಪ್ರಮುಖವಾಗಿ ಫಲ ಪುಷ್ಟ ಪ್ರದರ್ಶನ ಎಲ್ಲರನ್ನು ಸೆಳೆಯಿತು. ಹತ್ತಾರು ಪುಷ್ಪಗಳಲ್ಲಿ ಶ್ರೀರಾಮ ಮಂದಿರ ಚಿತ್ರ ಬಿಡಿಸಿದ್ದು ಎಲ್ಲರ ಗಮನ ಸೆಳೆಯಿತು.

ವಿಜಯಪುರ ಜಿಲ್ಲೆಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕೃಷಿ ಮೇಳ. ಬರದ ಮಧ್ಯೆ ಕೃಷಿ ಮೇಳೆ ಆಯೋಜನೆಗೆ ರೈತರ ಸಂತಸ. ಗಮನ ಸೆಳೆಯುತ್ತಿರೋ ಫಲ ಪುಷ್ಟ ಪ್ರದರ್ಶನ. ಹೂವುಗಳಲ್ಲಿ ಅರಳಿದ ರಾಮ ಮಂದಿರ ಗೋಲಗುಮ್ಮಟ. ನಿಂಬೆ ಹಣ್ಣಲ್ಲಿ ಅರಳಿದ ಶಿವಲಿಂಗ. ಡ್ರೋನ್ ಮೂಲಕ ಸರ್ವೇ ಹಾಗೂ ರಾಸಾಯನಿಕ ಸಿಂಪರಣೆ... ವಿಜಯಪುರ ನಗರದ ಹೊರ ಭಾಗದಲ್ಲಿರೋ ಕೃಷಿ ಮಹಾವಿದ್ಯಾಲಯದ ಆವಣದಲ್ಲಿ ಕೃಷಿ ಮೇಳೆ ಆಯೋಜಿಸಲಾಗಿದೆ. ಕೃಷಿ ಮೇಳಕ್ಕೆ ಶಾಸಕರಾದ ವಿಠಲ ಕಟಕದೊಂಡ ರಾಜೂಗೌಡ ಪಾಟೀಲ್ ಚಾಲನೆ ನೀಡಿದರು.

ಬಗೆ ಬಗೆಯ ಹೂವುಗಳಲ್ಲಿ ವಿಶ್ವವಿಖ್ಯಾತ ಗೋಲಗುಮ್ಮಟದ ಪ್ರತಿಕೃತಿ ಹಾಗೂ ಲಿಂಬೆ ಹಣ್ಣಿನಲ್ಲಿ ಅರಳಿದ ಶಿವಲಿಂಗ ಪ್ರಮುಖ ಆಕರ್ಷಣೆಯಾಗಿದ್ದವು. ಕಲ್ಲಂಗಡಿಗಳಲ್ಲಿನ ಕಲೆಗಳು, ಔಷಧಿಯುಕ್ತ ಹಣ್ಣುಗಳು, ತರಕಾರಿಗಳು ಪ್ರದರ್ಶನಲ್ಲಿ ಕಂಡು ಬಂದವು. ಸರದಿ ಸಾಲಿನಲ್ಲಿ ಬಂದ ಜನರು ಫಲಪುಷ್ಪ ಪ್ರದರ್ಶನ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನು ರೈತರಿಗೆ ಬೇಕಾಗುವ ಕೃಷಿ ಸಲಕರಣೆಗಳು, ಯಂತ್ರೋಪಕರಗಳ ಪ್ರದರ್ಶನ ಹಾಗೂ ಮಾರಾಟ ಭರದಿಂದ ಸಾಗಿತ್ತು. ರೈತರು ತಮಗೆ ಅನಕೂಲವಾಗುವ ಹಾಗೂ ಅವಶ್ಯವಿರೋ ಸಲಕರಣಗೆಳ ಯಂತ್ರೋಪಕರಣಗಳ ಬಗ್ಗೆ ವಿಚಾರಣೆ ನಡೆಸಿ ಖರೀದಿಯಲ್ಲಿ ನಿರತರಾಗಿದ್ದರು. ಇನ್ನೂ 2 ದಿನ ಕೃಷಿ ಮೇಳ ನಡೆಯುತ್ತಿದ್ದು ಜಿಲ್ಲೆಯ ಜನರು ರೈತರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಕೃಷಿ ಮೇಳದ ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.

