AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುದ್ರಣ‌ ಕಾಶಿ ಗದಗಿನಲ್ಲಿ ನಾಗರ ಪಂಚಮಿ ಸಂಭ್ರಮ: ಎಲ್ಲೆಲ್ಲೂ ರೊಟ್ಟಿ ಘಮಲು

ನಾಗರ ಪಂಚಮಿ ಹಬ್ಬ ಅಂದ್ರೆ ಸಾಕು, ಸಾಕಷ್ಟು‌ ಸಂಭ್ರಮ ಮನೆ ಮಾಡುತ್ತೆ. ಪಂಚಮಿ ಹಬ್ಬದ ಮೊದಲ ದಿನ ರೊಟ್ಟಿ ಹಬ್ಬ ಆಚರಿಸಲಾಗುತ್ತೆ. ಈ ಹಿನ್ನೆಲೆ ಮುದ್ರಣ‌ ಕಾಶಿ ಗದಗ ಜಿಲ್ಲೆಯಲ್ಲಿ ರೊಟ್ಟಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಖಡಕ್ ಜೋಳದ ರೊಟ್ಟಿ, ಎಳ್ಳು ರೊಟ್ಟಿ, ಸಜ್ಜೆ ರೊಟ್ಟಿ, ಅಕ್ಕಿ ರೊಟ್ಟಿ, ಚಪಾತಿ, ಪುಂಡಿ‌ ಸೊಪ್ಪಿನ ಪಲ್ಲೆ ಹೀಗೆ ಎಲ್ಲವನ್ನು ಸಿದ್ಧ ಪಡಿಸುವ ಮಹಿಳೆಯರು ಮನೆ ಮನೆಗೆ ಹಂಚುತ್ತಾರೆ.

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Aug 08, 2024 | 5:48 PM

Share
ನಾಗರ ಪಂಚಮಿ ಹಬ್ಬ ಅಂದ್ರೆ ಸಾಕು, ಸಾಕಷ್ಟು‌ ಸಂಭ್ರಮ ಮನೆ ಮಾಡುತ್ತೆ. ‌ಅದರಲ್ಲೂ ಉತ್ತರ ಕರ್ನಾಟಕದಲ್ಲಂತೂ ಪಂಚಮಿ ಹಬ್ಬಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಪಂಚಮಿಯ ಮೊದಲನೆ ದಿನ ಆಚರಿಸುವ ರೊಟ್ಟಿ ಹಬ್ಬವಂತೂ ಕುಟುಂಬ ಮಾತ್ರವಲ್ಲ ಅಕ್ಕಪಕ್ಕದ ಎಲ್ಲರನ್ನೂ ಒಂದೆಡೆ ಸೇರಿಸಿ ಮನಸ್ಸುಗಳನ್ನ ಗಟ್ಟಿಗೊಳಿಸುತ್ತೆ. ಹೀಗಾಗ ಗದಗ ಜಿಲ್ಲೆಯಲ್ಲಿ ಎಲ್ಲೆಲ್ಲೂ ರೊಟ್ಟಿ ಘಮ ಘಮ ಜೋರಾಗಿದೆ. 

ನಾಗರ ಪಂಚಮಿ ಹಬ್ಬ ಅಂದ್ರೆ ಸಾಕು, ಸಾಕಷ್ಟು‌ ಸಂಭ್ರಮ ಮನೆ ಮಾಡುತ್ತೆ. ‌ಅದರಲ್ಲೂ ಉತ್ತರ ಕರ್ನಾಟಕದಲ್ಲಂತೂ ಪಂಚಮಿ ಹಬ್ಬಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಪಂಚಮಿಯ ಮೊದಲನೆ ದಿನ ಆಚರಿಸುವ ರೊಟ್ಟಿ ಹಬ್ಬವಂತೂ ಕುಟುಂಬ ಮಾತ್ರವಲ್ಲ ಅಕ್ಕಪಕ್ಕದ ಎಲ್ಲರನ್ನೂ ಒಂದೆಡೆ ಸೇರಿಸಿ ಮನಸ್ಸುಗಳನ್ನ ಗಟ್ಟಿಗೊಳಿಸುತ್ತೆ. ಹೀಗಾಗ ಗದಗ ಜಿಲ್ಲೆಯಲ್ಲಿ ಎಲ್ಲೆಲ್ಲೂ ರೊಟ್ಟಿ ಘಮ ಘಮ ಜೋರಾಗಿದೆ. 

