Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಿಷಯದಲ್ಲಿ ಅಮ್ಮನ ಈ ಮಾತುಗಳನ್ನು ತಪ್ಪದೆ ಕೇಳಿ

ಮದುವೆ ಎಂಬುದು ಜೀವನ ಪರ್ಯಂತ ಸಾಗುವ ಒಂದು ಮಧುರವಾದ ಅನುಬಂಧ. ಅಲ್ಲದೆ ಮದುವೆ ಜೀವನದ ಮಹತ್ವವಾದ ತಿರುವು ಕೂಡಾ ಹೌದು. ಈ ಸುಂದರ ಸಂಬಂಧ ಶಾಶ್ವತವಾಗಿ ಸುಮಧುರವಾಗಿ ಇರಬೇಕೆಂದರೆ ಒಂದಷ್ಟು ವಿಚಾರಗಳ ಬಗ್ಗೆ ಜಾಗೃತೆ ವಹಿಸುವುದು ಅತ್ಯಗತ್ಯ. ಹೀಗಿರುವಾಗ ಈ ವಿಷಯದಲ್ಲಿ ಅಮ್ಮನ ಮಾತನ್ನು ಕೇಳುವುದು ಸೂಕ್ತ. ಏಕೆಂದರೆ ಸಂಬಂಧ ನಿಭಾಯಿಸುವ, ಸಾಂಸಾರಿಕ ಜೀವನವನ್ನು ಸರಿದೂಗಿಸಿಕೊಂಡ ಹಾಗೂ ಜವಬ್ದಾರಿಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಹೋಗುವ ವಿಷಯದಲ್ಲಿ ಅಮ್ಮನಿಗೆ ಅನುಭವವಿದೆ. ಹಾಗಾಗಿ ಈ ವಿಚರದಲ್ಲಿ ಅಮ್ಮನ ಮಾತನ್ನು ಕೇಳುವುದು ಸೂಕ್ತ.

ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 16, 2025 | 6:11 PM

ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವುದು: ಮದುವೆಯ ವಿಚಾರಕ್ಕೆ ಬಂದಾಗ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ಮೊದಲ ಹಂತದಲ್ಲಿಯೇ ದುಡುಕಿದರೆ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆ-ಮನಕ್ಕೆ ಸೂಕ್ತವಾಗುವ, ಸಂಸ್ಕಾರಯುತ, ಒಳ್ಳೆಯ ಗುಣವಿರುವ ಸಂಗಾತಿಯನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯ.

ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವುದು: ಮದುವೆಯ ವಿಚಾರಕ್ಕೆ ಬಂದಾಗ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ಮೊದಲ ಹಂತದಲ್ಲಿಯೇ ದುಡುಕಿದರೆ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆ-ಮನಕ್ಕೆ ಸೂಕ್ತವಾಗುವ, ಸಂಸ್ಕಾರಯುತ, ಒಳ್ಳೆಯ ಗುಣವಿರುವ ಸಂಗಾತಿಯನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯ.

1 / 5
ಮೊಬೈಲ್‌, ಇತ್ಯಾದಿ ಸಾಧನಗಳಿಂದ ದೂರವಿರಿ: ಈಗ ನೀವು 24 ಗಂಟೆಯೂ ಮೊಬೈಲ್‌ನಲ್ಲಿಯೇ ಸಮಯವನ್ನು ಕಳೆಯುತ್ತಿರಬಹುದು. ಆದರೆ ಮದುವೆಯಾದ ಬಳಿಕ ಈ ಅಭ್ಯಾಸವನ್ನು ಬಿಟ್ಟುಬಿಡಿ. ಹೀಗೆ ಯಾವಾಗಲೂ ಮೊಬೈಲ್‌ನಲ್ಲಿಯೇ ಗಮನ ಇದ್ರೆ, ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಧ್ಯವಿಲ್ಲ.  ಇದರಿಂದ ಮನಸ್ತಾಪಗಳು ತಲೆದೂರುವ ಸಾಧ್ಯತೆ ಇರುತ್ತದೆ.

