Ramya: ಗುಲಾಬಿಗೆ ಮುತ್ತಿಟ್ಟ ರಮ್ಯಾ ದಿವ್ಯ ಸ್ಪಂದನಾ; ಜೊತೆಗೊಂದು ಚಂದದ ಕವನ

|

Updated on: Jun 25, 2023 | 8:21 AM

Ramya Divya Spandana: ರಮ್ಯಾ ಅವರು ಗುಲಾಬಿ ಹೂವುಗಳ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಆ ಫೋಟೋದೊಂದಿಗೆ ಅವರು ಹಂಚಿಕೊಂಡ ಕವನದಲ್ಲಿ ದೇವರು ಮತ್ತು ಜೀವನದ ಬಗ್ಗೆ ಹೇಳಲಾಗಿದೆ.

1 / 7
ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ದಿನಚರಿ ಬಗ್ಗೆ ಅವರು ಆಗಾಗ ಅಪ್​ಡೇಟ್​ ನೀಡುತ್ತಾರೆ. ಈಗ ಅವರು ಒಂದಷ್ಟು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಟಿ ರಮ್ಯಾ ದಿವ್ಯ ಸ್ಪಂದನಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ದಿನಚರಿ ಬಗ್ಗೆ ಅವರು ಆಗಾಗ ಅಪ್​ಡೇಟ್​ ನೀಡುತ್ತಾರೆ. ಈಗ ಅವರು ಒಂದಷ್ಟು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

2 / 7
ಗುಲಾಬಿ ಹೂವುಗಳ ಜೊತೆಗೆ ರಮ್ಯಾ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ನೂರಾರು ಮಂದಿ ಇದಕ್ಕೆ ಕಮೆಂಟ್​ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

ಗುಲಾಬಿ ಹೂವುಗಳ ಜೊತೆಗೆ ರಮ್ಯಾ ಅವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ನೂರಾರು ಮಂದಿ ಇದಕ್ಕೆ ಕಮೆಂಟ್​ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

3 / 7
ಈ ಫೋಟೋದ ಜೊತೆಯಲ್ಲಿ ರಮ್ಯಾ ಅವರು ಒಂದು ಚಂದದ ಕವನ ಹಂಚಿಕೊಂಡಿದ್ದಾರೆ. ಈ ಕವನದಲ್ಲಿ ದೇವರು ಮತ್ತು ಜೀವನದ ಬಗ್ಗೆ ಹೇಳಲಾಗಿದೆ. ಇಡೀ ನಮ್ಮ ಬದುಕು ದೇವರ ಕೈಯಲ್ಲಿದೆ ಎಂಬ ಸಾರಾಂಶ ಈ ಕವನದಲ್ಲಿದೆ.

ಈ ಫೋಟೋದ ಜೊತೆಯಲ್ಲಿ ರಮ್ಯಾ ಅವರು ಒಂದು ಚಂದದ ಕವನ ಹಂಚಿಕೊಂಡಿದ್ದಾರೆ. ಈ ಕವನದಲ್ಲಿ ದೇವರು ಮತ್ತು ಜೀವನದ ಬಗ್ಗೆ ಹೇಳಲಾಗಿದೆ. ಇಡೀ ನಮ್ಮ ಬದುಕು ದೇವರ ಕೈಯಲ್ಲಿದೆ ಎಂಬ ಸಾರಾಂಶ ಈ ಕವನದಲ್ಲಿದೆ.

4 / 7
ರಮ್ಯಾ ಅವರು ಈಗ ರಾಜಕೀಯದಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಅವರ ಸಂಪೂರ್ಣ ಗಮನ ಈಗ ಚಿತ್ರರಂಗದ ಮೇಲಿದೆ. ನಟಿಯಾಗಿ, ನಿರ್ಮಾಪಕಿಯಾಗಿ ರಮ್ಯಾ ಅವರು ಬಣ್ಣದ ಲೋಕದಲ್ಲಿ ಬ್ಯುಸಿ ಆಗಿದ್ದಾರೆ.

ರಮ್ಯಾ ಅವರು ಈಗ ರಾಜಕೀಯದಿಂದ ಕೊಂಚ ದೂರ ಉಳಿದುಕೊಂಡಿದ್ದಾರೆ. ಅವರ ಸಂಪೂರ್ಣ ಗಮನ ಈಗ ಚಿತ್ರರಂಗದ ಮೇಲಿದೆ. ನಟಿಯಾಗಿ, ನಿರ್ಮಾಪಕಿಯಾಗಿ ರಮ್ಯಾ ಅವರು ಬಣ್ಣದ ಲೋಕದಲ್ಲಿ ಬ್ಯುಸಿ ಆಗಿದ್ದಾರೆ.

5 / 7
ಡಾಲಿ ಧನಂಜಯ್​​ ಜೊತೆ ‘ಉತ್ತರಕಾಂಡ’ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇದೆ. ಅಲ್ಲದೇ, ರಮ್ಯಾ ಅವರ ನಿರ್ಮಾಣದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮೂಡಿಬರುತ್ತಿದೆ.

ಡಾಲಿ ಧನಂಜಯ್​​ ಜೊತೆ ‘ಉತ್ತರಕಾಂಡ’ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿದ್ದಾರೆ. ಈ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇದೆ. ಅಲ್ಲದೇ, ರಮ್ಯಾ ಅವರ ನಿರ್ಮಾಣದಲ್ಲಿ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ಮೂಡಿಬರುತ್ತಿದೆ.

6 / 7
ರಾಜಕೀಯದ ಕಾರಣದಿಂದ ರಮ್ಯಾ ಅವರು ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಆದರೆ ಈಗ ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ರಾಜಕೀಯದ ಕಾರಣದಿಂದ ರಮ್ಯಾ ಅವರು ಒಂದಷ್ಟು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಆದರೆ ಈಗ ಅವರು ಮತ್ತೆ ಬಣ್ಣದ ಲೋಕಕ್ಕೆ ಮರಳಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

7 / 7
ನಿರ್ಮಾಪಕಿಯಾಗಿಯೂ ಸಕ್ರಿಯವಾಗಿರುವ ರಮ್ಯಾ ಅವರು ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ‘ವೀಕೆಂಡ್​ ವಿತ್​ ರಮೇಶ್​’ ಸೀಸನ್​ 5ರ ಮೊದಲ ಅತಿಥಿಯಾಗಿ ರಮ್ಯಾ ಆಗಮಿಸಿದ್ದರು.

ನಿರ್ಮಾಪಕಿಯಾಗಿಯೂ ಸಕ್ರಿಯವಾಗಿರುವ ರಮ್ಯಾ ಅವರು ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ‘ವೀಕೆಂಡ್​ ವಿತ್​ ರಮೇಶ್​’ ಸೀಸನ್​ 5ರ ಮೊದಲ ಅತಿಥಿಯಾಗಿ ರಮ್ಯಾ ಆಗಮಿಸಿದ್ದರು.