ಅಂಬರೀಷ್​​ಗೂ ‘ಕರ್ನಾಟಕ ರತ್ನ’ ಕೊಡಿ: ಸರ್ಕಾರಕ್ಕೆ ಮನವಿ ಮಾಡಿದ ನಟಿ ತಾರಾ

Updated on: Sep 15, 2025 | 10:44 PM

ಇತ್ತೀಚೆಗೆ ನಟ ವಿಷ್ಣುವರ್ಧನ್ ಹಾಗೂ ನಟಿ ಬಿ. ಸರೋಜಾದೇವಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಯಿತು. ಬಳಿಕ ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೂ ಈ ಗೌರವ ಸಲ್ಲಬೇಕು ಎಂದು ಅಭಿಮಾನಿಗಳು ಹೇಳಲಾರಂಭಿಸಿದರು. ಈಗ ನಟಿ ತಾರಾ ಅವರು ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.

1 / 5
ನಟಿ ತಾರಾ ಅನುರಾಧಾ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಮನವಿ ನೀಡಿದ್ದಾರೆ. ನಟ ಅಂಬರೀಷ್​ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ತಾರಾ ಅವರು ಕೋರಿದ್ದಾರೆ.

ನಟಿ ತಾರಾ ಅನುರಾಧಾ ಅವರು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ತೆರಳಿ ಮನವಿ ನೀಡಿದ್ದಾರೆ. ನಟ ಅಂಬರೀಷ್​ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡುವಂತೆ ತಾರಾ ಅವರು ಕೋರಿದ್ದಾರೆ.

2 / 5

ಕೈ ಬರಹದಿಂದ ಬರೆದಿರುವ ಮನವಿ ಪತ್ರವನ್ನು ಡಿಕೆ ಶಿವಕುಮಾರ್ ಅವರಿಗೆ ತಾರಾ ನೀಡಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಅವರು ಮನವಿ ಸಲ್ಲಿಸಿದ್ದಾರೆ. ಇದರಿಂದ ಅಂಬರೀಷ್ ಅವರ ಅಭಿಮಾನಿಗಳಿಗೆ ಖುಷಿ ಆಗಿದೆ.

3 / 5

‘ಅಂಬರೀಷ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎಂಬುದು ಎಲ್ಲ ಕಲಾವಿದರು ಮತ್ತು ಅಭಿಮಾನಿಗಳ ಕೋರಿಕೆ. ತಾವು ಅವರನ್ನು ಬಹಳ ಹತ್ತಿರದಿಂದ ಬಲ್ಲವರಾಗಿದ್ದು, ಅವರಿಗೆ ಸಲ್ಲಬೇಕಾದ ಸನ್ಮಾನ ಪಾಲಿಸಿ’ ಎಂದು ತಾರಾ ಬರೆದಿದ್ದಾರೆ.

4 / 5

ಕನ್ನಡ ಚಿತ್ರರಂಗದಲ್ಲಿ ಅಂಬರೀಷ್ ಅವರು ಸ್ಟಾರ್ ನಟನಾಗಿದ್ದರು. ಚಿತ್ರರಂಗದ ಬೆಳವಣಿಗೆಗೆ ಅವರ ಕೊಡುಗೆ ಕೂಡ ಸಾಕಷ್ಟು ಇದೆ. ನಟನಾಗಿ ಅಷ್ಟೇ ಅಲ್ಲದೇ, ರಾಜಕಾರಣಿ ಆಗಿಯೂ ಅವರು ಸೇವೆ ಸಲ್ಲಿಸಿದ್ದರು.

5 / 5

ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ನೀಡಿದ್ದು ಖುಷಿಯ ಸಂಗತಿ. ಅದೇ ರೀತಿ ನಟ ಅಂಬರೀಷ್ ಅವರಿಗೂ ಈ ಪ್ರಶಸ್ತಿ ಸಲ್ಲಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

Loading...
Unable to load recommendations.
Follow Us