AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿಯಲ್ಲಿ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ, ಎತ್ತುಗಳಿಗೆ ಸಿಂಗಾರ: ಫೋಟೋಸ್​ ನೋಡಿ

ಕಾರು ಹುಣ್ಣಿಮೆ ಮುಗಿಯಿತು, ಅನ್ನುವಷ್ಟರಲ್ಲಿ ಬರುವ ಮತ್ತೊಂದು ರೈತರ ಹಬ್ಬ ಅಂದ್ರೆ ಅದು ಮಣ್ಣೆತ್ತಿನ ಅಮವಾಸ್ಯೆ. ಮಣ್ಣೆತ್ತಿನ ಅಮಾವಾಸ್ಯೆ ದಿನ ರೈತರು ಮಣ್ಣಿನ ಎತ್ತುಗಳನ್ನು ತಯಾರಿಸಿ ಅಥವಾ ಅಂಗಡಿಯಿಂದ ಖರೀದಿಸಿಕೊಂಡು ಬಂದು ಪೂಜಿಸುತ್ತಾರೆ. ಈ ಬಾರಿಯ ಮಾರುಕಟ್ಟೆಯಲ್ಲಿ ಕಲರ್ ಫುಲ್ ಮಣ್ಣೆತ್ತುಗಳು ಎಂಟ್ರಿ ಕೊಟ್ಟಿವೆ. ಫೋಟೋಸ್​ ನೋಡಿ.

ಅಮೀನ್​ ಸಾಬ್​
| Edited By: |

Updated on:Jun 25, 2025 | 10:26 PM

Share
 15 ದಿನಗಳ ಹಿಂದೆಷ್ಟೇ ಕಾರುಣ್ಣಿಮೆ ಮುಗಿದಿದೆ. 15 ದಿನಗಳ ಬಳಿಕ ಮತ್ತೊಂದು ಹಬ್ಬದ ಸಂಭ್ರಮದಲ್ಲಿ ಯಾದಗಿರಿ ಜನರಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಯಾದಗಿರಿ ಕೃಷಿ ಪ್ರಧಾನ ಜಿಲ್ಲೆಯಲ್ಲಾಗಿದ್ದರಿಂದ ಜಿಲ್ಲೆಯ ಜನ ಮಣ್ಣೆತ್ತಿನ ಅಮಾವಾಸ್ಯೆ ದಿನ ಬೆಳಗ್ಗೆ ಎದ್ದು ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಅಥವಾ ಅಂಗಡಿಯಿಂದ ಖರೀದಿಸಿಕೊಂಡು ಬಂದು ಮನೆಯಲ್ಲಿರುವ ದೇವರ ಜಗಲಿ ಮೇಲೆ ಇಟ್ಟು ಮನೆಯ ಮಂದಿಯಲ್ಲ ಸೇರಿಕೊಂಡು ಪೂಜೆ ಮಾಡುತ್ತಾರೆ.

15 ದಿನಗಳ ಹಿಂದೆಷ್ಟೇ ಕಾರುಣ್ಣಿಮೆ ಮುಗಿದಿದೆ. 15 ದಿನಗಳ ಬಳಿಕ ಮತ್ತೊಂದು ಹಬ್ಬದ ಸಂಭ್ರಮದಲ್ಲಿ ಯಾದಗಿರಿ ಜನರಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಯಾದಗಿರಿ ಕೃಷಿ ಪ್ರಧಾನ ಜಿಲ್ಲೆಯಲ್ಲಾಗಿದ್ದರಿಂದ ಜಿಲ್ಲೆಯ ಜನ ಮಣ್ಣೆತ್ತಿನ ಅಮಾವಾಸ್ಯೆ ದಿನ ಬೆಳಗ್ಗೆ ಎದ್ದು ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಅಥವಾ ಅಂಗಡಿಯಿಂದ ಖರೀದಿಸಿಕೊಂಡು ಬಂದು ಮನೆಯಲ್ಲಿರುವ ದೇವರ ಜಗಲಿ ಮೇಲೆ ಇಟ್ಟು ಮನೆಯ ಮಂದಿಯಲ್ಲ ಸೇರಿಕೊಂಡು ಪೂಜೆ ಮಾಡುತ್ತಾರೆ.

