Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕಾಶಗನ್ನಡಿ: ಇದು ಭೂಮಿ ಮತ್ತು ಆಕಾಶ ಒಂದಾಗುವ ಸ್ಥಳ -ವಿಶ್ವದ ಅತಿದೊಡ್ಡ ಕನ್ನಡಿ ಎಂದೂ ಬಿಂಬಿತವಾಗಿದೆ!

World’s Biggest Mirror: ಈ ಫೋಟೋಗಳನ್ನು ನೋಡಿದ ಮೇಲೆ ನೀವೂ ಸಹ ಎಂದಾದರೂ ಅಂತಹ ಅದ್ಭುತ ಸ್ಥಳಕ್ಕೆ ಭೇಟಿ ನೀಡುವ ಆಸೆ ಬರುತ್ತದೆ. ಅದರಲ್ಲಿ, ಬಿಳಿ ಮೋಡಗಳಿಂದ ನೀಲಿ ಆಕಾಶದ ಪ್ರತಿಬಿಂಬ, ಸಂಜೆಯ ಬಣ್ಣಗಳ ಪ್ರತಿಬಿಂಬ ಮತ್ತು ರಾತ್ರಿಯಲ್ಲಿ ನಕ್ಷತ್ರಗಳ ಪ್ರತಿಬಿಂಬವು ನೀರಿನ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ.

ಸಾಧು ಶ್ರೀನಾಥ್​
|

Updated on: Jan 08, 2024 | 11:18 AM

ವಿಶ್ವದ ಅತಿದೊಡ್ಡ ಕನ್ನಡಿ: ಇದು ಭೂಮಿ ಮತ್ತು ಆಕಾಶದ ನಡುವಿನ ಅದ್ಭುತ ಸಂಗಮ ಸ್ಥಳ.. ನೀವು ಇಲ್ಲಿಯವರೆಗೆ ನೋಡಿಲ್ಲದಿರಬಹುದು/ ಕೇಳಿಲ್ಲದಿರಬಹುದು ಈ ಜಾಗದ ಬಗ್ಗೆ. ಭಾರತದಲ್ಲಿ ರಾನ್ ಆಫ್ ಕಚ್ ಪ್ರದೇಶ ಇರುವಂತೆ ದಕ್ಷಿಣ ಅಮೆರಿಕಾದ ಬೊಲಿವಿಯಾನಲ್ಲಿ (southwest Bolivia ಇನ South America) ಸಾಲಾರ್ ಡಿ ಉಯುನಿ (Salar De Uyuni, Bolivia ) ಸಾವಿರಾರು ಕಿಲೋಮೀಟರ್‌ಗಳಷ್ಟು ಚಾಚಿರುವ ಉದ್ದನೆಯ ಬಿಳಿ ಉಪ್ಪು ಭೂಮಿ ಆಗಿದೆ. ಈ ಸ್ಥಳವು ಮಳೆಯಾದರೆ ಕನ್ನಡಿಯಂತಾಗುತ್ತದೆ ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಾಲಾರ್ ಡಿ ಉಯುನಿಯು 10,000 ಚದರ ಕಿಲೋ ಮೀಟರ್‌ಗಳಷ್ಟು ವ್ಯಾಪಿಸಿರುವ ವಿಶ್ವದ ಅತಿದೊಡ್ಡ ಉಪ್ಪು ಪ್ರದೇಶವಾಗಿದೆ. ಇದು ವಿಶ್ವದ ಅತಿದೊಡ್ಡ ನೈಸರ್ಗಿಕ ಕನ್ನಡಿ ಎಂದೂ ಕರೆಯಲ್ಪಡುತ್ತದೆ. ಏಕೆಂದರೆ ಮಳೆಗಾಲದಲ್ಲಿ ಇಲ್ಲಿ ನೀರಿರುವಾಗ ಭೂಮಿ ಕನ್ನಡಿಯಂತೆ ಕಾಣುತ್ತದೆ. ಅದರಲ್ಲಿ ಆಕಾಶದ ಪ್ರತಿಬಿಂಬ ಸ್ಪಷ್ಟವಾಗಿ ಗೋಚರಿಸುತ್ತದೆ!

