AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ರಣ‌ ಕಾಶಿ ಗದಗಿನಲ್ಲಿ ನಾಗರ ಪಂಚಮಿ ಸಂಭ್ರಮ: ಎಲ್ಲೆಲ್ಲೂ ರೊಟ್ಟಿ ಘಮಲು

ನಾಗರ ಪಂಚಮಿ ಹಬ್ಬ ಅಂದ್ರೆ ಸಾಕು, ಸಾಕಷ್ಟು‌ ಸಂಭ್ರಮ ಮನೆ ಮಾಡುತ್ತೆ. ಪಂಚಮಿ ಹಬ್ಬದ ಮೊದಲ ದಿನ ರೊಟ್ಟಿ ಹಬ್ಬ ಆಚರಿಸಲಾಗುತ್ತೆ. ಈ ಹಿನ್ನೆಲೆ ಮುದ್ರಣ‌ ಕಾಶಿ ಗದಗ ಜಿಲ್ಲೆಯಲ್ಲಿ ರೊಟ್ಟಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಖಡಕ್ ಜೋಳದ ರೊಟ್ಟಿ, ಎಳ್ಳು ರೊಟ್ಟಿ, ಸಜ್ಜೆ ರೊಟ್ಟಿ, ಅಕ್ಕಿ ರೊಟ್ಟಿ, ಚಪಾತಿ, ಪುಂಡಿ‌ ಸೊಪ್ಪಿನ ಪಲ್ಲೆ ಹೀಗೆ ಎಲ್ಲವನ್ನು ಸಿದ್ಧ ಪಡಿಸುವ ಮಹಿಳೆಯರು ಮನೆ ಮನೆಗೆ ಹಂಚುತ್ತಾರೆ.

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 08, 2024 | 5:48 PM

ನಾಗರ ಪಂಚಮಿ ಹಬ್ಬ ಅಂದ್ರೆ ಸಾಕು, ಸಾಕಷ್ಟು‌ ಸಂಭ್ರಮ ಮನೆ ಮಾಡುತ್ತೆ. ‌ಅದರಲ್ಲೂ ಉತ್ತರ ಕರ್ನಾಟಕದಲ್ಲಂತೂ ಪಂಚಮಿ ಹಬ್ಬಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಪಂಚಮಿಯ ಮೊದಲನೆ ದಿನ ಆಚರಿಸುವ ರೊಟ್ಟಿ ಹಬ್ಬವಂತೂ ಕುಟುಂಬ ಮಾತ್ರವಲ್ಲ ಅಕ್ಕಪಕ್ಕದ ಎಲ್ಲರನ್ನೂ ಒಂದೆಡೆ ಸೇರಿಸಿ ಮನಸ್ಸುಗಳನ್ನ ಗಟ್ಟಿಗೊಳಿಸುತ್ತೆ. ಹೀಗಾಗ ಗದಗ ಜಿಲ್ಲೆಯಲ್ಲಿ ಎಲ್ಲೆಲ್ಲೂ ರೊಟ್ಟಿ ಘಮ ಘಮ ಜೋರಾಗಿದೆ. 

ನಾಗರ ಪಂಚಮಿ ಹಬ್ಬ ಅಂದ್ರೆ ಸಾಕು, ಸಾಕಷ್ಟು‌ ಸಂಭ್ರಮ ಮನೆ ಮಾಡುತ್ತೆ. ‌ಅದರಲ್ಲೂ ಉತ್ತರ ಕರ್ನಾಟಕದಲ್ಲಂತೂ ಪಂಚಮಿ ಹಬ್ಬಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಪಂಚಮಿಯ ಮೊದಲನೆ ದಿನ ಆಚರಿಸುವ ರೊಟ್ಟಿ ಹಬ್ಬವಂತೂ ಕುಟುಂಬ ಮಾತ್ರವಲ್ಲ ಅಕ್ಕಪಕ್ಕದ ಎಲ್ಲರನ್ನೂ ಒಂದೆಡೆ ಸೇರಿಸಿ ಮನಸ್ಸುಗಳನ್ನ ಗಟ್ಟಿಗೊಳಿಸುತ್ತೆ. ಹೀಗಾಗ ಗದಗ ಜಿಲ್ಲೆಯಲ್ಲಿ ಎಲ್ಲೆಲ್ಲೂ ರೊಟ್ಟಿ ಘಮ ಘಮ ಜೋರಾಗಿದೆ. 

