ತಂದೆ-ಮಗಳ ಪಾತ್ರದಲ್ಲಿ ರಾಘಣ್ಣ-ಹರ್ಷಿಕಾ ಪೂಣಚ್ಚ​; ಇಲ್ಲಿದೆ ‘ಸ್ತಬ್ಧ’ ಫೋಟೋ ಗ್ಯಾಲರಿ

Edited By:

Updated on: Jan 29, 2022 | 3:29 PM

ನಟಿ ಹರ್ಷಿಕಾ ಪೂಣಚ್ಚ ಮತ್ತು ರಾಘವೇಂದ್ರ ರಾಜ್​ಕುಮಾರ್​ ಅವರು ‘ಸ್ತಬ್ಧ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಸೆಟ್ಟೇರಿತು. ಅದರ ಫೋಟೋ ಗ್ಯಾಲರಿ ಇಲ್ಲಿದೆ..

1 / 6
ಬ್ಯಾಕ್​ ಟು ಬ್ಯಾಕ್​ ಭೋಜ್​ಪುರಿ ಸಿನಿಮಾ ಮಾಡುತ್ತಿದ್ದ ನಟಿ ಹರ್ಷಿಕಾ ಪೂಣಚ್ಚ ಅವರು ಈಗ ಮತ್ತೆ ಕನ್ನಡದಲ್ಲೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ‘ಸ್ತಬ್ಧ’ ಎಂದು ಶೀರ್ಷಿಕೆ ಇಡಲಾಗಿದೆ.

ಬ್ಯಾಕ್​ ಟು ಬ್ಯಾಕ್​ ಭೋಜ್​ಪುರಿ ಸಿನಿಮಾ ಮಾಡುತ್ತಿದ್ದ ನಟಿ ಹರ್ಷಿಕಾ ಪೂಣಚ್ಚ ಅವರು ಈಗ ಮತ್ತೆ ಕನ್ನಡದಲ್ಲೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ ‘ಸ್ತಬ್ಧ’ ಎಂದು ಶೀರ್ಷಿಕೆ ಇಡಲಾಗಿದೆ.

2 / 6
‘ಸ್ತಬ್ಧ’ ಸಿನಿಮಾದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಅವರು ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ರಾಘಣ್ಣ ಮತ್ತು ಹರ್ಷಿಕಾ ಪೂಣಚ್ಚ ಅವರು ತಂದೆ-ಮಗಳಾಗಿ ಅಭಿನಯಿಸಲಿರುವುದು ವಿಶೇಷ.

‘ಸ್ತಬ್ಧ’ ಸಿನಿಮಾದಲ್ಲಿ ರಾಘವೇಂದ್ರ ರಾಜ್​ಕುಮಾರ್​ ಅವರು ಒಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ರಾಘಣ್ಣ ಮತ್ತು ಹರ್ಷಿಕಾ ಪೂಣಚ್ಚ ಅವರು ತಂದೆ-ಮಗಳಾಗಿ ಅಭಿನಯಿಸಲಿರುವುದು ವಿಶೇಷ.

3 / 6
‘ರಾಘಣ್ಣ ಜೊತೆ ನಟಿಸುವುದು ನನಗೆ ಹೆಮ್ಮೆಯ ವಿಚಾರ. ವಜ್ರೇಶ್ವರ ಕಂಬೈನ್ಸ್​ಗೆ ನಾನು ಒಂಥರಾ ಮನೆಮಗಳು ಆಗಿದ್ದೇನೆ. ಜಾಕಿ ಚಿತ್ರದಲ್ಲಿ ಅವರು ಅವಕಾಶ ನೀಡಿದ ನೆನಪು ಇನ್ನೂ ಹಸಿರಾಗಿದೆ’ ಎಂದಿದ್ದಾರೆ ಹರ್ಷಿಕಾ.

‘ರಾಘಣ್ಣ ಜೊತೆ ನಟಿಸುವುದು ನನಗೆ ಹೆಮ್ಮೆಯ ವಿಚಾರ. ವಜ್ರೇಶ್ವರ ಕಂಬೈನ್ಸ್​ಗೆ ನಾನು ಒಂಥರಾ ಮನೆಮಗಳು ಆಗಿದ್ದೇನೆ. ಜಾಕಿ ಚಿತ್ರದಲ್ಲಿ ಅವರು ಅವಕಾಶ ನೀಡಿದ ನೆನಪು ಇನ್ನೂ ಹಸಿರಾಗಿದೆ’ ಎಂದಿದ್ದಾರೆ ಹರ್ಷಿಕಾ.

