AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಜಾಬ್​ನಲ್ಲಿ 25,000 ಸರ್ಕಾರಿ ಉದ್ಯೋಗ ಭರ್ತಿಗೆ ನಿರ್ಧಾರ; ಸಿಎಂ ಆದ ಬಳಿಕ ಭಗವಂತ್ ಮಾನ್ ಮೊದಲ ಘೋಷಣೆ

ಒಟ್ಟು 25,000 ಸರ್ಕಾರಿ ಉದ್ಯೋಗಗಳಲ್ಲಿ, 10,000 ಪಂಜಾಬ್ ಪೊಲೀಸ್‌ನಲ್ಲಿ ವಿವಿಧ ಹುದ್ದೆಗಳಿಗೆ ನೀಡಲಾಗುವುದು. ಉಳಿದ 15,000 ಉದ್ಯೋಗಗಳನ್ನು ಇತರ ಇಲಾಖೆಗಳಲ್ಲಿ ನೀಡಲಾಗುವುದು.

ಪಂಜಾಬ್​ನಲ್ಲಿ 25,000 ಸರ್ಕಾರಿ ಉದ್ಯೋಗ ಭರ್ತಿಗೆ ನಿರ್ಧಾರ; ಸಿಎಂ ಆದ ಬಳಿಕ ಭಗವಂತ್ ಮಾನ್ ಮೊದಲ ಘೋಷಣೆ
ಪಂಜಾಬ್​ನ ಸಚಿವ ಸಂಪುಟ ಸಭೆ
TV9 Web
| Edited By: |

Updated on:Mar 19, 2022 | 5:40 PM

Share

ಪಂಜಾಬ್: ಪಂಜಾಬ್‌ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಇಂದು ತಮ್ಮ ಮೊದಲ ಸಂಪುಟ ಸಭೆಯನ್ನು ನಡೆಸಿದೆ. ಈ ಸಭೆಯಲ್ಲಿ ಒಟ್ಟು 25,000 ಸರ್ಕಾರಿ ಉದ್ಯೋಗಗಳನ್ನು (Government Jobs) ಒದಗಿಸುವ ಪ್ರಸ್ತಾಪವನ್ನು ಅಂಗೀಕರಿಸಿದೆ. ಒಟ್ಟು 25,000 ಸರ್ಕಾರಿ ಉದ್ಯೋಗಗಳಲ್ಲಿ ಒಟ್ಟು 10,000 ಹುದ್ದೆಗಳು ಪಂಜಾಬ್ ಪೊಲೀಸ್‌ ಇಲಾಖೆಯಲ್ಲಿವೆ ಮತ್ತು 15,000 ಇತರೆ ಇಲಾಖೆಗಳಿಗೆ ಸೇರಿವೆ. “ಈ ಐತಿಹಾಸಿಕ ನಿರ್ಧಾರವು ಯುವಕರಿಗೆ ಪಾರದರ್ಶಕ ಮತ್ತು ಅರ್ಹತೆ ಆಧಾರಿತ ಕಾರ್ಯ ವಿಧಾನದ ಮೂಲಕ ಸರ್ಕಾರಿ ವಲಯದಲ್ಲಿ ಉದ್ಯೋಗಗಳನ್ನು ಒದಗಿಸಲು ಸಹಾಯ ಮಾಡಲಿದೆ” ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಒಟ್ಟು 25,000 ಸರ್ಕಾರಿ ಉದ್ಯೋಗಗಳಲ್ಲಿ, 10,000 ಪಂಜಾಬ್ ಪೊಲೀಸ್‌ನಲ್ಲಿ ವಿವಿಧ ಹುದ್ದೆಗಳಿಗೆ ನೀಡಲಾಗುವುದು. ಉಳಿದ 15,000 ಉದ್ಯೋಗಗಳನ್ನು ಇತರ ಇಲಾಖೆಗಳಲ್ಲಿ ನೀಡಲಾಗುವುದು. ಈ ಉದ್ಯೋಗಗಳ ಜಾಹೀರಾತು ಮತ್ತು ಅಧಿಸೂಚನೆಯ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪ್ರಾರಂಭಿಸಲಾಗುವುದು ಎಂದು ವಕ್ತಾರರು ಹೇಳಿದ್ದಾರೆ.

