AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tips for Healthy Hair:ನಿಮ್ಮ ಕೂದಲು ಆರೋಗ್ಯವಾಗಿರಲು ಇಲ್ಲಿದೆ ಮನೆಮದ್ದು

ಪ್ರತಿಯೊಂದು ಹೆಣ್ಣಿನ ಸೌಂದರ್ಯ ಆಕೆಯ ನೀಳ ಕೇಶ ರಾಶಿಯಲ್ಲಿ ಅಡಗಿದೆ ಎಂಬ ಮಾತಿದೆ. ಆದ್ದರಿಂದ ಕೂದಲನ್ನು ದಟ್ಟವಾಗಿ ನೀಳವಾಗಿ ಆರೋಗ್ಯದಿಂದ ಕಾಪಾಡಲು ಇಲ್ಲಿದೆ ಕೆಲವೊಂದು ಸಲಹೆಗಳು.

TV9 Web
| Edited By: |

Updated on: Oct 28, 2022 | 11:07 AM

Share
ತಲೆಗೂದಲು ಉದುರಲು ಹಲವು ಕಾರಣಗಳುಂಟು. ಸತ್ವಪೂರ್ಣ ಈ ಆಹಾರದ ಕೊರತೆ, ಕುಟುಂಬ ನಿರ್ವಹಣೆ, ಮಾತ್ರೆಗಳ ಬಳಕೆ, ಮಗುವನ್ನು ಹೆರುವುದು, ವಿಪರೀತ ಡಯಟ್. ಹೀಗೆ ಹಲವು ಕಾರಣಗಳಿವೆ. ಸೂಕ್ತ ಆರೈಕೆ ಮತ್ತು ಆಹಾರದಿಂದ ಅತ್ಯಂತ ಅಗತ್ಯವಾಗಿದೆ.

Health Tips

1 / 8
ತಲೆಯ ನೋವು ಮುಂತಾದ ತಲೆಗೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ಎಚ್ಚರಿಕೆಯಿಂದ ಇರಬೇಕು. ಅತಿಯಾದ ಆಲೋಚನೆ, ಅನಗತ್ಯವಾದವುಗಳನ್ನು ಯೋಚನೆ ಮಾಡದೇ ಇರಲು ಪ್ರಯತ್ನಿಸಬೇಕು.

Health Tips

2 / 8
Health Tips

ಮೊಟ್ಟೆಯನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ತಲೆಗೆ ಸ್ನಾನ ಮಾಡುವುದ್ದರಿಂದ ಕೂದಲುದುರುವುದನ್ನು ತಡೆಗಟ್ಟಬಹುದು. ಮೊಟ್ಟೆಯಲ್ಲಿರುವ ಹಳದಿಯ ಅಂಶ ಕೂದಲಿಗೆ ಒಳ್ಳೆಯದು. ಕೂದಲಿಗೆ ಹೊಳಪನ್ನು ನೀಡುತ್ತದೆ.

3 / 8
Health Tips

ಬೆಳ್ಳುಳ್ಳಿಯ ಹೊಟ್ಟನ್ನು ಸುಟ್ಟು ಬೂದಿಯನ್ನು ಆಲಿವ್ ಎಣ್ಣೆಯಲ್ಲಿ ಬೆರೆಸಿ ಪ್ರತಿನಿತ್ಯ ತಲೆಗೆ ಹಚ್ಚಿಕೊಂಡರೆ ಕೂದಲು ಉದುರುವುದಿಲ್ಲ ಮತ್ತು ಕೂದಲು ವಿಶಾಲವಾಗಿ ಬೆಳೆಯುತ್ತದೆ.

4 / 8
Health Tips

ಒಣಗಿದ ಕರಿಬೇವು, ನೆಲ್ಲಿಕಾಯಿ ಮುಂತಾದವುಗಳನ್ನು ಎಸೆಯದೆ ಬಿಸಿಲಿನಲ್ಲಿ ಒಣಗಿಸಿ, ಪುಡಿ ಮಾಡಿ, ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕಾಯಿಸಿ, ಆರಿಸಿ, ದಿನ ನಿತ್ಯಕ್ಕೆ ಬಳಸಿ, ಕೂದಲು ಸೊಂಪಾಗಿ ಬೆಳೆಯುತ್ತದೆ.

