ಮಂಗಳಮುಖಿಯರಿಗೆ ಕಿರಣ್ ರಾಜ್ ಸಹಾಯ; ಮನಸಾರೆ ನಟನಿಗೆ ಹರಸಿದ ತೃತೀಯ ಲಿಂಗಿಗಳು

| Updated By: ರಾಜೇಶ್ ದುಗ್ಗುಮನೆ

Updated on: Feb 14, 2022 | 3:33 PM

ಕಳದೆರಡು ವರ್ಷಗಳಿಂದ ಕೊರೊನಾದಿಂದ ಆದ ಸಮಸ್ಯೆಗಳು ಒಂದೆರಡಲ್ಲ.ಅನೇಕರಿಗೆ ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡುವ ಕಾಯಕವನ್ನು ಕಿರಣ್​ ರಾಜ್ ಮಾಡುತ್ತಿದ್ದಾರೆ.

1 / 6
ನಟ ಕಿರಣ್​ ರಾಜ್​ ಅವರು ‘ಕಿರಣ್​ ರಾಜ್​ ಫೌಂಡೇಷನ್​’ ಸ್ಥಾಪಿಸಿ ಅದರ ಅಡಿಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ. ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಕಿರಣ್​ ಸಹಾಯ ಮಾಡಿದ್ದರು. ನಟನೆಯ ಜತೆಗೆ ಅವರು ಮಾಡುವ ಸಾಮಾಜಿಕ ಕಾರ್ಯಗಳಿಂದಲೂ ಕಿರಣ್​ ರಾಜ್​ ಇಷ್ಟವಾಗುತ್ತಿದ್ದಾರೆ. ಈ ಬಾರಿ ಅವರು ಮಂಗಳಮುಖಿಯರಿಗೆ ಸಹಾಯ ಮಾಡಿದ್ದಾರೆ.

ನಟ ಕಿರಣ್​ ರಾಜ್​ ಅವರು ‘ಕಿರಣ್​ ರಾಜ್​ ಫೌಂಡೇಷನ್​’ ಸ್ಥಾಪಿಸಿ ಅದರ ಅಡಿಯಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಿದ್ದಾರೆ. ಕೊವಿಡ್​ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಕಿರಣ್​ ಸಹಾಯ ಮಾಡಿದ್ದರು. ನಟನೆಯ ಜತೆಗೆ ಅವರು ಮಾಡುವ ಸಾಮಾಜಿಕ ಕಾರ್ಯಗಳಿಂದಲೂ ಕಿರಣ್​ ರಾಜ್​ ಇಷ್ಟವಾಗುತ್ತಿದ್ದಾರೆ. ಈ ಬಾರಿ ಅವರು ಮಂಗಳಮುಖಿಯರಿಗೆ ಸಹಾಯ ಮಾಡಿದ್ದಾರೆ.

2 / 6
ಕಳದೆರಡು ವರ್ಷಗಳಿಂದ ಕೊರೊನಾದಿಂದ ಆದ ಸಮಸ್ಯೆಗಳು ಒಂದೆರಡಲ್ಲ. ಈ ವೈರಸ್​ನಿಂದ ಎಷ್ಟೋ ‌ಜನರ ಜೀವನ‌ ಏರುಪೇರಾಗಿದೆ. ಅನೇಕರಿಗೆ ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡುವ ಕಾಯಕವನ್ನು ಕಿರಣ್​ ರಾಜ್ ಮಾಡುತ್ತಿದ್ದಾರೆ.

ಕಳದೆರಡು ವರ್ಷಗಳಿಂದ ಕೊರೊನಾದಿಂದ ಆದ ಸಮಸ್ಯೆಗಳು ಒಂದೆರಡಲ್ಲ. ಈ ವೈರಸ್​ನಿಂದ ಎಷ್ಟೋ ‌ಜನರ ಜೀವನ‌ ಏರುಪೇರಾಗಿದೆ. ಅನೇಕರಿಗೆ ದಿನನಿತ್ಯದ ಜೀವನ ನಡೆಸುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಕೈಲಾದಷ್ಟು ಸಹಾಯ ಮಾಡುವ ಕಾಯಕವನ್ನು ಕಿರಣ್​ ರಾಜ್ ಮಾಡುತ್ತಿದ್ದಾರೆ.

3 / 6
ಮಂಗಳಮುಖಿಯರಿಗೆ ಕಿರಣ್​ ರಾಜ್​ ಸಹಾಯ ಮಾಡಿದ್ದಾರೆ. ಕೊರೊನ ಸಮಯದಲ್ಲಿ ಅವರಿಗೆ ಕಿರಣ್​ ರಾಜ್​ ಆಹಾರದ ಕಿಟ್ ನೀಡಿದ್ದರು. ಈಗ ಅವರಿಗೆ ಹೊದಿಕೆಗಳನ್ನು ನೀಡಿದ್ದಾರೆ. ಅವರಿಗೆ ಬಾಳೆಎಲೆಯಲ್ಲಿ ಊಟ ಹಾಕಿಸಿ, ತಾವು ಅವರೊಂದಿಗೆ ಊಟ ಮಾಡಿದ್ದಾರೆ.