ಮೊಬೈಲ್‌, ಇತ್ಯಾದಿ ಸಾಧನಗಳಿಂದ ದೂರವಿರಿ: ಈಗ ನೀವು 24 ಗಂಟೆಯೂ ಮೊಬೈಲ್‌ನಲ್ಲಿಯೇ ಸಮಯವನ್ನು ಕಳೆಯುತ್ತಿರಬಹುದು. ಆದರೆ ಮದುವೆಯಾದ ಬಳಿಕ ಈ ಅಭ್ಯಾಸವನ್ನು ಬಿಟ್ಟುಬಿಡಿ. ಹೀಗೆ ಯಾವಾಗಲೂ ಮೊಬೈಲ್‌ನಲ್ಲಿಯೇ ಗಮನ ಇದ್ರೆ, ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಧ್ಯವಿಲ್ಲ. ಇದರಿಂದ ಮನಸ್ತಾಪಗಳು ತಲೆದೂರುವ ಸಾಧ್ಯತೆ ಇರುತ್ತದೆ.

2 / 5
ರಾಜಿ ಸಂಧಾನ: ಸಂಬಂಧದಲ್ಲಿ ಒಂದಷ್ಟು ಜಗಳ, ಹುಸಿ ಮುನಿಸುಗಳು ಸಾಮಾನ್ಯ. ಈ ಸಣ್ಣ ಮನಸ್ತಾಪಗಳನ್ನೇ ದೊಡ್ಡದು ಮಾಡಿಕೊಂಡು ಮಾತು ಬಿಟ್ಟರೆ ಮುಂದಿನ ದಿನಗಳಲ್ಲಿ ಇದುವೇ ಸಂಬಂಧದಲ್ಲಿ ಬಿರುಕು ಮೂಡುವುದಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಒಬ್ಬರಿಗೊಬ್ಬರು ಮಾತನಾಡಿಕೊಂಡು, ತಪ್ಪನ್ನು ತಿದ್ದಿಕೊಂಡು ನಡೆಯುವ ಗುಣವನ್ನು ಇಂದೇ ರೂಢಿಸಿಕೊಳ್ಳಿ.

ರಾಜಿ ಸಂಧಾನ: ಸಂಬಂಧದಲ್ಲಿ ಒಂದಷ್ಟು ಜಗಳ, ಹುಸಿ ಮುನಿಸುಗಳು ಸಾಮಾನ್ಯ. ಈ ಸಣ್ಣ ಮನಸ್ತಾಪಗಳನ್ನೇ ದೊಡ್ಡದು ಮಾಡಿಕೊಂಡು ಮಾತು ಬಿಟ್ಟರೆ ಮುಂದಿನ ದಿನಗಳಲ್ಲಿ ಇದುವೇ ಸಂಬಂಧದಲ್ಲಿ ಬಿರುಕು ಮೂಡುವುದಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಒಬ್ಬರಿಗೊಬ್ಬರು ಮಾತನಾಡಿಕೊಂಡು, ತಪ್ಪನ್ನು ತಿದ್ದಿಕೊಂಡು ನಡೆಯುವ ಗುಣವನ್ನು ಇಂದೇ ರೂಢಿಸಿಕೊಳ್ಳಿ.

