AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಈ ಟಿಪ್ಸ್​ ಅನುಸರಿಸಿ

ವ್ಯಾಲೆಂಟೈನ್ಸ್​ ಡೇ ಹತ್ತಿರ ಬರುತ್ತಿದೆ. ನಿಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಮುನ್ನ ಅವರ ಬಗ್ಗೆ ತಿಳಿದುಕೊಳ್ಳಿ. ಮುಕ್ತವಾಗಿ ಮಾತನಾಡಿ ವಿಚಾರ ಹಂಚಿಕೊಳ್ಳಿ. ಅದಕ್ಕೆ ಇಲ್ಲಿದೆ ಸಿಂಪಲ್​ ಟಿಪ್ಸ್​

TV9 Web
| Edited By: |

Updated on: Feb 09, 2022 | 5:08 PM

Share
ಆದ್ಯತೆಯಲ್ಲಿ ಸಂಗಾತಿಯಿರಲಿ:
ನಿಮ್ಮ ಬದುಕಿನಲ್ಲಿ ಸಂಗಾತಿ ಮೊದಲ ಆಯ್ಕೆಯಾಗಿರಲಿ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಸಂಗಾತಿಯ ಸಲಹೆ ಪಡೆಯಿರಿ. ನಿಮ್ಮ ಬ್ಯಸಿ ಶೆಡ್ಯೂಲ್​ನಲ್ಲಿಯೂ ಒಂದಷ್ಟು ಸಮಯ ಸಂಗಾತಿಯೊಂದಿಗೆ ಕಳೆಯಿರಿ.

ಆದ್ಯತೆಯಲ್ಲಿ ಸಂಗಾತಿಯಿರಲಿ: ನಿಮ್ಮ ಬದುಕಿನಲ್ಲಿ ಸಂಗಾತಿ ಮೊದಲ ಆಯ್ಕೆಯಾಗಿರಲಿ. ಯಾವುದೇ ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಸಂಗಾತಿಯ ಸಲಹೆ ಪಡೆಯಿರಿ. ನಿಮ್ಮ ಬ್ಯಸಿ ಶೆಡ್ಯೂಲ್​ನಲ್ಲಿಯೂ ಒಂದಷ್ಟು ಸಮಯ ಸಂಗಾತಿಯೊಂದಿಗೆ ಕಳೆಯಿರಿ.

1 / 8
ನಿಮ್ಮ ನ್ಯೂನತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ: 
ಸಂಗಾತಿಯೆಂದರೆ ಎಲ್ಲ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಿರಬೇಕು. ನಿಮ್ಮ ನ್ಯೂನ್ಯತೆಗಳನ್ನು ಹಂಚಿಕೊಳ್ಳಿ. ಏಕೆಂದರೆ ಮುಂದೊಂದು ದಿನ ಅವರಿಗೇ ಅರಿವಿಗೆ ಬಂದರೆ ಗೊತ್ತಿದ್ದೂ ತಿಳಿಸಲಿಲ್ಲ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.

ನಿಮ್ಮ ನ್ಯೂನತೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ: ಸಂಗಾತಿಯೆಂದರೆ ಎಲ್ಲ ವಿಷಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಿರಬೇಕು. ನಿಮ್ಮ ನ್ಯೂನ್ಯತೆಗಳನ್ನು ಹಂಚಿಕೊಳ್ಳಿ. ಏಕೆಂದರೆ ಮುಂದೊಂದು ದಿನ ಅವರಿಗೇ ಅರಿವಿಗೆ ಬಂದರೆ ಗೊತ್ತಿದ್ದೂ ತಿಳಿಸಲಿಲ್ಲ ಎನ್ನುವ ಅನುಮಾನಕ್ಕೆ ಎಡೆಮಾಡಿಕೊಡುತ್ತದೆ.

2 / 8
ಸಮಸ್ಯೆಗಳನ್ನು ಹಂಚಿಕೊಳ್ಳಿ:
ಕೆಲವೊಮ್ಮೆ ಸಂಗಾತಿಯ ಸ್ನೇಹಿತರಿಂದ ಅಥವಾ ಹೊರಗಿನಿನವರಿಂದ ಕಿರಿಕಿರಿ ಉಂಟಾದರೆ ಹೇಳಿಕೊಳ್ಳಿ. ಕಾಡುವ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಆಗ ಸಂವಹನವೂ ಉತ್ತಮವಾಗುತ್ತದೆ, ನಂಬಿಕೆಯೂ ಬೆಳೆಯುತ್ತದೆ.