1 / 6
ಮಣ್ಣಿನ ಎತ್ತುಗಳಿಗಾಗಿಯೇ ವಿಶೇಷ ರೀತಿಯಲ್ಲಿ ನೈವೇದ್ಯ ಕೂಡ ಸಿದ್ದಪಡಿಸುತ್ತಾರೆ. ಪೂಜೆ ಬಳಿಕ ಮಣ್ಣೆತ್ತುಗಳಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ. ಮಣ್ಣೆತ್ತಿನ ಅಮವಾಸ್ಯೆಯನ್ನು ಎಲ್ಲ ಧರ್ಮದ ರೈತರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಪೂಜೆ ಸಲ್ಲಿಸಿದ ಬಳಿಕ ರೈತರಿಗೆ ಒಳ್ಳೆಯದಾಗಲಿ ಜೊತೆಗೆ ಈ ಬಾರಿ ಬೆಳೆ ಚೆನ್ನಾಗಿ ಬರಲಿ ಅಂತ ಮಣ್ಣೆತ್ತಿನ ರೂಪದಲ್ಲಿರುವ ಬಸವಣ್ಣನ ಬಳಿ ಬೇಡಿಕೊಳ್ಳುತ್ತಾರೆ.

ಮಣ್ಣಿನ ಎತ್ತುಗಳಿಗಾಗಿಯೇ ವಿಶೇಷ ರೀತಿಯಲ್ಲಿ ನೈವೇದ್ಯ ಕೂಡ ಸಿದ್ದಪಡಿಸುತ್ತಾರೆ. ಪೂಜೆ ಬಳಿಕ ಮಣ್ಣೆತ್ತುಗಳಿಗೆ ನೈವೇದ್ಯವನ್ನು ಅರ್ಪಿಸುತ್ತಾರೆ. ಮಣ್ಣೆತ್ತಿನ ಅಮವಾಸ್ಯೆಯನ್ನು ಎಲ್ಲ ಧರ್ಮದ ರೈತರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಪೂಜೆ ಸಲ್ಲಿಸಿದ ಬಳಿಕ ರೈತರಿಗೆ ಒಳ್ಳೆಯದಾಗಲಿ ಜೊತೆಗೆ ಈ ಬಾರಿ ಬೆಳೆ ಚೆನ್ನಾಗಿ ಬರಲಿ ಅಂತ ಮಣ್ಣೆತ್ತಿನ ರೂಪದಲ್ಲಿರುವ ಬಸವಣ್ಣನ ಬಳಿ ಬೇಡಿಕೊಳ್ಳುತ್ತಾರೆ.

2 / 6
ಈ ಬಾರಿ ಮಾರುಕಟ್ಟೆಗೆ ಹೊಸ ಹೊಸ ರೀತಿಯ ಮಣ್ಣೆತ್ತುಗಳು ಎಂಟ್ರಿ ಕೊಟ್ಟಿವೆ. ಮಣ್ಣೆತ್ತಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ಕುಂಬಾರರು ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ಕಲರ್ ಫುಲ್ ಆಗಿರುವ ಎತ್ತುಗಳನ್ನು ತಂದಿದ್ದಾರೆ. ಹೀಗಾಗಿ, ದಾರಿಯಲ್ಲಿ ಹಾದು ಹೋಗುವವರು ಸಹ ಮಣ್ಣೆತ್ತುಗಳನ್ನು ಖರೀದಿ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಕಾರುಣ್ಣಿಮೆಗೆ ಯಾವ ರೀತಿ ಎತ್ತುಗಳಿಗೆ ಸಿಂಗಾರ ಮಾಡ್ತಾರೋ ಅದೆ ರೀತಿ ಈ ಮಣ್ಣೆತ್ತುಗಳಿಗೂ ಸಿಂಗಾರ ಮಾಡಲಾಗುತ್ತದೆ. ಮಣ್ಣೆತ್ತುಗಳಿಗೆ ನಾನಾ ರೀತಿಯ ಬಣ್ಣಗಳನ್ನ ಹಚ್ಚಿ, ಬಟ್ಟೆ ಹೊದಿಸಲಾಗುತ್ತದೆ.

ಈ ಬಾರಿ ಮಾರುಕಟ್ಟೆಗೆ ಹೊಸ ಹೊಸ ರೀತಿಯ ಮಣ್ಣೆತ್ತುಗಳು ಎಂಟ್ರಿ ಕೊಟ್ಟಿವೆ. ಮಣ್ಣೆತ್ತಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ಕುಂಬಾರರು ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ಕಲರ್ ಫುಲ್ ಆಗಿರುವ ಎತ್ತುಗಳನ್ನು ತಂದಿದ್ದಾರೆ. ಹೀಗಾಗಿ, ದಾರಿಯಲ್ಲಿ ಹಾದು ಹೋಗುವವರು ಸಹ ಮಣ್ಣೆತ್ತುಗಳನ್ನು ಖರೀದಿ ಮಾಡುವ ಮನಸ್ಸು ಮಾಡುತ್ತಿದ್ದಾರೆ. ಕಾರುಣ್ಣಿಮೆಗೆ ಯಾವ ರೀತಿ ಎತ್ತುಗಳಿಗೆ ಸಿಂಗಾರ ಮಾಡ್ತಾರೋ ಅದೆ ರೀತಿ ಈ ಮಣ್ಣೆತ್ತುಗಳಿಗೂ ಸಿಂಗಾರ ಮಾಡಲಾಗುತ್ತದೆ. ಮಣ್ಣೆತ್ತುಗಳಿಗೆ ನಾನಾ ರೀತಿಯ ಬಣ್ಣಗಳನ್ನ ಹಚ್ಚಿ, ಬಟ್ಟೆ ಹೊದಿಸಲಾಗುತ್ತದೆ.

