AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ವಿಷಯದಲ್ಲಿ ಅಮ್ಮನ ಈ ಮಾತುಗಳನ್ನು ತಪ್ಪದೆ ಕೇಳಿ

ಮದುವೆ ಎಂಬುದು ಜೀವನ ಪರ್ಯಂತ ಸಾಗುವ ಒಂದು ಮಧುರವಾದ ಅನುಬಂಧ. ಅಲ್ಲದೆ ಮದುವೆ ಜೀವನದ ಮಹತ್ವವಾದ ತಿರುವು ಕೂಡಾ ಹೌದು. ಈ ಸುಂದರ ಸಂಬಂಧ ಶಾಶ್ವತವಾಗಿ ಸುಮಧುರವಾಗಿ ಇರಬೇಕೆಂದರೆ ಒಂದಷ್ಟು ವಿಚಾರಗಳ ಬಗ್ಗೆ ಜಾಗೃತೆ ವಹಿಸುವುದು ಅತ್ಯಗತ್ಯ. ಹೀಗಿರುವಾಗ ಈ ವಿಷಯದಲ್ಲಿ ಅಮ್ಮನ ಮಾತನ್ನು ಕೇಳುವುದು ಸೂಕ್ತ. ಏಕೆಂದರೆ ಸಂಬಂಧ ನಿಭಾಯಿಸುವ, ಸಾಂಸಾರಿಕ ಜೀವನವನ್ನು ಸರಿದೂಗಿಸಿಕೊಂಡ ಹಾಗೂ ಜವಬ್ದಾರಿಗಳನ್ನು ಸೂಕ್ತವಾಗಿ ನಿಭಾಯಿಸಿಕೊಂಡು ಹೋಗುವ ವಿಷಯದಲ್ಲಿ ಅಮ್ಮನಿಗೆ ಅನುಭವವಿದೆ. ಹಾಗಾಗಿ ಈ ವಿಚರದಲ್ಲಿ ಅಮ್ಮನ ಮಾತನ್ನು ಕೇಳುವುದು ಸೂಕ್ತ.

ಮಾಲಾಶ್ರೀ ಅಂಚನ್​
| Edited By: |

Updated on:Apr 16, 2025 | 6:11 PM

Share
ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವುದು: ಮದುವೆಯ ವಿಚಾರಕ್ಕೆ ಬಂದಾಗ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ಮೊದಲ ಹಂತದಲ್ಲಿಯೇ ದುಡುಕಿದರೆ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆ-ಮನಕ್ಕೆ ಸೂಕ್ತವಾಗುವ, ಸಂಸ್ಕಾರಯುತ, ಒಳ್ಳೆಯ ಗುಣವಿರುವ ಸಂಗಾತಿಯನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯ.

ಸರಿಯಾದ ವ್ಯಕ್ತಿಯನ್ನು ಆಯ್ಕೆ ಮಾಡುವುದು: ಮದುವೆಯ ವಿಚಾರಕ್ಕೆ ಬಂದಾಗ ಸರಿಯಾದ ಸಂಗಾತಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ. ಈ ಮೊದಲ ಹಂತದಲ್ಲಿಯೇ ದುಡುಕಿದರೆ ಸಂಬಂಧ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಮ್ಮ ಮನೆ-ಮನಕ್ಕೆ ಸೂಕ್ತವಾಗುವ, ಸಂಸ್ಕಾರಯುತ, ಒಳ್ಳೆಯ ಗುಣವಿರುವ ಸಂಗಾತಿಯನ್ನು ಆಯ್ಕೆ ಮಾಡುವುದು ತುಂಬಾನೇ ಮುಖ್ಯ.

1 / 5
ಮೊಬೈಲ್‌, ಇತ್ಯಾದಿ ಸಾಧನಗಳಿಂದ ದೂರವಿರಿ: ಈಗ ನೀವು 24 ಗಂಟೆಯೂ ಮೊಬೈಲ್‌ನಲ್ಲಿಯೇ ಸಮಯವನ್ನು ಕಳೆಯುತ್ತಿರಬಹುದು. ಆದರೆ ಮದುವೆಯಾದ ಬಳಿಕ ಈ ಅಭ್ಯಾಸವನ್ನು ಬಿಟ್ಟುಬಿಡಿ. ಹೀಗೆ ಯಾವಾಗಲೂ ಮೊಬೈಲ್‌ನಲ್ಲಿಯೇ ಗಮನ ಇದ್ರೆ, ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಧ್ಯವಿಲ್ಲ.  ಇದರಿಂದ ಮನಸ್ತಾಪಗಳು ತಲೆದೂರುವ ಸಾಧ್ಯತೆ ಇರುತ್ತದೆ.

