Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶ್ರಾವಣ ಬಂತು ನಾಡಿಗೆ: ಧಾರವಾಡ ಮಹಿಳೆಯರಿಂದ ವಿಭಿನ್ನ ನಾಗರ ಪಂಚಮಿ ಆಚರಣೆ: ಬಾಯಲ್ಲಿ ನೀರೂರಿಸುವ ತಿಂಡಿಗಳು

ಧಾರವಾಡದ ಲಕಮನಹಳ್ಳಿ ಪ್ರದೇಶದಲ್ಲಿರುವ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಇಂದು ದಿ ಡ್ಯಾನ್ಸ್ ಅಕಾಡೆಮಿ ವತಿಯಿಂದ ನಾಗರ ಪಂಚಮಿ ಹಬ್ಬವನ್ನು ಆಯೋಜಿಸಲಾಗಿತ್ತು. ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳಾ ಮಣಿಗಳು, ಮಕ್ಕಳು ತರಹೇವಾರಿ ಉಂಡಿ, ಚಕ್ಕುಲಿ ತಂದು ಧಾರವಾಡದಲ್ಲಿ ಶ್ರಾವಣ ಮಾಸವನ್ನು ವಿಶೇಷವಾಗಿ ಸ್ವಾಗತಿಸಿದ ಪರಿ ಹೀಗಿದೆ.

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 07, 2024 | 4:17 PM

ಶ್ರಾವಣ ಮಾಸ ಬಂದರೆ ಸಾಕು ಹಬ್ಬಗಳ ಸರಮಾಲೆಯೇ ಶುರುವಾಗುತ್ತದೆ. ಈ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಈ ಹಬ್ಬವನ್ನು ಧಾರವಾಡದಲ್ಲಿ ವಿಭಿನ್ನವಾಗಿ ಆಚರಿಸುವ ಮೂಲಕ ಮಹಿಳೆಯರು ಸಂಭ್ರಮಿಸಿದರು. ಸಂಭ್ರಮ, ಸಡಗರದ ಒಂದು ಝಲಕ್​ ಇಲ್ಲಿದೆ ನೋಡಿ.

ಶ್ರಾವಣ ಮಾಸ ಬಂದರೆ ಸಾಕು ಹಬ್ಬಗಳ ಸರಮಾಲೆಯೇ ಶುರುವಾಗುತ್ತದೆ. ಈ ಮಾಸದ ಮೊದಲ ಹಬ್ಬ ನಾಗರ ಪಂಚಮಿ. ಈ ಹಬ್ಬವನ್ನು ಧಾರವಾಡದಲ್ಲಿ ವಿಭಿನ್ನವಾಗಿ ಆಚರಿಸುವ ಮೂಲಕ ಮಹಿಳೆಯರು ಸಂಭ್ರಮಿಸಿದರು. ಸಂಭ್ರಮ, ಸಡಗರದ ಒಂದು ಝಲಕ್​ ಇಲ್ಲಿದೆ ನೋಡಿ.

1 / 7
ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು, ಮಕ್ಕಳು ತರಹೇವಾರಿ ಉಂಡಿ, ಚಕ್ಕುಲಿ. ಧಾರವಾಡದಲ್ಲಿ ಶ್ರಾವಣ ಮಾಸವನ್ನು ವಿಶೇಷವಾಗಿ ಸ್ವಾಗತಿಸಿದ ಬಗೆ ಇದು.

ಸಾಂಪ್ರದಾಯಿಕ ಉಡುಗೆ ತೊಟ್ಟ ಮಹಿಳೆಯರು, ಮಕ್ಕಳು ತರಹೇವಾರಿ ಉಂಡಿ, ಚಕ್ಕುಲಿ. ಧಾರವಾಡದಲ್ಲಿ ಶ್ರಾವಣ ಮಾಸವನ್ನು ವಿಶೇಷವಾಗಿ ಸ್ವಾಗತಿಸಿದ ಬಗೆ ಇದು.

2 / 7
ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಗೆ ತನ್ನದೇ ಆದ ವಿಶೇಷತೆ ಇದೆ. ದೇವಸ್ಥಾನದಲ್ಲಿರುವ ನಾಗ ಮೂರ್ತಿಗೆ ಹಾಲು ಎರೆಯುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತೆ. ಎಲ್ಲರೂ ಅಂದು ತುಂಬಾನೇ ಬಿಜಿಯಾಗಿರೋದ್ರಿಂದ ಅದಕ್ಕೂ ಒಂದು ದಿನ ಮುಂಚೆಯೇ ಧಾರವಾಡದಲ್ಲಿ ಮಹಿಳೆಯರು ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.

ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಗೆ ತನ್ನದೇ ಆದ ವಿಶೇಷತೆ ಇದೆ. ದೇವಸ್ಥಾನದಲ್ಲಿರುವ ನಾಗ ಮೂರ್ತಿಗೆ ಹಾಲು ಎರೆಯುವ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತೆ. ಎಲ್ಲರೂ ಅಂದು ತುಂಬಾನೇ ಬಿಜಿಯಾಗಿರೋದ್ರಿಂದ ಅದಕ್ಕೂ ಒಂದು ದಿನ ಮುಂಚೆಯೇ ಧಾರವಾಡದಲ್ಲಿ ಮಹಿಳೆಯರು ಈ ಹಬ್ಬವನ್ನು ವಿಭಿನ್ನವಾಗಿ ಆಚರಿಸಿದರು.

3 / 7
ಧಾರವಾಡದ ಲಕಮನಹಳ್ಳಿ ಪ್ರದೇಶದಲ್ಲಿರುವ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಈ ಸಂಭ್ರಮದ ಹಬ್ಬದಾಚರಣೆ ವೇಳೆ ಮನೆಯಲ್ಲಿ ತಯಾರಿಸಿ ತಂದಿದ್ದ ಬಗೆ ಬಗೆಯ ಉಂಡಿಗಳನ್ನೂ ಮಹಿಳೆಯರು ಮತ್ತು ಮಕ್ಕಳು ಸವಿದರು. ನಗರದ ನೃತ್ಯ ದಿ ಡ್ಯಾನ್ಸ್ ಅಕಾಡೆಮಿ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಧಾರವಾಡದ ಲಕಮನಹಳ್ಳಿ ಪ್ರದೇಶದಲ್ಲಿರುವ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ನಡೆದ ಈ ಸಂಭ್ರಮದ ಹಬ್ಬದಾಚರಣೆ ವೇಳೆ ಮನೆಯಲ್ಲಿ ತಯಾರಿಸಿ ತಂದಿದ್ದ ಬಗೆ ಬಗೆಯ ಉಂಡಿಗಳನ್ನೂ ಮಹಿಳೆಯರು ಮತ್ತು ಮಕ್ಕಳು ಸವಿದರು. ನಗರದ ನೃತ್ಯ ದಿ ಡ್ಯಾನ್ಸ್ ಅಕಾಡೆಮಿ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

4 / 7
ನಾಗರ ಪಂಚಮಿ ನಾರಿಯರ ಹಬ್ಬ. ಆದರೆ, ಇತ್ತೀಚಿನ ಯುವ ಪೀಳಿಗೆ ಯಾವ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ಆಚರಿಸದೇ ನೆಪಕ್ಕೆ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಗೆ ಹಬ್ಬದ ಮಹತ್ವ ತಿಳಿಸಲು ಮಹಿಳೆಯರು ಮಕ್ಕಳೊಂದಿಗೆ ಸೋಮೇಶ್ವರ ದೇವಸ್ಥಾನಕ್ಕೆ ಬಂದು ಆವರಣದಲ್ಲಿ ಬಂದು ಹಬ್ಬದಾಚರಣೆ ಮಾಡಿದರು. ಆ ಮೂಲಕ ಮಕ್ಕಳಿಗೆ ಹಬ್ಬದ ಆಚರಣೆಗಳನ್ನು ತಿಳಿಸಿಕೊಟ್ಟರು.

ನಾಗರ ಪಂಚಮಿ ನಾರಿಯರ ಹಬ್ಬ. ಆದರೆ, ಇತ್ತೀಚಿನ ಯುವ ಪೀಳಿಗೆ ಯಾವ ಹಬ್ಬಗಳನ್ನು ಸಾಂಪ್ರದಾಯಿಕವಾಗಿ ಆಚರಿಸದೇ ನೆಪಕ್ಕೆ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಗೆ ಹಬ್ಬದ ಮಹತ್ವ ತಿಳಿಸಲು ಮಹಿಳೆಯರು ಮಕ್ಕಳೊಂದಿಗೆ ಸೋಮೇಶ್ವರ ದೇವಸ್ಥಾನಕ್ಕೆ ಬಂದು ಆವರಣದಲ್ಲಿ ಬಂದು ಹಬ್ಬದಾಚರಣೆ ಮಾಡಿದರು. ಆ ಮೂಲಕ ಮಕ್ಕಳಿಗೆ ಹಬ್ಬದ ಆಚರಣೆಗಳನ್ನು ತಿಳಿಸಿಕೊಟ್ಟರು.

5 / 7
ಕೇವಲ ಪಂಚಮಿ ಮಾತ್ರವಲ್ಲದೇ ನಮ್ಮ ಹಬ್ಬಗಳನ್ನು ಏಕೆ ಮಾಡಬೇಕು ಅನ್ನೋದ ಬಗ್ಗೆಯೂ ಚರ್ಚೆ ನಡೆಸಲಾಯಿತು. ಬಳಿಕ ಎಲ್ಲರೂ ಒಂದೇ ಕುಟುಂಬದ ಸದಸ್ಯರಾಗಿ ಊಟ, ಮಾಡಿ ಸಂಭ್ರಮಿಸಿದರು.