3 / 6
ಸದ್ಯ ಮಾರುಕಟ್ಟೆಯಲ್ಲಿ ಬಣ್ಣಗಳಿಲ್ಲದ ಮಣ್ಣಿನ ಎತ್ತುಗಳಿಗೆ ಡಿಮ್ಯಾಂಡ್ ಕಡಿಮೆಯಾಗಿದೆ. ಈ ಕಾರಣದಿಂದ ಕುಂಬಾರರು ಕಲರ್ ಫುಲ್ ಆಗಿರುವ ಎತ್ತುಗಳನ್ನು ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ತಂದಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಗ್ರಾಹಕರು ಮಣ್ಣೆತ್ತುಗಳನ್ನು ಖರೀದಿಸಿರುವುದರಿಂದ ಕುಂಬಾರರಿಗೆ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಬಣ್ಣಗಳಿಲ್ಲದ ಮಣ್ಣಿನ ಎತ್ತುಗಳಿಗೆ ಡಿಮ್ಯಾಂಡ್ ಕಡಿಮೆಯಾಗಿದೆ. ಈ ಕಾರಣದಿಂದ ಕುಂಬಾರರು ಕಲರ್ ಫುಲ್ ಆಗಿರುವ ಎತ್ತುಗಳನ್ನು ಮಹಾರಾಷ್ಟ್ರ ಹಾಗೂ ರಾಜಸ್ಥಾನದಿಂದ ತಂದಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಗ್ರಾಹಕರು ಮಣ್ಣೆತ್ತುಗಳನ್ನು ಖರೀದಿಸಿರುವುದರಿಂದ ಕುಂಬಾರರಿಗೆ ವ್ಯಾಪಾರ ಜೋರಾಗಿ ನಡೆಯುತ್ತಿದೆ.

4 / 6
ನಿನ್ನೆ ಮತ್ತು ಇವತ್ತು ಜನ ಮುಗಿ ಬಿದ್ದು ಮಣ್ಣೆತ್ತುಗಳನ್ನು ಖರೀದಿ ಮಾಡಿದ್ದಾರೆ. ಜೋಡಿ ಮಣ್ಣೆತ್ತುಗಳು 40 ರೂ.ಯಿಂದ 600 ರೂ. ವರೆಗೂ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಎರಡು ದಿನಕ್ಕೆ ಮಾತ್ರ ಎತ್ತುಗಳ ಮಾರಾಟ ವ್ಯಾಪಾರ ನಡೆಯುವುದ್ದರಿಂದ ವ್ಯಾಪರ ಜೋರಾಗಿ ನಡೆಯುತ್ತೆ ಎನ್ನುತ್ತಾರೆ ಕುಂಬಾರರು.

ನಿನ್ನೆ ಮತ್ತು ಇವತ್ತು ಜನ ಮುಗಿ ಬಿದ್ದು ಮಣ್ಣೆತ್ತುಗಳನ್ನು ಖರೀದಿ ಮಾಡಿದ್ದಾರೆ. ಜೋಡಿ ಮಣ್ಣೆತ್ತುಗಳು 40 ರೂ.ಯಿಂದ 600 ರೂ. ವರೆಗೂ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಎರಡು ದಿನಕ್ಕೆ ಮಾತ್ರ ಎತ್ತುಗಳ ಮಾರಾಟ ವ್ಯಾಪಾರ ನಡೆಯುವುದ್ದರಿಂದ ವ್ಯಾಪರ ಜೋರಾಗಿ ನಡೆಯುತ್ತೆ ಎನ್ನುತ್ತಾರೆ ಕುಂಬಾರರು.