1 / 7
ನಾಗರ ಪಂಚಮಿ ಬಂತವ್ವಾ ಸನಿಹಾಕ, ಅಣ್ಣ ಬರಲಿಲ್ಲವ್ವ ಇನ್ನೂ ಕರಿಲಾಕಾ. ಈ ಜಾನಪದ ಹಾಡು ಉತ್ತರ ಕರ್ನಾಟಕದಲ್ಲಿ ಪಂಚಮಿ ಹಬ್ಬದ ವೈಭವವನ್ನ ಸಾರಿ ಸಾರಿ ಹೇಳುತ್ತೆ.‌ ಪಂಚಮಿ ಹಬ್ಬದ ಮೊದಲ ದಿನ ರೊಟ್ಟಿ ಹಬ್ಬ ಆಚರಿಸಲಾಗುತ್ತೆ. ಈ ಹಿನ್ನೆಲೆ ಮುದ್ರಣ‌ ಕಾಶಿ ಗದಗ ಜಿಲ್ಲೆಯಲ್ಲಿ ರೊಟ್ಟಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.

ನಾಗರ ಪಂಚಮಿ ಬಂತವ್ವಾ ಸನಿಹಾಕ, ಅಣ್ಣ ಬರಲಿಲ್ಲವ್ವ ಇನ್ನೂ ಕರಿಲಾಕಾ. ಈ ಜಾನಪದ ಹಾಡು ಉತ್ತರ ಕರ್ನಾಟಕದಲ್ಲಿ ಪಂಚಮಿ ಹಬ್ಬದ ವೈಭವವನ್ನ ಸಾರಿ ಸಾರಿ ಹೇಳುತ್ತೆ.‌ ಪಂಚಮಿ ಹಬ್ಬದ ಮೊದಲ ದಿನ ರೊಟ್ಟಿ ಹಬ್ಬ ಆಚರಿಸಲಾಗುತ್ತೆ. ಈ ಹಿನ್ನೆಲೆ ಮುದ್ರಣ‌ ಕಾಶಿ ಗದಗ ಜಿಲ್ಲೆಯಲ್ಲಿ ರೊಟ್ಟಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.

2 / 7
ಐದು ದಿನಗಳ ಪಂಚಮಿ ಹಬ್ಬದ ಮೊದಲ ದಿನವೇ ರೊಟ್ಟಿ ಹಬ್ಬವಾಗಿದೆ. ಎರಡನೇ ದಿನ ನಾಗರ ಕಲ್ಲಿಗೆ ಹಾಲೆರೆಯುವದು, ಮೂರನೇ ದಿನ ಚೌತಿ ಹಬ್ಬ ಆಚರಿಸಲಾಗುತ್ತೆ. ಮನೆಯ ಕುಟುಂಬದ ಸರ್ವ ಸದಸ್ಯರೆಲ್ಲರೂ ಒಂದೆಡೆ ಸೇರಿ ರೊಟ್ಟಿ ಹಬ್ಬ ಆಚರಣೆ ಮಾಡುವದರಿಂದ ಒಡಹುಟ್ಟಿದವರ ಹಬ್ಬ ಎಂಬ ಪ್ರತೀತಿಯೂ ಇದೆ. 

