AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯಪುರ ಜಿಲ್ಲೆಯ ಶೇಗುಣಸಿಯ ರೋಮಾಂಚಕ ಹಾಲೋಕುಳಿ ಜಾತ್ರೆಯ ಫೋಟೋಸ್​ ನೋಡಿ

ವಿಜಯಪುರ ಜಿಲ್ಲೆಯ ಶೇಗುಣಸಿ ಗ್ರಾಮದ ಹನುಮ ಜಾತ್ರೆಯಲ್ಲಿ ನಡೆಯುವ ಹಾಲೋಕುಳಿ ಪದ್ಧತಿ ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯ. ಎಣ್ಣೆ-ತುಪ್ಪದಿಂದ ಜಾರು ಕಂಬವನ್ನು ಏರಿ, ಮೇಲಿರುವ ಅಂಬಲಿ ಗಡಿಗೆಯನ್ನು ಒಡೆಯುವ ಸ್ಪರ್ಧೆಯಿದು. ಯುವಕರ ತಂಡಗಳು ಪೈಪೋಟಿ ನಡೆಸಿ, ಮಾನವ ಗೋಪುರ ನಿರ್ಮಿಸಿ ಕಂಬ ಏರುತ್ತಾರೆ.

ಅಶೋಕ ಯಡಳ್ಳಿ, ವಿಜಯಪುರ
| Edited By: ವಿವೇಕ ಬಿರಾದಾರ|

Updated on: Apr 21, 2025 | 10:09 PM

Share
ಉತ್ತರ ಕರ್ನಾಟಕ ಭಾಗದ ಜಾತ್ರೆಗಳು ವಿಶೇಷವಾಗಿ ನಡೆಯುತ್ತವೆ. ಅದರಲ್ಲೂ ಹನುಮಂತ ದೇವರ ಹಾಲೋಕುಳಿಯ ಪದ್ದತಿ ವಿಭಿನ್ನವಾಗಿ ನಡೆಯುತ್ತದೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಹನುಮಂತ ದೇವರ ಜಾತ್ರೆಯ ಪ್ರಯುಕ್ತ ಪ್ರತಿ ವರ್ಷದ ಸಂಪ್ರದಾಯದಂತೆ ಹಾಲೋಕುಳಿ ಸಂಭ್ರಮ ಮನೆ ಮಾಡಿತ್ತು.

ಉತ್ತರ ಕರ್ನಾಟಕ ಭಾಗದ ಜಾತ್ರೆಗಳು ವಿಶೇಷವಾಗಿ ನಡೆಯುತ್ತವೆ. ಅದರಲ್ಲೂ ಹನುಮಂತ ದೇವರ ಹಾಲೋಕುಳಿಯ ಪದ್ದತಿ ವಿಭಿನ್ನವಾಗಿ ನಡೆಯುತ್ತದೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಹನುಮಂತ ದೇವರ ಜಾತ್ರೆಯ ಪ್ರಯುಕ್ತ ಪ್ರತಿ ವರ್ಷದ ಸಂಪ್ರದಾಯದಂತೆ ಹಾಲೋಕುಳಿ ಸಂಭ್ರಮ ಮನೆ ಮಾಡಿತ್ತು.

1 / 6
ಸಾವಿರಾರು ಜನರ ಮದ್ಯೆ ನಡೆಯುವ ಹಾಲೋಕುಳಿ ಪದ್ದತಿ ಸಾಹಸಮಯ ಹಾಗೂ ಆಕರ್ಷಕವಾಗಿ ನಡೆಯುತ್ತದೆ. ಹನುಮಂತ ದೇವಸ್ಥಾನದ ಮುಂದೆ 50 ಅಡಿ ಎತ್ತರದ ಕಂಬವನ್ನು ನೆಡಲಾಗಿರುತ್ತದೆ. ಕಂಬದ ಮೇಲೆ ದೇವರ ಅಂಬಲಿ ಹಾಗೂ ಸಿಹಿ ಖಾದ್ಯಗಳನ್ನು ಇಟ್ಟುಕೊಂಡು ಪೂಜಾರಿಕೆ ಮಾಡುವವರು ಕುಳಿತಿರುತ್ತಾರೆ. ಕಂಬ ಏರದಂತೆ ತಡೆಯಲು ಎಣ್ಣೆ ತುಪ್ಪ ಅಂಬಲಿ ಸವರಿರುತ್ತಾರೆ. ಈ ಕಂಬವನ್ನು ಏರಿ ಮೇಲಿರುವ ದೇವರ ಅಂಬಲಿಯ ಗಡಿಗೆಯನ್ನು ಒಡೆಯಬೇಕು.

