Ganesh Chaturthi 2024: ಗಣೇಶ ಚತುರ್ಥಿ ಈ ಬಾರಿ ಯಾವಾಗ ಆಚರಿಸಲಾಗುತ್ತದೆ? ಮೂರ್ತಿ ಪ್ರತಿಷ್ಠಾಪನೆ-ವಿಸರ್ಜನೆಯ ಸಮಯ, ನಿಯಮ ತಿಳಿಯಿರಿ

Edited By:

Updated on: Aug 27, 2024 | 11:41 AM

ಇನ್ನು ಕೆಲವೇ ದಿನಗಳಲ್ಲಿ ಶ್ರಾವಣ ಮುಗಿಸಿ ಭಾದ್ರಪದ ಮಾಸದೊಳ್​ ಪ್ರವೇಶಿಸುತ್ತೇವೆ. ಇದರಿಂದಾಗಿ ಮೋದಕ ಪ್ರಿಯ ಗಣೇಶನ ಜನ್ಮದಿನವಾದ ವಿನಾಯಕ ಜನ್ಮದಿನವನ್ನು ಆಚರಿಸಲು ಹಿಂದೂಗಳು ಸಿದ್ಧರಾಗಿದ್ದಾರೆ. ಈ ಲೇಖನದಲ್ಲಿ ಗಣಪತಿ ನವರಾತ್ರಿ ಅಥವಾ ಗಣೇಶ ಉತ್ಸವ ಯಾವಾಗ ಪ್ರಾರಂಭವಾಗುತ್ತದೆ? ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸರಿಯಾದ ವಿಧಾನ ಮತ್ತು ನಿಯಮಗಳನ್ನು ತಿಳಿಯೋಣ..

1 / 6
Ganesh Chaturthi 2024: ವಿನಾಯಕ ಚೌತಿ ಉತ್ಸವವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ 4 ನೇ ದಿನದಂದು ಆಚರಿಸಲಾಗುತ್ತದೆ. ಈ ವಿನಾಯಕ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಗಣೇಶನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹಬ್ಬ ಆರಂಭವಾಗುತ್ತದೆ ಮತ್ತು ನೀರಿನಲ್ಲಿ ಮುಳುಗಿಸುವುದರೊಂದಿಗೆ ಹಬ್ಬ ಮುಕ್ತಾಯವಾಗುತ್ತದೆ.

Ganesh Chaturthi 2024: ವಿನಾಯಕ ಚೌತಿ ಉತ್ಸವವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ 4 ನೇ ದಿನದಂದು ಆಚರಿಸಲಾಗುತ್ತದೆ. ಈ ವಿನಾಯಕ ಹಬ್ಬವನ್ನು 10 ದಿನಗಳ ಕಾಲ ಆಚರಿಸಲಾಗುತ್ತದೆ. ಮೊದಲ ದಿನ ಗಣೇಶನ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಹಬ್ಬ ಆರಂಭವಾಗುತ್ತದೆ ಮತ್ತು ನೀರಿನಲ್ಲಿ ಮುಳುಗಿಸುವುದರೊಂದಿಗೆ ಹಬ್ಬ ಮುಕ್ತಾಯವಾಗುತ್ತದೆ.

2 / 6
ವಿನಾಯಕ ಚೌತಿ ದಿನಾಂಕ, ಪೂಜೆಯ ಶುಭ ಸಮಯ: ವೈದಿಕ ಪಂಚಾಂಗದ ಪ್ರಕಾರ, ವಿನಾಯಕ ಚೌತಿಯು ಶುಕ್ರವಾರ, ಸೆಪ್ಟೆಂಬರ್ 6, 2024 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7, ಶನಿವಾರ, ಸಂಜೆ 5.37 ಕ್ಕೆ ಕೊನೆಗೊಳ್ಳುತ್ತದೆ. ಇದರಿಂದಾಗಿ ಈ ವರ್ಷ ವಿಗ್ರಹ ಪ್ರತಿಷ್ಠಾನವನ್ನು ಸೆ. 7ರಂದು ಆಚರಿಸಬೇಕು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು 8ನೇ ತಾರೀಖಿನಂದು ಆಚರಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಉದಯ ತಿಥಿ ಪ್ರಕಾರ, ಸೆಪ್ಟೆಂಬರ್ 7 ರ ಶನಿವಾರದಿಂದ ಗಣೇಶ ಹಬ್ಬ ಪ್ರಾರಂಭವಾಗಲಿವೆ. ಈ ದಿನ ವಿನಾಯಕನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ.

