AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿಯಲ್ಲಿ ದುಬೈ ದೇಶದ ಕಾರುಗಳ ಓಡಾಟ: ಫೋಟೋಸ್​ ನೋಡಿ

ಕೇರಳದ ಮೂವರು ಯುವಕರು ದುಬೈನಿಂದ ಡಾಡ್ಜ್ ಚಾಲೆಂಜರ್ ಕಾರುಗಳನ್ನು ಭಾರತಕ್ಕೆ ತಂದು ರೋಡ್ ಟ್ರಿಪ್ ಮಾಡಿದ್ದಾರೆ. ಅನುಮತಿ ಪಡೆಯಲು ಭಾರೀ ಹಣ ವ್ಯಯಿಸಿದ್ದಾರೆ. ಕೇರಳದಿಂದ ಬೆಂಗಳೂರು, ಮಣಿಪಾಲದವರೆಗೆ ಪ್ರಯಾಣಿಸಿದಾಗ ಮಣಿಪಾಲದಲ್ಲಿ ಪೊಲೀಸರು ಕಾರು ವಶಕ್ಕೆ ಪಡೆದಿದ್ದರು. ಆದರೆ, ಅನುಮತಿ ದೃಢೀಕರಿಸಲ್ಪಟ್ಟ ನಂತರ ಕಾರುಗಳನ್ನು ಮರಳಿ ಪಡೆದರು. ಈ ಥ್ರಿಲ್ಲಿಂಗ್ ರೋಡ್ ಟ್ರಿಪ್ ಅನ್ನು ಅವರು ಬ್ಲಾಗ್ ಮೂಲಕ ದಾಖಲಿಸುತ್ತಿದ್ದಾರೆ.

ಪ್ರಜ್ವಲ್ ಅಮೀನ್​, ಉಡುಪಿ
| Updated By: ವಿವೇಕ ಬಿರಾದಾರ|

Updated on: Mar 02, 2025 | 11:53 AM

Share
ಕೇರಳ ಮೂಲದ ದುಬೈನಲ್ಲಿ ವಾಸವಿರುವ ಸುಲೈಮನ್ ಮೊಹಮ್ಮದ್, ಮೊಹಮ್ಮದ್ ಶರೀಫ್ ಹಾಗೂ ಅಬ್ದುಲ್ ನಜೀರ್ ಅತೀ ಎಂಬುವರು ಕಾರ್ ಬ್ಲಾಗ್ ಮಾಡುತ್ತಾ ದುಬೈ ದೇಶದ ಡಾಡ್ಜ್ ಚಾಲೆಂಜರ್ ಹೆಸರಿನ‌ ಸ್ಪೋರ್ಟ್ಸ್ ಕಾರನ್ನು ಭಾರತಕ್ಕೆ ತಂದಿದ್ದಾರೆ.

ಕೇರಳ ಮೂಲದ ದುಬೈನಲ್ಲಿ ವಾಸವಿರುವ ಸುಲೈಮನ್ ಮೊಹಮ್ಮದ್, ಮೊಹಮ್ಮದ್ ಶರೀಫ್ ಹಾಗೂ ಅಬ್ದುಲ್ ನಜೀರ್ ಅತೀ ಎಂಬುವರು ಕಾರ್ ಬ್ಲಾಗ್ ಮಾಡುತ್ತಾ ದುಬೈ ದೇಶದ ಡಾಡ್ಜ್ ಚಾಲೆಂಜರ್ ಹೆಸರಿನ‌ ಸ್ಪೋರ್ಟ್ಸ್ ಕಾರನ್ನು ಭಾರತಕ್ಕೆ ತಂದಿದ್ದಾರೆ.

