
ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೋಟೆಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ.

ಲೋಕಸಭಾ ಚುನಾವಣೆಗೆ ಮೂಹೂರ್ತ ಫಿಕ್ಸ್ ಆಗುವ ಮುಂಚೆಯೇ ಕಲಬುರಗಿಯಲ್ಲಿ ನಮೋ ಬೃಹತ್ ಸಮಾವೇಶ ನಡೆಸುವುದರ ಜೊತೆಗೆ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಿದ್ದು. ಕಲಬುರಗಿಯಿಂದಲೇ ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ.

ಇಂದು ಮಧ್ಯಾಹ್ನ ಸೇನಾ ಹೆಲಿಕಾಪ್ಟರ್ ಮೂಲಕ ಕಲಬುರಗಿಗೆ ಆಗಮಿಸಿದ ಪ್ರಧಾನಿ ಮೋದಿ, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ರಣಕಹಳೆ ಮೊಳಗಿಸಿದ್ದಾರೆ

ಕಲಬುರಗಿ ಡಿ.ಆರ್ ಮೈದಾನದಿಂದ ಮೋದಿ ಮಿನಿ ರೋಡ್ ಶೋ ಎಸ್ಪಿ ಕಚೇರಿ ರಸ್ತೆ, ಅಲ್ಲಿಂದ ಆರ್ಚಿಡ್ ಮಾಲ್ ಬಳಿ ಬಂದಿದ್ದು, ಅಲ್ಲಿ ನೆರೆಯೋ ಜನರತ್ತ ಮೋದಿ ಕೈ ಬೀಸಿದ್ದಾರೆ.

ಅಲ್ಲಿಂದ ಎಸ್.ಎಂ. ಪಂಡಿತ್ ರಂಗಮಂದಿರ ಕಡೆ ಪ್ರಯಾಣ ಬೆಳೆಸಿದ್ದು, ರಂಗಮಂದಿರ ಕಾರ್ನರ್ನಲ್ಲಿ ಸಾಕಷ್ಟು ಜನ ಜಮಾಯಿಸಿದ್ದು, ಅಬ್ ಕಿ ಬಾರ್ 400 ಪಾರ್ ಎನ್ನುತ್ತಿದ್ದಾರೆ.

ಬಳಿಕ ಸಾರ್ವಜನಿಕ ಉದ್ಯಾನವನ ಒಳಗಡೆ ರಸ್ತೆಯಿಂದ ರೋಟರಿ ಕ್ಲಬ್ ರಸ್ತೆ, ಅಲ್ಲಿಂದ ನೇರವಾಗಿ ಎನ್.ವಿ. ಮೈದಾನದ ಕಡೆಗೆ ಪ್ರಯಾಣ ಬೆಳೆಸಿದರು. ಇತ್ತ, ಸಮಾವೇಶದ ಮೈದಾನದಲ್ಲಿ ಬಿರು ಬಿಸಿಲನ್ನೂ ಲೆಕ್ಕಿಸದ ಜನರು ಕಿಕ್ಕಿರಿದು ಸೇರಿದ್ದರು. ರಸ್ತೆ ಇಕ್ಕೆಲಗಳಲ್ಲಿ ನಿಂತು ಜೈ ಶ್ರೀರಾಮ್, ಜೈ ಮೋದಿ ಎಂದು ಘೋಷಣೆ ಕೂಗಿದ್ದಾರೆ.
Published On - 3:42 pm, Sat, 16 March 24