ವಿಶ್ವದ ಅತಿದೊಡ್ಡ ಕನ್ನಡಿ: ಇದು ಭೂಮಿ ಮತ್ತು ಆಕಾಶದ ನಡುವಿನ ಅದ್ಭುತ ಸಂಗಮ ಸ್ಥಳ.. ನೀವು ಇಲ್ಲಿಯವರೆಗೆ ನೋಡಿಲ್ಲದಿರಬಹುದು/ ಕೇಳಿಲ್ಲದಿರಬಹುದು ಈ ಜಾಗದ ಬಗ್ಗೆ. ಭಾರತದಲ್ಲಿ ರಾನ್ ಆಫ್ ಕಚ್ ಪ್ರದೇಶ ಇರುವಂತೆ ದಕ್ಷಿಣ ಅಮೆರಿಕಾದ ಬೊಲಿವಿಯಾನಲ್ಲಿ (southwest Bolivia ಇನ South America) ಸಾಲಾರ್ ಡಿ ಉಯುನಿ (Salar De Uyuni, Bolivia ) ಸಾವಿರಾರು ಕಿಲೋಮೀಟರ್‌ಗಳಷ್ಟು ಚಾಚಿರುವ ಉದ್ದನೆಯ ಬಿಳಿ ಉಪ್ಪು ಭೂಮಿ ಆಗಿದೆ. ಈ ಸ್ಥಳವು ಮಳೆಯಾದರೆ ಕನ್ನಡಿಯಂತಾಗುತ್ತದೆ ಮತ್ತು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಾಲಾರ್ ಡಿ ಉಯುನಿಯು 10,000 ಚದರ ಕಿಲೋ ಮೀಟರ್‌ಗಳಷ್ಟು ವ್ಯಾಪಿಸಿರುವ ವಿಶ್ವದ ಅತಿದೊಡ್ಡ ಉಪ್ಪು ಪ್ರದೇಶವಾಗಿದೆ. ಇದು ವಿಶ್ವದ ಅತಿದೊಡ್ಡ ನೈಸರ್ಗಿಕ ಕನ್ನಡಿ ಎಂದೂ ಕರೆಯಲ್ಪಡುತ್ತದೆ. ಏಕೆಂದರೆ ಮಳೆಗಾಲದಲ್ಲಿ ಇಲ್ಲಿ ನೀರಿರುವಾಗ ಭೂಮಿ ಕನ್ನಡಿಯಂತೆ ಕಾಣುತ್ತದೆ. ಅದರಲ್ಲಿ ಆಕಾಶದ ಪ್ರತಿಬಿಂಬ ಸ್ಪಷ್ಟವಾಗಿ ಗೋಚರಿಸುತ್ತದೆ!

1 / 6
ಸಾಲಾರ್ ಡಿ ಉಯುನಿಯನ್ನು ವಿಶ್ವ ಅದ್ಭುತ ಎಂದು ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಭೂಮಿ ಕನ್ನಡಿಯಂತೆ ಕಾಣುತ್ತದೆ. ಆಕಾಶವು ಅದರಲ್ಲಿ ಪ್ರತಿಫಲಿಸುತ್ತದೆ. ಇದನ್ನು ನೋಡಿದರೆ ಆಕಾಶ ಮತ್ತು ಭೂಮಿ ಒಟ್ಟಿಗೆ  ಕೂಡಿಬಂದಂತೆ ಅನಿಸುತ್ತದೆ. ಈ ಸ್ಥಳವು ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇದನ್ನು ನೋಡಿದರೆ ಖಂಡಿತ ಶಾಕ್ ಆಗುತ್ತೀರಿ.

