AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Makeup Remover: ನೈಸರ್ಗಿಕ ವಿಧಾನದ ಮೂಲಕ ಮೇಕಪ್ ತೆಗೆಯುವುದು ಹೇಗೆ? ಇಲ್ಲಿದೆ ಸರಳ ಉಪಾಯ

ಪ್ರತಿಯೊಬ್ಬರು ಅದರಲ್ಲೂ ಮಹಿಳೆಯರು ಹೊರಗೆ ಹೋಗುವ ಸಂದರ್ಭದಲ್ಲಿ ಮುಖ ಸುಂದರವಾಗಿ ಕಾಣಲು ಮೇಕಪ್ ಮಾಡುತ್ತಾರೆ. ಆದರೆ ಇದನ್ನು ರಾತ್ರಿ ಮಲಗುವ ಮುನ್ನ ತೆಗೆಯಲೇಬೇಕು ಎಂದು ಬ್ಯೂಟಿಷಿಯನ್​ಗಳು ಹೇಳುತ್ತಾರೆ.

TV9 Web
| Updated By: Rakesh Nayak Manchi|

Updated on: Jul 10, 2023 | 6:01 AM

Share
Removing makeup by natural method Here is a simple tips in Kannada

ಮಹಿಳೆಯರು ಸಾರ್ವಜನಿಕ ಸ್ಥಳಗಳಿಗೆ ಹೋಗುವ ಸಂದರ್ಭದಲ್ಲಿ ಮುಖ ಸುಂದರವಾಗಿ ಕಾಣಲು ಮೇಕಪ್ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೆಲವು ಪುರುಷರು ಕೂಡ ಕೊಂಚ ಮೇಕಪ್ ಮಾಡುತ್ತಾರೆ. ಯಾರೇ ಮೇಕಪ್ ಮಾಡಿರಲಿ ರಾತ್ರಿ ಮಲಗುವ ಮುನ್ನ ಮೇಕಪ್ ತೆಗೆಯಲೇಬೇಕು ಎನ್ನುತ್ತಾರೆ ಬ್ಯೂಟಿಷಿಯನ್​ಗಳು. ಇದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮೇಕಪ್ ರಿಮೂವರ್​ಗಳ ಬದಲು ಮನೆಯಲ್ಲಿ ಸಿಗುವ ನೈಸರ್ಗಿಕ ಪದಾರ್ಥಗಳಿಂದ ತ್ವಚೆಗೆ ಹಾನಿಯಾಗದಂತೆ ಮೇಕಪ್ ತೆಗೆಯಬಹುದು ಅಂತಾ ಸಲಹೆ ನೀಡಿದ್ದಾರೆ.

1 / 5
Removing makeup by natural method Here is a simple tips in Kannada

ಮೇಕಪ್ ತೆಗೆಯಲು ಮೇಕಪ್ ರಿಮೂವರ್‌ಗಳನ್ನು ಬಳಸುವುದರಿಂದ ಚರ್ಮವು ಬೇಗನೆ ಒಣಗುತ್ತದೆ ಮತ್ತು ನಿರ್ಜೀವವಾಗುತ್ತದೆ. ಹೀಗಾಗಿ ತೆಂಗಿನ ಎಣ್ಣೆಯನ್ನು ನೈಸರ್ಗಿಕ ರಿಮೂವರ್ ಆಗಿ ಬಳಸಬಹುದು ಎನ್ನುತ್ತಾರೆ ತಜ್ಞರು. ಕೊಬ್ಬರಿ ಎಣ್ಣೆಯನ್ನು ಮುಖ ಮತ್ತು ಕುತ್ತಿಗೆಗೆ ಚೆನ್ನಾಗಿ ಹಚ್ಚಿ 2-3 ನಿಮಿಷಗಳ ನಂತರ ಹತ್ತಿ ಮೂಲಕ ಒರೆಸಬೇಕು.

2 / 5
Removing makeup by natural method Here is a simple tips in Kannada

ಮಾಡಿದ ಮೇಕ್ಅಪ್ ತೆಗೆಯಲು ಪುಣ್ಯಕೋಟಿಯ ಹಾಲು ಬಳಸಬಹುದು. ಚಿಕ್ಕ ಬಟ್ಟಲಿನಲ್ಲಿ ಹಾಲನ್ನು ತೆಗೆದುಕೊಂಡು ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ಅದರಿಂದ ಮುಖವನ್ನು ಒರೆಸಬಹುದು.

