AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Orange Benefits: ಬೆಳಗ್ಗೆ ತಿಂಡಿಯ ಬದಲು ಕಿತ್ತಳೆ ಹಣ್ಣು ತಿನ್ನುವುದರಿಂದಾಗುವ ಅಚ್ಚರಿಯ ಪ್ರಯೋಜನಗಳಿವು

ಕಿತ್ತಳೆ ಹಣ್ಣು ವಿಟಮಿನ್ ಸಿ ಹೇರಳವಾಗಿರುವ ಹಣ್ಣಾಗಿದ್ದು, ನಮ್ಮ ಕಣ್ಣು, ಕೂದಲು, ಮೂಳೆ ಇತ್ಯಾದಿಗಳ ಪೋಷಣೆಗೆ ಉಪಯುಕ್ತವಾಗಿದೆ. ಆದರೆ, ಬೆಳಗ್ಗೆ ಎದ್ದಕೂಡಲೆ ಕಿತ್ತಳೆ ಹಣ್ಣು ತಿನ್ನುವುದರಿಂದಲೂ ಆರೋಗ್ಯಕ್ಕೆ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತಾ?

ಸುಷ್ಮಾ ಚಕ್ರೆ
|

Updated on:Mar 01, 2024 | 12:53 PM

Share
ಬಾಲಿವುಡ್ ನಟಿ ಅನುಷ್ಕಾ ಶರ್ಮ ತಿಂಡಿಯ ಜೊತೆಗೆ ಮುಂಜಾನೆ ಕಿತ್ತಳೆ ಹಣ್ಣು ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ.

ಬಾಲಿವುಡ್ ನಟಿ ಅನುಷ್ಕಾ ಶರ್ಮ ತಿಂಡಿಯ ಜೊತೆಗೆ ಮುಂಜಾನೆ ಕಿತ್ತಳೆ ಹಣ್ಣು ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಇಲ್ಲಿದೆ.

1 / 12
ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೆಲವೇ ದಿನಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ 2ನೇ ಮಗುವಿಗೆ ಅಕಾಯ್ ಕೊಹ್ಲಿ ಎಂದು ನಾಮಕರಣ ಮಾಡಿದ್ದರು. ಫಿಟ್​ನೆಸ್ ಬಗ್ಗೆ ಮೊದಲಿನಿಂದಲೂ ಬಹಳ ಎಚ್ಚರ ವಹಿಸುವ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾಗಲೂ ಹಣ್ಣು, ತರಕಾರಿ, ಡ್ರೈಫ್ರೂಟ್​ಗಳನ್ನು ಒಳಗೊಂಡಿರುವ ಸಸ್ಯಾಹಾರಿ ಡಯೆಟ್ ಅನ್ನೇ ಅನುಸರಿಸಿದ್ದರು.

ಬಾಲಿವುಡ್ ನಟಿ ಅನುಷ್ಕಾ ಶರ್ಮ ಕೆಲವೇ ದಿನಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಮ್ಮ 2ನೇ ಮಗುವಿಗೆ ಅಕಾಯ್ ಕೊಹ್ಲಿ ಎಂದು ನಾಮಕರಣ ಮಾಡಿದ್ದರು. ಫಿಟ್​ನೆಸ್ ಬಗ್ಗೆ ಮೊದಲಿನಿಂದಲೂ ಬಹಳ ಎಚ್ಚರ ವಹಿಸುವ ಅನುಷ್ಕಾ ಶರ್ಮಾ ಗರ್ಭಿಣಿಯಾಗಿದ್ದಾಗಲೂ ಹಣ್ಣು, ತರಕಾರಿ, ಡ್ರೈಫ್ರೂಟ್​ಗಳನ್ನು ಒಳಗೊಂಡಿರುವ ಸಸ್ಯಾಹಾರಿ ಡಯೆಟ್ ಅನ್ನೇ ಅನುಸರಿಸಿದ್ದರು.

2 / 12
ಕೆಲವು ಸೆಲಬ್ರಿಟಿಗಳು ಬೆಳಗ್ಗೆ ತಿಂಡಿಗೆ ಓಟ್ಸ್, ಜ್ಯೂಸ್​ಗೆ ಆದ್ಯತೆ ನೀಡಿದರೆ ಅನುಷ್ಕಾ ಶರ್ಮ ತಾಜಾ ಕಿತ್ತಳೆ ಹಣ್ಣುಗಳನ್ನು ತಿನ್ನುತ್ತಾರಂತೆ.

