AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಲೇಜು ಕ್ಯಾಂಪಸ್​ನಲ್ಲಿ ಕುಣಿಯುತ್ತಿರುವ ವಿದ್ಯಾರ್ಥಿಗಳು, ಎಲ್ಲೆಲ್ಲೂ ಬಣ್ಣದ ಓಕುಳಿ; ಇದರ ಝಲಕ್​ ಇಲ್ಲಿದೆ ನೋಡಿ

ದೇಶಾದ್ಯಂತ ಇಂದು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು. ಹೋಳಿ ರಂಗಿನಲ್ಲಿ ಇಂದು ನಾಡಿನ ಜನತೆ ಕೂಡ ಮಿಂದೆದಿದ್ದು, ಅದರಂತೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸಹ ಭರ್ಜರಿ ರಂಗಿನಾಟದಲ್ಲಿ ತೊಡಗಿದ್ದರು.

ಕಿರಣ್ ಹನುಮಂತ್​ ಮಾದಾರ್
|

Updated on:Mar 08, 2023 | 12:55 PM

ದೇಶಾದ್ಯಂತ ಇಂದು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು. ಹೋಳಿ ರಂಗಿನಲ್ಲಿ ಇಂದು ನಾಡಿನ ಜನತೆ ಕೂಡ ಮಿಂದೆದಿದ್ದು, ಅದರಂತೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸಹ ಭರ್ಜರಿ ರಂಗಿನಾಟದಲ್ಲಿ ತೊಡಗಿದ್ದರು.

ದೇಶಾದ್ಯಂತ ಇಂದು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು. ಹೋಳಿ ರಂಗಿನಲ್ಲಿ ಇಂದು ನಾಡಿನ ಜನತೆ ಕೂಡ ಮಿಂದೆದಿದ್ದು, ಅದರಂತೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸಹ ಭರ್ಜರಿ ರಂಗಿನಾಟದಲ್ಲಿ ತೊಡಗಿದ್ದರು.

1 / 7
ಕಾಲೇಜು ಕ್ಯಾಂಪಸ್​ನಲ್ಲಿ ಮನಪೂರ್ತಿಯಾಗಿ ಕುಣಿಯುತ್ತಿರುವ ವಿದ್ಯಾರ್ಥಿಗಳು. ಎಲ್ಲೆಲ್ಲೂ ಬಣ್ಣದ ಓಕುಳಿ, ವಿದ್ಯಾರ್ಥಿಗಳ ಜೋಶ್​ ಇನ್ನಷ್ಟು ಹೆಚ್ಚಿಸಲು ಡಿಜೆ ಮ್ಯೂಸಿಕ್​. ಅಂದಹಾಗೆ ಈ ಬಣ್ಣ ಬಣ್ಣದ ದೃಶ್ಯಾವಳಿ ಕಂಡು ಬಂದಿದ್ದು ಕಡಲನಗರಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜ್ ಕ್ಯಾಂಪಸ್‌ನಲ್ಲಿ.

ಕಾಲೇಜು ಕ್ಯಾಂಪಸ್​ನಲ್ಲಿ ಮನಪೂರ್ತಿಯಾಗಿ ಕುಣಿಯುತ್ತಿರುವ ವಿದ್ಯಾರ್ಥಿಗಳು. ಎಲ್ಲೆಲ್ಲೂ ಬಣ್ಣದ ಓಕುಳಿ, ವಿದ್ಯಾರ್ಥಿಗಳ ಜೋಶ್​ ಇನ್ನಷ್ಟು ಹೆಚ್ಚಿಸಲು ಡಿಜೆ ಮ್ಯೂಸಿಕ್​. ಅಂದಹಾಗೆ ಈ ಬಣ್ಣ ಬಣ್ಣದ ದೃಶ್ಯಾವಳಿ ಕಂಡು ಬಂದಿದ್ದು ಕಡಲನಗರಿ ಮಂಗಳೂರಿನ ಪಾಂಡೇಶ್ವರದಲ್ಲಿರುವ ಶ್ರೀನಿವಾಸ್ ಕಾಲೇಜ್ ಕ್ಯಾಂಪಸ್‌ನಲ್ಲಿ.