1 / 7
ನಾಗರ ಪಂಚಮಿ ಬಂತವ್ವಾ ಸನಿಹಾಕ, ಅಣ್ಣ ಬರಲಿಲ್ಲವ್ವ ಇನ್ನೂ ಕರಿಲಾಕಾ. ಈ ಜಾನಪದ ಹಾಡು ಉತ್ತರ ಕರ್ನಾಟಕದಲ್ಲಿ ಪಂಚಮಿ ಹಬ್ಬದ ವೈಭವವನ್ನ ಸಾರಿ ಸಾರಿ ಹೇಳುತ್ತೆ.‌ ಪಂಚಮಿ ಹಬ್ಬದ ಮೊದಲ ದಿನ ರೊಟ್ಟಿ ಹಬ್ಬ ಆಚರಿಸಲಾಗುತ್ತೆ. ಈ ಹಿನ್ನೆಲೆ ಮುದ್ರಣ‌ ಕಾಶಿ ಗದಗ ಜಿಲ್ಲೆಯಲ್ಲಿ ರೊಟ್ಟಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.

ನಾಗರ ಪಂಚಮಿ ಬಂತವ್ವಾ ಸನಿಹಾಕ, ಅಣ್ಣ ಬರಲಿಲ್ಲವ್ವ ಇನ್ನೂ ಕರಿಲಾಕಾ. ಈ ಜಾನಪದ ಹಾಡು ಉತ್ತರ ಕರ್ನಾಟಕದಲ್ಲಿ ಪಂಚಮಿ ಹಬ್ಬದ ವೈಭವವನ್ನ ಸಾರಿ ಸಾರಿ ಹೇಳುತ್ತೆ.‌ ಪಂಚಮಿ ಹಬ್ಬದ ಮೊದಲ ದಿನ ರೊಟ್ಟಿ ಹಬ್ಬ ಆಚರಿಸಲಾಗುತ್ತೆ. ಈ ಹಿನ್ನೆಲೆ ಮುದ್ರಣ‌ ಕಾಶಿ ಗದಗ ಜಿಲ್ಲೆಯಲ್ಲಿ ರೊಟ್ಟಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.

2 / 7
ಐದು ದಿನಗಳ ಪಂಚಮಿ ಹಬ್ಬದ ಮೊದಲ ದಿನವೇ ರೊಟ್ಟಿ ಹಬ್ಬವಾಗಿದೆ. ಎರಡನೇ ದಿನ ನಾಗರ ಕಲ್ಲಿಗೆ ಹಾಲೆರೆಯುವದು, ಮೂರನೇ ದಿನ ಚೌತಿ ಹಬ್ಬ ಆಚರಿಸಲಾಗುತ್ತೆ. ಮನೆಯ ಕುಟುಂಬದ ಸರ್ವ ಸದಸ್ಯರೆಲ್ಲರೂ ಒಂದೆಡೆ ಸೇರಿ ರೊಟ್ಟಿ ಹಬ್ಬ ಆಚರಣೆ ಮಾಡುವದರಿಂದ ಒಡಹುಟ್ಟಿದವರ ಹಬ್ಬ ಎಂಬ ಪ್ರತೀತಿಯೂ ಇದೆ. 