1 / 5
ದುಬೈನಲ್ಲಿ ಈ‌ ಕಾರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿವೆ. ಆದರೆ, ಭಾರತದಲ್ಲಿ ದುಬೈ ನೊಂದಣಿಯ ಕಾರುಗಳ ಓಡಾಡಕ್ಕೆ ಅವಕಾಶವಿಲ್ಲ. ಆದರೆ, ಅನುಮತಿ ಪಡೆದು ದುಬೈ ದೇಶದ ಕಾರುಗಳನ್ನು ಭಾರತದಲ್ಲಿ ಆರು ತಿಂಗಳ ಮಟ್ಟಿಗೆ ಮಾತ್ರ ಓಡಾಡಿಸಬಹುದು. ಹೀಗಾಗಿ, ಮೂವರು ಯುವಕರು ಭಾರತದಲ್ಲಿ ಕಾರು ಓಡಿಸಲು ದುಬೈ ದೇಶದ ಅಲ್ಲಿನ ಸರ್ಕಾರಕ್ಕೆ 30 ಲಕ್ಷ ಮತ್ತು ಭಾರತಕ್ಕೆ 1ಕೋಟಿ ರೂ. ಹಣವನ್ನು ನೀಡಿ ಅನುಮತಿ‌ ಪಡೆದು ಹಡಗಿನ ಮೂಲಕ ಮೂವರು ಕಾರುಗಳನ್ನು ಕೇರಳಕ್ಕೆ  ತಂದಿದ್ದಾರೆ.

ದುಬೈನಲ್ಲಿ ಈ‌ ಕಾರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿವೆ. ಆದರೆ, ಭಾರತದಲ್ಲಿ ದುಬೈ ನೊಂದಣಿಯ ಕಾರುಗಳ ಓಡಾಡಕ್ಕೆ ಅವಕಾಶವಿಲ್ಲ. ಆದರೆ, ಅನುಮತಿ ಪಡೆದು ದುಬೈ ದೇಶದ ಕಾರುಗಳನ್ನು ಭಾರತದಲ್ಲಿ ಆರು ತಿಂಗಳ ಮಟ್ಟಿಗೆ ಮಾತ್ರ ಓಡಾಡಿಸಬಹುದು. ಹೀಗಾಗಿ, ಮೂವರು ಯುವಕರು ಭಾರತದಲ್ಲಿ ಕಾರು ಓಡಿಸಲು ದುಬೈ ದೇಶದ ಅಲ್ಲಿನ ಸರ್ಕಾರಕ್ಕೆ 30 ಲಕ್ಷ ಮತ್ತು ಭಾರತಕ್ಕೆ 1ಕೋಟಿ ರೂ. ಹಣವನ್ನು ನೀಡಿ ಅನುಮತಿ‌ ಪಡೆದು ಹಡಗಿನ ಮೂಲಕ ಮೂವರು ಕಾರುಗಳನ್ನು ಕೇರಳಕ್ಕೆ ತಂದಿದ್ದಾರೆ.

2 / 5
ಬಳಿಕ, ಮೂವರು ಯುವಕರು ಡಾಡ್ಜ್ ಚಾಲೆಂಜರ್​ ಕಾರಿನಲ್ಲಿ ‌ಕೇರಳದಿಂದ ಬೆಂಗಳೂರಿಗೆ ಬಂದಿದ್ದಾರೆ. ನಂತರ, ಮಣಿಪಾಲ ವಿಶ್ವವಿದ್ಯಾಲಯದ ಓರ್ವ ವಿದ್ಯಾರ್ಥಿಯ ಆಹ್ವಾನದ ಮೇರೆಗೆ ಮೂವರು ಯುವಕರು ಪಾರ್ಟಿ ಮಾಡಲು ‌ಮಣಿಪಾಲಕ್ಕೆ ತೆರಳಿದ್ದಾರೆ.