ಕೆಲವು ಸೆಲಬ್ರಿಟಿಗಳು ಬೆಳಗ್ಗೆ ತಿಂಡಿಗೆ ಓಟ್ಸ್, ಜ್ಯೂಸ್​ಗೆ ಆದ್ಯತೆ ನೀಡಿದರೆ ಅನುಷ್ಕಾ ಶರ್ಮ ತಾಜಾ ಕಿತ್ತಳೆ ಹಣ್ಣುಗಳನ್ನು ತಿನ್ನುತ್ತಾರಂತೆ.

3 / 12
ಬೆಳಗಿನ ಉಪಾಹಾರದಲ್ಲಿ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಕಿತ್ತಳೆ ಹಣ್ಣನ್ನು ಜ್ಯೂಸ್​ ಮಾಡಿಕೊಂಡು ಕುಡಿಯಬಾರದು. ತಾಜಾ ಹಣ್ಣನ್ನು ಸೇವಿಸುವುದರಿಂದ ಪ್ರಯೋಜನಗಳು ಹೆಚ್ಚು.

ಬೆಳಗಿನ ಉಪಾಹಾರದಲ್ಲಿ ಕಿತ್ತಳೆ ಹಣ್ಣನ್ನು ತಿನ್ನುವುದರಿಂದ ಹಲವು ಪ್ರಯೋಜನಗಳಿವೆ. ಕಿತ್ತಳೆ ಹಣ್ಣನ್ನು ಜ್ಯೂಸ್​ ಮಾಡಿಕೊಂಡು ಕುಡಿಯಬಾರದು. ತಾಜಾ ಹಣ್ಣನ್ನು ಸೇವಿಸುವುದರಿಂದ ಪ್ರಯೋಜನಗಳು ಹೆಚ್ಚು.

4 / 12
ಈ ಬಗ್ಗೆ ಫಿಟ್‌ನೆಸ್ ಸಲಹೆಗಾರರು ಕೂಡ ಮಾಹಿತಿ ನೀಡಿದ್ದು, ಬೆಳಗ್ಗೆ ತಿಂಡಿಯ ಬದಲು ಕಿತ್ತಳೆ ಹಣ್ಣು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ, ಜೀರ್ಣಕಾರಿ ಮತ್ತು ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಫಿಟ್‌ನೆಸ್ ಸಲಹೆಗಾರರು ಕೂಡ ಮಾಹಿತಿ ನೀಡಿದ್ದು, ಬೆಳಗ್ಗೆ ತಿಂಡಿಯ ಬದಲು ಕಿತ್ತಳೆ ಹಣ್ಣು ತಿನ್ನುವುದರಿಂದ ಮಲಬದ್ಧತೆ ನಿವಾರಣೆಯಾಗುತ್ತದೆ, ಜೀರ್ಣಕಾರಿ ಮತ್ತು ಹೊಟ್ಟೆಯ ಆರೋಗ್ಯ ಸುಧಾರಿಸುತ್ತದೆ ಎಂದು ಹೇಳಿದ್ದಾರೆ.

5 / 12
ಹೀಗಾಗಿ, ಕಿತ್ತಳೆ ಹಣ್ಣನ್ನು ಬೆಳಗ್ಗೆ ತಿನ್ನಲು ಆರಂಭಿಸಿದ ನಂತರ ದೇಹದಲ್ಲಿ ಉತ್ತಮ ರೀತಿಯ ಬದಲಾವಣೆಗಳನ್ನು ಗಮನಿಸಬಹುದು. ನಾನು ಬೆಳಗ್ಗೆ ಕಿತ್ತಳೆ ಹಣ್ಣು ತಿನ್ನತೊಡಗಿದ ನಂತರ ನನಗೆ ಹಲವು ರೀತಿಯಲ್ಲಿ ಸಹಾಯಕವಾಗಿದೆ. ಈಗ ನಾನು ನನ್ನ ಹಣ್ಣುಗಳ ಸೇವನೆಯನ್ನು 3 ಪಟ್ಟು ಹೆಚ್ಚಿಸಿದ್ದೇನೆ ಎಂದು ಫಿಟ್​ನೆಸ್ ತಜ್ಞೆಯೊಬ್ಬರು ಹೇಳಿದ್ದಾರೆ.