ಐದು ದಿನಗಳ ಪಂಚಮಿ ಹಬ್ಬದ ಮೊದಲ ದಿನವೇ ರೊಟ್ಟಿ ಹಬ್ಬವಾಗಿದೆ. ಎರಡನೇ ದಿನ ನಾಗರ ಕಲ್ಲಿಗೆ ಹಾಲೆರೆಯುವದು, ಮೂರನೇ ದಿನ ಚೌತಿ ಹಬ್ಬ ಆಚರಿಸಲಾಗುತ್ತೆ. ಮನೆಯ ಕುಟುಂಬದ ಸರ್ವ ಸದಸ್ಯರೆಲ್ಲರೂ ಒಂದೆಡೆ ಸೇರಿ ರೊಟ್ಟಿ ಹಬ್ಬ ಆಚರಣೆ ಮಾಡುವದರಿಂದ ಒಡಹುಟ್ಟಿದವರ ಹಬ್ಬ ಎಂಬ ಪ್ರತೀತಿಯೂ ಇದೆ. 

3 / 7
ಉತ್ತರ‌ ಕರ್ನಾಟಕದ ಭಕ್ಷ್ಯ ಭೋಜನಗಳಾದ ಖಡಕ್ ಜೋಳದ ರೊಟ್ಟಿ, ಎಳ್ಳು ರೊಟ್ಟಿ, ಸಜ್ಜೆ ರೊಟ್ಟಿ, ಅಕ್ಕಿ ರೊಟ್ಟಿ, ಚಪಾತಿ, ಪುಂಡಿ‌ ಸೊಪ್ಪಿನ ಪಲ್ಲ್ಯೆ, ಕಡಲೆ ಕಾಳಿನ ಪಲ್ಲ್ಯೆ, ಬದನೆಕಾಯಿ, ಎಣ್ಣೆಗಾಯಿ ಪಲ್ಲ್ಯೆ, ಮಡಿಕೆ ಕಾಳು, ಹಿಟ್ಟಿನ ಪಲ್ಲ್ಯೆ, ಕೋಸಂಬರಿ, ಶೇಂಗಾ ಉಂಡಿ, ಎಳ್ಳು ಉಂಡಿ, ಕಡಲೆ ಚಟ್ನಿ, ಪುಟಾಣಿ ಚಟ್ನಿ, ಮೆಂತೆ ಸೊಪ್ಪು, ಕೆಂಪು ಖಾರದ ಚಟ್ನಿ,ಹಾಗೂ ಸಿಹಿ ತಿಂಡಿ ಸೇರಿದಂತೆ ವಿವಿಧ ತರಹೇವಾರಿ‌ ಖಾದ್ಯಗಳನ್ನ ತಯಾರಿಸಲಾಗಿತ್ತು.

ಉತ್ತರ‌ ಕರ್ನಾಟಕದ ಭಕ್ಷ್ಯ ಭೋಜನಗಳಾದ ಖಡಕ್ ಜೋಳದ ರೊಟ್ಟಿ, ಎಳ್ಳು ರೊಟ್ಟಿ, ಸಜ್ಜೆ ರೊಟ್ಟಿ, ಅಕ್ಕಿ ರೊಟ್ಟಿ, ಚಪಾತಿ, ಪುಂಡಿ‌ ಸೊಪ್ಪಿನ ಪಲ್ಲ್ಯೆ, ಕಡಲೆ ಕಾಳಿನ ಪಲ್ಲ್ಯೆ, ಬದನೆಕಾಯಿ, ಎಣ್ಣೆಗಾಯಿ ಪಲ್ಲ್ಯೆ, ಮಡಿಕೆ ಕಾಳು, ಹಿಟ್ಟಿನ ಪಲ್ಲ್ಯೆ, ಕೋಸಂಬರಿ, ಶೇಂಗಾ ಉಂಡಿ, ಎಳ್ಳು ಉಂಡಿ, ಕಡಲೆ ಚಟ್ನಿ, ಪುಟಾಣಿ ಚಟ್ನಿ, ಮೆಂತೆ ಸೊಪ್ಪು, ಕೆಂಪು ಖಾರದ ಚಟ್ನಿ,ಹಾಗೂ ಸಿಹಿ ತಿಂಡಿ ಸೇರಿದಂತೆ ವಿವಿಧ ತರಹೇವಾರಿ‌ ಖಾದ್ಯಗಳನ್ನ ತಯಾರಿಸಲಾಗಿತ್ತು.