ಮಂಗಳಮುಖಿಯರಿಗೆ ಕಿರಣ್​ ರಾಜ್​ ಸಹಾಯ ಮಾಡಿದ್ದಾರೆ. ಕೊರೊನ ಸಮಯದಲ್ಲಿ ಅವರಿಗೆ ಕಿರಣ್​ ರಾಜ್​ ಆಹಾರದ ಕಿಟ್ ನೀಡಿದ್ದರು. ಈಗ ಅವರಿಗೆ ಹೊದಿಕೆಗಳನ್ನು ನೀಡಿದ್ದಾರೆ. ಅವರಿಗೆ ಬಾಳೆಎಲೆಯಲ್ಲಿ ಊಟ ಹಾಕಿಸಿ, ತಾವು ಅವರೊಂದಿಗೆ ಊಟ ಮಾಡಿದ್ದಾರೆ.

4 / 6
‘ಮಂಗಳಮುಖಿಯರು ಈಗ ಯಾವುದರಲ್ಲೂ ಕಡಿಮೆ ಇಲ್ಲ. ನಮ್ಮ ಸಮಾಜ ಅವರನ್ನು ನೋಡುವ ರೀತಿ ಬದಲಾಗಬೇಕು. ಅವರು ನಮ್ಮ ಹಾಗೆ ಎಂದು ನೋಡಬೇಕು’ ಎಂಬುದು ‌ಕಿರಣ್ ರಾಜ್ ಮನವಿ.

‘ಮಂಗಳಮುಖಿಯರು ಈಗ ಯಾವುದರಲ್ಲೂ ಕಡಿಮೆ ಇಲ್ಲ. ನಮ್ಮ ಸಮಾಜ ಅವರನ್ನು ನೋಡುವ ರೀತಿ ಬದಲಾಗಬೇಕು. ಅವರು ನಮ್ಮ ಹಾಗೆ ಎಂದು ನೋಡಬೇಕು’ ಎಂಬುದು ‌ಕಿರಣ್ ರಾಜ್ ಮನವಿ.

5 / 6
‘ದೇವರು ಎಲ್ಲಾ ಕಡೆ ಇರುವುದಿಲ್ಲ. ಹೀಗಾಗಿ ಕಿರಣ್ ರಾಜ್ ಅವರಂತಹ ಒಳ್ಳೆಯ ‌ಗುಣ ಇರುವವರನ್ನು ಈ ಭೂಮಿಗೆ ಕಳುಹಿಸಿರುತ್ತಾನೆ. ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದು  ಮಂಗಳಮುಖಿಯರು ಮನಸಾರೆ‌ ಹಾರೈಸಿದ್ದಾರೆ.

‘ದೇವರು ಎಲ್ಲಾ ಕಡೆ ಇರುವುದಿಲ್ಲ. ಹೀಗಾಗಿ ಕಿರಣ್ ರಾಜ್ ಅವರಂತಹ ಒಳ್ಳೆಯ ‌ಗುಣ ಇರುವವರನ್ನು ಈ ಭೂಮಿಗೆ ಕಳುಹಿಸಿರುತ್ತಾನೆ. ದೇವರು ಅವರಿಗೆ ಒಳ್ಳೆಯದು ಮಾಡಲಿ’ ಎಂದು  ಮಂಗಳಮುಖಿಯರು ಮನಸಾರೆ‌ ಹಾರೈಸಿದ್ದಾರೆ.

6 / 6
ಕಿರಣ್​ ರಾಜ್​ ಮಾಡಿರುವ ಈ ಕಾರ್ಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷನ ಪಾತ್ರದ ಮೂಲಕ ಕಿರಣ್​ ಮಿಂಚುತ್ತಿದ್ದಾರೆ. ಇದಲ್ಲದೆ, ಹಲವು ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ‘ಭರ್ಜರಿ ಗಂಡು’ ಚಿತ್ರದ ಶೂಟಿಂಗ್ ಮುಕ್ತಾಯ ಹಂತದಲ್ಲಿದೆ.

ಕಿರಣ್​ ರಾಜ್​ ಮಾಡಿರುವ ಈ ಕಾರ್ಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷನ ಪಾತ್ರದ ಮೂಲಕ ಕಿರಣ್​ ಮಿಂಚುತ್ತಿದ್ದಾರೆ. ಇದಲ್ಲದೆ, ಹಲವು ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ‘ಭರ್ಜರಿ ಗಂಡು’ ಚಿತ್ರದ ಶೂಟಿಂಗ್ ಮುಕ್ತಾಯ ಹಂತದಲ್ಲಿದೆ.