ಮೊಬೈಲ್‌, ಇತ್ಯಾದಿ ಸಾಧನಗಳಿಂದ ದೂರವಿರಿ: ಈಗ ನೀವು 24 ಗಂಟೆಯೂ ಮೊಬೈಲ್‌ನಲ್ಲಿಯೇ ಸಮಯವನ್ನು ಕಳೆಯುತ್ತಿರಬಹುದು. ಆದರೆ ಮದುವೆಯಾದ ಬಳಿಕ ಈ ಅಭ್ಯಾಸವನ್ನು ಬಿಟ್ಟುಬಿಡಿ. ಹೀಗೆ ಯಾವಾಗಲೂ ಮೊಬೈಲ್‌ನಲ್ಲಿಯೇ ಗಮನ ಇದ್ರೆ, ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಧ್ಯವಿಲ್ಲ. ಇದರಿಂದ ಮನಸ್ತಾಪಗಳು ತಲೆದೂರುವ ಸಾಧ್ಯತೆ ಇರುತ್ತದೆ.

2 / 5
ರಾಜಿ ಸಂಧಾನ: ಸಂಬಂಧದಲ್ಲಿ ಒಂದಷ್ಟು ಜಗಳ, ಹುಸಿ ಮುನಿಸುಗಳು ಸಾಮಾನ್ಯ. ಈ ಸಣ್ಣ ಮನಸ್ತಾಪಗಳನ್ನೇ ದೊಡ್ಡದು ಮಾಡಿಕೊಂಡು ಮಾತು ಬಿಟ್ಟರೆ ಮುಂದಿನ ದಿನಗಳಲ್ಲಿ ಇದುವೇ ಸಂಬಂಧದಲ್ಲಿ ಬಿರುಕು ಮೂಡುವುದಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಒಬ್ಬರಿಗೊಬ್ಬರು ಮಾತನಾಡಿಕೊಂಡು, ತಪ್ಪನ್ನು ತಿದ್ದಿಕೊಂಡು ನಡೆಯುವ ಗುಣವನ್ನು ಇಂದೇ ರೂಢಿಸಿಕೊಳ್ಳಿ.

ರಾಜಿ ಸಂಧಾನ: ಸಂಬಂಧದಲ್ಲಿ ಒಂದಷ್ಟು ಜಗಳ, ಹುಸಿ ಮುನಿಸುಗಳು ಸಾಮಾನ್ಯ. ಈ ಸಣ್ಣ ಮನಸ್ತಾಪಗಳನ್ನೇ ದೊಡ್ಡದು ಮಾಡಿಕೊಂಡು ಮಾತು ಬಿಟ್ಟರೆ ಮುಂದಿನ ದಿನಗಳಲ್ಲಿ ಇದುವೇ ಸಂಬಂಧದಲ್ಲಿ ಬಿರುಕು ಮೂಡುವುದಕ್ಕೆ ಕಾರಣವಾಗುತ್ತದೆ. ಹೀಗಿರುವಾಗ ಒಬ್ಬರಿಗೊಬ್ಬರು ಮಾತನಾಡಿಕೊಂಡು, ತಪ್ಪನ್ನು ತಿದ್ದಿಕೊಂಡು ನಡೆಯುವ ಗುಣವನ್ನು ಇಂದೇ ರೂಢಿಸಿಕೊಳ್ಳಿ.