ಐದು ದಿನಗಳ ಪಂಚಮಿ ಹಬ್ಬದ ಮೊದಲ ದಿನವೇ ರೊಟ್ಟಿ ಹಬ್ಬವಾಗಿದೆ. ಎರಡನೇ ದಿನ ನಾಗರ ಕಲ್ಲಿಗೆ ಹಾಲೆರೆಯುವದು, ಮೂರನೇ ದಿನ ಚೌತಿ ಹಬ್ಬ ಆಚರಿಸಲಾಗುತ್ತೆ. ಮನೆಯ ಕುಟುಂಬದ ಸರ್ವ ಸದಸ್ಯರೆಲ್ಲರೂ ಒಂದೆಡೆ ಸೇರಿ ರೊಟ್ಟಿ ಹಬ್ಬ ಆಚರಣೆ ಮಾಡುವದರಿಂದ ಒಡಹುಟ್ಟಿದವರ ಹಬ್ಬ ಎಂಬ ಪ್ರತೀತಿಯೂ ಇದೆ. 

3 / 7
ಉತ್ತರ‌ ಕರ್ನಾಟಕದ ಭಕ್ಷ್ಯ ಭೋಜನಗಳಾದ ಖಡಕ್ ಜೋಳದ ರೊಟ್ಟಿ, ಎಳ್ಳು ರೊಟ್ಟಿ, ಸಜ್ಜೆ ರೊಟ್ಟಿ, ಅಕ್ಕಿ ರೊಟ್ಟಿ, ಚಪಾತಿ, ಪುಂಡಿ‌ ಸೊಪ್ಪಿನ ಪಲ್ಲ್ಯೆ, ಕಡಲೆ ಕಾಳಿನ ಪಲ್ಲ್ಯೆ, ಬದನೆಕಾಯಿ, ಎಣ್ಣೆಗಾಯಿ ಪಲ್ಲ್ಯೆ, ಮಡಿಕೆ ಕಾಳು, ಹಿಟ್ಟಿನ ಪಲ್ಲ್ಯೆ, ಕೋಸಂಬರಿ, ಶೇಂಗಾ ಉಂಡಿ, ಎಳ್ಳು ಉಂಡಿ, ಕಡಲೆ ಚಟ್ನಿ, ಪುಟಾಣಿ ಚಟ್ನಿ, ಮೆಂತೆ ಸೊಪ್ಪು, ಕೆಂಪು ಖಾರದ ಚಟ್ನಿ,ಹಾಗೂ ಸಿಹಿ ತಿಂಡಿ ಸೇರಿದಂತೆ ವಿವಿಧ ತರಹೇವಾರಿ‌ ಖಾದ್ಯಗಳನ್ನ ತಯಾರಿಸಲಾಗಿತ್ತು.

ಉತ್ತರ‌ ಕರ್ನಾಟಕದ ಭಕ್ಷ್ಯ ಭೋಜನಗಳಾದ ಖಡಕ್ ಜೋಳದ ರೊಟ್ಟಿ, ಎಳ್ಳು ರೊಟ್ಟಿ, ಸಜ್ಜೆ ರೊಟ್ಟಿ, ಅಕ್ಕಿ ರೊಟ್ಟಿ, ಚಪಾತಿ, ಪುಂಡಿ‌ ಸೊಪ್ಪಿನ ಪಲ್ಲ್ಯೆ, ಕಡಲೆ ಕಾಳಿನ ಪಲ್ಲ್ಯೆ, ಬದನೆಕಾಯಿ, ಎಣ್ಣೆಗಾಯಿ ಪಲ್ಲ್ಯೆ, ಮಡಿಕೆ ಕಾಳು, ಹಿಟ್ಟಿನ ಪಲ್ಲ್ಯೆ, ಕೋಸಂಬರಿ, ಶೇಂಗಾ ಉಂಡಿ, ಎಳ್ಳು ಉಂಡಿ, ಕಡಲೆ ಚಟ್ನಿ, ಪುಟಾಣಿ ಚಟ್ನಿ, ಮೆಂತೆ ಸೊಪ್ಪು, ಕೆಂಪು ಖಾರದ ಚಟ್ನಿ,ಹಾಗೂ ಸಿಹಿ ತಿಂಡಿ ಸೇರಿದಂತೆ ವಿವಿಧ ತರಹೇವಾರಿ‌ ಖಾದ್ಯಗಳನ್ನ ತಯಾರಿಸಲಾಗಿತ್ತು.

