ಐತಿಹಾಸಿಕ ಕುಲು ದಸರಾದಲ್ಲಿ ಪಾಲ್ಗೊಂಡ ಮೊದಲ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ನರೇಂದ್ರ ಮೋದಿ

Kullu Dussehra: ನರೇಂದ್ರ ಮೋದಿ ಅವರು 90ರ ದಶಕದಲ್ಲಿ ಹಿಮಾಚಲ ಪ್ರದೇಶದ ಬಿಜೆಪಿಯ ಉಸ್ತುವಾರಿಯಾಗಿದ್ದಾಗ ಕುಲು ದಸರಾದಲ್ಲಿ ಭಾಗವಹಿಸಿದ್ದರು. ಆದರೆ, ಪ್ರಧಾನಮಂತ್ರಿಯೊಬ್ಬರು ಈ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.

| Updated By: ಸುಷ್ಮಾ ಚಕ್ರೆ

Updated on: Oct 06, 2022 | 9:54 AM

ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶದ ಕುಲು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಈ ದಸರಾದಲ್ಲಿ ಪಾಲ್ಗೊಂಡ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಿಮಾಚಲ ಪ್ರದೇಶದ ಕುಲು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಈ ದಸರಾದಲ್ಲಿ ಪಾಲ್ಗೊಂಡ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1 / 11
ವಿಶ್ವಪ್ರಸಿದ್ಧ ಕುಲು ದಸರಾ ಉತ್ಸವಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಆದರೆ, ಇದುವರೆಗೂ ಯಾವುದೇ ಪ್ರಧಾನಿ ಈ ದಸರಾ ಉತ್ಸವದಲ್ಲಿ ಪಾಲ್ಗೊಂಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಕುಲು ಕಣಿವೆಯ ಪ್ರಧಾನ ದೇವತೆಯಾದ ಲಾರ್ಡ್ ರಘುನಾಥನಿಗೆ ನಮನ ಸಲ್ಲಿಸಿದ ಮೊದಲ ಪ್ರಧಾನಿಯಾಗಿದ್ದಾರೆ.

ವಿಶ್ವಪ್ರಸಿದ್ಧ ಕುಲು ದಸರಾ ಉತ್ಸವಕ್ಕೆ ಸುಮಾರು 400 ವರ್ಷಗಳ ಇತಿಹಾಸವಿದೆ. ಆದರೆ, ಇದುವರೆಗೂ ಯಾವುದೇ ಪ್ರಧಾನಿ ಈ ದಸರಾ ಉತ್ಸವದಲ್ಲಿ ಪಾಲ್ಗೊಂಡಿರಲಿಲ್ಲ. ಪ್ರಧಾನಿ ನರೇಂದ್ರ ಮೋದಿ ಬುಧವಾರ ಕುಲು ಕಣಿವೆಯ ಪ್ರಧಾನ ದೇವತೆಯಾದ ಲಾರ್ಡ್ ರಘುನಾಥನಿಗೆ ನಮನ ಸಲ್ಲಿಸಿದ ಮೊದಲ ಪ್ರಧಾನಿಯಾಗಿದ್ದಾರೆ.

2 / 11
ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮತ್ತು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರೊಂದಿಗೆ ಕುಲುವಿನ ಧಾಲ್ಪುರ್ ಮೈದಾನದಲ್ಲಿ ಪ್ರಧಾನಿ ಮೋದಿ ಅವರು ಸುಮಾರು 300 ದೇವತೆಗಳ ಉಪಸ್ಥಿತಿಯ ನಡುವೆ 'ರಥಯಾತ್ರೆ'ಗೆ ಸಾಕ್ಷಿಯಾದರು.

ಹಿಮಾಚಲ ಪ್ರದೇಶದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಮತ್ತು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರೊಂದಿಗೆ ಕುಲುವಿನ ಧಾಲ್ಪುರ್ ಮೈದಾನದಲ್ಲಿ ಪ್ರಧಾನಿ ಮೋದಿ ಅವರು ಸುಮಾರು 300 ದೇವತೆಗಳ ಉಪಸ್ಥಿತಿಯ ನಡುವೆ 'ರಥಯಾತ್ರೆ'ಗೆ ಸಾಕ್ಷಿಯಾದರು.