ಕೇವಲ ಪಂಚಮಿ ಮಾತ್ರವಲ್ಲದೇ ನಮ್ಮ ಹಬ್ಬಗಳನ್ನು ಏಕೆ ಮಾಡಬೇಕು ಅನ್ನೋದ ಬಗ್ಗೆಯೂ ಚರ್ಚೆ ನಡೆಸಲಾಯಿತು. ಬಳಿಕ ಎಲ್ಲರೂ ಒಂದೇ ಕುಟುಂಬದ ಸದಸ್ಯರಾಗಿ ಊಟ, ಮಾಡಿ ಸಂಭ್ರಮಿಸಿದರು.

6 / 7
ಇದೇ ವೇಳೆ ಕ್ಯಾಟ್ ವಾಕ್ ಮಾಡುವ ಮೂಲಕವೂ ಮಹಿಳೆಯರು ಗಮನ ಸೆಳೆದರು. ಬಳಿಕ ಕೆಲವು ಮಹಿಳೆಯರು ನಾಗರ ಪಂಚಮಿಯ ಜಾನಪದ ಹಾಡುಗಳನ್ನು ಹಾಡಿದರೆ ಮತ್ತೆ ಕೆಲವರು ಬಾಲಿವುಡ್ ಹಾಡುಗಳಿಗೆ ಸ್ಟೆಪ್ ಹಾಕಿ ಸಂಭ್ರಮಿಸಿದರು. ಒಟ್ಟಿನಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ ಧಾರವಾಡದಲ್ಲಿ ಸಂಭ್ರಮವನ್ನು ಮೂಡಿಸಿದ್ದಂತೂ ಸತ್ಯ.

ಇದೇ ವೇಳೆ ಕ್ಯಾಟ್ ವಾಕ್ ಮಾಡುವ ಮೂಲಕವೂ ಮಹಿಳೆಯರು ಗಮನ ಸೆಳೆದರು. ಬಳಿಕ ಕೆಲವು ಮಹಿಳೆಯರು ನಾಗರ ಪಂಚಮಿಯ ಜಾನಪದ ಹಾಡುಗಳನ್ನು ಹಾಡಿದರೆ ಮತ್ತೆ ಕೆಲವರು ಬಾಲಿವುಡ್ ಹಾಡುಗಳಿಗೆ ಸ್ಟೆಪ್ ಹಾಕಿ ಸಂಭ್ರಮಿಸಿದರು. ಒಟ್ಟಿನಲ್ಲಿ ಶ್ರಾವಣ ಮಾಸದ ಮೊದಲ ಹಬ್ಬ ಧಾರವಾಡದಲ್ಲಿ ಸಂಭ್ರಮವನ್ನು ಮೂಡಿಸಿದ್ದಂತೂ ಸತ್ಯ.

7 / 7
Follow us
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ಮ್ಯಾನ್ಮಾರ್‌ನಲ್ಲಿ ಭೀಕರ ಭೂಕಂಪ: ಭಾರತದ ಈಶಾನ್ಯ ರಾಜ್ಯಗಳಿಗಿಲ್ಲ ಆತಂಕ
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ರಾಜೇಂದ್ರ ನೀಡಿದ ದೂರನ್ನು ಗೃಹ ಸಚಿವ ನೋಡಿಕೊಳ್ಳುತ್ತಾರೆ: ಶಿವಕುಮಾರ್
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ತೀವ್ರ ಕುತೂಹಲ ಮೂಡಿಸಿರುವ ಬಸನಗೌಡ ಯತ್ನಾಳ್ ಮುಂದಿನ ನಡೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ಹನಿ ಟ್ರ್ಯಾಪ್ ಪ್ರಕರಣ ವೈಯಕ್ತಿಕವಾದದ್ದು, ಕಾಮೆಂಟ್ ಮಾಡಲಾರೆ: ರಾಜು ಕಾಗೆ
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಡಿಕೆ ಶಿವಕುಮಾರ್
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ಏನು ಮಾಡಿದರೂ ನಡೆಯುತ್ತೆ ಎಂಬ ದುರಹಂಕಾರ ಸರ್ಕಾರಕ್ಕೆ: ನಾಗರಿಕರು
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ದೈಹಿಕ ಹಲ್ಲೆ, ಮಾನಸಿಕ ಕಿರುಕುಳ ಮತ್ತು ಹಣೆಗೆ ಗನ್ ಇಟ್ಟು ಬೆದರಿಕೆ: ವರ್ಷಾ
ಮಂಗಳೂರು: ಪಿಲುಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಮಂಗಳೂರು: ಪಿಲುಕುಳ ಮೃಗಾಲಯದಲ್ಲಿ ಭಾರಿ ಅವ್ಯವಹಾರ ಆರೋಪ
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಶ್ವೇತಭವನ ಆವರಣಕ್ಕೆ ನುಸುಳಿದ ಮಗು, ಭದ್ರತಾ ಸಿಬ್ಬಂದಿ ಮಾಡಿದ್ದೇನು?
ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ
ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣದ ವೇಳೆ ಗದ್ದಲ