ಸಾಲಾರ್ ಡಿ ಉಯುನಿಯನ್ನು ವಿಶ್ವ ಅದ್ಭುತ ಎಂದು ಕರೆಯಲಾಗುತ್ತದೆ. ಏಕೆಂದರೆ ಇಲ್ಲಿ ಭೂಮಿ ಕನ್ನಡಿಯಂತೆ ಕಾಣುತ್ತದೆ. ಆಕಾಶವು ಅದರಲ್ಲಿ ಪ್ರತಿಫಲಿಸುತ್ತದೆ. ಇದನ್ನು ನೋಡಿದರೆ ಆಕಾಶ ಮತ್ತು ಭೂಮಿ ಒಟ್ಟಿಗೆ ಕೂಡಿಬಂದಂತೆ ಅನಿಸುತ್ತದೆ. ಈ ಸ್ಥಳವು ತನ್ನ ಅದ್ಭುತ ಸೌಂದರ್ಯಕ್ಕಾಗಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ಇದನ್ನು ನೋಡಿದರೆ ಖಂಡಿತ ಶಾಕ್ ಆಗುತ್ತೀರಿ.

2 / 6
ಬೊಲಿವಿಯಾದ ಸಾಲಾರ್ ಡಿ ಉಯುನಿಯು ತನ್ನ ಸುಂದರ ದೃಶ್ಯಾವಳಿಗಳಿಗೆ ಹೆಸರುವಾಸಿಯಾಗಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಉಪ್ಪು ಕ್ಷೇತ್ರವಾಗಿದೆ. ಬಹಳ ಹಿಂದೆಯೇ ತುಂಬಿ ಹರಿಯುತ್ತಿರುವ ಕೆರೆಗಳಿಂದ ಬಿಡುಗಡೆಯಾದ ಉಪ್ಪು ಮಣ್ಣು ಇದಾಗಿದೆ. ಇಲ್ಲಿ ಉಪ್ಪು ದಪ್ಪ ಪದರವಾಗಿ ಹರಡಿದಂತೆ ಕಾಣುತ್ತದೆ. ಇಲ್ಲಿನ ನೆಲವು ಹೆಪ್ಪುಗಟ್ಟಿದ ಉಪ್ಪಿನ ಪದರಗಳಿಂದ ಮುಚ್ಚಲ್ಪಟ್ಟಿದೆ.

ಬೊಲಿವಿಯಾದ ಸಾಲಾರ್ ಡಿ ಉಯುನಿಯು ತನ್ನ ಸುಂದರ ದೃಶ್ಯಾವಳಿಗಳಿಗೆ ಹೆಸರುವಾಸಿಯಾಗಿದೆ. ಇದು ವಿಶ್ವದಲ್ಲೇ ಅತಿ ದೊಡ್ಡ ಉಪ್ಪು ಕ್ಷೇತ್ರವಾಗಿದೆ. ಬಹಳ ಹಿಂದೆಯೇ ತುಂಬಿ ಹರಿಯುತ್ತಿರುವ ಕೆರೆಗಳಿಂದ ಬಿಡುಗಡೆಯಾದ ಉಪ್ಪು ಮಣ್ಣು ಇದಾಗಿದೆ. ಇಲ್ಲಿ ಉಪ್ಪು ದಪ್ಪ ಪದರವಾಗಿ ಹರಡಿದಂತೆ ಕಾಣುತ್ತದೆ. ಇಲ್ಲಿನ ನೆಲವು ಹೆಪ್ಪುಗಟ್ಟಿದ ಉಪ್ಪಿನ ಪದರಗಳಿಂದ ಮುಚ್ಚಲ್ಪಟ್ಟಿದೆ.