3 / 11
ಐತಿಹಾಸಿಕ ಕುಲು ದಸರಾದ ಭಾಗವಾಗಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಐತಿಹಾಸಿಕ ಕುಲು ದಸರಾದ ಭಾಗವಾಗಲು ನನಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

4 / 11
ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಹಿಮಾಚಲಿ ಕ್ಯಾಪ್ ಧರಿಸಿ ಕುಲು ದಸರಾದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಅಪಾರ ಜನಸ್ತೋಮ ನೆರೆದಿತ್ತು.

ಪ್ರಧಾನಿ ನರೇಂದ್ರ ಮೋದಿ ಸಾಂಪ್ರದಾಯಿಕ ಹಿಮಾಚಲಿ ಕ್ಯಾಪ್ ಧರಿಸಿ ಕುಲು ದಸರಾದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಅಪಾರ ಜನಸ್ತೋಮ ನೆರೆದಿತ್ತು.

5 / 11
ರಘುನಾಥ ದೇವರ ಮುಂದೆ ತಲೆಬಾಗಿ ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದ ಪಡೆದರು.

ರಘುನಾಥ ದೇವರ ಮುಂದೆ ತಲೆಬಾಗಿ ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದ ಪಡೆದರು.

6 / 11
1637ರಲ್ಲಿ ರಾಜಾ ಜಗತ್ ಸಿಂಗ್ ಕುಲುವನ್ನು ಆಳ್ವಿಕೆ ಮಾಡುವಾಗ ಈ ದಸರಾ ಹಬ್ಬವನ್ನು ಮೊದಲ ಬಾರಿಗೆ ಆಚರಿಸಲಾಯಿತು. ದಸರಾ ಸಂದರ್ಭದಲ್ಲಿ ಭಗವಾನ್ ರಘುನಾಥನ ಗೌರವಾರ್ಥ ಆಚರಣೆಯನ್ನು ಮಾಡಲು ಕುಲುವಿನ ಎಲ್ಲಾ ಸ್ಥಳೀಯ ದೇವತೆಗಳನ್ನು ಅವರು ಆಹ್ವಾನಿಸಿದ್ದರು. ಅಂದಿನಿಂದ, ನೂರಾರು ಹಳ್ಳಿಗಳ ದೇವಾಲಯಗಳಿಂದ ದೇವತೆಗಳ ವಾರ್ಷಿಕ ಸಭೆ ನಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ.

1637ರಲ್ಲಿ ರಾಜಾ ಜಗತ್ ಸಿಂಗ್ ಕುಲುವನ್ನು ಆಳ್ವಿಕೆ ಮಾಡುವಾಗ ಈ ದಸರಾ ಹಬ್ಬವನ್ನು ಮೊದಲ ಬಾರಿಗೆ ಆಚರಿಸಲಾಯಿತು. ದಸರಾ ಸಂದರ್ಭದಲ್ಲಿ ಭಗವಾನ್ ರಘುನಾಥನ ಗೌರವಾರ್ಥ ಆಚರಣೆಯನ್ನು ಮಾಡಲು ಕುಲುವಿನ ಎಲ್ಲಾ ಸ್ಥಳೀಯ ದೇವತೆಗಳನ್ನು ಅವರು ಆಹ್ವಾನಿಸಿದ್ದರು. ಅಂದಿನಿಂದ, ನೂರಾರು ಹಳ್ಳಿಗಳ ದೇವಾಲಯಗಳಿಂದ ದೇವತೆಗಳ ವಾರ್ಷಿಕ ಸಭೆ ನಡೆಯುವುದು ಇಲ್ಲಿನ ಸಂಪ್ರದಾಯವಾಗಿದೆ.

