AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramanagara: ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ರಂಗರಾಯನದೊಡ್ಡಿ ಕೆರೆಯ ಸುತ್ತಲೂ ಕಲರ್​ಫುಲ್ ಹೂವುಗಳು

ರೇಷ್ಮೆನಗರಿ ರಾಮನಗರದಲ್ಲಿರುವ ರಂಗರಾಯನದೊಡ್ಡಿ ಕೆರೆ ಇತ್ತೀಚಿಗೆ ಸುರಿದ ಬಾರಿ ಮಳೆಗೆ ಸಂಪೂರ್ಣವಾಗಿ ಭರ್ತಿಯಾಗಿದೆ. ಅಷ್ಟೇ ಅಲ್ಲ ಸುತ್ತಲು ಬೆಟ್ಟಗುಡ್ಡ, ಬಗೆಬಗೆಯ ಕಲರ್ ಕಲರ್ ಹೂವುಗಳು, ಹಚ್ಚಹಸಿರಿನಿಂದ ಕಂಗೋಳಿಸುತ್ತಿದೆ.

TV9 Web
| Edited By: Rakesh Nayak Manchi|

Updated on: Nov 17, 2022 | 8:03 AM

Share
ಸುತ್ತಲು ಬೆಟ್ಟಗುಡ್ಡಗಳಿಂದ ಆವೃತ್ತವಾಗಿ ಭೂಪ್ರದೇಶ ಮಧ್ಯೆಯೊಂದು ತುಂಬಿ ತುಳುಕುತ್ತಿರುವ ಸುಂದರ ಕೆರೆ. ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ರಾಮನಗರದ ರಂಗರಾಯನದೊಡ್ಡಿ ಕೆರೆ ಇದೀಗ ಸಾರ್ವಜನಿಕರು, ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.

Ramanagara overflowing Rangarayanadoddi Lake around Different types of colourful flowers atracting tourists Ramanagar news in kannada

1 / 8
ಕೆಲ ವರ್ಷಗಳಿಂದ ಈ ಕೆರೆ ಭರ್ತಿಯಾಗಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ರಾಮನಗರದಲ್ಲಿ ಮಳೆಯಾದ ಹಿನ್ನೆಲೆ ರಂಗರಾಯನದೊಡ್ಡಿ ಕೆರೆ ಸಂಪೂರ್ಣವಾಗಿ ಭರ್ತಿಯಾಗಿ ಮೈದುಂಬಿಕೊಂಡಿದೆ. ಅಷ್ಟೇ ಅಲ್ಲದೆ ಸುತ್ತಮುತ್ತ ಬೆಟ್ಟಗುಡ್ಡಗಳು, ಹಚ್ಚಹಸಿರಿನ ಪರಿಸರ ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ.

Ramanagara overflowing Rangarayanadoddi Lake around Different types of colourful flowers atracting tourists Ramanagar news in kannada

2 / 8
Ramanagara overflowing Rangarayanadoddi Lake around Different types of colourful flowers atracting tourists Ramanagar news in kannada

ಕೆರೆಯ ಬಳಿಯ ಕಲರ್​ಫುಲ್ ಹೂವುಗಳು ಸಾರ್ವಜನಿಕರ ಮನಸ್ಸಿಗೆ ಮುದ ನೀಡುತ್ತಿವೆ. ಹೀಗಾಗಿ ರಾಮನಗರದ ನಗರ ನಿವಾಸಿಗಳು ಕೆರೆ ಬಳಿ ಬಂದು ಕೆಲ ಕಾಲ ವಿಶ್ರಾಂತಿ ಪಡೆಯುತ್ತಿದ್ದಾರೆ.

3 / 8
Ramanagara overflowing Rangarayanadoddi Lake around Different types of colourful flowers atracting tourists Ramanagar news in kannada

ಬೆಳಗ್ಗೆ ಹಾಗೂ ಸಂಜೆ ಕೆರೆಯ ಬಳಿಯೇ ವಾಕಿಂಗ್ ಮಾಡಿ ಪ್ರಕೃತಿಯ ಸೌಂದರ್ಯವನ್ನು ಸವಿಯುವುದರ ಜೊತೆಗೆ ದೇಹದ ಆರೋಗ್ಯವನ್ನೂ ಕಾಪಾಡಿಕೊಳ್ಳುತ್ತಿದ್ದಾರೆ. ಇಂತಹ ಕೆರೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ತಾಳಿವೆ. ಇದು ಸ್ಥಳೀಯರ ಬೇಸರಕ್ಕೂ ಕೂಡ ಕಾರಣವಾಗಿದೆ.

