Kannada Rajyotsava 2023: ಸಿರಿಗನ್ನಡಂ ಗೆಲ್ಗೆ.. ಸಿರಿಗನ್ನಡಂ ಬಾಳ್ಗೆ.. ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡದ ಕಂಪು

|

Updated on: Nov 01, 2023 | 2:32 PM

ರಾಜ್ಯಕ್ಕೆ ಮೈಸೂರು ಎಂದು ಹೆಸರಿಟ್ಟು ಇಂದಿಗೆ 50 ವರ್ಷಗಳು ಪೂರ್ಣಗೊಂಡಿವೆ. 68ನೇ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಯ್ತು. ಕಂಠೀರವ ಕ್ರೀಡಾಂಗಣದಲ್ಲಿ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಮಕ್ಕಳ ಕನ್ನಡದ ಸಂಭ್ರಮದಲ್ಲಿ ಮಿಂದೆದ್ರು. ಅದರ ಫೋಟೋಸ್ ಇಲ್ಲಿವೆ.

1 / 8
ರಾಜ್ಯಾದ್ಯಂತ ಇಂದು ಕನ್ನಡ ರಾಜ್ಯೋತ್ಸದ ಸಂಭ್ರಮ-ಸಡಗರ ಮನೆ ಮಾಡಿದೆ. ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡದ ಕಂಪು ಹಬ್ಬಿದೆ. ಕನ್ನಡ ಹಬ್ಬದ ಸಂಭ್ರಮದಲ್ಲಿ ಬೆಂಗಳೂರಿಗರು ಮಿಂದೆದಿದ್ದಾರೆ.

ರಾಜ್ಯಾದ್ಯಂತ ಇಂದು ಕನ್ನಡ ರಾಜ್ಯೋತ್ಸದ ಸಂಭ್ರಮ-ಸಡಗರ ಮನೆ ಮಾಡಿದೆ. ಬೆಂಗಳೂರಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಂಠೀರವ ಕ್ರೀಡಾಂಗಣದಲ್ಲಿ ಕನ್ನಡದ ಕಂಪು ಹಬ್ಬಿದೆ. ಕನ್ನಡ ಹಬ್ಬದ ಸಂಭ್ರಮದಲ್ಲಿ ಬೆಂಗಳೂರಿಗರು ಮಿಂದೆದಿದ್ದಾರೆ.

2 / 8
ರಾಜ್ಯಕ್ಕೆ ಮೈಸೂರು ಎಂದು ಹೆಸರಿಟ್ಟು ಇಂದಿಗೆ 50 ವರ್ಷಗಳು ಪೂರ್ಣಗೊಂಡಿವೆ. 68ನೇ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಯ್ತು. ಕಂಠೀರವ ಕ್ರೀಡಾಂಗಣದಲ್ಲಿ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಮಕ್ಕಳ ಕನ್ನಡದ ಸಂಭ್ರಮದಲ್ಲಿ ಮಿಂದೆದ್ರು.

ರಾಜ್ಯಕ್ಕೆ ಮೈಸೂರು ಎಂದು ಹೆಸರಿಟ್ಟು ಇಂದಿಗೆ 50 ವರ್ಷಗಳು ಪೂರ್ಣಗೊಂಡಿವೆ. 68ನೇ ಕನ್ನಡ ರಾಜ್ಯೋತ್ಸವದ ಸಂಭ್ರಮವನ್ನ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಯ್ತು. ಕಂಠೀರವ ಕ್ರೀಡಾಂಗಣದಲ್ಲಿ ಬರೋಬ್ಬರಿ 10 ಸಾವಿರಕ್ಕೂ ಹೆಚ್ಚು ಮಕ್ಕಳ ಕನ್ನಡದ ಸಂಭ್ರಮದಲ್ಲಿ ಮಿಂದೆದ್ರು.

3 / 8
ಕ್ರೀಡಾಂಗಣದ ಮಧ್ಯೆ ಕನ್ನಡದ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ, ಹಬ್ಬವನ್ನ ಆನಂದಿಸಿದ್ರು. ಕ್ರೀಡಾಂಗಣದ ಸುತ್ತ ಕನ್ನಡದ ಭಾವುಟಗಳು ರಾರಾಜಿಸಿದ್ವು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಬೆಂಗಳೂರಿನ ಶಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ರು.

