
ಮೋಕ್ಷಿತಾ ಪೈ ಅವರು ಭಾವನಾತ್ಮಕ ಜೀವಿ. ಅವರು ಸದಾ ಬೇರೆಯವರ ನೋವಿಗೆ ಮಿಡಿಯುತ್ತಾರೆ. ಮಾನವೀಯತೆ ಮುಖ್ಯ ಎಂದು ವಾದಿಸುತ್ತಾರೆ. ಅವರು ಈಗ ದೊಡ್ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆ.

ಬಿಗ್ ಬಾಸ್ನಲ್ಲಿ ಒಂದು ಟಾಸ್ಕ್ ನೀಡಲಾಯಿತು. ಈ ಟಾಸ್ಕ್ ಆಡುವಾಗ ಸ್ಪರ್ಧಿಗಳಿಗೆ ಇತರರು ಡಿಸ್ಟರ್ಬ್ ಮಾಡಲು ಅವಕಾಶ ಇತ್ತು. ಅನೇಕರು ನೀರನ್ನು ಸೋಕುತ್ತಿದ್ದರು. ಕೆಲವರು ದಿಂಬುಗಳಲ್ಲಿ ಹೊಡೆಯುತ್ತಿದ್ದರು. ಇದರಿಂದ ತೊಂದರೆ ಆಗಿದೆ.

ಕೆಲವರು ಬಿದ್ದು ನೋವು ಮಾಡಿಕೊಂಡಿದ್ದಾರೆ. ಇದರಿಂದ ಮೋಕ್ಷಿತಾಗೆ ಸಾಕಷ್ಟು ಬೇಸರ ಆಗಿದೆ. ಅವರು ಕಣ್ಣೀರು ಹಾಕಿದ್ದಾರೆ. ‘ಮಾನವೀಯತೆ ಮುಖ್ಯ’ ಎಂದು ಮೋಕ್ಷಿತಾ ಅವರು ಹೇಳಿಕೊಂಡಿದ್ದಾರೆ. ಅವರ ಮಾತನ್ನು ಅನೇಕರು ಒಪ್ಪಿದ್ದಾರೆ.

ಮೋಕ್ಷಿತಾ ಪೈ ಅವರ ಮಾತನ್ನು ಅನೇಕರು ಒಪ್ಪಿದ್ದಾರೆ. ಟಾಸ್ಕ್ಗೋಸ್ಕರ ಮಾನವೀಯತೆ ಮರೆಯಬಾರದು ಎಂಬ ಮೋಕ್ಷಿತಾ ಮಾತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದವರ ಪಟ್ಟಿಯಲ್ಲಿ ಮೋಕ್ಷಿತಾ ಕೂಡ ಇದ್ದಾರೆ. ಅವರು ಟಾಸ್ಕ್ಗಳನ್ನು ಉತ್ತಮವಾಗಿ ನಿರ್ವವಹಿಸುತ್ತಿದ್ದಾರೆ. ಅವರ ಜನಪ್ರಿಯತೆ ಹೆಚ್ಚಿದೆ.