ಇದಲ್ಲದೆ, ಪಂಜಾಬ್ ವಿಧಾನಸಭೆಯಲ್ಲಿ ಮಂಡಿಸಲು 2022-23ರ ಹಣಕಾಸು ವರ್ಷದ ಏಪ್ರಿಲ್ 1ರಿಂದ ಜೂನ್ 30ರವರೆಗಿನ ವೋಟ್ ಆನ್ ಅಕೌಂಟ್ ಹೇಳಿಕೆಯ ಮಂಡನೆಗೆ ಪಂಜಾಬ್ ಸರ್ಕಾರವು ಒಪ್ಪಿಗೆ ನೀಡಿದೆ. 2021-22ನೇ ಸಾಲಿನ ಅನುದಾನಕ್ಕೆ ಸಂಬಂಧಿಸಿದ ಪೂರಕ ಬೇಡಿಕೆಗಳ ಮಂಡನೆಗೆ ರಾಜ್ಯ ಸರ್ಕಾರ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲು ಅನುಮತಿ ನೀಡಿದೆ.

ಸಚಿವ ಸಂಪುಟ ರಚನೆಯಾದ ನಂತರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಮೊದಲ ಸಂಪುಟ ಸಭೆ ಇದಾಗಿದೆ. ಇದಕ್ಕೂ ಮುನ್ನ ಒಟ್ಟು 10 ಸಚಿವರು ಪದಗ್ರಹಣ ಮಾಡಿದ್ದಾರೆ. ಪಂಜಾಬ್ ಸಿಎಂ ಭಗವಂತ್ ಮಾನ್ ಮಾರ್ಚ್ 16ರಂದು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ಖಟ್ಕರ್ ಕಲಾನ್‌ನಲ್ಲಿ ಪಂಜಾಬ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 117 ಸದಸ್ಯ ಬಲದ ಸದನದಲ್ಲಿ 92 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ಆಮ್ ಆದ್ಮಿ ಪಕ್ಷವು ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಕೆಲವೇ ದಿನಗಳಲ್ಲಿ ಪ್ರಮಾಣ ವಚನ ನಡೆಯಿತು.

ಪಂಜಾಬ್ ಸಿಎಂ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸಚಿವ ಸಂಪುಟದ ಮೊದಲ ಸಭೆಯು ನಡೆಯುತ್ತಿರುವ ವಿಧಾನ ಸಭೆಯ ಅಧಿವೇಶನದಲ್ಲಿ 3 ತಿಂಗಳ ಕಾಲ ವೋಟ್ ಆನ್ ಅಕೌಂಟ್ ಅನ್ನು ಮಂಡಿಸಲು ನಿರ್ಧರಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಪೂರಕ ಅನುದಾನವನ್ನು ಮಾರ್ಚ್ 22ರಂದು ನಡೆಯಲಿರುವ ಅಧಿವೇಶನದಲ್ಲಿ ತೆರವುಗೊಳಿಸಲಾಗುವುದು. ವಿವಿಧ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳ ವಿರುದ್ಧ 25,000 ಜನರನ್ನು ನೇಮಕ ಮಾಡುವ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಪಂಜಾಬ್: ಭಗವಂತ್ ಮಾನ್ ಸಂಪುಟದಲ್ಲಿ 10 ಮಂದಿ ಸಚಿವರು, ಇಲ್ಲಿದೆ ಸಚಿವರ ಪಟ್ಟಿ

ಶೀಘ್ರದಲ್ಲೇ ಬಹುದೊಡ್ಡ, ಇತಿಹಾಸ ಕಾಣದ ನಿರ್ಧಾರ ಘೋಷಣೆ ಮಾಡುವುದಾಗಿ ಪಂಜಾಬ್​ ಸಿಎಂ ಭಗವಂತ್ ಮಾನ್ ಟ್ವೀಟ್​

Published On - 5:40 pm, Sat, 19 March 22