ಕ್ರೀಡಾಂಗಣದ ಮಧ್ಯೆ ಕನ್ನಡದ ಹಾಡುಗಳಿಗೆ ವಿದ್ಯಾರ್ಥಿಗಳು ಹೆಜ್ಜೆ ಹಾಕಿ, ಹಬ್ಬವನ್ನ ಆನಂದಿಸಿದ್ರು. ಕ್ರೀಡಾಂಗಣದ ಸುತ್ತ ಕನ್ನಡದ ಭಾವುಟಗಳು ರಾರಾಜಿಸಿದ್ವು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಸೇರಿದಂತೆ ಬೆಂಗಳೂರಿನ ಶಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ರು.

4 / 8
ಬೆಂಗಳೂರಿನ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಅಧಿಕೃತ ಕನ್ನಡ ಭಾವುಟದ ಕೂಗು ಕೇಳಿಬಂತು. ಕೇಂದ್ರ ಸರ್ಕಾರದ ವಿರುದ್ಧ ಶಾಸಕ ರಿಜ್ವಾನ್ ಹರ್ಷದ್ ಅಸಮಾಧಾನ ಹೊರಹಾಕಿದ್ರು. ರಾಜ್ಯಕ್ಕೆ ಅಧಿಕೃತ ಧ್ವಜ ಬೇಕು ಎಂದು ರಿಜ್ವಾನ್ ವೇದಿಕೆಯಲ್ಲೇ ಆಗ್ರಹಿಸಿದ್ರು.

ಬೆಂಗಳೂರಿನ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಅಧಿಕೃತ ಕನ್ನಡ ಭಾವುಟದ ಕೂಗು ಕೇಳಿಬಂತು. ಕೇಂದ್ರ ಸರ್ಕಾರದ ವಿರುದ್ಧ ಶಾಸಕ ರಿಜ್ವಾನ್ ಹರ್ಷದ್ ಅಸಮಾಧಾನ ಹೊರಹಾಕಿದ್ರು. ರಾಜ್ಯಕ್ಕೆ ಅಧಿಕೃತ ಧ್ವಜ ಬೇಕು ಎಂದು ರಿಜ್ವಾನ್ ವೇದಿಕೆಯಲ್ಲೇ ಆಗ್ರಹಿಸಿದ್ರು.

5 / 8
ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯ ಸಹ ಕೇಂದ್ರದ ವಿರುದ್ಧ ಗುಡುಗಿದ್ರು. ಎಲ್ಲರೂ ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಆಗ್ರಹಿಸಿದ್ರು. ಪರೀಕ್ಷೆಗಳನ್ನ ಕನ್ನಡದಲ್ಲೇ ನಡೆಸಬೇಕು ಹಿಂದಿ-ಇಂಗ್ಲಿಷ್ ಹೇರಿಕೆ ನಿಲ್ಲಿಸಬೇಕು ಎಂದರು.

ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯ ಸಹ ಕೇಂದ್ರದ ವಿರುದ್ಧ ಗುಡುಗಿದ್ರು. ಎಲ್ಲರೂ ಕನ್ನಡದಲ್ಲೇ ವ್ಯವಹರಿಸಬೇಕು ಎಂದು ಆಗ್ರಹಿಸಿದ್ರು. ಪರೀಕ್ಷೆಗಳನ್ನ ಕನ್ನಡದಲ್ಲೇ ನಡೆಸಬೇಕು ಹಿಂದಿ-ಇಂಗ್ಲಿಷ್ ಹೇರಿಕೆ ನಿಲ್ಲಿಸಬೇಕು ಎಂದರು.

6 / 8
ಇನ್ನು ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಕರುನಾಡಿಗೆ ಆಗುತ್ತಿರುವ ಅನ್ಯಾಯವವನ್ನು ಪಕ್ಷಾತೀತವಾಗಿ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ಖಂಡಿಸೋಣ. ಕರ್ನಾಟಕದ ಪಾಲಿನ ತೆರಿಗೆ, ಬರಪರಿಹಾರ, ಅನುದಾನಗಳ ನ್ಯಾಯಯುತ ಪಾಲು ನಾಡಿಗೆ ಬರಬೇಕು, ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಮೇಲಿನ ದಾಳಿಗಳು ಕೊನೆಯಾಗಬೇಕು.