3 / 5
Removing makeup by natural method Here is a simple tips in Kannada

ಜೇನುತುಪ್ಪವನ್ನು ನೈಸರ್ಗಿಕ ಮೇಕಪ್ ರಿಮೂವರ್ ಆಗಿಯೂ ಬಳಸಬಹುದು. ಹತ್ತಿ ಉಂಡೆಗೆ ಸ್ವಲ್ಪ ಜೇನುತುಪ್ಪವನ್ನು ಹಾಕಿ ಮತ್ತು ಅದನ್ನು ನಿಮ್ಮ ಮುಖದ ಮೇಲೆ ಐದು ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ.

4 / 5
Removing makeup by natural method Here is a simple tips in Kannada

ಹಬೆಯಿಂದ ಮುಖದ ಮೇಲಿನ ಮೇಕಪ್ ಅನ್ನು ನಿಮಿಷಗಳಲ್ಲಿ ತೆಗೆದುಹಾಕಬಹುದು. ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ತೆಗೆದುಕೊಂಡು 5-10 ನಿಮಿಷಗಳ ಕಾಲ ಮುಖಕ್ಕೆ ಹಬೆ ನೀಡಿ. ಅದರ ನಂತರ, ಮುಖವನ್ನು ಹತ್ತಿ ಬಟ್ಟೆ ಅಥವಾ ಹತ್ತಿ ಉಂಡೆಯಿಂದ ಒರೆಸಿ ಮತ್ತು ಬೆವರಿನ ಜೊತೆಗೆ ಮೇಕಪ್ ಕೂಡ ಹೋಗುತ್ತದೆ. ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ ಮತ್ತು ಇತರ ಕೊಳಕು ಕಣಗಳು ಸಹ ಕಳೆದುಹೋಗುತ್ತವೆ.

5 / 5
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ರಾಯಚೂರು: ಕಾಂಗ್ರೆಸ್ ನಾಯಕಿ ಮನೆ ರಸ್ತೆಗೇ ಇಲ್ಲ ಕಾಂಕ್ರೀಟ್ ಭಾಗ್ಯ!
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಆತ್ಮಹತ್ಯೆಗೆ ಯತ್ನ: ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಯುವತಿ ರಕ್ಷಣೆ
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಕಳೆದ ಶುಕ್ರವಾರ ಹಲವಾರು ಸಮಸ್ಯೆಗಳನ್ನು ಭಕ್ತರು ಟಿವಿ9 ಗಮನಕ್ಕೆ ತಂದಿದ್ದರು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಮೋದಿ ಸ್ವಾಗತಕ್ಕೆಂದು ಏರ್​​ಪೋರ್ಟ್​ಗೆ ಈ ದೇಶದ ಸಚಿವ ಸಂಪುಟವೇ ಬಂದಿತ್ತು
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಪೋರ್ಟ್​ ಆಫ್​ ಸ್ಪೇನ್​​ನಲ್ಲಿ ಭೋಜ್ಪುರಿ ಗೀತೆಯೊಂದಿಗೆ ಮೋದಿಗೆ ಸ್ವಾಗತ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಆಷಾಢ ಶುಕ್ರವಾರ: ಮೈಸೂರು ಚಾಮುಂಡೇಶ್ವರಿ ದರ್ಶನಕ್ಕೆ ಬರುವ ಭಕ್ತರೇ ಗಮನಿಸಿ
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಕನ್ನಡದಲ್ಲೇ ಮಾತು ಆರಂಭಿಸಿದ ನೀರಜ್ ಚೋಪ್ರಾ ಬೆಂಗಳೂರಿನ ಬಗ್ಗೆ ಹೇಳಿದ್ದೇನು?
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಪತ್ನಿಯೊಂದಿಗೆ ಚಾಮುಂಡೇಶ್ವರಿ ತಾಯಿ ದರ್ಶನ ಪಡೆದ ನಟ ದರ್ಶನ್
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
ಟ್ರಿನಿಡಾಡ್ ಮತ್ತು ಟೊಬಾಗೊ ಪ್ರಧಾನಿ ಕಮಲಾರನ್ನು ಬಿಹಾರದ ಮಗಳು
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ
Daily Devotional: ಗುಳಿ ಕೆನ್ನೆಯವರು ನಿಜಕ್ಕೂ ಅದೃಷ್ಟವಂತರಾ ತಿಳಿಯಿರಿ