ಗಜಪಡೆ ತಾಲೀಮು, ವಜ್ರಖಚಿತ ಸಿಂಹಾಸನ ಜೋಡಣೆ: ಇಲ್ಲಿವೆ ಮೈಸೂರು ದಸರಾ ಸಂಭ್ರಮದ ಚಿತ್ರಗಳು

Updated By: Digi Tech Desk

Updated on: Sep 17, 2025 | 5:55 PM

ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಕೆಲವೇ ಕೆಲವು ದಿನಗಳು ಮಾತ್ರ ಬಾಕಿ ಇದೆ. ಅಕ್ಟೋಬರ್ ಎರಡರಂದು ಜರುಗುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ತರಬೇತಿಯನ್ನು ಚುರುಕುಗೊಳಿಸಲಾಗಿದೆ. ಜಂಬೂಸವಾರಿಯಲ್ಲಿ ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ಅಭ್ಯಾಸ ಮಾಡಿಸಲಾಗುತ್ತಿದ್ದು, ಮೈಸೂರಿನ ರಾಜಬೀದಿಗಳಲ್ಲಿ ಗಜಪಡೆ ಕಲರವ ಜೋರಾಗಿದೆ. ಇನ್ನು ಅರಮನೆಯಲ್ಲಿ ದಸರಕ್ಕೆ ಬೇಕಾದ ಸಕಲ ಸಿದ್ಧತೆಗಳೂ ಜರುಗುತ್ತಿವೆ. ರತ್ನಕಚಿತ ಸಿಂಹಾಸನದ ಜೋಡಣೆ ಮಾಡಲಾಗಿದ್ದು, ಇದರ ಕಲರ್ ಫುಲ್ ಚಿತ್ರಗಳು ಇಲ್ಲಿವೆ

1 / 6
ಅಕ್ಟೋಬರ್ ಎರಡರಂದು ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯುಗೆ  ಹೊರಿಸಲಾಗುತ್ತದೆ. ಹೀಗಾಗಿ ತಾಲೀಮಿನಲ್ಲಿ ಅಭಿಮನ್ಯುಗೆ ಸುಮಾರು 200 ಕೆ.ಜಿ ತೂಕದ
 ಮರದ ಅಂಬಾರಿಯನ್ನು ಕಟ್ಟಿ, 400 ಕೆ.ಜಿ. ಭಾರದ ಮರಳು ಮೂಟೆ ಹಾಕಿ 100 ಕೆ.ಜಿ ನಮ್ದ ಹೊರಿಸಿ ತಾಲೀಮು ನಡೆಸಲಾಯ್ತು.

ಅಕ್ಟೋಬರ್ ಎರಡರಂದು ಸುಮಾರು 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯುಗೆ ಹೊರಿಸಲಾಗುತ್ತದೆ. ಹೀಗಾಗಿ ತಾಲೀಮಿನಲ್ಲಿ ಅಭಿಮನ್ಯುಗೆ ಸುಮಾರು 200 ಕೆ.ಜಿ ತೂಕದ ಮರದ ಅಂಬಾರಿಯನ್ನು ಕಟ್ಟಿ, 400 ಕೆ.ಜಿ. ಭಾರದ ಮರಳು ಮೂಟೆ ಹಾಕಿ 100 ಕೆ.ಜಿ ನಮ್ದ ಹೊರಿಸಿ ತಾಲೀಮು ನಡೆಸಲಾಯ್ತು.

2 / 6
ಮರದ ಅಂಬಾರಿ ಹೊತ್ತ ಅಭಿಮನ್ಯು ಜೊತೆ ಉಳಿದ ಆನೆಗಳೂ ಪಾಲ್ಗೊಂಡಿದ್ದವು. ಅಭಿಮನ್ಯು ಆನೆಗೆ ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾಗಿ ಹೇಮಾವತಿ ಹಾಗೂ  ಕಾವೇರಿ ಆನೆಗಳು ಸಾಥ್​ ನೀಡಿದವು.  ಉಳಿದಂತೆ ಭೀಮ, ಗೋಪಿ, ಪ್ರಶಾಂತ,‌ ಕಂಜನ್,ಮಹೇಂದ್ರ, ಲಕ್ಷ್ಮೀ, ಏಕಲವ್ಯ, ಶ್ರೀಕಂಠ, ರೂಪ ಸೇರಿದಂತೆ ಒಟ್ಟು 14 ಆನೆಗಳು ಸಹ ತಾಲೀಮಿನಲ್ಲಿ ಹೆಜ್ಜೆ ಹಾಕಿದವು