4 / 7
ಅತ್ಯಂತ ಸಂಭ್ರಮದಿಂದ ತಮ್ಮ ಅಕ್ಕಪಕ್ಕದ ಹಾಗೂ‌ ಬಂಧು ಮಿತ್ರರ ಮನೆಗಳಿಗೆ ತೆರಳಿ‌ ತಾವು ತಯಾರಿಸಿದ ಎಲ್ಲ ವಿಧಧ ಖಾದ್ಯಗಳನ್ನ ಒಳಗೊಂಡ ರೊಟ್ಟಿ ಬುತ್ತಿಯನ್ನು ಮಹಿಳೆಯರು ಹಂಚಿ ಬರುತ್ತಾರೆ. ಹೀಗೆ ಒಬ್ಬರಿಗೊಬ್ಬರು ಮನೆಗಳಿಗೆ ತೆರಳಿ ರೊಟ್ಟಿ ಬುತ್ತಿಯನ್ನ ಹಂಚಿ ಬರುವದು ರೊಟ್ಟಿ ಪಂಚಮಿಯ ವಿಶಿಷ್ಟ ಸಂಪ್ರದಾಯವಾಗಿದೆ.

ಅತ್ಯಂತ ಸಂಭ್ರಮದಿಂದ ತಮ್ಮ ಅಕ್ಕಪಕ್ಕದ ಹಾಗೂ‌ ಬಂಧು ಮಿತ್ರರ ಮನೆಗಳಿಗೆ ತೆರಳಿ‌ ತಾವು ತಯಾರಿಸಿದ ಎಲ್ಲ ವಿಧಧ ಖಾದ್ಯಗಳನ್ನ ಒಳಗೊಂಡ ರೊಟ್ಟಿ ಬುತ್ತಿಯನ್ನು ಮಹಿಳೆಯರು ಹಂಚಿ ಬರುತ್ತಾರೆ. ಹೀಗೆ ಒಬ್ಬರಿಗೊಬ್ಬರು ಮನೆಗಳಿಗೆ ತೆರಳಿ ರೊಟ್ಟಿ ಬುತ್ತಿಯನ್ನ ಹಂಚಿ ಬರುವದು ರೊಟ್ಟಿ ಪಂಚಮಿಯ ವಿಶಿಷ್ಟ ಸಂಪ್ರದಾಯವಾಗಿದೆ.

5 / 7
ಉತ್ತರ ಕರ್ನಾಟಕದ ಹಬ್ಬಗಳು ಅಂದ್ರೆ ವಿಶೇಷ. ಅದ್ರಲ್ಲೂ ಗದಗ ಜಿಲ್ಲೆಯಲ್ಲಿ ರೊಟ್ಟಿ ಪಂಚಮಿ ಅಂದ್ರೆ ಆ ಸಂಭ್ರಮ, ಸಡಗರವೇ ಬೇರೆ. ರೊಟ್ಟಿ ಹಬ್ಬಕ್ಕೆ ಮಹಿಳೆಯರು ಭರ್ಜರಿ ತಯಾರಾಗಿ ಎಲ್ಲ ತೆರೆನಾದ ರೊಟ್ಟಿಗಳು, ಪಲ್ಯಗಳು ತಯ್ಯಾರಿ ಮಾಡ್ತಾರೆ. ಈ ವಿಶೇಷ ಅಡುಗೆ ಘಮಲು ಇಡೀ ಜಿಲ್ಲೆಯಲ್ಲಿ ಘಮ ಘಮಿಸುತ್ತಿದೆ.