4 / 6
ಈ ಹಿಂದೆ ಪುನೀತ್​ ರಾಜ್​ಕುಮಾರ್​ ಮತ್ತು ಶಿವರಾಜ್​ಕುಮಾರ್​ ಜೊತೆ ನಟಿಸಿದ್ದ ಹರ್ಷಿಕಾ ಪೂಣಚ್ಚ ಅವರು ರಾಘವೇಂದ್ರ ರಾಜ್​ಕುಮಾರ್​ ಜೊತೆ ನಟಿಸಲು ಕಾಯುತ್ತಿದ್ದರು. ‘ಸ್ತಬ್ಧ’ ಸಿನಿಮಾ ಮೂಲಕ ಅವರಿಗೆ ಈ ಅವಕಾಶ ಸಿಕ್ಕಿದೆ.

ಈ ಹಿಂದೆ ಪುನೀತ್​ ರಾಜ್​ಕುಮಾರ್​ ಮತ್ತು ಶಿವರಾಜ್​ಕುಮಾರ್​ ಜೊತೆ ನಟಿಸಿದ್ದ ಹರ್ಷಿಕಾ ಪೂಣಚ್ಚ ಅವರು ರಾಘವೇಂದ್ರ ರಾಜ್​ಕುಮಾರ್​ ಜೊತೆ ನಟಿಸಲು ಕಾಯುತ್ತಿದ್ದರು. ‘ಸ್ತಬ್ಧ’ ಸಿನಿಮಾ ಮೂಲಕ ಅವರಿಗೆ ಈ ಅವಕಾಶ ಸಿಕ್ಕಿದೆ.

5 / 6
‘ಈ ಸಿನಿಮಾದಲ್ಲಿ ವಿಭಿನ್ನವಾದ ಕಥೆ ಇದೆ. ಮೂರು ಪಾತ್ರಗಳು ಸಮಯಕ್ಕೆ ತಕ್ಕಂತೆ ಹೇಗೆ ಬದಲಾಗುತ್ತವೆ ಎಂಬುದನ್ನು ಚೆನ್ನಾಗಿ ತೋರಿಸಲಾಗಿದೆ. ಇಡೀ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ’ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

‘ಈ ಸಿನಿಮಾದಲ್ಲಿ ವಿಭಿನ್ನವಾದ ಕಥೆ ಇದೆ. ಮೂರು ಪಾತ್ರಗಳು ಸಮಯಕ್ಕೆ ತಕ್ಕಂತೆ ಹೇಗೆ ಬದಲಾಗುತ್ತವೆ ಎಂಬುದನ್ನು ಚೆನ್ನಾಗಿ ತೋರಿಸಲಾಗಿದೆ. ಇಡೀ ತಂಡಕ್ಕೆ ನಾನು ಧನ್ಯವಾದ ಹೇಳುತ್ತೇನೆ’ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

6 / 6
‘ಸ್ತಬ್ಧ’ ಚಿತ್ರವನ್ನು ಡಾ. ಡಿ.ವಿ. ವಿದ್ಯಾಸಾಗರ್​ ಅವರು ನಿರ್ಮಾಣ ಮಾಡುತ್ತಿದ್ದಾರೆ. ಲಾಲಿ ರಾಘವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ನೆರವೇರಿದೆ. ಹೊಸ ನಟ ಪ್ರತಾಪ್​ ಸಿಂಹ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

‘ಸ್ತಬ್ಧ’ ಚಿತ್ರವನ್ನು ಡಾ. ಡಿ.ವಿ. ವಿದ್ಯಾಸಾಗರ್​ ಅವರು ನಿರ್ಮಾಣ ಮಾಡುತ್ತಿದ್ದಾರೆ. ಲಾಲಿ ರಾಘವ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಮುಹೂರ್ತ ನೆರವೇರಿದೆ. ಹೊಸ ನಟ ಪ್ರತಾಪ್​ ಸಿಂಹ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Web contact

TV9 Kannada

Read More
Follow Us