2 / 7
ಹಿಂದೂಗಳ ಪ್ರಮುಖ ಹಬ್ಬಗಳ ಪೈಕಿ ಒಂದಾದ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ನಿಮಿತ್ತ ಇಂದು ಶ್ರೀನಿವಾಸ ವಿವಿಯ ಹೋಟೆಲ್ ಮ್ಯಾನೇಜ್ಮೆಂಟ್, ಆ್ಯವಿಯೇಶನ್ ಸ್ಟಡೀಸ್, ಇಂಟಿರೀಯರ್ ಡಿಸೈನ್ ವಿಭಾಗದಿಂದ ರಂಗ್​ 2023 ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಹಿಂದೂಗಳ ಪ್ರಮುಖ ಹಬ್ಬಗಳ ಪೈಕಿ ಒಂದಾದ ಹೋಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುವ ನಿಮಿತ್ತ ಇಂದು ಶ್ರೀನಿವಾಸ ವಿವಿಯ ಹೋಟೆಲ್ ಮ್ಯಾನೇಜ್ಮೆಂಟ್, ಆ್ಯವಿಯೇಶನ್ ಸ್ಟಡೀಸ್, ಇಂಟಿರೀಯರ್ ಡಿಸೈನ್ ವಿಭಾಗದಿಂದ ರಂಗ್​ 2023 ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

3 / 7
ಮಧ್ಯಾಹ್ನದ ವೇಳೆ ಬಣ್ಣಗಳ ಸ್ನಾನವನ್ನೇ ಮಾಡಿದ ವಿದ್ಯಾರ್ಥಿಗಳ ಸಂಭ್ರಮ ಕಣ್ಮನ ಸೆಳೆಯುವಂತಿತ್ತು. ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮನಪೂರ್ತಿಯಾಗಿ ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ರು.

ಮಧ್ಯಾಹ್ನದ ವೇಳೆ ಬಣ್ಣಗಳ ಸ್ನಾನವನ್ನೇ ಮಾಡಿದ ವಿದ್ಯಾರ್ಥಿಗಳ ಸಂಭ್ರಮ ಕಣ್ಮನ ಸೆಳೆಯುವಂತಿತ್ತು. ಕಾಲೇಜ್ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳು ಮನಪೂರ್ತಿಯಾಗಿ ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ್ರು.

4 / 7
ಈ ಕಾಲೇಜಿನಲ್ಲಿ ಜಿಲ್ಲೆ, ರಾಜ್ಯದ ವಿದ್ಯಾರ್ಥಿಗಳು ಮಾತ್ರವಲ್ಲದೇ ಹೊರ ರಾಜ್ಯದ ವಿದ್ಯಾರ್ಥಿಗಳು ಸಹ ಕಲಿಯೋದಕ್ಕೆ ಬರ್ತಾರೆ. ಹೀಗಾಗಿ ತಮ್ಮ ಊರಿಗೆ ತೆರಳಿ ಹೋಳಿ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದಿರುವುದಕ್ಕೆ ಕಾಲೇಜು ವತಿಯಿಂದಲೇ ಈ ಹೋಳಿ ಸಂಭ್ರಮವನ್ನು ಆಯೋಜಿಸಲಾಗಿತ್ತು.

ಈ ಕಾಲೇಜಿನಲ್ಲಿ ಜಿಲ್ಲೆ, ರಾಜ್ಯದ ವಿದ್ಯಾರ್ಥಿಗಳು ಮಾತ್ರವಲ್ಲದೇ ಹೊರ ರಾಜ್ಯದ ವಿದ್ಯಾರ್ಥಿಗಳು ಸಹ ಕಲಿಯೋದಕ್ಕೆ ಬರ್ತಾರೆ. ಹೀಗಾಗಿ ತಮ್ಮ ಊರಿಗೆ ತೆರಳಿ ಹೋಳಿ ಸಂಭ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದಿರುವುದಕ್ಕೆ ಕಾಲೇಜು ವತಿಯಿಂದಲೇ ಈ ಹೋಳಿ ಸಂಭ್ರಮವನ್ನು ಆಯೋಜಿಸಲಾಗಿತ್ತು.

5 / 7
ಡಿಜೆ ಹಾಡಿಗೆ ಸತತ ಮೂರು ಗಂಟೆಗೂ ಹೆಚ್ಚು ಕಾಲ ಫುಲ್ ಎನರ್ಜಿಯಿಂದಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ಟೆಪ್ಸ್ ಹಾಕಿ, ಹೋಳಿ ರಂಗಿನ ಜೊತೆ ವಾಟರ್ ಡ್ಯಾನ್ಸ್ ಮೂಲಕ ಸಖತ್ ಎಂಜಾಯ್ ಮಾಡಿದ್ರು.