4 / 7
ಅತ್ಯಂತ ಸಂಭ್ರಮದಿಂದ ತಮ್ಮ ಅಕ್ಕಪಕ್ಕದ ಹಾಗೂ‌ ಬಂಧು ಮಿತ್ರರ ಮನೆಗಳಿಗೆ ತೆರಳಿ‌ ತಾವು ತಯಾರಿಸಿದ ಎಲ್ಲ ವಿಧಧ ಖಾದ್ಯಗಳನ್ನ ಒಳಗೊಂಡ ರೊಟ್ಟಿ ಬುತ್ತಿಯನ್ನು ಮಹಿಳೆಯರು ಹಂಚಿ ಬರುತ್ತಾರೆ. ಹೀಗೆ ಒಬ್ಬರಿಗೊಬ್ಬರು ಮನೆಗಳಿಗೆ ತೆರಳಿ ರೊಟ್ಟಿ ಬುತ್ತಿಯನ್ನ ಹಂಚಿ ಬರುವದು ರೊಟ್ಟಿ ಪಂಚಮಿಯ ವಿಶಿಷ್ಟ ಸಂಪ್ರದಾಯವಾಗಿದೆ.

ಅತ್ಯಂತ ಸಂಭ್ರಮದಿಂದ ತಮ್ಮ ಅಕ್ಕಪಕ್ಕದ ಹಾಗೂ‌ ಬಂಧು ಮಿತ್ರರ ಮನೆಗಳಿಗೆ ತೆರಳಿ‌ ತಾವು ತಯಾರಿಸಿದ ಎಲ್ಲ ವಿಧಧ ಖಾದ್ಯಗಳನ್ನ ಒಳಗೊಂಡ ರೊಟ್ಟಿ ಬುತ್ತಿಯನ್ನು ಮಹಿಳೆಯರು ಹಂಚಿ ಬರುತ್ತಾರೆ. ಹೀಗೆ ಒಬ್ಬರಿಗೊಬ್ಬರು ಮನೆಗಳಿಗೆ ತೆರಳಿ ರೊಟ್ಟಿ ಬುತ್ತಿಯನ್ನ ಹಂಚಿ ಬರುವದು ರೊಟ್ಟಿ ಪಂಚಮಿಯ ವಿಶಿಷ್ಟ ಸಂಪ್ರದಾಯವಾಗಿದೆ.

5 / 7
ಉತ್ತರ ಕರ್ನಾಟಕದ ಹಬ್ಬಗಳು ಅಂದ್ರೆ ವಿಶೇಷ. ಅದ್ರಲ್ಲೂ ಗದಗ ಜಿಲ್ಲೆಯಲ್ಲಿ ರೊಟ್ಟಿ ಪಂಚಮಿ ಅಂದ್ರೆ ಆ ಸಂಭ್ರಮ, ಸಡಗರವೇ ಬೇರೆ. ರೊಟ್ಟಿ ಹಬ್ಬಕ್ಕೆ ಮಹಿಳೆಯರು ಭರ್ಜರಿ ತಯಾರಾಗಿ ಎಲ್ಲ ತೆರೆನಾದ ರೊಟ್ಟಿಗಳು, ಪಲ್ಯಗಳು ತಯ್ಯಾರಿ ಮಾಡ್ತಾರೆ. ಈ ವಿಶೇಷ ಅಡುಗೆ ಘಮಲು ಇಡೀ ಜಿಲ್ಲೆಯಲ್ಲಿ ಘಮ ಘಮಿಸುತ್ತಿದೆ.

