- Kannada News Photo gallery Ramanagara overflowing Rangarayanadoddi Lake around Different types of colourful flowers atracting tourists Ramanagar news in kannada
Ramanagara: ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿರುವ ರಂಗರಾಯನದೊಡ್ಡಿ ಕೆರೆಯ ಸುತ್ತಲೂ ಕಲರ್ಫುಲ್ ಹೂವುಗಳು
ರೇಷ್ಮೆನಗರಿ ರಾಮನಗರದಲ್ಲಿರುವ ರಂಗರಾಯನದೊಡ್ಡಿ ಕೆರೆ ಇತ್ತೀಚಿಗೆ ಸುರಿದ ಬಾರಿ ಮಳೆಗೆ ಸಂಪೂರ್ಣವಾಗಿ ಭರ್ತಿಯಾಗಿದೆ. ಅಷ್ಟೇ ಅಲ್ಲ ಸುತ್ತಲು ಬೆಟ್ಟಗುಡ್ಡ, ಬಗೆಬಗೆಯ ಕಲರ್ ಕಲರ್ ಹೂವುಗಳು, ಹಚ್ಚಹಸಿರಿನಿಂದ ಕಂಗೋಳಿಸುತ್ತಿದೆ.
Updated on: Nov 17, 2022 | 8:03 AM

Ramanagara overflowing Rangarayanadoddi Lake around Different types of colourful flowers atracting tourists Ramanagar news in kannada

Ramanagara overflowing Rangarayanadoddi Lake around Different types of colourful flowers atracting tourists Ramanagar news in kannada

ಕೆರೆಯ ಬಳಿಯ ಕಲರ್ಫುಲ್ ಹೂವುಗಳು ಸಾರ್ವಜನಿಕರ ಮನಸ್ಸಿಗೆ ಮುದ ನೀಡುತ್ತಿವೆ. ಹೀಗಾಗಿ ರಾಮನಗರದ ನಗರ ನಿವಾಸಿಗಳು ಕೆರೆ ಬಳಿ ಬಂದು ಕೆಲ ಕಾಲ ವಿಶ್ರಾಂತಿ ಪಡೆಯುತ್ತಿದ್ದಾರೆ.

ಬೆಳಗ್ಗೆ ಹಾಗೂ ಸಂಜೆ ಕೆರೆಯ ಬಳಿಯೇ ವಾಕಿಂಗ್ ಮಾಡಿ ಪ್ರಕೃತಿಯ ಸೌಂದರ್ಯವನ್ನು ಸವಿಯುವುದರ ಜೊತೆಗೆ ದೇಹದ ಆರೋಗ್ಯವನ್ನೂ ಕಾಪಾಡಿಕೊಳ್ಳುತ್ತಿದ್ದಾರೆ. ಇಂತಹ ಕೆರೆಯ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ನಿರ್ಲಕ್ಷ್ಯ ತಾಳಿವೆ. ಇದು ಸ್ಥಳೀಯರ ಬೇಸರಕ್ಕೂ ಕೂಡ ಕಾರಣವಾಗಿದೆ.

ಮಳೆ ಹೆಚ್ಚಾಗಿ ಕೆರೆ ಭರ್ತಿಗೊಂಡು ಕೋಡಿ ಹರಿದಿದ್ದು, ಜನರು ಬಟ್ಟೆ ತೊಳೆಯುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಗಳು ಇಂತಹ ಸುಂದರ ಕೆರೆಯನ್ನು ನಿರ್ಲಕ್ಷಿಸಿದೆ. ಕೆರೆಯನ್ನು ಅಭಿವೃದ್ಧಿಪಡಿಸಿ ಬೋಟಿಂಗ್ ಇತ್ಯಾದಿ ವ್ಯವಸ್ಥೆಯನ್ನು ಕಲ್ಪಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ ಎಂದು ರಾಮನಗರ ನಿವಾಸಿ ಮಂಜುನಾಥ್ ಹೇಳುತ್ತಾರೆ.

ರಾಮನಗರ ನಗರದಲ್ಲಿ ಇರುವ ಏಕೈಕ ಅತಿದೊಡ್ಡ ಕೆರೆ ಇದಾಗಿದ್ದು, ಸುಮಾರು ನೂರಾರು ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಾಣ ಮಾಡಲಾಗಿದೆ. ಈ ಹಿಂದೆ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ, ಕೆರೆಯ ಬಳಿ ವಾಕಿಂಗ್ ಪಾಥ್ ನಿರ್ಮಾಣ ಮಾಡಿ, ಬೊಟಿಂಗ್ ವ್ಯವಸ್ಥೆಯನ್ನ ಕಲ್ಪಿಸಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಬೊಟಿಂಗ್ ವ್ಯವಸ್ಥೆಯನ್ನ ರದ್ದು ಮಾಡಲಾಗಿದೆ.

ಮೂಲಭೂತ ಸೌಕರ್ಯಗಳನ್ನ ಒಳಗೊಂಡಿದ್ದ ಈ ಕೆರೆಯಲ್ಲಿ ಇದೀಗ ಬೊಟಿಂಗ್ ವ್ಯವಸ್ಥೆ, ಮೂಲಸೌಕರ್ಯಗಳು ಇಲ್ಲದಂತೆ ಆಗಿದೆ. ಜೊತೆಗೆ ಕೆರೆಯನ್ನ ಪ್ರಭಾವಿಗಳು ಕೂಡ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಕೆರೆ ಒತ್ತುವರಿಯನ್ನ ತೆರವು ಮಾಡಿ ಬೊಟಿಂಗ್ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಒಟ್ಟಾರೆ ರಾಮನಗರದ ನಗರದ ಮಧ್ಯಭಾಗದಲ್ಲಿರುವ ಸುಂದರ ಕೆರೆ ಸುತ್ತಮುತ್ತಲಿನ ಪರಿಸರವು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದೆ. ಇದರ ಜೊತೆಗೆ ಮತ್ತಷ್ಟು ಮೂಲಭೂತ ಸೌಕರ್ಯಗಳು ಕಲ್ಪಿಸಿದರೆ ಉತ್ತಮ ಪ್ರವಾಸಿ ಸ್ಥಳವಾಗಿ ಮಾರ್ಪಡಲಿದೆ. (ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9 ರಾಮನಗರ)









