AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toy Train: ಮತ್ತೆ ಸಂಚಾರ ಆರಂಭಿಸಿದೆ ಟಾಯ್ ಟ್ರೈನ್; ಡಾರ್ಜಿಲಿಂಗ್​ಗೆ ಹೋಗಿ ಈ ರೈಲಿನಲ್ಲಿ ಪ್ರಯಾಣಿಸದಿದ್ದರೆ ಹೇಗೆ?

Tourism: ಕಳೆದ ವರ್ಷ ಲಾಕ್​ಡೌನ್ ಬಳಿಕ ಟಾಯ್ ಟ್ರೈನ್ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ಈಗ ಮತ್ತೆ ಕಾರ್ಯಾರಂಭ ಆಗುತ್ತಿರುವಂತೆ ಪ್ರವಾಸಿಗರು ಬರಲು ಆರಂಭಿಸಿದ್ದಾರೆ.

TV9 Web
| Edited By: |

Updated on: Aug 30, 2021 | 7:39 AM

Share
ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಹಾಗೂ ಡಾರ್ಜಿಲಿಂಗ್ ನಡುವೆ ಸಂಚರಿಸುವ ವಿಶ್ವ ವಿಖ್ಯಾತ ಟಾಯ್ ಟ್ರೈನ್ ಮತ್ತೆ ಓಡಾಟ ಆರಂಭಿಸಿದೆ. ಕೊರೊನಾ ಕಾರಣದಿಂದ ಈ ರೈಲು ಓಡಾಟ ಸ್ಥಗಿತಗೊಂಡಿತ್ತು. ಕಳೆದ ಒಂದೂವರೆ ವರ್ಷದಿಂದ ಈ ರೈಲು ಓಡಾಟ ನಡೆಸುತ್ತಿರಲಿಲ್ಲ. ಈ ಆಟಿಕೆ ರೈಲು ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ ಎಂದು ಖ್ಯಾತವಾಗಿದೆ. ಇದೀಗ ಯುನೆಸ್ಕೋ ವರ್ಲ್ಡ್ ಹೆರಿಟೇಜ್​ಗೂ ಸೇರಿಕೊಂಡಿದೆ. ರೈಲು ಸಂಚಾರ ಮತ್ತೆ ಆರಂಭಗೊಂಡಿರುವುದು ಪ್ರವಾಸಿಗರ ಸಂಭ್ರಮ ಹೆಚ್ಚಿಸಿದೆ. ನೀವು ಕೂಡ ಈ ರೈಲಿನಲ್ಲಿ ಪ್ರಯಾಣಿಸಬೇಕು ಎಂದಾದರೆ ಡಾರ್ಜಿಲಿಂಗ್ ಟೂರ್ ಫಿಕ್ಸ್ ಮಾಡಿಕೊಳ್ಳಿ.

Toy Train resumed after Coronavirus best destination for Tourists Tourism Spot in North East India

1 / 5
ಈ ರೈಲು ಪ್ರಯಾಣ ಎಷ್ಟು ಖ್ಯಾತವಾಗಿದೆ ಎಂದರೆ ಬಹಳಷ್ಟು ಪ್ರವಾಸಿಗರು ಇಲ್ಲಿಗೆ ರೈಲು ಪ್ರಯಾಣಕ್ಕೆ ಎಂದೇ ಭೇಟಿ ಕೊಡುತ್ತಾರೆ. ಡಾರ್ಜಿಲಿಂಗ್​ಗೆ ಭೇಟಿ ಕೊಟ್ಟು ಈ ರೈಲು ಪ್ರಯಾಣ ಮಾಡದಿದ್ದರೆ ಆ ಪ್ರವಾಸವೇ ದಂಡ ಎಂದು ಹೇಳಬಹುದು. ಅಷ್ಟೊಂದು ಖ್ಯಾತಿ ಈ ರೈಲು ಪ್ರಯಾಣಕ್ಕಿದೆ. ಈ ಟಾಯ್ ಟ್ರೈನ್​ನ್ನು 1879 ಮತ್ತು 1881 ರ ನಡುವೆ ನಿರ್ಮಿಸಲಾಗಿದೆ.

Toy Train resumed after Coronavirus best destination for Tourists Tourism Spot in North East India

2 / 5
ಪಶ್ಚಿಮ ಬಂಗಾಳದ ದುರ್ಗಾ ಪೂಜೆಗೂ ಮೊದಲು ಈ ರೈಲು ಕಾರ್ಯಾರಂಭ ಶುರುಮಾಡಿದೆ. ಇದರಿಂದಾಗಿ ಅಲ್ಲಿನ ಪ್ರವಾಸೋದ್ಯಮಕ್ಕೆ ಬಹಳಷ್ಟು ಲಾಭ ಆಗುವ ನಿರೀಕ್ಷೆ ಇದೆ. ಆರ್ಥಿಕತೆ ಸುಧಾರಿಸುವ ಚಟುವಟಿಕೆಯಾಗಿಯೂ ಇದು ಕಾಣಿಸಿಕೊಂಡಿದೆ. ಜಲ್ಪೈಗುರಿ ಹಾಗೂ ಡಾರ್ಜಿಲಿಂಗ್ ನಡುವಿನ ಅಂತರ 88 ಕಿಲೋ ಮೀಟರ್ ಆಗಿದೆ.