3 / 6
ಸುತ್ತಮುತ್ತಲಿನ ಕೆರೆಗಳು ತುಂಬಿ ಹರಿಯುವ ಸಂದರ್ಭದಲ್ಲಿ ಮಾತ್ರ ವರ್ಷದ ಕೆಲವು ಸಮಯಗಳಲ್ಲಿ ನೀರು ಈ ಸ್ಥಳಕ್ಕೆ ಪ್ರವೇಶಿಸುತ್ತದೆ. ಆಗ ಈ ಬಿಳಿ ಉಪ್ಪು ನೆಲದಲ್ಲಿ ಆಕಾಶದ ಅದ್ಭುತ ಪ್ರತಿಬಿಂಬವನ್ನು ಸೃಷ್ಟಿಸುತ್ತದೆ. ಈ ಫೋಟೋಗಳನ್ನು ನೋಡಿದ ನಂತರ, ನೀವೂ ಸಹ ಎಂದಾದರೂ ಅಂತಹ ಅದ್ಭುತ ಸ್ಥಳಕ್ಕೆ ಭೇಟಿ ನೀಡುವ ಆಸೆ ಬರುತ್ತದೆ. ಅದರಲ್ಲಿ, ಬಿಳಿ ಮೋಡಗಳಿಂದ ನೀಲಿ ಆಕಾಶದ ಪ್ರತಿಬಿಂಬ, ಸಂಜೆಯ ಬಣ್ಣಗಳ ಪ್ರತಿಬಿಂಬ ಮತ್ತು ರಾತ್ರಿಯಲ್ಲಿ ನಕ್ಷತ್ರಗಳ ಪ್ರತಿಬಿಂಬವು ನೀರಿನ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಅದ್ಭುತ ಜಗತ್ತನ್ನು ನೀವು ಇಲ್ಲಿ ನೋಡುತ್ತೀರಿ.

ಸುತ್ತಮುತ್ತಲಿನ ಕೆರೆಗಳು ತುಂಬಿ ಹರಿಯುವ ಸಂದರ್ಭದಲ್ಲಿ ಮಾತ್ರ ವರ್ಷದ ಕೆಲವು ಸಮಯಗಳಲ್ಲಿ ನೀರು ಈ ಸ್ಥಳಕ್ಕೆ ಪ್ರವೇಶಿಸುತ್ತದೆ. ಆಗ ಈ ಬಿಳಿ ಉಪ್ಪು ನೆಲದಲ್ಲಿ ಆಕಾಶದ ಅದ್ಭುತ ಪ್ರತಿಬಿಂಬವನ್ನು ಸೃಷ್ಟಿಸುತ್ತದೆ. ಈ ಫೋಟೋಗಳನ್ನು ನೋಡಿದ ನಂತರ, ನೀವೂ ಸಹ ಎಂದಾದರೂ ಅಂತಹ ಅದ್ಭುತ ಸ್ಥಳಕ್ಕೆ ಭೇಟಿ ನೀಡುವ ಆಸೆ ಬರುತ್ತದೆ. ಅದರಲ್ಲಿ, ಬಿಳಿ ಮೋಡಗಳಿಂದ ನೀಲಿ ಆಕಾಶದ ಪ್ರತಿಬಿಂಬ, ಸಂಜೆಯ ಬಣ್ಣಗಳ ಪ್ರತಿಬಿಂಬ ಮತ್ತು ರಾತ್ರಿಯಲ್ಲಿ ನಕ್ಷತ್ರಗಳ ಪ್ರತಿಬಿಂಬವು ನೀರಿನ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಅದ್ಭುತ ಜಗತ್ತನ್ನು ನೀವು ಇಲ್ಲಿ ನೋಡುತ್ತೀರಿ.