ಡಿಜೆ ಹಾಡಿಗೆ ಸತತ ಮೂರು ಗಂಟೆಗೂ ಹೆಚ್ಚು ಕಾಲ ಫುಲ್ ಎನರ್ಜಿಯಿಂದಲೇ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸ್ಟೆಪ್ಸ್ ಹಾಕಿ, ಹೋಳಿ ರಂಗಿನ ಜೊತೆ ವಾಟರ್ ಡ್ಯಾನ್ಸ್ ಮೂಲಕ ಸಖತ್ ಎಂಜಾಯ್ ಮಾಡಿದ್ರು.

6 / 7
ಇಂದು ಇಡೀ ನಾಡೇ ಕಾಮನ ಹಬ್ಬಕ್ಕೆ ಸಾಕ್ಷಿಯಾಗಿದೆ. ಅಸುರ ಶಕ್ತಿಗಳ ನಿರ್ನಾಮಕ್ಕಾಗಿ, ಕೆಟ್ಟದ್ದರ ವಿರುದ್ಧ ಎಂದಿಗೂ ಒಳಿತೇ ಗೆಲ್ಲುವುದು ಎಂಬ ಸುಂದರ ಸಂದೇಶವನ್ನು ಹೊಂದಿರುವ ಈ ರಂಗಿನೋಕುಳಿಯ ಹಬ್ಬ ಭಾರೀ ಸಂಭ್ರಮದೊಂದಿಗೆ ಕೊನೆಯಾಗಿದೆ.

ಇಂದು ಇಡೀ ನಾಡೇ ಕಾಮನ ಹಬ್ಬಕ್ಕೆ ಸಾಕ್ಷಿಯಾಗಿದೆ. ಅಸುರ ಶಕ್ತಿಗಳ ನಿರ್ನಾಮಕ್ಕಾಗಿ, ಕೆಟ್ಟದ್ದರ ವಿರುದ್ಧ ಎಂದಿಗೂ ಒಳಿತೇ ಗೆಲ್ಲುವುದು ಎಂಬ ಸುಂದರ ಸಂದೇಶವನ್ನು ಹೊಂದಿರುವ ಈ ರಂಗಿನೋಕುಳಿಯ ಹಬ್ಬ ಭಾರೀ ಸಂಭ್ರಮದೊಂದಿಗೆ ಕೊನೆಯಾಗಿದೆ.

7 / 7

Published On - 12:52 pm, Wed, 8 March 23

Follow us
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಈಗಾಗಲೇ ಹತ್ತಕ್ಕೂ ಹೆಚ್ಚು ಕಡೆ ಕುಸಿದಿರುವ ಚಾರ್ಮಾಡಿ ಘಾಟ್
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ಅಸ್ಸಾಂನ ಲಖಿಂಪುರದಲ್ಲಿ ಭಾರೀ ಪ್ರವಾಹ; 230 ಹಳ್ಳಿಗಳು ಮುಳುಗಡೆ
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ವೀರಶೈವ ಸಮುದಾಯದ ಎಲ್ಲ ಉಪಪಂಗಡಗಳನ್ನು ಒಗ್ಗೂಡಿಸಬೇಕಿದೆ: ಪಾಟೀಲ್
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಗುತ್ತಿಗೆದಾರನ ದ್ವಿಚಕ್ರವಾಹನ ಹಾಸನದ ಬಸ್​ ನಿಲ್ದಾಣದ ಬಳಿ ಪತ್ತೆ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಕೋಮು ನಿಗ್ರಹ ದಳ ರಚಿಸಿರುವುದು ಹಿಂದೂಗಳನ್ನು ಟಾರ್ಗೆಟ್ ಮಾಡಲು: ವಿಜಯೇಂದ್ರ
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಒಕ್ಕಲಿಗರ ಕೋಟೆಯಲ್ಲಿ ಲಿಂಗಾಯತ ಸಿಎಂ ಮಾತು: ಡಿಕೆಶಿ ಆಪ್ತನಿಂದಲೇ MB ಪಾಟೀಲ್
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಹೋರಿಗೆ ಕೇಕ್ ತಿನ್ನಿಸಿ ತಾನೂ ತಿಂದ ಮಾಜಿ ಸಚಿವ ರೇಣುಕಾಚಾರ್ಯ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಚಾರ್ಮಾಡಿ ಘಾಟಿ ಡೇಂಜರ್ ಡೇಂಜರ್ ಮತ್ತಷ್ಟು ಕುಸಿಯುವ ಆತಂಕ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ
ಸಚಿವರ ಬೇಜವಾಬ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ ಸಿದ್ದರಾಮಯ್ಯ