ಪಶ್ಚಿಮ ಬಂಗಾಳದ ದುರ್ಗಾ ಪೂಜೆಗೂ ಮೊದಲು ಈ ರೈಲು ಕಾರ್ಯಾರಂಭ ಶುರುಮಾಡಿದೆ. ಇದರಿಂದಾಗಿ ಅಲ್ಲಿನ ಪ್ರವಾಸೋದ್ಯಮಕ್ಕೆ ಬಹಳಷ್ಟು ಲಾಭ ಆಗುವ ನಿರೀಕ್ಷೆ ಇದೆ. ಆರ್ಥಿಕತೆ ಸುಧಾರಿಸುವ ಚಟುವಟಿಕೆಯಾಗಿಯೂ ಇದು ಕಾಣಿಸಿಕೊಂಡಿದೆ. ಜಲ್ಪೈಗುರಿ ಹಾಗೂ ಡಾರ್ಜಿಲಿಂಗ್ ನಡುವಿನ ಅಂತರ 88 ಕಿಲೋ ಮೀಟರ್ ಆಗಿದೆ.

3 / 5
ಹಿಮಾಲಯನ್ ರೈಲ್ವೇ ಯುನೆಸ್ಕೋದಿಂದ ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಿಕೊಂಡಿದೆ. ನೀಲಗಿರಿ ಮೌಂಟೇನ್ ರೈಲ್ವೇ ಮತ್ತು ಕಲ್ಕಾ ಶಿಮ್ಲಾ ರೈಲ್ವೇ ಕೂಡ ಈ ಸಾಲಿನಲ್ಲಿದೆ. ಈ ರೈಲ್ವೇಯ ಹೆಡ್ ಕ್ವಾರ್ಟರ್ಸ್ ಕುರ್ಸೆಯೊಂಗ್ ನಗರದಲ್ಲಿದೆ. ಈ ರೈಲಿನ ಟ್ರಾಕ್ ಹಾಗೂ ಸಂಚರಿಸುವ ಮಾರ್ಗ ಬಹಳ ವಿಭಿನ್ನವಾಗಿದೆ. ಗುಡ್ಡಗಾಡುಗಳ ನಡುವೆ ರೈಲು ಹಾವಿನಂತೆ ಸಂಚರಿಸುತ್ತದೆ.

ಹಿಮಾಲಯನ್ ರೈಲ್ವೇ ಯುನೆಸ್ಕೋದಿಂದ ವರ್ಲ್ಡ್ ಹೆರಿಟೇಜ್ ಸೈಟ್ ಎಂದು ಗುರುತಿಸಿಕೊಂಡಿದೆ. ನೀಲಗಿರಿ ಮೌಂಟೇನ್ ರೈಲ್ವೇ ಮತ್ತು ಕಲ್ಕಾ ಶಿಮ್ಲಾ ರೈಲ್ವೇ ಕೂಡ ಈ ಸಾಲಿನಲ್ಲಿದೆ. ಈ ರೈಲ್ವೇಯ ಹೆಡ್ ಕ್ವಾರ್ಟರ್ಸ್ ಕುರ್ಸೆಯೊಂಗ್ ನಗರದಲ್ಲಿದೆ. ಈ ರೈಲಿನ ಟ್ರಾಕ್ ಹಾಗೂ ಸಂಚರಿಸುವ ಮಾರ್ಗ ಬಹಳ ವಿಭಿನ್ನವಾಗಿದೆ. ಗುಡ್ಡಗಾಡುಗಳ ನಡುವೆ ರೈಲು ಹಾವಿನಂತೆ ಸಂಚರಿಸುತ್ತದೆ.

4 / 5
ಕಳೆದ ವರ್ಷ, ಲಾಕ್​ಡೌನ್ ಬಳಿಕ ಟಾಯ್ ಟ್ರೈನ್ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ಈಗ ಮತ್ತೆ ಕಾರ್ಯಾರಂಭ ಆಗುತ್ತಿರುವಂತೆಯೇ ಪ್ರವಾಸಿಗರು ಬರಲು ಆರಂಭಿಸಿದ್ದಾರೆ. ಈ ಭಾಗದ ಜನರ ಆದಾಯವು ಪ್ರವಾಸೋದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿದೆ. ಹಾಗಾಗಿ, ಟಾಯ್ ಟ್ರೈನ್ ಆರಂಭದ ಜೊತೆಗೆ ಅವರ ಜೀವನವೂ ಮತ್ತೆ ಹಳಿಗೆ ಬರುತ್ತಿದೆ.

ಕಳೆದ ವರ್ಷ, ಲಾಕ್​ಡೌನ್ ಬಳಿಕ ಟಾಯ್ ಟ್ರೈನ್ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ಈಗ ಮತ್ತೆ ಕಾರ್ಯಾರಂಭ ಆಗುತ್ತಿರುವಂತೆಯೇ ಪ್ರವಾಸಿಗರು ಬರಲು ಆರಂಭಿಸಿದ್ದಾರೆ. ಈ ಭಾಗದ ಜನರ ಆದಾಯವು ಪ್ರವಾಸೋದ್ಯಮವನ್ನೇ ಹೆಚ್ಚಾಗಿ ಅವಲಂಬಿಸಿದೆ. ಹಾಗಾಗಿ, ಟಾಯ್ ಟ್ರೈನ್ ಆರಂಭದ ಜೊತೆಗೆ ಅವರ ಜೀವನವೂ ಮತ್ತೆ ಹಳಿಗೆ ಬರುತ್ತಿದೆ.

5 / 5
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