4 / 6
ಸಾಲಾರ್ ಡಿ ಉಯುನಿ ಬಗ್ಗೆ ಕುತೂಹಲಕಾರಿ ಸಂಗತಿಗಳು, ವಿಶ್ವದ ಅತಿದೊಡ್ಡ ಉಪ್ಪು ಫ್ಲಾಟ್: ಸಾಲಾರ್ ಡಿ ಉಯುನಿಯನ್ನು ಸಾಲಾರ್ ಡಿ ಟುನುಪಾ ಎಂದೂ ಕರೆಯಲಾಗುತ್ತದೆ. 10,000 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಈ ಸ್ಥಳವು ವಿಶ್ವದ ಅತಿದೊಡ್ಡ ಉಪ್ಪಿನ ಗಣಿಯಾಗಿದೆ. ಇದು ಬೊಲಿವಿಯಾದ ಡೇನಿಯಲ್ ಕಾಂಪೋಸ್ ಪ್ರಾಂತ್ಯದಲ್ಲಿದೆ.

ಸಾಲಾರ್ ಡಿ ಉಯುನಿ ಬಗ್ಗೆ ಕುತೂಹಲಕಾರಿ ಸಂಗತಿಗಳು, ವಿಶ್ವದ ಅತಿದೊಡ್ಡ ಉಪ್ಪು ಫ್ಲಾಟ್: ಸಾಲಾರ್ ಡಿ ಉಯುನಿಯನ್ನು ಸಾಲಾರ್ ಡಿ ಟುನುಪಾ ಎಂದೂ ಕರೆಯಲಾಗುತ್ತದೆ. 10,000 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಈ ಸ್ಥಳವು ವಿಶ್ವದ ಅತಿದೊಡ್ಡ ಉಪ್ಪಿನ ಗಣಿಯಾಗಿದೆ. ಇದು ಬೊಲಿವಿಯಾದ ಡೇನಿಯಲ್ ಕಾಂಪೋಸ್ ಪ್ರಾಂತ್ಯದಲ್ಲಿದೆ.

5 / 6
ವಿಶ್ವದ ಅತಿದೊಡ್ಡ ನೈಸರ್ಗಿಕ ಕನ್ನಡಿ: ಮಳೆಗಾಲದಲ್ಲಿ, ಉಪ್ಪು ಫ್ಲಾಟ್‌ಗಳ ಮೇಲ್ಮೈಯಲ್ಲಿ ನಿಂತಿರುವ ನೀರು ಆಕಾಶ ಮತ್ತು ಮೋಡಗಳನ್ನು ಪ್ರತಿಬಿಂಬಿಸುವ ದೊಡ್ಡ ಕನ್ನಡಿಯನ್ನು ರೂಪಿಸುತ್ತದೆ. ಇದನ್ನು ವಿಶ್ವದ ಅತಿದೊಡ್ಡ ನೈಸರ್ಗಿಕ ಕನ್ನಡಿ ಎಂದು ಕರೆಯಲಾಗುತ್ತದೆ. ಇದನ್ನು ಆಕಾಶ ಕನ್ನಡಿ ಎಂದೂ ಕರೆಯುತ್ತಾರೆ.

ವಿಶ್ವದ ಅತಿದೊಡ್ಡ ನೈಸರ್ಗಿಕ ಕನ್ನಡಿ: ಮಳೆಗಾಲದಲ್ಲಿ, ಉಪ್ಪು ಫ್ಲಾಟ್‌ಗಳ ಮೇಲ್ಮೈಯಲ್ಲಿ ನಿಂತಿರುವ ನೀರು ಆಕಾಶ ಮತ್ತು ಮೋಡಗಳನ್ನು ಪ್ರತಿಬಿಂಬಿಸುವ ದೊಡ್ಡ ಕನ್ನಡಿಯನ್ನು ರೂಪಿಸುತ್ತದೆ. ಇದನ್ನು ವಿಶ್ವದ ಅತಿದೊಡ್ಡ ನೈಸರ್ಗಿಕ ಕನ್ನಡಿ ಎಂದು ಕರೆಯಲಾಗುತ್ತದೆ. ಇದನ್ನು ಆಕಾಶ ಕನ್ನಡಿ ಎಂದೂ ಕರೆಯುತ್ತಾರೆ.

6 / 6
Follow us
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