ಇನ್ನು ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಕರುನಾಡಿಗೆ ಆಗುತ್ತಿರುವ ಅನ್ಯಾಯವವನ್ನು ಪಕ್ಷಾತೀತವಾಗಿ ಕನ್ನಡಿಗರೆಲ್ಲರೂ ಒಕ್ಕೊರಲಿನಿಂದ ಖಂಡಿಸೋಣ. ಕರ್ನಾಟಕದ ಪಾಲಿನ ತೆರಿಗೆ, ಬರಪರಿಹಾರ, ಅನುದಾನಗಳ ನ್ಯಾಯಯುತ ಪಾಲು ನಾಡಿಗೆ ಬರಬೇಕು, ಕನ್ನಡ ನಾಡು, ನುಡಿ, ಸಂಸ್ಕೃತಿಗಳ ಮೇಲಿನ ದಾಳಿಗಳು ಕೊನೆಯಾಗಬೇಕು.

7 / 8
ರಾಜಕೀಯಕ್ಕಿಂತ ನನ್ನ ನಾಡು, ನನ್ನ ಭಾಷೆ, ನನ್ನ ಜನ ನನಗೆ ಮುಖ್ಯ ಎಂದು ಸಿದ್ದರಾಮಯ್ಯ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ, ರಾಜ್ಯ ನಾಯಕರು ನಾಡಿನ ಪರವಾಗಿ ಕೆಲವು ಒತ್ತಾಯಗಳನ್ನ ಕೇಂದ್ರ ಮುಂದಿಟ್ಟಿದ್ದಾರೆ.

ರಾಜಕೀಯಕ್ಕಿಂತ ನನ್ನ ನಾಡು, ನನ್ನ ಭಾಷೆ, ನನ್ನ ಜನ ನನಗೆ ಮುಖ್ಯ ಎಂದು ಸಿದ್ದರಾಮಯ್ಯ ಟ್ವೀಟ್​ನಲ್ಲಿ ಬರೆದುಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವದ ಸಂಭ್ರಮದ ನಡುವೆ, ರಾಜ್ಯ ನಾಯಕರು ನಾಡಿನ ಪರವಾಗಿ ಕೆಲವು ಒತ್ತಾಯಗಳನ್ನ ಕೇಂದ್ರ ಮುಂದಿಟ್ಟಿದ್ದಾರೆ.

8 / 8
ಕನ್ನಡದ ಹಬ್ಬಕ್ಕೆ ಪ್ರತಿ ಜಿಲ್ಲೆಗಳು ಶೃಂಗಾರಗೊಂಡಿದ್ವು. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜರೋಹಣ ನೆರವೇರಿಸಿದ್ರು. ಕನ್ನಡಿಗರು ರಾಜ್ಯೋತ್ಸವದ ಸಂಭ್ರಮವನ್ನ ಆನಂದಿಸಿದ್ರು. ವಿವಿಧ ಪ್ರಕಾರದ ನೃತ್ಯ, ಹಾಡಿನ ಮೂಲಕ  ರಾಜ್ಯೋತ್ಸವಕ್ಕೆ ಕಳೆ ತಂದುಕೊಟ್ಟರು.

ಕನ್ನಡದ ಹಬ್ಬಕ್ಕೆ ಪ್ರತಿ ಜಿಲ್ಲೆಗಳು ಶೃಂಗಾರಗೊಂಡಿದ್ವು. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜರೋಹಣ ನೆರವೇರಿಸಿದ್ರು. ಕನ್ನಡಿಗರು ರಾಜ್ಯೋತ್ಸವದ ಸಂಭ್ರಮವನ್ನ ಆನಂದಿಸಿದ್ರು. ವಿವಿಧ ಪ್ರಕಾರದ ನೃತ್ಯ, ಹಾಡಿನ ಮೂಲಕ ರಾಜ್ಯೋತ್ಸವಕ್ಕೆ ಕಳೆ ತಂದುಕೊಟ್ಟರು.