ಬಳಿಕ, ಮೂವರು ಯುವಕರು ಡಾಡ್ಜ್ ಚಾಲೆಂಜರ್​ ಕಾರಿನಲ್ಲಿ ‌ಕೇರಳದಿಂದ ಬೆಂಗಳೂರಿಗೆ ಬಂದಿದ್ದಾರೆ. ನಂತರ, ಮಣಿಪಾಲ ವಿಶ್ವವಿದ್ಯಾಲಯದ ಓರ್ವ ವಿದ್ಯಾರ್ಥಿಯ ಆಹ್ವಾನದ ಮೇರೆಗೆ ಮೂವರು ಯುವಕರು ಪಾರ್ಟಿ ಮಾಡಲು ‌ಮಣಿಪಾಲಕ್ಕೆ ತೆರಳಿದ್ದಾರೆ.

3 / 5
ಡಾಡ್ಜ್ ಚಾಲೆಂಜರ್ ‌ಕಾರಿನಲ್ಲಿ ಮಣಿಪಾಲಕ್ಕೆ ತೆರಳಿದ ಮೂವರು ಯುವಕರು ಜಿಲ್ಲಾಧಿಕಾರಿ ರಸ್ತೆಯಲ್ಲಿ ಪಾರ್ಟಿ ಮಾಡಿದ್ದಾರೆ. ಬಳಿಕ ಕಾರನ್ನು ವೇಗವಾಗಿ ಬೇಕಾಬಿಟ್ಟಿಯಾಗಿ ಓಡಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮಣಿಪಾಲ ಠಾಣೆ ಪೊಲೀಸರು ಕಾರುಗಳನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

ಡಾಡ್ಜ್ ಚಾಲೆಂಜರ್ ‌ಕಾರಿನಲ್ಲಿ ಮಣಿಪಾಲಕ್ಕೆ ತೆರಳಿದ ಮೂವರು ಯುವಕರು ಜಿಲ್ಲಾಧಿಕಾರಿ ರಸ್ತೆಯಲ್ಲಿ ಪಾರ್ಟಿ ಮಾಡಿದ್ದಾರೆ. ಬಳಿಕ ಕಾರನ್ನು ವೇಗವಾಗಿ ಬೇಕಾಬಿಟ್ಟಿಯಾಗಿ ಓಡಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಮಣಿಪಾಲ ಠಾಣೆ ಪೊಲೀಸರು ಕಾರುಗಳನ್ನು ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ.

4 / 5
ಬಳಿಕ, ಪೊಲೀಸರು ದಾಖಲೆ ಪರಿಶೀಲನೆ ಮಾಡಿ, ಹೆಚ್ಚಿನ ತನಿಖೆಗೆ ಆರ್​ಟಿಓ ಕಚೇರಿಗೆ ಪತ್ರ ಬರೆದಿದ್ದಾರೆ. 24 ಗಂಟೆ ಬಳಿಕ‌ ಆರ್​ಟಿಓ ಅಧಿಕಾರಿಗಳು ಕಾರು ಓಡಾಟದ ಅನುಮತಿ ದೃಢೀಕರಿಸಿದ್ದಾರೆ. ಕೊನೆಗೆ ಕರ್ಕಶ ಸದ್ದಿಗೆ 1500 ರೂ. ದಂಡ ಕಟ್ಟಿಸಿಕೊಂಡು, ಕಾರು ಬಿಟ್ಟು ಕಳುಹಿಸಿದ್ದಾರೆ. ಒಟ್ಟಾರೆಯಾಗಿ ಗೊಂದಲ ನಡುವೆ ದುಬೈ ನೊಂದಣಿಯ ಈ ಅಬ್ಬರದ ಕಾರುಗಳು ಕೊನೆಗೂ ರೋಡಿಗೆ ಇಳಿದಿವೆ. ಯುವಕರು ಬ್ಲಾಗ್ ಮಾಡುತ್ತಾ ರೋಡ್ ಟ್ರಿಪ್ ಮುಂದುವರೆಸಿದ್ದಾರೆ.