5 / 6
ಒಟ್ಟಿನಲ್ಲಿ ಈ ತಂತ್ರಾಜ್ಞಾನದ ಯುಗದಲ್ಲಿ ಹಳೆ ಸಂಪ್ರಾಯಗಳು ಮಾಯವಾಗುತ್ತಿರುವ ನಡುವೆ ಯಾದಗಿರಿ ಜಿಲ್ಲೆಯ ಜನ ಇಂತಹ ಆಚರಣೆಗಳನ್ನು ಪಾಲಸಿಕೊಂಡು ಬರುವ ಮೂಲಕ ಪುರಾತನ ಸಂಪ್ರಾಯವನ್ನು ಇನ್ನೂವರೆಗೂ ಜೀವಂತವಾಗಿಟ್ಟಿದ್ದಾರೆ ಅಂದ್ರೆ ತಪ್ಪಾಗಲಾರದು. 

ಒಟ್ಟಿನಲ್ಲಿ ಈ ತಂತ್ರಾಜ್ಞಾನದ ಯುಗದಲ್ಲಿ ಹಳೆ ಸಂಪ್ರಾಯಗಳು ಮಾಯವಾಗುತ್ತಿರುವ ನಡುವೆ ಯಾದಗಿರಿ ಜಿಲ್ಲೆಯ ಜನ ಇಂತಹ ಆಚರಣೆಗಳನ್ನು ಪಾಲಸಿಕೊಂಡು ಬರುವ ಮೂಲಕ ಪುರಾತನ ಸಂಪ್ರಾಯವನ್ನು ಇನ್ನೂವರೆಗೂ ಜೀವಂತವಾಗಿಟ್ಟಿದ್ದಾರೆ ಅಂದ್ರೆ ತಪ್ಪಾಗಲಾರದು. 

6 / 6

Published On - 8:59 pm, Wed, 25 June 25

Ameen Sab
Ameen Sab

ಕಳೆದ ಹತ್ತು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿತ್ತಿದ್ದೆನೆ. ಬೆಂಗಳೂರಿನಿಂದ ಮಾಧ್ಯಮ ವೃತ್ತಿಯನ್ನ ಆರಂಬಿಸಿದ್ದು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಮೆಟ್ರೊ ರಿಪೋರ್ಟರ್ ಆಗಿ ಕೆಲಸ‌ ನಿರ್ವಹಿದ್ದೆನೆ. ಸದ್ಯ ಯಾದಗಿರಿ ಜಿಲ್ಲೆಯಲ್ಲಿ ಕಳೆದ ಎಂಟು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದೆನೆ.. ನನ್ನ ಹವ್ಯಾಸ ಕ್ರಿಕೆಟ್ ಆಡೋದು,ಮಾನವೀಯ ಮೌಲ್ಯ ಮೌಲ್ಯಯುಳ್ಳ ಸುದ್ದಿಗಳನ್ನ ಮಾಡೋದು.

Read More
Follow Us
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ನಾಯಕತ್ವ ಬದಲಾವಣೆ ಗುದ್ದಾಟಕ್ಕೆ ಸ್ಫೋಟಕ ತಿರುವು ನೀಡಿದ ಸಭೆ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್ ಕೇಸ್: ಯುವಕನಿಗೆ ಗೂಸಾ
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಅತ್ಯಾಚಾರ ಪ್ರಕರಣದಲ್ಲಿ ಜೈಲಿಂದ ಬಿಡುಗಡೆಯಾದ ಆರೋಪಿಗೆ ಹಾರ ಹಾಕಿ ಮೆರವಣಿಗೆ!
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ಕಾಂಗ್ರೆಸ್ ಮುಖಂಡ ಹಾಜಿ ಸೈಯದ್ ಜಿಯಾವುಲ್ಲಾ ಅಂತಿಮ ದರ್ಶನ ಪಡೆದ ಡಿಕೆಶಿ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ವಿವಾಹ ವಾರ್ಷಿಕೋತ್ಸವದ ದಿನ ದರ್ಶನ್ ಭೇಟಿ ಮಾಡಿ ಹೊರಟ ವಿಜಯಲಕ್ಷ್ಮಿ; ವಿಡಿಯೋ
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಮನೆ ಮೇಲೆ ಬಿದ್ದ ಬೃಹತ್​ ಮರ: ಆಚೆ ಬರಲಾಗದೇ ಮನೆಯೊಳಗೆ ಮೂವರು ಲಾಕ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಹತ್ತು ತಿಂಗಳ ಬಳಿಕ ಪತ್ನಿ-ಮಗನ ಮುಖಾ-ಮುಖಿ ಭೇಟಿಯಾದ ದರ್ಶನ್
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ಕಾದಾಟದಲ್ಲಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಸಾವು, ತಪ್ಪು ಯಾರದ್ದು?
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಿವಾಹ ವಾರ್ಷಿಕೋತ್ಸವ: ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ
ಲಿಫ್ಟ್‌ನಲ್ಲಿ ಸಿಲುಕಿದ್ದ 9 ಜನರನ್ನ ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