ಸಾವಿರಾರು ಜನರ ಮದ್ಯೆ ನಡೆಯುವ ಹಾಲೋಕುಳಿ ಪದ್ದತಿ ಸಾಹಸಮಯ ಹಾಗೂ ಆಕರ್ಷಕವಾಗಿ ನಡೆಯುತ್ತದೆ. ಹನುಮಂತ ದೇವಸ್ಥಾನದ ಮುಂದೆ 50 ಅಡಿ ಎತ್ತರದ ಕಂಬವನ್ನು ನೆಡಲಾಗಿರುತ್ತದೆ. ಕಂಬದ ಮೇಲೆ ದೇವರ ಅಂಬಲಿ ಹಾಗೂ ಸಿಹಿ ಖಾದ್ಯಗಳನ್ನು ಇಟ್ಟುಕೊಂಡು ಪೂಜಾರಿಕೆ ಮಾಡುವವರು ಕುಳಿತಿರುತ್ತಾರೆ. ಕಂಬ ಏರದಂತೆ ತಡೆಯಲು ಎಣ್ಣೆ ತುಪ್ಪ ಅಂಬಲಿ ಸವರಿರುತ್ತಾರೆ. ಈ ಕಂಬವನ್ನು ಏರಿ ಮೇಲಿರುವ ದೇವರ ಅಂಬಲಿಯ ಗಡಿಗೆಯನ್ನು ಒಡೆಯಬೇಕು.

2 / 6
ಹೀಗೆ ಜಾರು ಕಂಬವನ್ನು ಏರಲು ಗ್ರಾಮದ ಯುವಕರ ಹಲವಾರು ತಂಡಗಳು ಭಾಗಿಯಾಗಿರುತ್ತವೆ. ಒಂದೊಂದು ತಂಡಗಳು ಪರಸ್ಪರ ಪೈಪೋಟಿಗೆ ಇಳಿದು ಜಾರುಕಂಬವನ್ನು ಏರಲು ಪ್ರಯತ್ನ ಮಾಡುವುದನ್ನು ನೋಡುವುದೇ ಒಂದು ಹಬ್ಬವಾಗಿರುತ್ತದೆ. ನೆರೆದ ಜನರು ಸಿಳ್ಳೆ ಕೇಕೆ ಹಾಕುವ ಮೂಲಕ ಹುರುದುಂಬಿಸುತ್ತಾರೆ.

ಹೀಗೆ ಜಾರು ಕಂಬವನ್ನು ಏರಲು ಗ್ರಾಮದ ಯುವಕರ ಹಲವಾರು ತಂಡಗಳು ಭಾಗಿಯಾಗಿರುತ್ತವೆ. ಒಂದೊಂದು ತಂಡಗಳು ಪರಸ್ಪರ ಪೈಪೋಟಿಗೆ ಇಳಿದು ಜಾರುಕಂಬವನ್ನು ಏರಲು ಪ್ರಯತ್ನ ಮಾಡುವುದನ್ನು ನೋಡುವುದೇ ಒಂದು ಹಬ್ಬವಾಗಿರುತ್ತದೆ. ನೆರೆದ ಜನರು ಸಿಳ್ಳೆ ಕೇಕೆ ಹಾಕುವ ಮೂಲಕ ಹುರುದುಂಬಿಸುತ್ತಾರೆ.

3 / 6
ಹಾಲೋಕುಳಿ ಕಂಬ ಏರಲು ಒಂದು ತಂಡದವರು ಮಾನವ ಗೋಪುರ ಮಾಡಿ ಮೇಲೇರಲು ಮುಂದಾದಾಗ ಮತ್ತೊಂದು ತಂಡವರು ಅವರ ಮೇಲೆ ನೀರು ಎರಚಿ ತಡೆಯಬೇಕು. ನೀರು ಒಂದು ತಂಡ ಜಾರುಗಂಬವನ್ನು ಏರಲು ಒಬ್ಬರ ಮೇಲೆ ಒಬ್ಬರಂತೆ ಮಾನವ ಗೋಪುರ ನಿರ್ಮಾಣ ಮಾಡುತ್ತಾ, ಬಟ್ಟೆಯನ್ನು ಕಂಬಕ್ಕೆ ಕಟ್ಟುತ್ತಾ ಮೇಲೇರಲು ಪ್ರಯತ್ನಿಸುತ್ತಾರೆ.