ಮರದ ಅಂಬಾರಿ ಹೊತ್ತ ಅಭಿಮನ್ಯು ಜೊತೆ ಉಳಿದ ಆನೆಗಳೂ ಪಾಲ್ಗೊಂಡಿದ್ದವು. ಅಭಿಮನ್ಯು ಆನೆಗೆ ಅಕ್ಕಪಕ್ಕದಲ್ಲಿ ಕುಮ್ಕಿ ಆನೆಗಳಾಗಿ ಹೇಮಾವತಿ ಹಾಗೂ ಕಾವೇರಿ ಆನೆಗಳು ಸಾಥ್​ ನೀಡಿದವು. ಉಳಿದಂತೆ ಭೀಮ, ಗೋಪಿ, ಪ್ರಶಾಂತ,‌ ಕಂಜನ್,ಮಹೇಂದ್ರ, ಲಕ್ಷ್ಮೀ, ಏಕಲವ್ಯ, ಶ್ರೀಕಂಠ, ರೂಪ ಸೇರಿದಂತೆ ಒಟ್ಟು 14 ಆನೆಗಳು ಸಹ ತಾಲೀಮಿನಲ್ಲಿ ಹೆಜ್ಜೆ ಹಾಕಿದವು

3 / 6
ದಸರಾದ ಪ್ರಯುಕ್ತ ತಾಲೀಮಿನ ಸಂದರ್ಯಾಭದಲ್ಲಿ ಯಾವುದೇ ವಿಘ್ನ ಸಂಭವಿಸದಂತೆ ಪೂಜೆ ನೆರವೇರಿಸಲಾಯಿತು.

ದಸರಾದ ಪ್ರಯುಕ್ತ ತಾಲೀಮಿನ ಸಂದರ್ಯಾಭದಲ್ಲಿ ಯಾವುದೇ ವಿಘ್ನ ಸಂಭವಿಸದಂತೆ ಪೂಜೆ ನೆರವೇರಿಸಲಾಯಿತು.

4 / 6
ಅರಮನೆ ಕೋಟೆ ಆಂಜನೇಯಸ್ವಾಮಿ ದ್ವಾರದ ಮೂಲಕ 
ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್​ ನಗರ ಬಂಬೂಬಜಾರ್ ಮೂಲಕ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಮರದ ಅಂಬಾರಿ ಹೊತ್ತ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ನಡೆಸಲಾಯಿತು.

ಅರಮನೆ ಕೋಟೆ ಆಂಜನೇಯಸ್ವಾಮಿ ದ್ವಾರದ ಮೂಲಕ ಚಾಮರಾಜೇಂದ್ರ ವೃತ್ತ, ಕೆ.ಆರ್.ವೃತ್ತ ಸಯ್ಯಾಜಿರಾವ್ ರಸ್ತೆ ತಿಲಕ್​ ನಗರ ಬಂಬೂಬಜಾರ್ ಮೂಲಕ ಬನ್ನಿ ಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಮರದ ಅಂಬಾರಿ ಹೊತ್ತ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ನಡೆಸಲಾಯಿತು.

5 / 6
ಮೈಸೂರು ಅರಮನೆಯಲ್ಲಿ  ದಸರಾ ತಯಾರಿ  ಜೋರಾಗಿದೆ. ಅದರೊಂದಿಗೆ ಸಿಂಹಾಸನ ಜೋಡಣೆ ಕೆಲಸವೂ ಭರದಿಂದ ನಡೆಯುತ್ತಿದೆ

ಮೈಸೂರು ಅರಮನೆಯಲ್ಲಿ ದಸರಾ ತಯಾರಿ ಜೋರಾಗಿದೆ. ಅದರೊಂದಿಗೆ ಸಿಂಹಾಸನ ಜೋಡಣೆ ಕೆಲಸವೂ ಭರದಿಂದ ನಡೆಯುತ್ತಿದೆ

6 / 6
ನಾಡಹಬ್ಬ ದಸರಾಗಾಗಿ ಅರಮನೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ರತ್ನಕಚಿತ ಸಿಂಹಾಸನದ ಜೋಡಣೆಯ ಕಾರ್ಯ ನೆರವೇರುತ್ತಿದೆ.

ನಾಡಹಬ್ಬ ದಸರಾಗಾಗಿ ಅರಮನೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ರತ್ನಕಚಿತ ಸಿಂಹಾಸನದ ಜೋಡಣೆಯ ಕಾರ್ಯ ನೆರವೇರುತ್ತಿದೆ.

Published On - 5:37 pm, Wed, 17 September 25