3 / 5
ತಪ್ಪುಗಳನ್ನು ಕ್ಷಮಿಸಿ: ಕೆಲವರು ಸಂಗಾತಿಗಳ ತಪ್ಪನ್ನು ಕ್ಷಮಿಸದೆ ಅದೇ ವಿಷಯವನ್ನು ಇಟ್ಟುಕೊಂಡು ಪದೇ ಪದೇ ಜಗಳವಾಡುತ್ತಾರೆ. ಈ ಜಗಳಗಳು, ಮನಸ್ತಾಪಗಳು ಅತಿರೇಕಕ್ಕೆ ತಿರುಗಿದರೆ ಇದು ನಿಮ್ಮ ಸುಂದರ ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ. ಈ ವಿಷಯವಾಗಿ ಡಿವೋರ್ಸ್‌ ಹಂತಕ್ಕೆ ಹೋದವರು ಇದ್ದಾರೆ. ಹೀಗಿರುವಾಗ ನೀವು ಮದುವೆಯಾದ ಬಳಿಕ ನಿಮ್ಮ ಸಂಬಂಧ ಶಾಶ್ವತವಾಗಿರಬೇಕೆಂದರೆ ತಪ್ಪನ್ನು ಕ್ಷಮಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ತಪ್ಪುಗಳನ್ನು ಕ್ಷಮಿಸಿ: ಕೆಲವರು ಸಂಗಾತಿಗಳ ತಪ್ಪನ್ನು ಕ್ಷಮಿಸದೆ ಅದೇ ವಿಷಯವನ್ನು ಇಟ್ಟುಕೊಂಡು ಪದೇ ಪದೇ ಜಗಳವಾಡುತ್ತಾರೆ. ಈ ಜಗಳಗಳು, ಮನಸ್ತಾಪಗಳು ಅತಿರೇಕಕ್ಕೆ ತಿರುಗಿದರೆ ಇದು ನಿಮ್ಮ ಸುಂದರ ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ. ಈ ವಿಷಯವಾಗಿ ಡಿವೋರ್ಸ್‌ ಹಂತಕ್ಕೆ ಹೋದವರು ಇದ್ದಾರೆ. ಹೀಗಿರುವಾಗ ನೀವು ಮದುವೆಯಾದ ಬಳಿಕ ನಿಮ್ಮ ಸಂಬಂಧ ಶಾಶ್ವತವಾಗಿರಬೇಕೆಂದರೆ ತಪ್ಪನ್ನು ಕ್ಷಮಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

4 / 5
ನಿಷ್ಠೆಯಿಂದ ಇರಿ: ಮದುವೆಯಾದ ಬಳಿಕ ನೀವು ಯಾರಿಗಾಗಿಯೋ ನಿಮ್ಮ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ಎಂತಹದ್ದೇ ಸಂದರ್ಭ ಬಂದರೂ ಸಂಬಂಧದ ವಿಷಯದಲ್ಲಿ ನಿಷ್ಠಾವಂತರಾಗಿರಿ. ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ನಿಷ್ಠೆ  ಪ್ರೀತಿ, ಪರಸ್ಪರ ಗೌರವ, ಅರ್ಥ ಮಾಡಿಕೊಳ್ಳುವ ಗುಣ ಈ ಎಲ್ಲಾ ಅಂಶಗಳು ಸಂಬಂಧಗಳನ್ನು ಬಲ ಪಡಿಸುತ್ತದೆ.

ನಿಷ್ಠೆಯಿಂದ ಇರಿ: ಮದುವೆಯಾದ ಬಳಿಕ ನೀವು ಯಾರಿಗಾಗಿಯೋ ನಿಮ್ಮ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ಎಂತಹದ್ದೇ ಸಂದರ್ಭ ಬಂದರೂ ಸಂಬಂಧದ ವಿಷಯದಲ್ಲಿ ನಿಷ್ಠಾವಂತರಾಗಿರಿ. ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ನಿಷ್ಠೆ ಪ್ರೀತಿ, ಪರಸ್ಪರ ಗೌರವ, ಅರ್ಥ ಮಾಡಿಕೊಳ್ಳುವ ಗುಣ ಈ ಎಲ್ಲಾ ಅಂಶಗಳು ಸಂಬಂಧಗಳನ್ನು ಬಲ ಪಡಿಸುತ್ತದೆ.

5 / 5

Published On - 6:10 pm, Wed, 16 April 25

Follow us
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ತವರಿನಲ್ಲಿ ಗೆದ್ದ ಆರ್​ಸಿಬಿ; ಮುಗಿಲು ಮುಟ್ಟಿದ ಫ್ಯಾನ್ಸ್ ಸಂಭ್ರಮ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ಒಳ್ಳೆಯ ಸಿನಿಮಾ ಮಾಡಿದ್ರೂ ಜನ ಬರಲ್ಲ ಯಾಕೆ? ಪಾಸಿಟಿವ್ ಉತ್ತರ ನೀಡಿದ ರಾಘಣ್ಣ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