ಹಾಲೋಕುಳಿ ಕಂಬ ಏರಲು ಒಂದು ತಂಡದವರು ಮಾನವ ಗೋಪುರ ಮಾಡಿ ಮೇಲೇರಲು ಮುಂದಾದಾಗ ಮತ್ತೊಂದು ತಂಡವರು ಅವರ ಮೇಲೆ ನೀರು ಎರಚಿ ತಡೆಯಬೇಕು. ನೀರು ಒಂದು ತಂಡ ಜಾರುಗಂಬವನ್ನು ಏರಲು ಒಬ್ಬರ ಮೇಲೆ ಒಬ್ಬರಂತೆ ಮಾನವ ಗೋಪುರ ನಿರ್ಮಾಣ ಮಾಡುತ್ತಾ, ಬಟ್ಟೆಯನ್ನು ಕಂಬಕ್ಕೆ ಕಟ್ಟುತ್ತಾ ಮೇಲೇರಲು ಪ್ರಯತ್ನಿಸುತ್ತಾರೆ.

4 / 6
ಆಗ ಎದುರಾಳಿ ತಂಡದವರು ರಭಸವಾಗಿ ಅವರ ಮೇಲೆ ನೀರು ಎರಚುತ್ತಾರೆ. ಇಷ್ಟೆಲ್ಲದರ ಮಧ್ತೆ ಜಾರು ಕಂಬವನ್ನು ಕಷ್ಟಪಟ್ಟು ಏರಿ ದೇವರ ಅಂಬಲಿ ಗಡಿಗೆಯನ್ನು ಒಡೆದ ತಂಡ ಜಯಶಾಲಿಯಯಾದಂತೆ. ನೂರಾರು ವರ್ಷಗಳಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ.

ಆಗ ಎದುರಾಳಿ ತಂಡದವರು ರಭಸವಾಗಿ ಅವರ ಮೇಲೆ ನೀರು ಎರಚುತ್ತಾರೆ. ಇಷ್ಟೆಲ್ಲದರ ಮಧ್ತೆ ಜಾರು ಕಂಬವನ್ನು ಕಷ್ಟಪಟ್ಟು ಏರಿ ದೇವರ ಅಂಬಲಿ ಗಡಿಗೆಯನ್ನು ಒಡೆದ ತಂಡ ಜಯಶಾಲಿಯಯಾದಂತೆ. ನೂರಾರು ವರ್ಷಗಳಿಂದಲೂ ಈ ಪದ್ಧತಿ ನಡೆದುಕೊಂಡು ಬಂದಿದೆ.

5 / 6
ಜಾರುಗಂಬ ಏರಿ ಮೇಲಿರುವ ದೇವರ ಅಂಬಲಿಯ ಗಡಿಗೆಯನ್ನು ಒಡೆದ ಬಳಿಕ ಹಾಲೋಕುಳಿಗೆ ತೆರೆ ಬೀಳುತ್ತದೆ. ಈ ಸಡಗರ ಸಂಭ್ರಮ ವೀಕ್ಷಣೆ ಮಾಡಲು ಸುತ್ತಮುತ್ತಲ ಗ್ರಾಮಗಳ ಜನರು ಆಗಮಿಸಿದ್ದರು. ಜಾತ್ರೆಯ ಸಂಭ್ರಮ ಸಡಗರ ಗ್ರಾಮದಲ್ಲಿ ಮನೆ ಮಾಡಿತ್ತು.

ಜಾರುಗಂಬ ಏರಿ ಮೇಲಿರುವ ದೇವರ ಅಂಬಲಿಯ ಗಡಿಗೆಯನ್ನು ಒಡೆದ ಬಳಿಕ ಹಾಲೋಕುಳಿಗೆ ತೆರೆ ಬೀಳುತ್ತದೆ. ಈ ಸಡಗರ ಸಂಭ್ರಮ ವೀಕ್ಷಣೆ ಮಾಡಲು ಸುತ್ತಮುತ್ತಲ ಗ್ರಾಮಗಳ ಜನರು ಆಗಮಿಸಿದ್ದರು. ಜಾತ್ರೆಯ ಸಂಭ್ರಮ ಸಡಗರ ಗ್ರಾಮದಲ್ಲಿ ಮನೆ ಮಾಡಿತ್ತು.

6 / 6
Ashok Yadalli
Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
Follow Us
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!