ಸಮಸ್ಯೆಗಳನ್ನು ಹಂಚಿಕೊಳ್ಳಿ: ಕೆಲವೊಮ್ಮೆ ಸಂಗಾತಿಯ ಸ್ನೇಹಿತರಿಂದ ಅಥವಾ ಹೊರಗಿನಿನವರಿಂದ ಕಿರಿಕಿರಿ ಉಂಟಾದರೆ ಹೇಳಿಕೊಳ್ಳಿ. ಕಾಡುವ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ. ಆಗ ಸಂವಹನವೂ ಉತ್ತಮವಾಗುತ್ತದೆ, ನಂಬಿಕೆಯೂ ಬೆಳೆಯುತ್ತದೆ.

3 / 8
ಆಸೆಗಳನ್ನು ಹೇಳಿಕೊಳ್ಳಿ: ನಿಮ್ಮ ಹಾಗೂ ಸಂಗಾತಿಯ ನಡುವೆ ಮುಜುಗರ ಬೇಡ. ಯಾವುದೇ ರೀತಿಯ ಆಸೆ, ಕನಸುಗಳನ್ನು ಹೇಳಿಕೊಳ್ಳಿ. ಶುದ್ಧ ಹಾಗೂ ನಿಸ್ವಾರ್ಥ ಪ್ರೀತಿಯಲ್ಲಿ ಬೇರೆ ಎನ್ನುವ ಮಾತು ಬರುವುದಿಲ್ಲ.

ಆಸೆಗಳನ್ನು ಹೇಳಿಕೊಳ್ಳಿ: ನಿಮ್ಮ ಹಾಗೂ ಸಂಗಾತಿಯ ನಡುವೆ ಮುಜುಗರ ಬೇಡ. ಯಾವುದೇ ರೀತಿಯ ಆಸೆ, ಕನಸುಗಳನ್ನು ಹೇಳಿಕೊಳ್ಳಿ. ಶುದ್ಧ ಹಾಗೂ ನಿಸ್ವಾರ್ಥ ಪ್ರೀತಿಯಲ್ಲಿ ಬೇರೆ ಎನ್ನುವ ಮಾತು ಬರುವುದಿಲ್ಲ.

4 / 8
ಸಮಸ್ಯೆಗಳನ್ನು ಜತೆಯಾಗಿ ಎದುರಿಸಿ:
ಬಂಧ ಗಟ್ಟಿಯಾಗಿದ್ದರೆ ಯಾವ ಸಮಸ್ಯೆಯೂ ಕಷ್ಟವೆನಿಸುವುದಿಲ್ಲ. ಎರಡೂ ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ, ನಿಮ್ಮ ಸಂಗಾತಿಯ ಕಷ್ಟಕ್ಕೆ ನೀವು ಕೈ ಜೋಡಿಸಿದರೆ ಸಮಸ್ಯೆಯನ್ನು ಪರಿಹರಿಸಬಹುದು.

ಸಮಸ್ಯೆಗಳನ್ನು ಜತೆಯಾಗಿ ಎದುರಿಸಿ: ಬಂಧ ಗಟ್ಟಿಯಾಗಿದ್ದರೆ ಯಾವ ಸಮಸ್ಯೆಯೂ ಕಷ್ಟವೆನಿಸುವುದಿಲ್ಲ. ಎರಡೂ ಕೈ ಸೇರಿದರೆ ಚಪ್ಪಾಳೆ ಎನ್ನುವಂತೆ, ನಿಮ್ಮ ಸಂಗಾತಿಯ ಕಷ್ಟಕ್ಕೆ ನೀವು ಕೈ ಜೋಡಿಸಿದರೆ ಸಮಸ್ಯೆಯನ್ನು ಪರಿಹರಿಸಬಹುದು.

5 / 8
ನೀವು ಇರುವ ರೀತಿಯನ್ನು ಅರ್ಥಮಾಡಿಸಿ: ಎರಡು ಬದುಕು ಒಂದಾಗಬೇಕಾದರೆ ಒಂದಷ್ಟು ಮಾರ್ಪಾಡುಗಳು ಅಗತ್ಯ. ಹೀಗಾಗಿ ನೀವು ಇರುವ ರೀತಿಯನ್ನು ತಿಳಿಸಿ, ನಂತರ ಅವರೇ ಹೊಂದಿಕೊಳ್ಳುವುದಾದರೆ ಅಥವಾ ಲೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದರೆ ಗೊತ್ತಾಗುತ್ತದೆ.