7 / 11
ಕುಲು ದಸರಾ ಹಬ್ಬವು ಬಿಯಾಸ್ ನದಿಯ ದಡದಲ್ಲಿ 'ಲಂಕಾ ದಹನ್' ಆಚರಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಸುಂದರವಾಗಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ಎಲ್ಲ ದೇವತೆಗಳನ್ನು ಮೆರವಣಿಗೆಯ ಮೂಲಕ ಕರೆದೊಯ್ಯಲಾಗುತ್ತದೆ. ನಂತರ ಆ ದೇವತೆಗಳು ತಮ್ಮ ದೇವಾಲಯಗಳಿಗೆ ಹಿಂತಿರುಗುತ್ತಾರೆ.

ಕುಲು ದಸರಾ ಹಬ್ಬವು ಬಿಯಾಸ್ ನದಿಯ ದಡದಲ್ಲಿ 'ಲಂಕಾ ದಹನ್' ಆಚರಣೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಸುಂದರವಾಗಿ ಅಲಂಕೃತವಾದ ಪಲ್ಲಕ್ಕಿಯಲ್ಲಿ ಎಲ್ಲ ದೇವತೆಗಳನ್ನು ಮೆರವಣಿಗೆಯ ಮೂಲಕ ಕರೆದೊಯ್ಯಲಾಗುತ್ತದೆ. ನಂತರ ಆ ದೇವತೆಗಳು ತಮ್ಮ ದೇವಾಲಯಗಳಿಗೆ ಹಿಂತಿರುಗುತ್ತಾರೆ.

8 / 11
ಪ್ರಧಾನಮಂತ್ರಿ  ಮೋದಿ ಭಗವಾನ್ ರಘುನಾಥನ ರಥಕ್ಕೆ ಕಾಲಿಟ್ಟ ಕ್ಷಣವನ್ನು ಸೆರೆಹಿಡಿಯಲು ಜನರು ಹರ್ಷೋದ್ಗಾರದಿಂದ ಸೇರಿದ್ದರು. ಕುಲು ಮತ್ತು ಮಂಡಿ ಜಿಲ್ಲೆಯ ಸಮೀಪದ ಪ್ರದೇಶಗಳ ಸುಮಾರು 300 ದೇವತೆಗಳೊಂದಿಗೆ ಭಗವಾನ್ ರಘುನಾಥನ 'ರಥಯಾತ್ರೆ'ಗೆ ಮೋದಿ ಸಾಕ್ಷಿಯಾದರು.

ಪ್ರಧಾನಮಂತ್ರಿ ಮೋದಿ ಭಗವಾನ್ ರಘುನಾಥನ ರಥಕ್ಕೆ ಕಾಲಿಟ್ಟ ಕ್ಷಣವನ್ನು ಸೆರೆಹಿಡಿಯಲು ಜನರು ಹರ್ಷೋದ್ಗಾರದಿಂದ ಸೇರಿದ್ದರು. ಕುಲು ಮತ್ತು ಮಂಡಿ ಜಿಲ್ಲೆಯ ಸಮೀಪದ ಪ್ರದೇಶಗಳ ಸುಮಾರು 300 ದೇವತೆಗಳೊಂದಿಗೆ ಭಗವಾನ್ ರಘುನಾಥನ 'ರಥಯಾತ್ರೆ'ಗೆ ಮೋದಿ ಸಾಕ್ಷಿಯಾದರು.

9 / 11
ತಮ್ಮ ಪ್ರೀತಿಯ ನಾಯಕನಿಗೆ ಜೋರಾಗಿ ಹರ್ಷೋದ್ಗಾರದ ಮೂಲಕ ಪ್ರತಿಕ್ರಿಯಿಸಿದ ಜನರಿಗೆ ಪ್ರಧಾನಿ ದಸರಾ ಹಬ್ಬದ ಶುಭಾಶಯ ಕೋರಿದರು. ನರೇಂದ್ರ ಮೋದಿ ಅವರು 90ರ ದಶಕದಲ್ಲಿ ಹಿಮಾಚಲ ಪ್ರದೇಶದ ಬಿಜೆಪಿಯ ಉಸ್ತುವಾರಿಯಾಗಿದ್ದಾಗ ಕುಲು ದಸರಾದಲ್ಲಿ ಭಾಗವಹಿಸಿದ್ದರು. ಆದರೆ, ಪ್ರಧಾನಮಂತ್ರಿಯೊಬ್ಬರು ಈ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.