ಹೀಗಾಗಿ, ಕಿತ್ತಳೆ ಹಣ್ಣನ್ನು ಬೆಳಗ್ಗೆ ತಿನ್ನಲು ಆರಂಭಿಸಿದ ನಂತರ ದೇಹದಲ್ಲಿ ಉತ್ತಮ ರೀತಿಯ ಬದಲಾವಣೆಗಳನ್ನು ಗಮನಿಸಬಹುದು. ನಾನು ಬೆಳಗ್ಗೆ ಕಿತ್ತಳೆ ಹಣ್ಣು ತಿನ್ನತೊಡಗಿದ ನಂತರ ನನಗೆ ಹಲವು ರೀತಿಯಲ್ಲಿ ಸಹಾಯಕವಾಗಿದೆ. ಈಗ ನಾನು ನನ್ನ ಹಣ್ಣುಗಳ ಸೇವನೆಯನ್ನು 3 ಪಟ್ಟು ಹೆಚ್ಚಿಸಿದ್ದೇನೆ ಎಂದು ಫಿಟ್​ನೆಸ್ ತಜ್ಞೆಯೊಬ್ಬರು ಹೇಳಿದ್ದಾರೆ.

6 / 12
ನಾನು ಈಗ ಇತರ ರೀತಿಯ ಹಣ್ಣುಗಳನ್ನು ತಿನ್ನಲು ಪ್ರಯತ್ನಿಸುತ್ತೇನೆ. ವಿಶೇಷವಾಗಿ ಕಿವಿ ಹಣ್ಣು, ಬಾಳೆ ಹಣ್ಣುಗಳು ಮತ್ತು ಪೇರಳೆ ಹಣ್ಣುಗಳನ್ನು ನಾನು ಹೆಚ್ಚು ತಿನ್ನುತ್ತಿದ್ದೇನೆ. ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಈಗ ನನ್ನ ಡಯೆಟ್​ನಲ್ಲಿ ಈ ಹಣ್ಣುಗಳೇ ಮುಖ್ಯ ಸ್ಥಾನ ಪಡೆದಿವೆ ಎಂದು ಅವರು ಹೇಳಿಕೊಂಡಿದ್ದಾರೆ.

ನಾನು ಈಗ ಇತರ ರೀತಿಯ ಹಣ್ಣುಗಳನ್ನು ತಿನ್ನಲು ಪ್ರಯತ್ನಿಸುತ್ತೇನೆ. ವಿಶೇಷವಾಗಿ ಕಿವಿ ಹಣ್ಣು, ಬಾಳೆ ಹಣ್ಣುಗಳು ಮತ್ತು ಪೇರಳೆ ಹಣ್ಣುಗಳನ್ನು ನಾನು ಹೆಚ್ಚು ತಿನ್ನುತ್ತಿದ್ದೇನೆ. ಅದರ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಈಗ ನನ್ನ ಡಯೆಟ್​ನಲ್ಲಿ ಈ ಹಣ್ಣುಗಳೇ ಮುಖ್ಯ ಸ್ಥಾನ ಪಡೆದಿವೆ ಎಂದು ಅವರು ಹೇಳಿಕೊಂಡಿದ್ದಾರೆ.

7 / 12
ಕಿತ್ತಳೆ ಹಣ್ಣುಗಳು ವಿಟಮಿನ್ ಸಿ ಯಂತಹ ವಿಟಮಿನ್‌ಗಳನ್ನು ಒದಗಿಸುವುದರ ಜೊತೆಗೆ ಫೈಬರ್‌ ಅಂಶವನ್ನೂ ಹೊಂದಿದೆ. ಅದರ ಹೆಚ್ಚಿನ ಅಂಶವು ತಿರುಳಿನಲ್ಲಿರುತ್ತದೆ. ಆದ್ದರಿಂದ ನೀವು ಕಿತ್ತಳೆ ಜ್ಯೂಸ್ ಸೇವಿಸುವುದರ ಬದಲು ಕಿತ್ತಳೆ ಹಣ್ಣನ್ನು ಇಡಿಯಾಗಿ ತಿಂದರೆ ಪ್ರಯೋಜನ ಹೆಚ್ಚು.

ಕಿತ್ತಳೆ ಹಣ್ಣುಗಳು ವಿಟಮಿನ್ ಸಿ ಯಂತಹ ವಿಟಮಿನ್‌ಗಳನ್ನು ಒದಗಿಸುವುದರ ಜೊತೆಗೆ ಫೈಬರ್‌ ಅಂಶವನ್ನೂ ಹೊಂದಿದೆ. ಅದರ ಹೆಚ್ಚಿನ ಅಂಶವು ತಿರುಳಿನಲ್ಲಿರುತ್ತದೆ. ಆದ್ದರಿಂದ ನೀವು ಕಿತ್ತಳೆ ಜ್ಯೂಸ್ ಸೇವಿಸುವುದರ ಬದಲು ಕಿತ್ತಳೆ ಹಣ್ಣನ್ನು ಇಡಿಯಾಗಿ ತಿಂದರೆ ಪ್ರಯೋಜನ ಹೆಚ್ಚು.