ನೀವು ಇರುವ ರೀತಿಯನ್ನು ಅರ್ಥಮಾಡಿಸಿ: ಎರಡು ಬದುಕು ಒಂದಾಗಬೇಕಾದರೆ ಒಂದಷ್ಟು ಮಾರ್ಪಾಡುಗಳು ಅಗತ್ಯ. ಹೀಗಾಗಿ ನೀವು ಇರುವ ರೀತಿಯನ್ನು ತಿಳಿಸಿ, ನಂತರ ಅವರೇ ಹೊಂದಿಕೊಳ್ಳುವುದಾದರೆ ಅಥವಾ ಲೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾದರೆ ಗೊತ್ತಾಗುತ್ತದೆ.

6 / 8
ನಿಮ್ಮ ಸಾಮರ್ಥ್ಯದ ಬಗ್ಗೆ ತಿಳಿಸಿ: ಜೀವನದಲ್ಲಿ ಕಷ್ಟ ಸಾಮಾನ್ಯ. ಹೀಗಾಗಿ ಅದನ್ನು ಎದುರಿಸುವ ಸಾಮರ್ಥ್ಯ ಇದೆ ಎಂದು ತಿಳಿಸಿ ಧೈರ್ಯ ಹೇಳಿ. ಆಗ ಅವರಿಗೂ ಆತಂಕ ದೂರವಾಗುತ್ತದೆ.

ನಿಮ್ಮ ಸಾಮರ್ಥ್ಯದ ಬಗ್ಗೆ ತಿಳಿಸಿ: ಜೀವನದಲ್ಲಿ ಕಷ್ಟ ಸಾಮಾನ್ಯ. ಹೀಗಾಗಿ ಅದನ್ನು ಎದುರಿಸುವ ಸಾಮರ್ಥ್ಯ ಇದೆ ಎಂದು ತಿಳಿಸಿ ಧೈರ್ಯ ಹೇಳಿ. ಆಗ ಅವರಿಗೂ ಆತಂಕ ದೂರವಾಗುತ್ತದೆ.

7 / 8
ಸಂಗಾತಿಯಾಗುವವರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ: ಕೇವಲ ಒಳ್ಳೆಯ ಗುಣಗಳನ್ನು ತಿಳಿದುಕೊಂಡು ಬದುಕು ನಡೆಸಲು ಸಾಧ್ಯವಿಲ್ಲ. ಹೀಗಾಗಿ ನೀವು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ಸಂಪೂರ್ಣ ಜೀವನದ ಬಗ್ಗೆ ತಿಳಿದುಕೊಳ್ಳಿ

ಸಂಗಾತಿಯಾಗುವವರ ಬಗ್ಗೆ ಸಂಪೂರ್ಣ ತಿಳಿದುಕೊಳ್ಳಿ: ಕೇವಲ ಒಳ್ಳೆಯ ಗುಣಗಳನ್ನು ತಿಳಿದುಕೊಂಡು ಬದುಕು ನಡೆಸಲು ಸಾಧ್ಯವಿಲ್ಲ. ಹೀಗಾಗಿ ನೀವು ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಅವರ ಸಂಪೂರ್ಣ ಜೀವನದ ಬಗ್ಗೆ ತಿಳಿದುಕೊಳ್ಳಿ

8 / 8
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ಬ್ಯಾನರ್ ಗಲಾಟೆ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ಬಿಗ್ ಬಾಸ್ ಮನೆಯಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ಹೋದ ರಘು, ಧ್ರುವಂತ್
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ತಂಗಡಗಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಸಚಿವ ಸೋಮಣ್ಣ ಮೇಲೆ ಕುರ್ಚಿ ಎಸೆದ ಕಾಂಗ್ರೆಸ್ ಕಾರ್ಯಕರ್ತರು, ವಿಡಿಯೋ ನೋಡಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಶಿಷ್ಟಾಚಾರ ವಿವಾದ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು!
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದ ಬೊಲೆರೋ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ
ಹನುಮಾನ್ ದೇವಸ್ಥಾನಕ್ಕೆ ಐದು ಕೋಟಿ ರೂ. ದೇಣಿಗೆ ಕೊಟ್ಟ ಮುಖೇಶ್ ಅಂಬಾನಿ