ಮಲೆನಾಡಲ್ಲಿ ಸುರಿಯುತ್ತಿರುವ ಮಳೆಗೆ ಮೈದುಂಬಿ ಹರಿಯುತ್ತಿರುವ ಸಿರಿಮನೆ ಫಾಲ್ಸ್​ ; ಇಲ್ಲಿವೆ ಫೋಟೋಸ್

Edited By: ಕಿರಣ್ ಹನುಮಂತ್​ ಮಾದಾರ್

Updated on: Jul 09, 2023 | 9:12 AM

ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡಿನ ಜಲಪಾತಗಳು ಮರುಜೀವ ಪಡೆದುಕೊಂಡಿದೆ. ಅದರಂತೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ ಪ್ರವಾಸಿಗರನ್ನ ಸೆಳೆಯುತ್ತಿದೆ. ಅದರ ಝಲಕ್​ ಇಲ್ಲಿದೆ ನೋಡಿ.

1 / 7
ಮಲೆನಾಡಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಲಪಾತಗಳಿಗೆ ಜೀವಕಳೆ ಬಂದಿದೆ. ಹಚ್ಚ ಹಸಿರಿನ ನಡುವೆ ಧುಮುಕುತ್ತಿರುವ ಜಲಪಾತ, ನೋಡುಗರನ್ನೊಮ್ಮೆ ಮಂತ್ರಮುಗ್ಧರನ್ನಾಗಿಸುತ್ತದೆ.

ಮಲೆನಾಡಲ್ಲಿ ಸುರಿದ ಧಾರಾಕಾರ ಮಳೆಯಿಂದ ಜಲಪಾತಗಳಿಗೆ ಜೀವಕಳೆ ಬಂದಿದೆ. ಹಚ್ಚ ಹಸಿರಿನ ನಡುವೆ ಧುಮುಕುತ್ತಿರುವ ಜಲಪಾತ, ನೋಡುಗರನ್ನೊಮ್ಮೆ ಮಂತ್ರಮುಗ್ಧರನ್ನಾಗಿಸುತ್ತದೆ.

2 / 7
ಅದರಂತೆ ಚಿಕ್ಕಮಗಳೂರಿನ ಸಿರಿಮನೆ ಫಾಲ್ಸ್​ ಧಾರಕಾರ ಮಳೆಗೆ ದಟ್ಟಡವಿಯ ನಡುವೆ ಹರಿದು ಬರುತ್ತಿದ್ದು, ನೋಡಲು ಎರಡು ಕಣ್ಣುಗಳು ಸಾಲದಂತಿದೆ.

ಅದರಂತೆ ಚಿಕ್ಕಮಗಳೂರಿನ ಸಿರಿಮನೆ ಫಾಲ್ಸ್​ ಧಾರಕಾರ ಮಳೆಗೆ ದಟ್ಟಡವಿಯ ನಡುವೆ ಹರಿದು ಬರುತ್ತಿದ್ದು, ನೋಡಲು ಎರಡು ಕಣ್ಣುಗಳು ಸಾಲದಂತಿದೆ.

3 / 7
ಹೌದು ಮಳೆಗಾಲ ಬಂತೆಂದರೆ ಜಲಪಾತಗಳು ಮೈದುಂಬಿ ಹಾಲ್ನೊರೆಯಂತೆ ಹರಿಯುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ತಮ್ಮ ರಜೆಗಳನ್ನ ಇದಕ್ಕೆಂದೇ ಮೀಸಲಿಡುತ್ತಾರೆ.

ಹೌದು ಮಳೆಗಾಲ ಬಂತೆಂದರೆ ಜಲಪಾತಗಳು ಮೈದುಂಬಿ ಹಾಲ್ನೊರೆಯಂತೆ ಹರಿಯುತ್ತದೆ. ಇದನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಪ್ರವಾಸಿಗರು ತಮ್ಮ ರಜೆಗಳನ್ನ ಇದಕ್ಕೆಂದೇ ಮೀಸಲಿಡುತ್ತಾರೆ.

4 / 7
ಮಲೆನಾಡಿನಲ್ಲಿ ಸುರಿದ ಮಳೆಯಿಂದ ಜಲಪಾತಗಳು ದೃಶ್ಯ ಕಾವ್ಯ ಸೃಷ್ಟಿಸಿದ್ದು, ಸಿರಿಮನೆ‌ ಫಾಲ್ಸ್ ನೋಡಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.

ಮಲೆನಾಡಿನಲ್ಲಿ ಸುರಿದ ಮಳೆಯಿಂದ ಜಲಪಾತಗಳು ದೃಶ್ಯ ಕಾವ್ಯ ಸೃಷ್ಟಿಸಿದ್ದು, ಸಿರಿಮನೆ‌ ಫಾಲ್ಸ್ ನೋಡಲು ಪ್ರವಾಸಿಗರ ದಂಡು ಹರಿದು ಬರುತ್ತಿದೆ.

5 / 7
ಕಲ್ಲು ಬಂಡೆಯ ಮೇಲೆ ಹಾಲ್ನೊರೆಯಂತೆ ದುಮ್ಮಿಕ್ಕುತ್ತಿರುವ ಜಲಪಾತ. ಪ್ರವಾಸಿಗರನ್ನ ಎತ್ತಲೂ ಕರೆದಕೊಂಡು ಹೋಗುತ್ತದೆ.

ಕಲ್ಲು ಬಂಡೆಯ ಮೇಲೆ ಹಾಲ್ನೊರೆಯಂತೆ ದುಮ್ಮಿಕ್ಕುತ್ತಿರುವ ಜಲಪಾತ. ಪ್ರವಾಸಿಗರನ್ನ ಎತ್ತಲೂ ಕರೆದಕೊಂಡು ಹೋಗುತ್ತದೆ.

6 / 7
ಇನ್ನು ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ, ಬರೊಬ್ಬರಿ 100 ಅಡಿ ಎತ್ತರದಿಂದ ದುಮ್ಮಿಕ್ಕುತ್ತದೆ. ಇದನ್ನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಇನ್ನು ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ, ಬರೊಬ್ಬರಿ 100 ಅಡಿ ಎತ್ತರದಿಂದ ದುಮ್ಮಿಕ್ಕುತ್ತದೆ. ಇದನ್ನು ನೋಡಲು ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.

7 / 7
ಮುಂಗಾರು ಮಳೆಯಲ್ಲೇ ಜಲಪಾತಕ್ಕೆ ಇಳಿದು ಪ್ರವಾಸಿಗರು ಫುಲ್​ ಎಂಜಾಯ್ ಮಾಡುತ್ತಿದ್ದು, ಮಳೆಗಾಲದ ಪೃಕತಿ ಸೌಂದರ್ಯವನ್ನ ಸವಿಯುತ್ತಿದ್ದಾರೆ.

ಮುಂಗಾರು ಮಳೆಯಲ್ಲೇ ಜಲಪಾತಕ್ಕೆ ಇಳಿದು ಪ್ರವಾಸಿಗರು ಫುಲ್​ ಎಂಜಾಯ್ ಮಾಡುತ್ತಿದ್ದು, ಮಳೆಗಾಲದ ಪೃಕತಿ ಸೌಂದರ್ಯವನ್ನ ಸವಿಯುತ್ತಿದ್ದಾರೆ.

Published On - 9:12 am, Sun, 9 July 23

Ashwith Mavinaguni

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Follow Us