ತಮ್ಮ ಪ್ರೀತಿಯ ನಾಯಕನಿಗೆ ಜೋರಾಗಿ ಹರ್ಷೋದ್ಗಾರದ ಮೂಲಕ ಪ್ರತಿಕ್ರಿಯಿಸಿದ ಜನರಿಗೆ ಪ್ರಧಾನಿ ದಸರಾ ಹಬ್ಬದ ಶುಭಾಶಯ ಕೋರಿದರು. ನರೇಂದ್ರ ಮೋದಿ ಅವರು 90ರ ದಶಕದಲ್ಲಿ ಹಿಮಾಚಲ ಪ್ರದೇಶದ ಬಿಜೆಪಿಯ ಉಸ್ತುವಾರಿಯಾಗಿದ್ದಾಗ ಕುಲು ದಸರಾದಲ್ಲಿ ಭಾಗವಹಿಸಿದ್ದರು. ಆದರೆ, ಪ್ರಧಾನಮಂತ್ರಿಯೊಬ್ಬರು ಈ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಇದೇ ಮೊದಲು.

10 / 11
ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿಗಳನ್ನು ಸುಡುವ ಮೂಲಕ ಆಚರಿಸಲಾಗುವ ಕುಲುವಿನ ದಸರಾ ವಿಶಿಷ್ಟವಾಗಿದೆ. ಇದು ದೇಶದ ಇತರ ಭಾಗಗಳಲ್ಲಿನ ಹಬ್ಬಕ್ಕಿಂತ ಭಿನ್ನವಾಗಿದೆ.

ರಾವಣ, ಕುಂಭಕರ್ಣ ಮತ್ತು ಮೇಘನಾದನ ಪ್ರತಿಕೃತಿಗಳನ್ನು ಸುಡುವ ಮೂಲಕ ಆಚರಿಸಲಾಗುವ ಕುಲುವಿನ ದಸರಾ ವಿಶಿಷ್ಟವಾಗಿದೆ. ಇದು ದೇಶದ ಇತರ ಭಾಗಗಳಲ್ಲಿನ ಹಬ್ಬಕ್ಕಿಂತ ಭಿನ್ನವಾಗಿದೆ.

11 / 11
Follow us
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಾಜಕೀಯ ಪಿತೂರಿಗೆ ಅರವಿಂದ್ ಕೇಜ್ರಿವಾಲ್ ಬಲಿ; ಸುನೀತಾ ಕೇಜ್ರಿವಾಲ್ ಆರೋಪ
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ರಕ್ತದಿಂದ ಕೆಂಪಾಯ್ತು ಸಮುದ್ರದ ನೀರು; ವಿಡಿಯೋ ವೈರಲ್
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
ಗೃಹಲಕ್ಷ್ಮಿ ಯೋಜನೆ ಹಣ ಫಲಾನುಭವಿಗಳಿಗೆ ನಿಯಮಿತವಾಗಿ ತಲುಪುತ್ತಿದೆ: ಸಚಿವೆ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
Jog Falls: ಹಾಲ್ನೊರೆಯಂತೆ ಕಂಗೊಳಿಸುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಸಿಎಂ ಪತ್ನಿ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿದ್ದಾರೆ: ಆರ್​ಟಿಐ ಕಾರ್ಯಕರ್ತ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
ಪ್ರಾಂಶುಪಾಲಕಿಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ
Video: 60 ದಶಕದ ಹಾಡನ್ನು ರೀ ಕ್ರಿಯೇಟ್ ಮಾಡಿದ ಮುಕೇಶ್ ಹಾಗೂ ನೀತಾ ದಂಪತಿ