ಉತ್ತರ ಕರ್ನಾಟಕದ ಹಬ್ಬಗಳು ಅಂದ್ರೆ ವಿಶೇಷ. ಅದ್ರಲ್ಲೂ ಗದಗ ಜಿಲ್ಲೆಯಲ್ಲಿ ರೊಟ್ಟಿ ಪಂಚಮಿ ಅಂದ್ರೆ ಆ ಸಂಭ್ರಮ, ಸಡಗರವೇ ಬೇರೆ. ರೊಟ್ಟಿ ಹಬ್ಬಕ್ಕೆ ಮಹಿಳೆಯರು ಭರ್ಜರಿ ತಯಾರಾಗಿ ಎಲ್ಲ ತೆರೆನಾದ ರೊಟ್ಟಿಗಳು, ಪಲ್ಯಗಳು ತಯ್ಯಾರಿ ಮಾಡ್ತಾರೆ. ಈ ವಿಶೇಷ ಅಡುಗೆ ಘಮಲು ಇಡೀ ಜಿಲ್ಲೆಯಲ್ಲಿ ಘಮ ಘಮಿಸುತ್ತಿದೆ.

6 / 7
ಪ್ರೀತಿ, ವಿಶ್ವಾಸ, ಗಟ್ಟಿಗೊಳಿಸುವ ಈ ಹಬ್ಬಗಳು ಪ್ರತಿ ವರ್ಷವೂ ಸಂಬಂಧ, ಸ್ನೇಹ, ಬಾಂಧವ್ಯವನ್ನ ಹೆಚ್ಚಿಸುತ್ತಾ ಹೋಗ್ತಿವೆ ಅನ್ನೋದರಲ್ಲಿ ಎರೆಡು ಮಾತಿಲ್ಲ. ವರ್ಷಗಟ್ಟಲೆ ಕೆಲಸ ಅಂತ ಬೇರೆ ಬೇರೆ ದೂರದ ಊರಿನಲ್ಲಿರುವವರು ಈ ಹಬ್ಬದ ನೆಪದಲ್ಲಾದರೂ ಕುಟುಂಬದ ಸದಸ್ಯರೊಂದಿಗೆ ಸೇರಿ, ಭಾವೈಕ್ಯತೆ ಜೊತೆ ಭಾತೃತ್ವ ಉಳಿಸಿಕೊಳ್ಳುತ್ತಿರುವದೇ ವಿಶೇಷ.

ಪ್ರೀತಿ, ವಿಶ್ವಾಸ, ಗಟ್ಟಿಗೊಳಿಸುವ ಈ ಹಬ್ಬಗಳು ಪ್ರತಿ ವರ್ಷವೂ ಸಂಬಂಧ, ಸ್ನೇಹ, ಬಾಂಧವ್ಯವನ್ನ ಹೆಚ್ಚಿಸುತ್ತಾ ಹೋಗ್ತಿವೆ ಅನ್ನೋದರಲ್ಲಿ ಎರೆಡು ಮಾತಿಲ್ಲ. ವರ್ಷಗಟ್ಟಲೆ ಕೆಲಸ ಅಂತ ಬೇರೆ ಬೇರೆ ದೂರದ ಊರಿನಲ್ಲಿರುವವರು ಈ ಹಬ್ಬದ ನೆಪದಲ್ಲಾದರೂ ಕುಟುಂಬದ ಸದಸ್ಯರೊಂದಿಗೆ ಸೇರಿ, ಭಾವೈಕ್ಯತೆ ಜೊತೆ ಭಾತೃತ್ವ ಉಳಿಸಿಕೊಳ್ಳುತ್ತಿರುವದೇ ವಿಶೇಷ.

7 / 7
Sanjeev Pandre
Sanjeev Pandre

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ‌‌ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ‌ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್‌ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...

Read More
Follow Us
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?