ವಿನಾಯಕ ಚೌತಿ ದಿನಾಂಕ, ಪೂಜೆಯ ಶುಭ ಸಮಯ: ವೈದಿಕ ಪಂಚಾಂಗದ ಪ್ರಕಾರ, ವಿನಾಯಕ ಚೌತಿಯು ಶುಕ್ರವಾರ, ಸೆಪ್ಟೆಂಬರ್ 6, 2024 ರಂದು ಪ್ರಾರಂಭವಾಗುತ್ತದೆ ಮತ್ತು ಸೆಪ್ಟೆಂಬರ್ 7, ಶನಿವಾರ, ಸಂಜೆ 5.37 ಕ್ಕೆ ಕೊನೆಗೊಳ್ಳುತ್ತದೆ. ಇದರಿಂದಾಗಿ ಈ ವರ್ಷ ವಿಗ್ರಹ ಪ್ರತಿಷ್ಠಾನವನ್ನು ಸೆ. 7ರಂದು ಆಚರಿಸಬೇಕು ಎಂದು ಕೆಲವರು ಹೇಳುತ್ತಿದ್ದರೆ, ಇನ್ನು ಕೆಲವರು 8ನೇ ತಾರೀಖಿನಂದು ಆಚರಿಸಬೇಕು ಎಂದು ಹೇಳುತ್ತಿದ್ದಾರೆ. ಆದರೆ, ಉದಯ ತಿಥಿ ಪ್ರಕಾರ, ಸೆಪ್ಟೆಂಬರ್ 7 ರ ಶನಿವಾರದಿಂದ ಗಣೇಶ ಹಬ್ಬ ಪ್ರಾರಂಭವಾಗಲಿವೆ. ಈ ದಿನ ವಿನಾಯಕನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ.

3 / 6
Ganesh idol Sthapana or installation timings: ಮೂರ್ತಿ ಪೂಜೆಗೆ ಶುಭ ಮುಹೂರ್ತ: ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 7ರಂದು ಬೆಳಗ್ಗೆ ಆಚರಿಸಬೇಕು. ಇದಲ್ಲದೆ, ದೇವತಾರಾಧನೆಗೆ ಶುಭ ಮುಹೂರ್ತವು ಬೆಳಿಗ್ಗೆ 11.04 ರಿಂದ ಮಧ್ಯಾಹ್ನ 1.34 ರವರೆಗೆ ಇರುತ್ತದೆ. ವಿನಾಯಕನ ವಿಗ್ರಹವನ್ನು ಪೂಜಿಸಲು ಭಕ್ತರಿಗೆ ಒಟ್ಟು 2 ಗಂಟೆ 30 ನಿಮಿಷಗಳ ಸಮಯವಿರುತ್ತದೆ.

Ganesh idol Sthapana or installation timings: ಮೂರ್ತಿ ಪೂಜೆಗೆ ಶುಭ ಮುಹೂರ್ತ: ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 7ರಂದು ಬೆಳಗ್ಗೆ ಆಚರಿಸಬೇಕು. ಇದಲ್ಲದೆ, ದೇವತಾರಾಧನೆಗೆ ಶುಭ ಮುಹೂರ್ತವು ಬೆಳಿಗ್ಗೆ 11.04 ರಿಂದ ಮಧ್ಯಾಹ್ನ 1.34 ರವರೆಗೆ ಇರುತ್ತದೆ. ವಿನಾಯಕನ ವಿಗ್ರಹವನ್ನು ಪೂಜಿಸಲು ಭಕ್ತರಿಗೆ ಒಟ್ಟು 2 ಗಂಟೆ 30 ನಿಮಿಷಗಳ ಸಮಯವಿರುತ್ತದೆ.

4 / 6
Ganesh idol immersion timings:  ಗಣೇಶನ ನಿಮಜ್ಜನ (ವಿಸರ್ಜನೆ) ಸಮಯ : ಗಣೇಶ ಹಬ್ಬವು ಸೆಪ್ಟೆಂಬರ್ 7 ಶನಿವಾರದಂದು ಪ್ರಾರಂಭವಾಗುತ್ತದೆ. ಈ ಬಾರಿಯ ಗಣೇಶ ಹಬ್ಬಗಳು ಸೆಪ್ಟೆಂಬರ್ 17ರ ಮಂಗಳವಾರ ಅನಂತ ಚತುರ್ದಶಿ ದಿನ  ಮುಗಿಯಲಿದೆ. ಗಣೇಶ ಮೂರ್ತಿಯನ್ನು ಮನೆಯಲ್ಲಿಟ್ಟು 10 ದಿನಗಳ ಕಾಲ ಪೂಜಿಸುವವರು ಅನಂತ ಚತುರ್ದಶಿಯಂದು ವಿನಾಯಕನನ್ನು ನೀರಿನಲ್ಲಿ (ನಿಮಜ್ಜನ, ವಿಸರ್ಜನೆ) ಮುಳುಗಿಸುತ್ತಾರೆ.

