‘ಬಿಗ್ ಬಾಸ್ ಒಟಿಟಿ ಮೊದಲ ಸೀಸನ್’ನಲ್ಲಿ ಸ್ಪರ್ಧಿಸುವ ಅವಕಾಶ ಆರ್ಯವರ್ಧನ್ ಗುರೂಜಿ ಅವರಿಗೆ ಸಿಕ್ಕಿತ್ತು. ಅಲ್ಲಿ ಪ್ರೇಕ್ಷಕರಿಂದ ಅಗತ್ಯ ವೋಟ್ ಪಡೆದ ಅವರು ಟಿವಿ ಸೀಸನ್ಗೂ ಕಾಲಿಟ್ಟರು.
‘ಬಿಗ್ ಬಾಸ್ ಕನ್ನಡ ಸೀಸನ್ 9’ರಲ್ಲಿ ಆರ್ಯವರ್ಧನ್ ಗುರೂಜಿ ಅವರು ಹೆಚ್ಚು ಶೈನ್ ಆಗುತ್ತಿದ್ದಾರೆ. ಅವರ ಮಾತುಗಳಿಂದಾಗಿ ಪ್ರತಿ ಸಂಚಿಕೆ ಕೂಡ ಹಾಸ್ಯಮಯವಾಗುತ್ತಿದೆ. ಕಿಚ್ಚ ಸುದೀಪ್ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ.
ಬಿಗ್ ಬಾಸ್ ಮನೆಗೆ ಕಾಲಿಡುವುದಕ್ಕೂ ಮುನ್ನವೇ ಆರ್ಯವರ್ಧನ್ ಗುರೂಜಿ ಅವರು ಸಖತ್ ಟ್ರೋಲ್ ಆಗಿದ್ದರು. ಅವರು ನುಡಿಯುವ ಭವಿಷ್ಯವೇ ಬೇರೆ, ಅಸಲಿಗೆ ನಡೆಯುವುದೇ ಬೇರೆ. ಅನೇಕ ಸಂದರ್ಭಗಳಲ್ಲಿ ಹೀಗಾಗಿದ್ದುಂಟು.
ಟ್ರೋಲ್ ಆದರೂ ಕೂಡ ಆರ್ಯವರ್ಧನ್ ಅವರು ತಮ್ಮ ಸಂಖ್ಯಾಶಾಸ್ತ್ರ ಮತ್ತು ಜೋತಿಷ್ಯದ ಬಗ್ಗೆ ಆಗಾಗ ಮಾತನಾಡುತ್ತಲೇ ಇರುತ್ತಾರೆ. ‘ಸೂಪರ್ ಸಂಡೇ ವಿತ್ ಸುದೀಪ’ ಸಂಚಿಕೆಯಲ್ಲೂ ಅದು ಮುಂದುವರಿದಿದೆ.
‘ಆಗಾಗ ನನ್ನನ್ನು ನವಗ್ರಹಗಳು ಮಾತಾಡಿಸುತ್ತವೆ. ನಾನು ಹೇಳಿದ್ದೆಲ್ಲವೂ ನಿಜವಾಗಲಿ ಅಂತ ಕೇಳಿಕೊಳ್ಳುತ್ತೇನೆ’ ಎಂದು ಆರ್ಯವರ್ಧನ್ ಹೇಳಿದ್ದು ಕೇಳಿ ಇಡೀ ಮನೆಮಂದಿ ನಕ್ಕಿದ್ದಾರೆ. ಸುದೀಪ್ ಅವರಂತೂ ನಗು ತಡೆಯಲಾಗದೆ ನೆಲದ ಮೇಲೆ ಕುಳಿತಿದ್ದಾರೆ.