8 / 12
ಬೆಳಗಿನ ಉಪಾಹಾರದಲ್ಲಿ ಯಾವುದೇ ರೀತಿಯ ಹಣ್ಣುಗಳನ್ನು ಸೇರಿಸುವುದು ಆರೋಗ್ಯಕರವಾಗಿದ್ದರೂ, ಕಿತ್ತಳೆಗಳು ಸಂತೃಪ್ತಿಕರ ಹಣ್ಣಾಗಿದೆ.

ಬೆಳಗಿನ ಉಪಾಹಾರದಲ್ಲಿ ಯಾವುದೇ ರೀತಿಯ ಹಣ್ಣುಗಳನ್ನು ಸೇರಿಸುವುದು ಆರೋಗ್ಯಕರವಾಗಿದ್ದರೂ, ಕಿತ್ತಳೆಗಳು ಸಂತೃಪ್ತಿಕರ ಹಣ್ಣಾಗಿದೆ.

9 / 12
ಇದು ರಕ್ತದಲ್ಲಿನ ಗ್ಲೂಕೋಸ್ ಗರಿಷ್ಠ ಮಟ್ಟವನ್ನು ನಿಯಂತ್ರಿಸುತ್ತವೆ. ಇದರಲ್ಲಿರುವ ವಿಟಮಿನ್ ಸಿ ಚರ್ಮದ ದೃಢತೆಯನ್ನು ಕಾಪಾಡುವ ಕಾಲಜನ್ ಸಂಶ್ಲೇಷಣೆಗೆ ಅವಶ್ಯಕವಾಗಿದೆ.

ಇದು ರಕ್ತದಲ್ಲಿನ ಗ್ಲೂಕೋಸ್ ಗರಿಷ್ಠ ಮಟ್ಟವನ್ನು ನಿಯಂತ್ರಿಸುತ್ತವೆ. ಇದರಲ್ಲಿರುವ ವಿಟಮಿನ್ ಸಿ ಚರ್ಮದ ದೃಢತೆಯನ್ನು ಕಾಪಾಡುವ ಕಾಲಜನ್ ಸಂಶ್ಲೇಷಣೆಗೆ ಅವಶ್ಯಕವಾಗಿದೆ.

10 / 12
ಕಿತ್ತಳೆ ಹಣ್ಣಿನಲ್ಲಿ ಕ್ಯಾಲೋರಿಗಳು, ವಿಟಮಿನ್ ಸಿ, ಕಾರ್ಬೋಹೈಡ್ರೇಟ್‌ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಇವೆ.

ಕಿತ್ತಳೆ ಹಣ್ಣಿನಲ್ಲಿ ಕ್ಯಾಲೋರಿಗಳು, ವಿಟಮಿನ್ ಸಿ, ಕಾರ್ಬೋಹೈಡ್ರೇಟ್‌ಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಇವೆ.

11 / 12
ಕಿತ್ತಳೆ ಕ್ಯಾರೋಟಿನ್ ಮತ್ತು ವಿಟಮಿನ್ ಎರಡನ್ನೂ ಒಳಗೊಂಡಿರುತ್ತವೆ. ಇದು ಕಣ್ಣಿನ ದೃಷ್ಟಿಗೆ ಒಳ್ಳೆಯದು. ವಿಟಮಿನ್ ಕಾರ್ನಿಯಾವನ್ನು ರಕ್ಷಿಸುತ್ತದೆ. ಮತ್ತೊಂದೆಡೆ, ಕಿತ್ತಳೆ ರಸವು ಬ್ಯಾಕ್ಟೀರಿಯಾ ಅಥವಾ ಸೋಂಕಿನಿಂದ ಕಣ್ಣುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ಕಿತ್ತಳೆ ಕ್ಯಾರೋಟಿನ್ ಮತ್ತು ವಿಟಮಿನ್ ಎರಡನ್ನೂ ಒಳಗೊಂಡಿರುತ್ತವೆ. ಇದು ಕಣ್ಣಿನ ದೃಷ್ಟಿಗೆ ಒಳ್ಳೆಯದು. ವಿಟಮಿನ್ ಕಾರ್ನಿಯಾವನ್ನು ರಕ್ಷಿಸುತ್ತದೆ. ಮತ್ತೊಂದೆಡೆ, ಕಿತ್ತಳೆ ರಸವು ಬ್ಯಾಕ್ಟೀರಿಯಾ ಅಥವಾ ಸೋಂಕಿನಿಂದ ಕಣ್ಣುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

12 / 12

Published On - 12:53 pm, Fri, 1 March 24

Sushma Chakre
Sushma Chakre

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!