Ganesh idol immersion timings: ಗಣೇಶನ ನಿಮಜ್ಜನ (ವಿಸರ್ಜನೆ) ಸಮಯ : ಗಣೇಶ ಹಬ್ಬವು ಸೆಪ್ಟೆಂಬರ್ 7 ಶನಿವಾರದಂದು ಪ್ರಾರಂಭವಾಗುತ್ತದೆ. ಈ ಬಾರಿಯ ಗಣೇಶ ಹಬ್ಬಗಳು ಸೆಪ್ಟೆಂಬರ್ 17ರ ಮಂಗಳವಾರ ಅನಂತ ಚತುರ್ದಶಿ ದಿನ ಮುಗಿಯಲಿದೆ. ಗಣೇಶ ಮೂರ್ತಿಯನ್ನು ಮನೆಯಲ್ಲಿಟ್ಟು 10 ದಿನಗಳ ಕಾಲ ಪೂಜಿಸುವವರು ಅನಂತ ಚತುರ್ದಶಿಯಂದು ವಿನಾಯಕನನ್ನು ನೀರಿನಲ್ಲಿ (ನಿಮಜ್ಜನ, ವಿಸರ್ಜನೆ) ಮುಳುಗಿಸುತ್ತಾರೆ.

5 / 6

ವಿಗ್ರಹ ಪ್ರತಿಷ್ಠಾಪನೆಗೆ ಸರಿಯಾದ ನಿಯಮ: ಶುಭ ಮುಹೂರ್ತದಲ್ಲಿ ಮನೆಯ ಉತ್ತರ ಅಥವಾ ಆಗ್ನೇಯ ದಿಕ್ಕಿನಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಬಲಭಾಗದಲ್ಲಿ ಸೊಂಡಿಲು ಇರುವ (ಬಲಮುರಿ) ವಿನಾಯಕನ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಅದೇ ಸಮಯದಲ್ಲಿ ಗಣೇಶನು ಕುಳಿತ ಭಂಗಿಯಲ್ಲಿರಬೇಕು.

ವಿಗ್ರಹ ಪ್ರತಿಷ್ಠಾಪನೆಗೆ ಸರಿಯಾದ ನಿಯಮ: ಶುಭ ಮುಹೂರ್ತದಲ್ಲಿ ಮನೆಯ ಉತ್ತರ ಅಥವಾ ಆಗ್ನೇಯ ದಿಕ್ಕಿನಲ್ಲಿ ವಿನಾಯಕನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಬಲಭಾಗದಲ್ಲಿ ಸೊಂಡಿಲು ಇರುವ (ಬಲಮುರಿ) ವಿನಾಯಕನ ಮೂರ್ತಿಯನ್ನು ಮಾತ್ರ ಪ್ರತಿಷ್ಠಾಪಿಸಬೇಕು. ಅದೇ ಸಮಯದಲ್ಲಿ ಗಣೇಶನು ಕುಳಿತ ಭಂಗಿಯಲ್ಲಿರಬೇಕು.

6 / 6
ಆ ವಿನಾಯಕ ಮೂರ್ತಿಯಲ್ಲಿ ಪವಿತ್ರ ಜನಿವಾರ ಇರಬೇಕು. ಇಲಿಯೂ ಇರಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳ ಸ್ವಚ್ಛ ಮತ್ತು ಪವಿತ್ರವಾಗಿರಬೇಕು. ಗಣೇಶನ ಮೂರ್ತಿಯ ಮುಖವು ಪಶ್ಚಿಮಕ್ಕೆ ಇರಬೇಕು. ಗಣೇಶನನ್ನು ವಿಸರ್ಜಿಸುವುದಕ್ಕೂ ಮುನ್ನ ವಿಗ್ರಹವನ್ನು ಅಪ್ಪಿತಪ್ಪಿಯೂ ಅಲುಗಾಡಿಸಬಾರದು.

ಆ ವಿನಾಯಕ ಮೂರ್ತಿಯಲ್ಲಿ ಪವಿತ್ರ ಜನಿವಾರ ಇರಬೇಕು. ಇಲಿಯೂ ಇರಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸ್ಥಳ ಸ್ವಚ್ಛ ಮತ್ತು ಪವಿತ್ರವಾಗಿರಬೇಕು. ಗಣೇಶನ ಮೂರ್ತಿಯ ಮುಖವು ಪಶ್ಚಿಮಕ್ಕೆ ಇರಬೇಕು. ಗಣೇಶನನ್ನು ವಿಸರ್ಜಿಸುವುದಕ್ಕೂ ಮುನ್ನ ವಿಗ್ರಹವನ್ನು ಅಪ್ಪಿತಪ್ಪಿಯೂ ಅಲುಗಾಡಿಸಬಾರದು.

Published On - 11:05 am, Sat, 24 August 24

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us

ಪೂರ್ಣ ಸುದ್ದಿಯನ್ನು ಓದಲು Tv9 ಆ್ಯಪ್ ಡೌನ್​ಲೋಡ್ ಮಾಡಿ

ಎಕ್ಸ್​ಕ್ಲೂಸಿವ್ ಸುದ್ದಿಗಳ ಅನ್​ಲಿಮಿಟೆಡ್ ಆಕ್ಸೆಸ್ Tv9 ಆ್ಯಪ್​ನಲ್ಲಿ ಮುಂದುವರೆಯಿರಿ