5 / 8
Health Tips

ನಿಂಬೆಯ ರಸದಲ್ಲಿ ಉಪ್ಪು ಕಲಸಿ, ಅದನ್ನು ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ತಲೆಯಲ್ಲಿ ಹೊಟ್ಟು ಹೋಗಿ, ಕೂದಲು ಉದುರುವುದು ಕಡಿಮೆಯಾಗುತ್ತದೆ.

6 / 8
Health Tips

ಒಂದು ಚಮಚ ವಿನೇಗರ್, ಅರ್ಧ ಬಕೆಟ್ ನೀರಿಗೆ ಹಾಕಬೇಕು. ಬಕೇಟಿನಲ್ಲಿ ಶಾಂಪೂ ಕೂಡಾ ಹಾಕಬೇಕು. ಆಮೇಲೆ ತಲೆಯನ್ನು ಈ ನೀರಿ ನಿಂದ ತೊಳೆದುಕೊಳ್ಳಬೇಕು. ಕೊನೆಗೆ ಸ್ವಲ್ಪ ವಿನೇಗರ್ ದ್ರವವನ್ನು ತಲೆಯ ಮೇಲೆ ಹಾಕಿಕೊಂಡು ಅರ್ಧ ಗಂಟೆಯ ಕಾಲ ಹಾಗೇ ಬಿಡಬೇಕು. ಈ ರೀತಿ ಮಾಡುವುದರಿಂದ ಹೇನು ಕಚ್ಚುವ ಈ ಸಮಸ್ಯೆ ಪರಿಹಾರವಾಗುತ್ತದೆ.

7 / 8
Health Tips

ಕೊಬ್ಬರಿಯನ್ನು ಹೆಚ್ಚಿ ಅದರ ಎಣ್ಣೆ ತೆಗೆದು ಆ ಎಣ್ಣೆಯನ್ನು ಚೆನ್ನಾಗಿ ಹಚ್ಚಿಕೊಂಡು, ಸುಮಾರು ಒಂದು ಗಂಟೆಯ ನಂತರ ತಲೆಗೆ ಸ್ನಾನ ಮಾಡಿದರೆ, ತಲೆಯ ಕೂದಲು ಗಟ್ಟಿಯಾಗಿ, ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಕೊಬ್ಬರಿ ಕೂದಲನ್ನು ಕಪ್ಪಗೆ, ದಟ್ಟವಾಗಿ, ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ಕೂದಲು ಉದುರುವ ತೊಂದರೆಯಿರುವವರು ಕೊಬ್ಬರಿಯ ಹಾಲನ್ನು ತಲೆಗೆ ಬಳಸಿದರೆ ಉತ್ತಮ.

8 / 8
Follow Us
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಆರತಕ್ಷತೆ ಬಂದ ಅತಿಥಿಗಳು: ವಿಡಿಯೋ
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ಲೋಕಾ ರೈಡ್ ವೇಳೆ AEE ಮನೆಯಲ್ಲಿ ಸಿಕ್ತು ಚಿನ್ನ, ಬೆಳ್ಳಿ , ಕಂತೆ ಕಂತೆ ನಗದು
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ರಾಜ್ಯಸಭಾ ಚುನಾವಣೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ನಾಮಪತ್ರ ಸಲ್ಲಿಕೆ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಎಥೆನಾಲ್ ಟ್ಯಾಂಕರ್​​ ಪಲ್ಟಿ: ಕ್ಷಣಾರ್ಧದಲ್ಲಿ ಧಗಧಗಿಸಿದ ಬೆಂಕಿ
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬನ್ನೇರುಘಟ್ಟದಲ್ಲಿ ಮೃಗಗಳಿಗೂ ಐಸ್ ಕ್ಯಾಂಡಿ-ಲಾಲಿಪಾಪ್!
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ
ಬೈದಿದ್ದಕ್ಕೆ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ 10ನೇ ತರಗತಿ ವಿದ್ಯಾರ್ಥಿ