
ಪ್ರೇಕ್ಷಕರನ್ನು ರಂಜಿಸಲು ಹೊಸ ಹೊಸ ಧಾರಾವಾಹಿಗಳು ಬರುತ್ತಲೇ ಇವೆ. ಈಗ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಹೊಸ ಸೀರಿಯಲ್ ‘ನೀ ಇರಲು ಜೊತೆಯಲ್ಲಿ’ ಪ್ರಸಾರಕ್ಕೆ ಸಕಲ ತಯಾರಿ ನಡೆದಿದೆ.

‘ಮುದ್ದುಲಕ್ಷೀ’, ‘ಮರಳಿ ಮನಸಾಗಿದೆ’, ‘ಮರಳಿ ಬಂದಳು ಸೀತೆ’ ಧಾರಾವಾಹಿಗಳನ್ನು ನಿರ್ದೇಶಿಸಿರುವ ಧರಣಿ ಜಿ. ರಮೇಶ್ ಅವರು ‘ನೀ ಇರಲು ಜೊತೆಯಲ್ಲಿ’ ಸೀರಿಯಲ್ ನಿರ್ಮಿಸಿ, ನಿರ್ದೇಶನ ಮಾಡುತ್ತಿದ್ದಾರೆ.

ಈ ಧಾರಾವಾಹಿಯಲ್ಲಿ ನಾಯಕನಾಗಿ ಪವನ್ ರವೀಂದ್ರ ಅವರು ನಟಿಸುತ್ತಿದ್ದಾರೆ. ನಾಯಕಿಯ ಪಾತ್ರದಲ್ಲಿ ಸಲೋಮಿ ಡಿಸೋಜ ಅವರು ಅಭಿನಯಿಸುತ್ತಿದ್ದಾರೆ. ಫ್ಯಾಮಿಲಿ ಕಹಾನಿ ಈ ಧಾರಾವಾಹಿಯಲ್ಲಿ ಇದೆ.

‘ಅಮೃತವರ್ಷಿಣಿ’ ಧಾರಾವಾಹಿಯ ಮೂಲಕ ಖ್ಯಾತಿ ಗಳಿಸಿದ್ದ ರಜಿನಿ ಅವರು ಈಗ ಊರ್ಮಿಳಾ ದಿವಾನ್ ಹೆಸರಿನಲ್ಲಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಮೋಹನ್ ಸೇರಿದಂತೆ ಅನೇಕ ನಟ-ನಟಿಯರು ಪಾತ್ರವರ್ಗದಲ್ಲಿ ಇದ್ದಾರೆ.

ಸ್ವಾತಂತ್ರ ಹೋರಾಟಗಾರನ ಕುಟುಂಬದಲ್ಲಿ ಬೆಳೆದ ನಾಯಕ ಕೃಷ್ಣ. ಮನೆ ಮಂದಿಯರನ್ನೆಲ್ಲಾ ತನ್ನ ಕೈಗೊಂಬೆ ಆಗಿಸಿಕೊಂಡ ಅತ್ತಿಗೆ. ಯಾರನ್ನು ನೋಯಿಸದ ಮಾತೃ ಹೃದಯಿ ರಚನಾ ಈ ಧಾರಾವಾಹಿಯ ಮುಖ್ಯ ಪಾತ್ರಗಳು.