ಇದರಾಚೆ ಸಾವಯವ ಕೃಷಿ ಮಾದರಿಗಳು, ನೀರು ಕೋಯ್ಲು ಸೇರಿದಂತೆ ಇತರೆ ಕೃಷಿ ತಂತ್ರಜ್ಞಾನಗಳು ಕೃಷಿ ಮೇಳದಲ್ಲಿ ಕಂಡು ಬಂದವು. ಇನ್ನು ಕೃಷಿ ಮೇಳಕ್ಕೆ ಎತ್ತಿನ ಗಾಡಿಗಳಲ್ಲಿ ರೈತರು ಬಂದಿದ್ದು ವಿಶೇಷವಾಗಿತ್ತು. ಬರಗಾಲದಲ್ಲಿಯೂ ಕೃಷಿ ಮೇಳೆ ಆಯೋಜನೆ ಮಾಡಿದ್ದು ಖುಷಿಯ ವಿಚಾರ. ಉತ್ತಮವಾಗಿ ಇಲ್ಲಿ ಎಲ್ಲವನ್ನೂ ಆಯೋಜನೆ ಮಾಡಿದ್ದಾರೆಂದು ಎತ್ತಿನ ಬಂಡಿಗಳನ್ನು ತಂದ ರೈತರು ಹೇಳಿದ್ದಾರೆ.

ಅಷ್ಟೇ ಅಲ್ಲ ಪ್ರವಾಹ ಹಾಗೂ ಬರಗಾಲದಲ್ಲಿಯೂ ಎಷ್ಟೆಲ್ಲ ಹಾನಿಯಾಗಿದೆ ಎಂಬುದರ ಕುರಿತು ವಿಮಾನ ಮಾದರಿಯ ಡ್ರೋನ್ ಮೂಲಕ ಸರ್ವೇ ಮಾಡಬಹುದಾಗಿದೆ. ಇನ್ನು ರಾಸಾಯನಿಕ ಸಿಂಪರಣೆ ಮಾಡುವ ಡ್ರೋನ್ ಯಂತ್ರ ರೈತರನ್ನು ಸೆಳೆಯಿತು. 10 ಲೀಟರ್ ರಾಸಾಯನಿಕ ಸಂಪರಣೆ ಮಾಡುವ ಸಾಮರ್ಥ್ಯದ ಡ್ರೋನ್ ರೈತರಿಗೆ ರಿಯಾಯತಿ ದರದಲ್ಲಿ ಸಿಗಲಿದೆಯಂತೆ.

ಕೃಷಿ ಮೇಳದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದೇ ಡ್ರೋನ್ ತಂತ್ರಜ್ಞಾನ. ಧಾರವಾಡದ ಕೃಷಿ ವಿಶ್ವವಿದ್ಯಾಲಯದಿಂದ ಜಮೀನುಗಳ ಸರ್ವೇ ಮಾಡಲು ಆಧುನಿಕ ತಂತ್ರಜ್ಞಾನವಾಗಿ ಡ್ರೋನ್ ಬಳಕೆ ಮಾಡಲಾಗುತ್ತಿದೆ. ವಿಮಾನ ಮಾದರಿಯ ಡ್ರೋನ್ ನಿಖರವಾಗಿ ಜಮೀನುಗಳ ಸರ್ವೇ ಕಾರ್ಯ ಮಾಡುತ್ತದೆ. ಜಮೀನಿಗಳಲ್ಲಿ ರೋಗ ಬಾಧೆಯುಂಟಾದಾಗ ಎಷ್ಟು ಪ್ರಮಾಣದ ಜಮೀನಿಗೆ ರೋಗ ಹರಡಿದೆ ಎಂಬುದನ್ನು ಕರಾರುವಕ್ಕಾಗಿ ಸರ್ವ ಮಾಡುತ್ತದೆ ಈ ಡ್ರೋನ್.