4 / 8
Ramanagara overflowing Rangarayanadoddi Lake around Different types of colourful flowers atracting tourists Ramanagar news in kannada

ಮಳೆ ಹೆಚ್ಚಾಗಿ ಕೆರೆ ಭರ್ತಿಗೊಂಡು ಕೋಡಿ ಹರಿದಿದ್ದು, ಜನರು ಬಟ್ಟೆ ತೊಳೆಯುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಇಂತಹ ಸುಂದರ ಕೆರೆಯನ್ನು ನಿರ್ಲಕ್ಷಿಸಿದೆ. ಕೆರೆಯನ್ನು ಅಭಿವೃದ್ಧಿಪಡಿಸಿ ಬೋಟಿಂಗ್ ಇತ್ಯಾದಿ ವ್ಯವಸ್ಥೆಯನ್ನು ಕಲ್ಪಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಎಂದು ರಾಮನಗರ ನಿವಾಸಿ ಮಂಜುನಾಥ್ ಹೇಳುತ್ತಾರೆ.

5 / 8
Ramanagara overflowing Rangarayanadoddi Lake around Different types of colourful flowers atracting tourists Ramanagar news in kannada

ರಾಮನಗರ ನಗರದಲ್ಲಿ ಇರುವ ಏಕೈಕ ಅತಿದೊಡ್ಡ ಕೆರೆ ಇದಾಗಿದ್ದು, ಸುಮಾರು ನೂರಾರು ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ, ಕೆರೆಯ ಬಳಿ ವಾಕಿಂಗ್ ಪಾಥ್ ನಿರ್ಮಾಣ ಮಾಡಿ, ಬೊಟಿಂಗ್ ವ್ಯವಸ್ಥೆಯನ್ನ ಕಲ್ಪಿಸಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಬೊಟಿಂಗ್ ವ್ಯವಸ್ಥೆಯನ್ನ ರದ್ದು ಮಾಡಲಾಗಿದೆ.

6 / 8
Ramanagara overflowing Rangarayanadoddi Lake around Different types of colourful flowers atracting tourists Ramanagar news in kannada

ಮೂಲಭೂತ ಸೌಕರ್ಯಗಳನ್ನ ಒಳಗೊಂಡಿದ್ದ ಈ ಕೆರೆಯಲ್ಲಿ ಇದೀಗ ಬೊಟಿಂಗ್ ವ್ಯವಸ್ಥೆ, ಮೂಲಸೌಕರ್ಯಗಳು ಇಲ್ಲದಂತೆ ಆಗಿದೆ. ಜೊತೆಗೆ ಕೆರೆಯನ್ನ ಪ್ರಭಾವಿಗಳು ಕೂಡ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಕೆರೆ ಒತ್ತುವರಿಯನ್ನ ತೆರವು ಮಾಡಿ ಬೊಟಿಂಗ್ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

7 / 8
Ramanagara overflowing Rangarayanadoddi Lake around Different types of colourful flowers atracting tourists Ramanagar news in kannada

ಒಟ್ಟಾರೆ ರಾಮನಗರದ ನಗರದ ಮಧ್ಯಭಾಗದಲ್ಲಿರುವ ಸುಂದರ ಕೆರೆ ಸುತ್ತಮುತ್ತಲಿನ ಪರಿಸರವು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಇದರ ಜೊತೆಗೆ ಮತ್ತಷ್ಟು ಮೂಲಭೂತ ಸೌಕರ್ಯಗಳು ಕಲ್ಪಿಸಿದರೆ ಉತ್ತಮ ಪ್ರವಾಸಿ ಸ್ಥಳವಾಗಿ ಮಾರ್ಪಡಲಿದೆ. (ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ)

8 / 8
Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