ಬಳಿಕ, ಪೊಲೀಸರು ದಾಖಲೆ ಪರಿಶೀಲನೆ ಮಾಡಿ, ಹೆಚ್ಚಿನ ತನಿಖೆಗೆ ಆರ್​ಟಿಓ ಕಚೇರಿಗೆ ಪತ್ರ ಬರೆದಿದ್ದಾರೆ. 24 ಗಂಟೆ ಬಳಿಕ‌ ಆರ್​ಟಿಓ ಅಧಿಕಾರಿಗಳು ಕಾರು ಓಡಾಟದ ಅನುಮತಿ ದೃಢೀಕರಿಸಿದ್ದಾರೆ. ಕೊನೆಗೆ ಕರ್ಕಶ ಸದ್ದಿಗೆ 1500 ರೂ. ದಂಡ ಕಟ್ಟಿಸಿಕೊಂಡು, ಕಾರು ಬಿಟ್ಟು ಕಳುಹಿಸಿದ್ದಾರೆ. ಒಟ್ಟಾರೆಯಾಗಿ ಗೊಂದಲ ನಡುವೆ ದುಬೈ ನೊಂದಣಿಯ ಈ ಅಬ್ಬರದ ಕಾರುಗಳು ಕೊನೆಗೂ ರೋಡಿಗೆ ಇಳಿದಿವೆ. ಯುವಕರು ಬ್ಲಾಗ್ ಮಾಡುತ್ತಾ ರೋಡ್ ಟ್ರಿಪ್ ಮುಂದುವರೆಸಿದ್ದಾರೆ.

5 / 5
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಸಿದ್ದರಾಮಯ್ಯ ಪತ್ನಿಗೆ ಐಸಿಯುನಲ್ಲಿ ಚಿಕಿತ್ಸೆ: ಪಾರ್ವತಿಯವರಿಗೆ ಆಗಿದ್ದೇನು?
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
ಪರಸ್ಪರ ದೃಷ್ಟಿ ತೆಗೆಸಿಕೊಂಡ ಜಾಹ್ನವಿ, ಅಶ್ವಿನಿ: ಮತ್ತೆ ಒಂದಾದ ಹಳೇ ಜೋಡಿ
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಯಮುನಾ ನದಿಯಲ್ಲಿ ತುಂಬಿದ್ದ ವಿಷಕಾರಿ ನೊರೆಯ ಕ್ಲೀನಿಂಗ್ ಶುರು
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಪ್ರಧಾನಿ ಮೋದಿ ಭೇಟಿ ಹಿಂದಿನ ಕಾರಣ ಬಿಚ್ಚಿಟ್ಟ ಸಿದ್ದರಾಮಯ್ಯ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಸಮಸ್ಯೆ ಬಗೆಹರಿಸದ ಸ್ಥಳೀಯ ಆಡಳಿತ: ಪ್ರಧಾನಿ ತನಕ ಹೋದ ಬಾಲಕ
ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಯೋಗ್ಯತೆ ಇಲ್ಲದೇ ಬಿಗ್ ಬಾಸ್ ಮನೆ ಒಳಗೆ ಇರುವ ಸ್ಪರ್ಧಿಗಳು ಯಾರು?
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
ಶಬರಿಮಲೆ ದೇವಸ್ಥಾನ ಚಿನ್ನ ಕಳ್ಳತನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
VIDEO: ಪಾಕ್ ಆಟಗಾರನ ಆಕ್ರಮಣಕಾರಿ ವರ್ತನೆ... ವಾರ್ನಿಂಗ್!
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಚಂದ್ರಪ್ರಭ ಬಿಗ್ ಬಾಸ್​​ನಿಂದ ಹೊರಬಂದಿದ್ದಕ್ಕೆ ಅಸಲಿ ಕಾರಣ ತಿಳಿಸಿದ ಸುಧಿ
ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?
ಬೆಂಗಳೂರಿನತ್ತ ಡಿಕೆ ಶಿವಕುಮಾರ್: ದಿಲ್ಲಿಗೆ ಹೋದ ಕೆಲಸ ಏನಾಯ್ತು?