ಉತ್ತರ ಕರ್ನಾಟಕದ ಹಬ್ಬಗಳು ಅಂದ್ರೆ ವಿಶೇಷ. ಅದ್ರಲ್ಲೂ ಗದಗ ಜಿಲ್ಲೆಯಲ್ಲಿ ರೊಟ್ಟಿ ಪಂಚಮಿ ಅಂದ್ರೆ ಆ ಸಂಭ್ರಮ, ಸಡಗರವೇ ಬೇರೆ. ರೊಟ್ಟಿ ಹಬ್ಬಕ್ಕೆ ಮಹಿಳೆಯರು ಭರ್ಜರಿ ತಯಾರಾಗಿ ಎಲ್ಲ ತೆರೆನಾದ ರೊಟ್ಟಿಗಳು, ಪಲ್ಯಗಳು ತಯ್ಯಾರಿ ಮಾಡ್ತಾರೆ. ಈ ವಿಶೇಷ ಅಡುಗೆ ಘಮಲು ಇಡೀ ಜಿಲ್ಲೆಯಲ್ಲಿ ಘಮ ಘಮಿಸುತ್ತಿದೆ.

6 / 7
ಪ್ರೀತಿ, ವಿಶ್ವಾಸ, ಗಟ್ಟಿಗೊಳಿಸುವ ಈ ಹಬ್ಬಗಳು ಪ್ರತಿ ವರ್ಷವೂ ಸಂಬಂಧ, ಸ್ನೇಹ, ಬಾಂಧವ್ಯವನ್ನ ಹೆಚ್ಚಿಸುತ್ತಾ ಹೋಗ್ತಿವೆ ಅನ್ನೋದರಲ್ಲಿ ಎರೆಡು ಮಾತಿಲ್ಲ. ವರ್ಷಗಟ್ಟಲೆ ಕೆಲಸ ಅಂತ ಬೇರೆ ಬೇರೆ ದೂರದ ಊರಿನಲ್ಲಿರುವವರು ಈ ಹಬ್ಬದ ನೆಪದಲ್ಲಾದರೂ ಕುಟುಂಬದ ಸದಸ್ಯರೊಂದಿಗೆ ಸೇರಿ, ಭಾವೈಕ್ಯತೆ ಜೊತೆ ಭಾತೃತ್ವ ಉಳಿಸಿಕೊಳ್ಳುತ್ತಿರುವದೇ ವಿಶೇಷ.

ಪ್ರೀತಿ, ವಿಶ್ವಾಸ, ಗಟ್ಟಿಗೊಳಿಸುವ ಈ ಹಬ್ಬಗಳು ಪ್ರತಿ ವರ್ಷವೂ ಸಂಬಂಧ, ಸ್ನೇಹ, ಬಾಂಧವ್ಯವನ್ನ ಹೆಚ್ಚಿಸುತ್ತಾ ಹೋಗ್ತಿವೆ ಅನ್ನೋದರಲ್ಲಿ ಎರೆಡು ಮಾತಿಲ್ಲ. ವರ್ಷಗಟ್ಟಲೆ ಕೆಲಸ ಅಂತ ಬೇರೆ ಬೇರೆ ದೂರದ ಊರಿನಲ್ಲಿರುವವರು ಈ ಹಬ್ಬದ ನೆಪದಲ್ಲಾದರೂ ಕುಟುಂಬದ ಸದಸ್ಯರೊಂದಿಗೆ ಸೇರಿ, ಭಾವೈಕ್ಯತೆ ಜೊತೆ ಭಾತೃತ್ವ ಉಳಿಸಿಕೊಳ್ಳುತ್ತಿರುವದೇ ವಿಶೇಷ.

7 / 7
Follow us
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