3 / 5
ತಪ್ಪುಗಳನ್ನು ಕ್ಷಮಿಸಿ: ಕೆಲವರು ಸಂಗಾತಿಗಳ ತಪ್ಪನ್ನು ಕ್ಷಮಿಸದೆ ಅದೇ ವಿಷಯವನ್ನು ಇಟ್ಟುಕೊಂಡು ಪದೇ ಪದೇ ಜಗಳವಾಡುತ್ತಾರೆ. ಈ ಜಗಳಗಳು, ಮನಸ್ತಾಪಗಳು ಅತಿರೇಕಕ್ಕೆ ತಿರುಗಿದರೆ ಇದು ನಿಮ್ಮ ಸುಂದರ ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ. ಈ ವಿಷಯವಾಗಿ ಡಿವೋರ್ಸ್‌ ಹಂತಕ್ಕೆ ಹೋದವರು ಇದ್ದಾರೆ. ಹೀಗಿರುವಾಗ ನೀವು ಮದುವೆಯಾದ ಬಳಿಕ ನಿಮ್ಮ ಸಂಬಂಧ ಶಾಶ್ವತವಾಗಿರಬೇಕೆಂದರೆ ತಪ್ಪನ್ನು ಕ್ಷಮಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

ತಪ್ಪುಗಳನ್ನು ಕ್ಷಮಿಸಿ: ಕೆಲವರು ಸಂಗಾತಿಗಳ ತಪ್ಪನ್ನು ಕ್ಷಮಿಸದೆ ಅದೇ ವಿಷಯವನ್ನು ಇಟ್ಟುಕೊಂಡು ಪದೇ ಪದೇ ಜಗಳವಾಡುತ್ತಾರೆ. ಈ ಜಗಳಗಳು, ಮನಸ್ತಾಪಗಳು ಅತಿರೇಕಕ್ಕೆ ತಿರುಗಿದರೆ ಇದು ನಿಮ್ಮ ಸುಂದರ ಸಂಬಂಧವನ್ನೇ ಹಾಳು ಮಾಡಿ ಬಿಡುತ್ತದೆ. ಈ ವಿಷಯವಾಗಿ ಡಿವೋರ್ಸ್‌ ಹಂತಕ್ಕೆ ಹೋದವರು ಇದ್ದಾರೆ. ಹೀಗಿರುವಾಗ ನೀವು ಮದುವೆಯಾದ ಬಳಿಕ ನಿಮ್ಮ ಸಂಬಂಧ ಶಾಶ್ವತವಾಗಿರಬೇಕೆಂದರೆ ತಪ್ಪನ್ನು ಕ್ಷಮಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಿ.

4 / 5
ನಿಷ್ಠೆಯಿಂದ ಇರಿ: ಮದುವೆಯಾದ ಬಳಿಕ ನೀವು ಯಾರಿಗಾಗಿಯೋ ನಿಮ್ಮ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ಎಂತಹದ್ದೇ ಸಂದರ್ಭ ಬಂದರೂ ಸಂಬಂಧದ ವಿಷಯದಲ್ಲಿ ನಿಷ್ಠಾವಂತರಾಗಿರಿ. ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ನಿಷ್ಠೆ  ಪ್ರೀತಿ, ಪರಸ್ಪರ ಗೌರವ, ಅರ್ಥ ಮಾಡಿಕೊಳ್ಳುವ ಗುಣ ಈ ಎಲ್ಲಾ ಅಂಶಗಳು ಸಂಬಂಧಗಳನ್ನು ಬಲ ಪಡಿಸುತ್ತದೆ.

ನಿಷ್ಠೆಯಿಂದ ಇರಿ: ಮದುವೆಯಾದ ಬಳಿಕ ನೀವು ಯಾರಿಗಾಗಿಯೋ ನಿಮ್ಮ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ಎಂತಹದ್ದೇ ಸಂದರ್ಭ ಬಂದರೂ ಸಂಬಂಧದ ವಿಷಯದಲ್ಲಿ ನಿಷ್ಠಾವಂತರಾಗಿರಿ. ಯಾವುದೇ ಕಾರಣಕ್ಕೂ ಸಂಗಾತಿಗೆ ಮೋಸ ಮಾಡಲು ಹೋಗಬೇಡಿ. ನಿಷ್ಠೆ ಪ್ರೀತಿ, ಪರಸ್ಪರ ಗೌರವ, ಅರ್ಥ ಮಾಡಿಕೊಳ್ಳುವ ಗುಣ ಈ ಎಲ್ಲಾ ಅಂಶಗಳು ಸಂಬಂಧಗಳನ್ನು ಬಲ ಪಡಿಸುತ್ತದೆ.

5 / 5

Published On - 6:10 pm, Wed, 16 April 25

Malashree anchan
Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
‘ಕಂಟ್ರಿ ಮೇಡ್’ ಸಿನಿಮಾನಲ್ಲಿ ಕತೆಯೇ ನಾಯಕ: ವಿಡಿಯೋ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